Just In
Don't Miss
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Automobiles ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದ ಈ ಪಟ್ಟಣ, ಏಕಮಾತ್ರ - ’ಕಾನೂನುಬದ್ಧ ಭೂತದ ನಗರ!
ನಮ್ಮ ಭಾರತದ ಪ್ರತಿ ಊರಿನಲ್ಲಿಯೂ ಕನಿಷ್ಠ ಒಂದಾದರೂ ಭೂತಪ್ರೇತಕ್ಕೆ ಸಂಬಂಧಿಸಿದ ಕಥೆ ಇದ್ದೇ ಇರುತ್ತದೆ. ಭೂತದ ಕಾಟಕ್ಕೆ ಊರು ಖಾಲಿ ಮಾಡಿ ಹೋದ ಉದಾಹರಣೆಗಳೂ ಇವೆ. ಆದರೆ ಇವೆಲ್ಲವೂ ಅಂತೆಕಂತೆಗಳೇ ಆಗಿದ್ದು ಕಾನೂನು ಇದನ್ನೆಲ್ಲ ನಂಬುವುದಿಲ್ಲ. ಆದರೆ ಈ ನಂಬಿಕೆಗೂ ವ್ಯತಿರಿಕ್ತವಾಗಿ ಭಾರತದಲ್ಲಿರುವ ಭಾನಗಢ ಎಂಬ ಪಟ್ಟಣಕ್ಕೆ ಭಾರತದ ಏಕಮಾತ್ರ ಕಾನೂನುಬದ್ದ ಭೂತನಗರ ಎಂಬ ಅನ್ವರ್ಥನಾಮ ದಕ್ಕಿದೆ. ಭಾರತದಲ್ಲಿಯೇ ಅತಿ ಹೆಚ್ಚು ಭೂತಗ್ರಸ್ತ ನಗರ ಎಂಬ ಕಾರಣಕ್ಕಾಗಿಯೇ ಈ ಪಟ್ಟ ದೊರಕಿದೆ.
ಎಷ್ಟೋ ಪ್ರಕರಣಗಳಲ್ಲಿ ಭೂತಪ್ರೇತಗಳ ಬಗ್ಗೆ ಇರುವ ನಮ್ಮ ಕಲ್ಪನೆಗಳೇ ಯಾವುದೋ ಇತರ ಕಾರಣಕ್ಕೆ ತಾಳೆಹೊಂದಿ ಇದು ಒಂದು ಹೊಸ ಭೂತದ ಕಥೆ ಪಡೆಯುವ ಸಾಧ್ಯತೆಗಳೇ ಹೆಚ್ಚು. ತೇಜಸ್ವಿಯವರ ಪರಿಸರದ ಕತೆಗಳು ಗ್ರಂಥದ ಒಂದು ಕಥೆಯಲ್ಲಿ ತೇಜಸ್ವಿಯರ ಮನೆಯಲ್ಲಿಯೇ ಹಕ್ಕಿಯೊಂದು ಕೊಕ್ಕಿನಿಂದ ಕಿಟಕಿಯ ಗಾಜನ್ನು ಬಡಿದು ಹೊರಹೋಗಲು ಯತ್ನಿಸಿದ ಸದ್ದು ಭೂತದ ಕಥೆಗೆ ಗ್ರಾಸವಾದ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ.
ಎಲ್ಲಿಯವರೆಗೆ ಇದರ ನಿಜಕಾರಣಗಳು ಹೊರಬರುವುದಿಲ್ಲವೋ ಅಲ್ಲಿಯವರೆಗೆ ಈ ಭೂತದ ಕತೆಗಳು ರೋಚಕವೂ, ಭಯಮೂಡಿಸುವಂತಹವೂ ಆಗಿರುತ್ತವೆ. ಆದರೆ ಭಾನಗಢ ನಗರದಲ್ಲಿ ಭೂತದ ಬಗ್ಗೆ ಇರುವ ಕಲ್ಪನೆಗಳಿಗಿಂತಲೂ ಜನರು ಅನುಭವಿಸಿದ ಪ್ರಕರಣಗಳೇ ಹೆಚ್ಚು ಮಹತ್ವ ಪಡೆದಿದ್ದು ಈ ವೈಚಿತ್ರ್ಯವನ್ನು ಸುಲಭವಾಗಿ ವಿವರಿಸಲು ಅಸಾಧ್ಯವಾದುದು ಈ ಪಟ್ಟಣಕ್ಕೆ ಪಡೆದ ಖ್ಯಾತಿಗೆ ಕಾರಣವಾಗಿದೆ. ಈ ಬಗ್ಗೆ ಕುತೂಹಲ ಹೊಂದಿದ ಯಾರಿಗಾದರೂ ಜೀವಮಾನದಲ್ಲೊಮ್ಮೆಯಾದರೂ ಈ ಪಟ್ಟಣವನ್ನು ನೋಡಲೇಬೇಕು ಅನ್ನಿಸದಿರದು.....