Latest Updates
-
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ
ಭಾರತದ ಈ ಪಟ್ಟಣ, ಏಕಮಾತ್ರ - ’ಕಾನೂನುಬದ್ಧ ಭೂತದ ನಗರ!
ನಮ್ಮ ಭಾರತದ ಪ್ರತಿ ಊರಿನಲ್ಲಿಯೂ ಕನಿಷ್ಠ ಒಂದಾದರೂ ಭೂತಪ್ರೇತಕ್ಕೆ ಸಂಬಂಧಿಸಿದ ಕಥೆ ಇದ್ದೇ ಇರುತ್ತದೆ. ಭೂತದ ಕಾಟಕ್ಕೆ ಊರು ಖಾಲಿ ಮಾಡಿ ಹೋದ ಉದಾಹರಣೆಗಳೂ ಇವೆ. ಆದರೆ ಇವೆಲ್ಲವೂ ಅಂತೆಕಂತೆಗಳೇ ಆಗಿದ್ದು ಕಾನೂನು ಇದನ್ನೆಲ್ಲ ನಂಬುವುದಿಲ್ಲ. ಆದರೆ ಈ ನಂಬಿಕೆಗೂ ವ್ಯತಿರಿಕ್ತವಾಗಿ ಭಾರತದಲ್ಲಿರುವ ಭಾನಗಢ ಎಂಬ ಪಟ್ಟಣಕ್ಕೆ ಭಾರತದ ಏಕಮಾತ್ರ ಕಾನೂನುಬದ್ದ ಭೂತನಗರ ಎಂಬ ಅನ್ವರ್ಥನಾಮ ದಕ್ಕಿದೆ. ಭಾರತದಲ್ಲಿಯೇ ಅತಿ ಹೆಚ್ಚು ಭೂತಗ್ರಸ್ತ ನಗರ ಎಂಬ ಕಾರಣಕ್ಕಾಗಿಯೇ ಈ ಪಟ್ಟ ದೊರಕಿದೆ.
ಎಷ್ಟೋ ಪ್ರಕರಣಗಳಲ್ಲಿ ಭೂತಪ್ರೇತಗಳ ಬಗ್ಗೆ ಇರುವ ನಮ್ಮ ಕಲ್ಪನೆಗಳೇ ಯಾವುದೋ ಇತರ ಕಾರಣಕ್ಕೆ ತಾಳೆಹೊಂದಿ ಇದು ಒಂದು ಹೊಸ ಭೂತದ ಕಥೆ ಪಡೆಯುವ ಸಾಧ್ಯತೆಗಳೇ ಹೆಚ್ಚು. ತೇಜಸ್ವಿಯವರ ಪರಿಸರದ ಕತೆಗಳು ಗ್ರಂಥದ ಒಂದು ಕಥೆಯಲ್ಲಿ ತೇಜಸ್ವಿಯರ ಮನೆಯಲ್ಲಿಯೇ ಹಕ್ಕಿಯೊಂದು ಕೊಕ್ಕಿನಿಂದ ಕಿಟಕಿಯ ಗಾಜನ್ನು ಬಡಿದು ಹೊರಹೋಗಲು ಯತ್ನಿಸಿದ ಸದ್ದು ಭೂತದ ಕಥೆಗೆ ಗ್ರಾಸವಾದ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ.

ಎಲ್ಲಿಯವರೆಗೆ ಇದರ ನಿಜಕಾರಣಗಳು ಹೊರಬರುವುದಿಲ್ಲವೋ ಅಲ್ಲಿಯವರೆಗೆ ಈ ಭೂತದ ಕತೆಗಳು ರೋಚಕವೂ, ಭಯಮೂಡಿಸುವಂತಹವೂ ಆಗಿರುತ್ತವೆ. ಆದರೆ ಭಾನಗಢ ನಗರದಲ್ಲಿ ಭೂತದ ಬಗ್ಗೆ ಇರುವ ಕಲ್ಪನೆಗಳಿಗಿಂತಲೂ ಜನರು ಅನುಭವಿಸಿದ ಪ್ರಕರಣಗಳೇ ಹೆಚ್ಚು ಮಹತ್ವ ಪಡೆದಿದ್ದು ಈ ವೈಚಿತ್ರ್ಯವನ್ನು ಸುಲಭವಾಗಿ ವಿವರಿಸಲು ಅಸಾಧ್ಯವಾದುದು ಈ ಪಟ್ಟಣಕ್ಕೆ ಪಡೆದ ಖ್ಯಾತಿಗೆ ಕಾರಣವಾಗಿದೆ. ಈ ಬಗ್ಗೆ ಕುತೂಹಲ ಹೊಂದಿದ ಯಾರಿಗಾದರೂ ಜೀವಮಾನದಲ್ಲೊಮ್ಮೆಯಾದರೂ ಈ ಪಟ್ಟಣವನ್ನು ನೋಡಲೇಬೇಕು ಅನ್ನಿಸದಿರದು.....



Click it and Unblock the Notifications











