Latest Updates
-
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್!
ಸಾಕ್ಷಾತ್ ಬಾಲಾಜಿ ಮಹಿಮೆ: ವೀಸಾ ಕೊಡಿಸುವ 'ವೀಸಾ ಬಾಲಾಜಿ ಮಂದಿರ'
ವಿದೇಶಕ್ಕೆ ಹೋಗಬೇಕು, ಅಲ್ಲಿ ಸುತ್ತಾಡಿಕೊಂಡು ಬರಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಹೆಚ್ಚಿನವರು ಸಣ್ಣ ಸಣ್ಣ ದೇಶಗಳಿಗೆ ಸುತ್ತಾಡಲು ಹೋಗುವುದನ್ನು ಇಷ್ಟಪಡುತ್ತಾರೆ. ಇಲ್ಲಿ ಖರ್ಚು ಕೂಡ ಕಡಿಮೆ ಇರುವುದು ಮತ್ತು ವೀಸಾ ಕೂಡ ಬೇಗನೆ ಲಭ್ಯವಾಗುವುದು. ಆದರೆ ಕೆಲವರಿಗೆ ಒಳ್ಳೆಯ ಪ್ರವಾಸಿ ತಾಣಗಳು ಇರುವ ದೇಶಗಳಿಗೆ ಸುತ್ತಾಡಲು ಹೋಗಬೇಕೆಂಬ ಆಸೆ ಇರುವುದು. ಆದರೆ ಇಂತಹ ದೇಶಗಳಿಗೆ ಹೋಗಲು ಅಷ್ಟು ಸುಲಭವಾಗಿ ವೀಸಾ ಸಿಗುವುದಿಲ್ಲ. ಕೆಲಸಕ್ಕಾಗಿಯೂ ಇಂತಹ ದೇಶಗಳಿಗೆ ಹೋಗುವುದು ತುಂಬಾ ಕಠಿಣ.
ವೀಸಾ ಪಡೆಯಲು ತುಂಬ ಕಷ್ಟಪಡಬೇಕಾಗುತ್ತದೆ. ಆದರೆ ಕೆಲವು ಭಾರತೀಯ ಮಂದಿರಗಳಲ್ಲಿ ವೀಸಾ ಪಡೆಯಲೆಂದು ಪ್ರಾರ್ಥನೆ ಮಾಡಲಾಗುತ್ತದೆ. ಇಂತಹ ಮಂದಿರಗಳಲ್ಲಿ ಪ್ರಾರ್ಥನೆ ಮಾಡಿದರೆ ವೀಸಾ ಬೇಗನೆ ಸಿಗುವುದು ಎನ್ನುವ ನಂಬಿಕೆಯಿದೆ. ಹೈದ್ರಾಬಾದ್ನ ಹೊರವಲಯದಲ್ಲಿರುವ ಚಿಲ್ಕೂರಿನ ಉಸ್ಮಾನ್ ಸಾಗರದ ತೀರದಲ್ಲಿ ನೆಲೆಸಿರುವ 'ವೀಸಾ ಬಾಲಾಜಿ ಮಂದಿರ'ವು ಇದರಲ್ಲಿ ಒಂದಾಗಿದೆ. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಮತ್ತಷ್ಟು ಮಾಹಿತಿಯನ್ನು ನೀಡಲಿದೆ....

ದೇವಸ್ಥಾನದ ಬಗ್ಗೆ
ಈ ಪ್ರಸಿದ್ಧ ಮಂದಿರದಲ್ಲಿ ವೆಂಕಟೇಶ್ವರ ದೇವರು ಪ್ರಮುಖವಾಗಿ ಪೂಜಿಸಲ್ಪಡುತ್ತಾರೆ. ಇವರನ್ನು ವೀಸಾ ಒದಗಿಸುವ ಬಾಲಾಜಿ ಎಂದು ಕರೆಯಲಾಗುತ್ತದೆ. ಈ ಮಂದಿರವು ಒಸ್ಮಾನ್ ಸಾಗರ ಸರೋವರದ ಸಮೀಪದಲ್ಲಿದೆ.

ಮಂದಿರದ ಇತಿಹಾಸ
1980ರಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಚೆನ್ನೈಯಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ವೀಸಾ ಸಿಗುತ್ತಾ ಇರಲಿಲ್ಲ. ಇವರೆಲ್ಲರೂ ಜತೆಯಾಗಿ ಬಂದು ಬಾಲಾಜಿಯಲ್ಲಿ ವೀಸಾಕ್ಕಾಗಿ ಪ್ರಾರ್ಥಿಸಿದರು.

ವೀಸಾ ಸಿಕ್ಕೇ ಬಿಟ್ಟಿತು!
ಅವರ ಅದೃಷ್ಟದಂತೆ ಪ್ರಾರ್ಥನೆಯು ಫಲಿಸಿತು. ಅಂದಿನಿಂದ ಅಮೆರಿಕಾ ವೀಸಾ ಪಡೆಯಲು ಈ ಮಂದಿರದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಇಲ್ಲಿ ಪ್ರಾರ್ಥನೆ ಮಾಡಿದರೆ ವೀಸಾ ಕಾರ್ಯಗಳು ಸರಾಗವಾಗಿ ಆಗುತ್ತದೆ ಎಂದು ನಂಬಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?
ವೀಸಾ ಬಯಸುವವರಿಗೆ ಇಲ್ಲಿ ಬಾಲಾಜಿಯ ಆಶೀರ್ವಾದವಿದೆ. ವೀಸಾಕ್ಕಾಗಿ ಸಂದರ್ಶನ ನೀಡಲು ಹೋಗುವಂತಹ ಪ್ರತಿಯೊಬ್ಬರು ಚಿಲ್ಕೂರು ವೀಸಾ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿಯೇ ಮುಂದೆ ಹೋಗುವುದು.

ಇದು ಹೇಗೆ ಕೆಲಸ ಮಾಡುತ್ತದೆ?
ವೀಸಾ ಪ್ರಾರ್ಥನೆಯೊಂದಿಗೆ ಮಂದಿರಕ್ಕೆ ಬರುವ ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಬೇಕು. ವೀಸಾ ಪಡೆದ ಬಳಿಕ 108 ಸುತ್ತು ಪ್ರದಕ್ಷಿಣೆ ಹಾಕುವುದಾಗಿ ಪ್ರಾರ್ಥಿಸಿಕೊಳ್ಳಬೇಕು. ಇದು ವೀಸಾ ದೇವರಲ್ಲಿ ಪ್ರಾರ್ಥಿಸುವ ವಿಧಾನ.

ಹಣ ಬೇಕಿಲ್ಲ
ಈ ಮಂದಿರಕ್ಕೆ ಭೇಟಿ ನೀಡಲು ಹೆಚ್ಚು ಸಮಸ್ಯೆಯಿಲ್ಲ. ಇಲ್ಲಿ ಪ್ರತಿಯೊಂದು ಉಚಿತವಾಗಿದೆ ಮತ್ತು ಯಾವುದೇ ರೂಪದಲ್ಲಿ ಹಣ ಸ್ವೀಕರಿಸದೆ ಇರಲು ಮಂದಿರವು ಕಟು ನಿಯಮ ಪಾಲಿಸಿದೆ. ಈ ಮಂದಿರವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬೆಳೆಯುತ್ತಾ ಇದೆ.



Click it and Unblock the Notifications