Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಸಾಕ್ಷಾತ್ ಬಾಲಾಜಿ ಮಹಿಮೆ: ವೀಸಾ ಕೊಡಿಸುವ 'ವೀಸಾ ಬಾಲಾಜಿ ಮಂದಿರ'
ವಿದೇಶಕ್ಕೆ ಹೋಗಬೇಕು, ಅಲ್ಲಿ ಸುತ್ತಾಡಿಕೊಂಡು ಬರಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಹೆಚ್ಚಿನವರು ಸಣ್ಣ ಸಣ್ಣ ದೇಶಗಳಿಗೆ ಸುತ್ತಾಡಲು ಹೋಗುವುದನ್ನು ಇಷ್ಟಪಡುತ್ತಾರೆ. ಇಲ್ಲಿ ಖರ್ಚು ಕೂಡ ಕಡಿಮೆ ಇರುವುದು ಮತ್ತು ವೀಸಾ ಕೂಡ ಬೇಗನೆ ಲಭ್ಯವಾಗುವುದು. ಆದರೆ ಕೆಲವರಿಗೆ ಒಳ್ಳೆಯ ಪ್ರವಾಸಿ ತಾಣಗಳು ಇರುವ ದೇಶಗಳಿಗೆ ಸುತ್ತಾಡಲು ಹೋಗಬೇಕೆಂಬ ಆಸೆ ಇರುವುದು. ಆದರೆ ಇಂತಹ ದೇಶಗಳಿಗೆ ಹೋಗಲು ಅಷ್ಟು ಸುಲಭವಾಗಿ ವೀಸಾ ಸಿಗುವುದಿಲ್ಲ. ಕೆಲಸಕ್ಕಾಗಿಯೂ ಇಂತಹ ದೇಶಗಳಿಗೆ ಹೋಗುವುದು ತುಂಬಾ ಕಠಿಣ.
ವೀಸಾ ಪಡೆಯಲು ತುಂಬ ಕಷ್ಟಪಡಬೇಕಾಗುತ್ತದೆ. ಆದರೆ ಕೆಲವು ಭಾರತೀಯ ಮಂದಿರಗಳಲ್ಲಿ ವೀಸಾ ಪಡೆಯಲೆಂದು ಪ್ರಾರ್ಥನೆ ಮಾಡಲಾಗುತ್ತದೆ. ಇಂತಹ ಮಂದಿರಗಳಲ್ಲಿ ಪ್ರಾರ್ಥನೆ ಮಾಡಿದರೆ ವೀಸಾ ಬೇಗನೆ ಸಿಗುವುದು ಎನ್ನುವ ನಂಬಿಕೆಯಿದೆ. ಹೈದ್ರಾಬಾದ್ನ ಹೊರವಲಯದಲ್ಲಿರುವ ಚಿಲ್ಕೂರಿನ ಉಸ್ಮಾನ್ ಸಾಗರದ ತೀರದಲ್ಲಿ ನೆಲೆಸಿರುವ 'ವೀಸಾ ಬಾಲಾಜಿ ಮಂದಿರ'ವು ಇದರಲ್ಲಿ ಒಂದಾಗಿದೆ. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಮತ್ತಷ್ಟು ಮಾಹಿತಿಯನ್ನು ನೀಡಲಿದೆ....

ದೇವಸ್ಥಾನದ ಬಗ್ಗೆ
ಈ ಪ್ರಸಿದ್ಧ ಮಂದಿರದಲ್ಲಿ ವೆಂಕಟೇಶ್ವರ ದೇವರು ಪ್ರಮುಖವಾಗಿ ಪೂಜಿಸಲ್ಪಡುತ್ತಾರೆ. ಇವರನ್ನು ವೀಸಾ ಒದಗಿಸುವ ಬಾಲಾಜಿ ಎಂದು ಕರೆಯಲಾಗುತ್ತದೆ. ಈ ಮಂದಿರವು ಒಸ್ಮಾನ್ ಸಾಗರ ಸರೋವರದ ಸಮೀಪದಲ್ಲಿದೆ.

ಮಂದಿರದ ಇತಿಹಾಸ
1980ರಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಚೆನ್ನೈಯಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ವೀಸಾ ಸಿಗುತ್ತಾ ಇರಲಿಲ್ಲ. ಇವರೆಲ್ಲರೂ ಜತೆಯಾಗಿ ಬಂದು ಬಾಲಾಜಿಯಲ್ಲಿ ವೀಸಾಕ್ಕಾಗಿ ಪ್ರಾರ್ಥಿಸಿದರು.

ವೀಸಾ ಸಿಕ್ಕೇ ಬಿಟ್ಟಿತು!
ಅವರ ಅದೃಷ್ಟದಂತೆ ಪ್ರಾರ್ಥನೆಯು ಫಲಿಸಿತು. ಅಂದಿನಿಂದ ಅಮೆರಿಕಾ ವೀಸಾ ಪಡೆಯಲು ಈ ಮಂದಿರದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಇಲ್ಲಿ ಪ್ರಾರ್ಥನೆ ಮಾಡಿದರೆ ವೀಸಾ ಕಾರ್ಯಗಳು ಸರಾಗವಾಗಿ ಆಗುತ್ತದೆ ಎಂದು ನಂಬಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?
ವೀಸಾ ಬಯಸುವವರಿಗೆ ಇಲ್ಲಿ ಬಾಲಾಜಿಯ ಆಶೀರ್ವಾದವಿದೆ. ವೀಸಾಕ್ಕಾಗಿ ಸಂದರ್ಶನ ನೀಡಲು ಹೋಗುವಂತಹ ಪ್ರತಿಯೊಬ್ಬರು ಚಿಲ್ಕೂರು ವೀಸಾ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿಯೇ ಮುಂದೆ ಹೋಗುವುದು.

ಇದು ಹೇಗೆ ಕೆಲಸ ಮಾಡುತ್ತದೆ?
ವೀಸಾ ಪ್ರಾರ್ಥನೆಯೊಂದಿಗೆ ಮಂದಿರಕ್ಕೆ ಬರುವ ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಬೇಕು. ವೀಸಾ ಪಡೆದ ಬಳಿಕ 108 ಸುತ್ತು ಪ್ರದಕ್ಷಿಣೆ ಹಾಕುವುದಾಗಿ ಪ್ರಾರ್ಥಿಸಿಕೊಳ್ಳಬೇಕು. ಇದು ವೀಸಾ ದೇವರಲ್ಲಿ ಪ್ರಾರ್ಥಿಸುವ ವಿಧಾನ.

ಹಣ ಬೇಕಿಲ್ಲ
ಈ ಮಂದಿರಕ್ಕೆ ಭೇಟಿ ನೀಡಲು ಹೆಚ್ಚು ಸಮಸ್ಯೆಯಿಲ್ಲ. ಇಲ್ಲಿ ಪ್ರತಿಯೊಂದು ಉಚಿತವಾಗಿದೆ ಮತ್ತು ಯಾವುದೇ ರೂಪದಲ್ಲಿ ಹಣ ಸ್ವೀಕರಿಸದೆ ಇರಲು ಮಂದಿರವು ಕಟು ನಿಯಮ ಪಾಲಿಸಿದೆ. ಈ ಮಂದಿರವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬೆಳೆಯುತ್ತಾ ಇದೆ.



Click it and Unblock the Notifications