Latest Updates
-
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು!
ಈ ದೇವಾಲಯದಲ್ಲಿ ಮನುಷ್ಯರ ರಕ್ತವನ್ನೇ ದೇವರಿಗೆ ಅರ್ಪಿಸುತ್ತಾರಂತೆ!
ದೇವಸ್ಥಾನಗಳನ್ನು ಭೂಮಿ ಮೇಲಿನ ಅತ್ಯಂತ ಪವಿತ್ರ ಜಾಗವೆಂದು ನಂಬಲಾಗಿದೆ. ಆದರೆ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವಂತಹ ಕೆಲವೊಂದು ಮೂಢನಂಬಿಕೆಗಳು ಮಾತ್ರ ಇಂತಹ ನಂಬಿಕೆ ಬಗ್ಗೆ ಸಂಶಯ ಮೂಡಿಸುತ್ತದೆ. ಮಗುವನ್ನುಮುಳ್ಳಿನ ರಾಶಿಗೆ ಬಿಸಾಕುವುದು, ನೀರಿನಿಂದ ಮುಳುಗಿಸಿ ತೆಗೆಯುವುದು ಇತ್ಯಾದಿ. ರಾಜ್ಯದ ಕೆಲವೊಂದು ಮಂದಿರಗಳಲ್ಲೂ ಇಂತಹ ಆಚರಣೆಗಳು ರೂಢಿಯಲ್ಲಿದೆ.
ಕ್ಷುದ್ರ ದೇವತೆಗಳಿಗೆ ರಕ್ತವನ್ನು ಅರ್ಪಿಸುವಂತಹ ಸಂಪ್ರದಾಯ ಹಿಂದಿನಿಂದಲೂ ಇದೆ. ಅದರಲ್ಲೂ ಕೆಲವು ಕಡೆಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡಲಾಗುತ್ತಾ ಇತ್ತು. ಆದರೆ ಕಠಿಣ ಕಾನೂನು ಬಂದ ಬಳಿಕ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ನೂರಾರು ವರ್ಷಗಳ ಹಿಂದೆ ಮನುಷ್ಯರನ್ನು ಕೂಡ ಬಲಿ ಕೊಡಲಾಗುತ್ತಾ ಇತ್ತು ಎಂದರೆ ನಂಬಲೇಬೇಕಾಗುತ್ತದೆ.
ಪುರಾತನವಾಗಿರುವಂತಹ ಕೆಲವೊಂದು ದೇವಾಲಯಗಳಲ್ಲಿ ಈಗಲೂ ಬಲಿ ಸಂಪ್ರದಾಯ ಇದೆ. ಆದರೆ ನಿಮಗೆ ಅಚ್ಚರಿ ಮೂಡಿಸುವಂತಹ ದೇವಾಲಯವೊಂದರಲ್ಲಿ ಬೋರೋದೇವಿ ದೇವಾಲಯದಲ್ಲಿ ಮನುಷ್ಯರ ರಕ್ತವನ್ನು ಅರ್ಪಿಸಲಾಗುತ್ತದೆ. ಇದು ಹೇಗೆಂದು ತಿಳಿಯಲು ಓದುತ್ತಾ ಸಾಗಿ...

ಪ್ರಾಣಿಗಳನ್ನು ಬಲಿ ಕೊಡದೆ ಮನುಷ್ಯರನ್ನು....
ಇತರ ದೇವಾಲಯಗಳಿಗೆ ಹೋಲಿಸಿದರೆ ಇದು ತುಂಬಾ ಭಿನ್ನವಾಗಿ ಕಾಣಿಸುತ್ತದೆ. ಇಲ್ಲಿ ಭಕ್ತರು ದೇವರಿಗೆ ಮನುಷ್ಯರ ರಕ್ತವನ್ನು ಅರ್ಪಿಸುತ್ತಾರೆ. ಮನುಷ್ಯರನ್ನು ಬಲಿ ನೀಡುವಂತಹ ಸಂಪ್ರದಾಯ ಸುಮಾರು 250 ವರ್ಷಗಳ ಹಿಂದೆಯೇ ಕೊನೆಗೊಂಡಿದೆ. ಅಲ್ಲಿಯ ತನಕ ಮನುಷ್ಯರನ್ನು ಬಲಿ ನೀಡುತ್ತಾ ಇದ್ದರು.

ಮನುಷ್ಯರ ರಕ್ತ ಅರ್ಪಣೆ
ಈ ದೇವಾಲಯದಲ್ಲಿ ಪೂಜೆಯನ್ನು ಮಾಡುವಂತಹ 52ರ ಹರೆಯದ ಶಿಬೇಂದ್ರನಾಥ್ ರಾಯ್ ಎಂಬವರು ತುಂಬಾ ಅಚ್ಚರಿಯ ಸಂಪ್ರದಾಯದಂತೆ ಪ್ರತೀ ಅಷ್ಟಮಿಯ ರಾತ್ರಿಯಂದು ದೇವಸ್ಥಾನದ ಮುಚ್ಚಿದ ಬಾಗಿಲುಗಳ ಹಿಂದೆ ಮನುಷ್ಯರ ರಕ್ತವನ್ನು ಅರ್ಪಿಸುತ್ತಾರೆ. ಮನುಷ್ಯರ ರಕ್ತದ ಹೊರತಾಗಿ ಪೂಜೆಯು ಸಂಪೂರ್ಣವಾಗುವುದಿಲ್ಲವೆಂದು ಭಕ್ತರು ಅಭಿಪ್ರಾಯಪಡುತ್ತಾರೆ.

ಈ ಸಂಪ್ರದಾಯಕ್ಕೆ ಅಂತ್ಯ
ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಪರಿಶೀಲಿಸಲು ರಾಜನು ಭಕ್ಷಿ ಎಂಬಾತನನ್ನು ಆಯ್ಕೆ ಮಾಡಿದ್ದ. ಆತ ಈ ಸಂಪ್ರದಾಯವನ್ನು ಕೊನೆಗೊಳಿಸಬೇಕು ಎಂದು ರಾಜನಿಗೆ ಹೇಳಿದ್ದ. ಅದರ ಬಳಿಕ ಮನುಷ್ಯರ ಬಲಿ ಕೊನೆಗೊಂಡಿದೆ.

ಕೇವಲ ಮೂರು ಹನಿ ರಕ್ತ
ಮನುಷ್ಯರನ್ನು ಬಲಿ ಕೊಡುವ ಸಂಪ್ರದಾಯವು ನಿಂತ ಬಳಿಕ ಭಕ್ತರು ಮೂರು ಹನಿ ರಕ್ತವನ್ನು ಅರ್ಪಿಸಲು ನಿರ್ಧರಿಸಿದರು. ಮನುಷ್ಯರ ರಕ್ತವನ್ನು ಅರ್ಪಿಸದರೆ ಇದ್ದರೆ ಪೂಜೆಯು ಪೂರ್ಣಗೊಳ್ಳುವುದಿಲ್ಲವೆಂದು ಪಂಡಿತರು ಹೇಳುತ್ತಾರೆ. ಈ ಮಂದಿರಕ್ಕೆ ಭೇಟಿ ನೀಡಲು ಬಯಸುತ್ತೀರಾ? ನಿಮ್ಮ ಅನಿಸಿಕೆಗಳು ಇದ್ದರೆ ಅದನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ ಬಿಡಿ.



Click it and Unblock the Notifications