Latest Updates
-
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಭಾರತದ ಈ ಪಟ್ಟಣ, ಏಕಮಾತ್ರ - ’ಕಾನೂನುಬದ್ಧ ಭೂತದ ನಗರ!
ನಮ್ಮ ಭಾರತದ ಪ್ರತಿ ಊರಿನಲ್ಲಿಯೂ ಕನಿಷ್ಠ ಒಂದಾದರೂ ಭೂತಪ್ರೇತಕ್ಕೆ ಸಂಬಂಧಿಸಿದ ಕಥೆ ಇದ್ದೇ ಇರುತ್ತದೆ. ಭೂತದ ಕಾಟಕ್ಕೆ ಊರು ಖಾಲಿ ಮಾಡಿ ಹೋದ ಉದಾಹರಣೆಗಳೂ ಇವೆ. ಆದರೆ ಇವೆಲ್ಲವೂ ಅಂತೆಕಂತೆಗಳೇ ಆಗಿದ್ದು ಕಾನೂನು ಇದನ್ನೆಲ್ಲ ನಂಬುವುದಿಲ್ಲ. ಆದರೆ ಈ ನಂಬಿಕೆಗೂ ವ್ಯತಿರಿಕ್ತವಾಗಿ ಭಾರತದಲ್ಲಿರುವ ಭಾನಗಢ ಎಂಬ ಪಟ್ಟಣಕ್ಕೆ ಭಾರತದ ಏಕಮಾತ್ರ ಕಾನೂನುಬದ್ದ ಭೂತನಗರ ಎಂಬ ಅನ್ವರ್ಥನಾಮ ದಕ್ಕಿದೆ. ಭಾರತದಲ್ಲಿಯೇ ಅತಿ ಹೆಚ್ಚು ಭೂತಗ್ರಸ್ತ ನಗರ ಎಂಬ ಕಾರಣಕ್ಕಾಗಿಯೇ ಈ ಪಟ್ಟ ದೊರಕಿದೆ.
ಎಷ್ಟೋ ಪ್ರಕರಣಗಳಲ್ಲಿ ಭೂತಪ್ರೇತಗಳ ಬಗ್ಗೆ ಇರುವ ನಮ್ಮ ಕಲ್ಪನೆಗಳೇ ಯಾವುದೋ ಇತರ ಕಾರಣಕ್ಕೆ ತಾಳೆಹೊಂದಿ ಇದು ಒಂದು ಹೊಸ ಭೂತದ ಕಥೆ ಪಡೆಯುವ ಸಾಧ್ಯತೆಗಳೇ ಹೆಚ್ಚು. ತೇಜಸ್ವಿಯವರ ಪರಿಸರದ ಕತೆಗಳು ಗ್ರಂಥದ ಒಂದು ಕಥೆಯಲ್ಲಿ ತೇಜಸ್ವಿಯರ ಮನೆಯಲ್ಲಿಯೇ ಹಕ್ಕಿಯೊಂದು ಕೊಕ್ಕಿನಿಂದ ಕಿಟಕಿಯ ಗಾಜನ್ನು ಬಡಿದು ಹೊರಹೋಗಲು ಯತ್ನಿಸಿದ ಸದ್ದು ಭೂತದ ಕಥೆಗೆ ಗ್ರಾಸವಾದ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ.

ಎಲ್ಲಿಯವರೆಗೆ ಇದರ ನಿಜಕಾರಣಗಳು ಹೊರಬರುವುದಿಲ್ಲವೋ ಅಲ್ಲಿಯವರೆಗೆ ಈ ಭೂತದ ಕತೆಗಳು ರೋಚಕವೂ, ಭಯಮೂಡಿಸುವಂತಹವೂ ಆಗಿರುತ್ತವೆ. ಆದರೆ ಭಾನಗಢ ನಗರದಲ್ಲಿ ಭೂತದ ಬಗ್ಗೆ ಇರುವ ಕಲ್ಪನೆಗಳಿಗಿಂತಲೂ ಜನರು ಅನುಭವಿಸಿದ ಪ್ರಕರಣಗಳೇ ಹೆಚ್ಚು ಮಹತ್ವ ಪಡೆದಿದ್ದು ಈ ವೈಚಿತ್ರ್ಯವನ್ನು ಸುಲಭವಾಗಿ ವಿವರಿಸಲು ಅಸಾಧ್ಯವಾದುದು ಈ ಪಟ್ಟಣಕ್ಕೆ ಪಡೆದ ಖ್ಯಾತಿಗೆ ಕಾರಣವಾಗಿದೆ. ಈ ಬಗ್ಗೆ ಕುತೂಹಲ ಹೊಂದಿದ ಯಾರಿಗಾದರೂ ಜೀವಮಾನದಲ್ಲೊಮ್ಮೆಯಾದರೂ ಈ ಪಟ್ಟಣವನ್ನು ನೋಡಲೇಬೇಕು ಅನ್ನಿಸದಿರದು.....



Click it and Unblock the Notifications