Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ನಿಮ್ಮವರಿಗೆ ಈ ಐದು ರೀತಿಯ ಉಡುಗೊರೆ ಅಪ್ಪಿತಪ್ಪಿಯೂ ನೀಡಬೇಡಿ!
ಮದುವೆ, ಮುಂಜಿ, ಗೃಹ ಪ್ರವೇಶ, ಹುಟ್ಟು ಹಬ್ಬ ಹಾಗೂ ಹಬ್ಬ ಹರಿದಿನಗಳಲ್ಲಿ ಆತ್ಮೀಯರಿಗೆ ಉಡುಗೊರೆಯನ್ನು ನೀಡುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಹೊಸ ಜೀವನಕ್ಕೆ ಕಾಲಿಡುತ್ತಿರುವಾಗ, ಒಳ್ಳೆಯ ಕೆಲಸ ಮಾಡಿದಾಗ ಪ್ರೀತಿಯಿಂದ ಶುಭ ಹಾರೈಕೆ ಮಾಡುವುದಕ್ಕೆ ಈ ಉಡುಗೊರೆ ಪದ್ಧತಿ ಜಾರಿಗೆ ಬಂದಿದೆ. ಕಾಲ ಉರಿಳಿದಂತೆ, ತಲೆ ಮಾರುಗಳ ಬದಲಾವಣೆ ಆಗುತ್ತಿದ್ದಂತೆ ಉಡುಗೊರೆಯ ಆಯ್ಕೆ ಹಾಗೂ ಪದ್ಧತಿಯಲ್ಲೂ ವಿಭಿನ್ನ ಬದಲಾವಣೆಯಾಗುತ್ತಿದೆ.
ನಿಜ, ಉಡುಗೊರೆ ನೀಡಲು ಅನೇಕ ಆಯ್ಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಜನರೂ ಸಹ ಬದಲಾವಣೆಯ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯ ಪರಿ ಸರಿಯಾಗಿದೆ ಎನಿಸಿದರೂ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಹಾಗೊಮ್ಮೆ ನೀಡಿದರೂ ಅದನ್ನು ಪಡೆದವರಿಗೆ ಹಾಗೂ ನೀಡಿದವರಿಗೂ ಸಹ ಅಶುಭ ಎನ್ನುವ ಮಾತಿದೆ. ಹಾಗಾದರೆ ಆ ವಸ್ತುಗಳು ಯಾವುದು? ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ....

ಮೊನಚಾದ ವಸ್ತುಗಳು
ಕೊಟ್ಟ ಉಡುಗೊರೆ ಉಪಯೋಗಕ್ಕೆ ಬರಬೇಕೆನ್ನುವ ಉದ್ದೇಶದಿಂದ ಕತ್ತಿ, ಚಾಕು, ನೇಲ್ ಕಟರ್ ಹೀಗೆ ಮೊನಚಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಇಂತಹ ವಸ್ತುಗಳನ್ನು ಉಡುಗೊರೆಯನ್ನಾಗಿ ನೀಡಿದರೆ ಅನಪೇಕ್ಷಿತವಾಗಿ ದುರದೃಷ್ಟವನ್ನು ಹೆಚ್ಚಿಸುವುದು ಎಂದು ಹೇಳಲಾಗುವುದು.

ಕರವಸ್ತ್ರ
ಮೈ ಒರೆಸುವ ಬಟ್ಟೆ, ಕರವಸ್ತ್ರ ಇಂತಹ ವಸ್ತುವನ್ನು ನೀಡಬಾರದು. ಇವು ಅಳು ಹಾಗೂ ಬೆವರನ್ನು ಒರೆಸುವ ವಸ್ತುವಾದ್ದರಿಂದ ಭವಿಷ್ಯದಲ್ಲಿ ದುಃಖದ ಸಂಗತಿಗಳೇ ಹೆಚ್ಚಾಗುವುದು. ಇದನ್ನು ನೀಡಿದ ಹಾಗೂ ಪಡೆದ ವ್ಯಕ್ತಿಗಳಿಗೂ ಹಾನಿಕಾರಕ ಎಂದು ಹೇಳಲಾಗುವುದು.

ಪಾದರಕ್ಷೆ
ವಿವಿಧ ವಿನ್ಯಾಸದ ಪಾದರಕ್ಷೆಗಳು ದುಬಾರಿ ಬೆಲೆಯಲ್ಲಿ ಸಿಗುತ್ತವೆ. ಹಾಗಂತ ಇದನ್ನು ಉಡುಗೊರೆ ನೀಡುವ ಉದ್ದೇಶದಿಂದ ಖರೀದಿಸಬಾರದು. ಏಕೆಂದರೆ ಇದನ್ನು ಉಡುಗೊರೆಯಾಗಿ ನೀಡುವುದರಿಂದ ಪಡೆದವರಿಗೆ ಕೆಟ್ಟದ್ದಾಗುವುದು.

ಗಡಿಯಾರ
ಅಲಾರಾಂ, ಗೋಡೆ ಗಡಿಯಾರ, ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಇದನ್ನು ನೀಡುವುದರಿಂದ ಪಡೆದವರ ಜೀವಿತಾವಧಿಯು ಕಡಿಮೆಯಾಗುತ್ತದೆ ಎನ್ನಲಾಗುವುದು.

ಕಪ್ಪು ಬಟ್ಟೆ
ಕಪ್ಪು ಬಟ್ಟೆಯು ಅಶುಭ, ದುಃಖ, ನೋವಿನ ಸಂಕೇತವಾದ್ದರಿಂದ ಇದನ್ನು ನೀಡಬಾರದು. ಈ ರೀತಿಯ ಉಡುಗೊರೆ ಪಡೆದವರಿಗೆ ಮುಂದಿನ ದಿನದಲ್ಲಿ ಅಶುಭವಾಗುವುದು.



Click it and Unblock the Notifications