Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಭಾರತದ ಈ ಪಟ್ಟಣ, ಏಕಮಾತ್ರ - ’ಕಾನೂನುಬದ್ಧ ಭೂತದ ನಗರ!
ನಮ್ಮ ಭಾರತದ ಪ್ರತಿ ಊರಿನಲ್ಲಿಯೂ ಕನಿಷ್ಠ ಒಂದಾದರೂ ಭೂತಪ್ರೇತಕ್ಕೆ ಸಂಬಂಧಿಸಿದ ಕಥೆ ಇದ್ದೇ ಇರುತ್ತದೆ. ಭೂತದ ಕಾಟಕ್ಕೆ ಊರು ಖಾಲಿ ಮಾಡಿ ಹೋದ ಉದಾಹರಣೆಗಳೂ ಇವೆ. ಆದರೆ ಇವೆಲ್ಲವೂ ಅಂತೆಕಂತೆಗಳೇ ಆಗಿದ್ದು ಕಾನೂನು ಇದನ್ನೆಲ್ಲ ನಂಬುವುದಿಲ್ಲ. ಆದರೆ ಈ ನಂಬಿಕೆಗೂ ವ್ಯತಿರಿಕ್ತವಾಗಿ ಭಾರತದಲ್ಲಿರುವ ಭಾನಗಢ ಎಂಬ ಪಟ್ಟಣಕ್ಕೆ ಭಾರತದ ಏಕಮಾತ್ರ ಕಾನೂನುಬದ್ದ ಭೂತನಗರ ಎಂಬ ಅನ್ವರ್ಥನಾಮ ದಕ್ಕಿದೆ. ಭಾರತದಲ್ಲಿಯೇ ಅತಿ ಹೆಚ್ಚು ಭೂತಗ್ರಸ್ತ ನಗರ ಎಂಬ ಕಾರಣಕ್ಕಾಗಿಯೇ ಈ ಪಟ್ಟ ದೊರಕಿದೆ.
ಎಷ್ಟೋ ಪ್ರಕರಣಗಳಲ್ಲಿ ಭೂತಪ್ರೇತಗಳ ಬಗ್ಗೆ ಇರುವ ನಮ್ಮ ಕಲ್ಪನೆಗಳೇ ಯಾವುದೋ ಇತರ ಕಾರಣಕ್ಕೆ ತಾಳೆಹೊಂದಿ ಇದು ಒಂದು ಹೊಸ ಭೂತದ ಕಥೆ ಪಡೆಯುವ ಸಾಧ್ಯತೆಗಳೇ ಹೆಚ್ಚು. ತೇಜಸ್ವಿಯವರ ಪರಿಸರದ ಕತೆಗಳು ಗ್ರಂಥದ ಒಂದು ಕಥೆಯಲ್ಲಿ ತೇಜಸ್ವಿಯರ ಮನೆಯಲ್ಲಿಯೇ ಹಕ್ಕಿಯೊಂದು ಕೊಕ್ಕಿನಿಂದ ಕಿಟಕಿಯ ಗಾಜನ್ನು ಬಡಿದು ಹೊರಹೋಗಲು ಯತ್ನಿಸಿದ ಸದ್ದು ಭೂತದ ಕಥೆಗೆ ಗ್ರಾಸವಾದ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ.

ಎಲ್ಲಿಯವರೆಗೆ ಇದರ ನಿಜಕಾರಣಗಳು ಹೊರಬರುವುದಿಲ್ಲವೋ ಅಲ್ಲಿಯವರೆಗೆ ಈ ಭೂತದ ಕತೆಗಳು ರೋಚಕವೂ, ಭಯಮೂಡಿಸುವಂತಹವೂ ಆಗಿರುತ್ತವೆ. ಆದರೆ ಭಾನಗಢ ನಗರದಲ್ಲಿ ಭೂತದ ಬಗ್ಗೆ ಇರುವ ಕಲ್ಪನೆಗಳಿಗಿಂತಲೂ ಜನರು ಅನುಭವಿಸಿದ ಪ್ರಕರಣಗಳೇ ಹೆಚ್ಚು ಮಹತ್ವ ಪಡೆದಿದ್ದು ಈ ವೈಚಿತ್ರ್ಯವನ್ನು ಸುಲಭವಾಗಿ ವಿವರಿಸಲು ಅಸಾಧ್ಯವಾದುದು ಈ ಪಟ್ಟಣಕ್ಕೆ ಪಡೆದ ಖ್ಯಾತಿಗೆ ಕಾರಣವಾಗಿದೆ. ಈ ಬಗ್ಗೆ ಕುತೂಹಲ ಹೊಂದಿದ ಯಾರಿಗಾದರೂ ಜೀವಮಾನದಲ್ಲೊಮ್ಮೆಯಾದರೂ ಈ ಪಟ್ಟಣವನ್ನು ನೋಡಲೇಬೇಕು ಅನ್ನಿಸದಿರದು.....



Click it and Unblock the Notifications