Latest Updates
-
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಈ ಸ್ಮಶಾನದ ನೆಲದಲ್ಲಿ ವೇಶ್ಯೆಯರು ನರ್ತಿಸುತ್ತಾರಂತೆ! ಯಾಕೆ ಗೊತ್ತೇ?
ಭಾರತ ವೈವಿಧ್ಯತೆಗಳ ನೆಲ. ಇಲ್ಲಿ ಸಾವಿರಾರು ಸಂಸ್ಕೃತಿಗಳಿದ್ದು ಲಕ್ಷಾಂತರ ಸಂಪ್ರದಾಯಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ. ಈ ಸಂಪ್ರದಾಯಗಳ ವೈವಿಧ್ಯತೆ ಎಷ್ಟು ಹೆಚ್ಚಿವೆ ಎಂದರೆ ಇದನ್ನು ಒಂದು ಊರಿನಲ್ಲಿ ಅನುಸರಿಸುತ್ತಿದ್ದರೆ ಪಕ್ಕದ ಊರಿನವರಿಗೇ ಈ ಬಗ್ಗೆ ತಿಳಿದಿರುವುದಿಲ್ಲ. ಅದರಲ್ಲಿ ಕೆಲವು ಸಂಪ್ರದಾಯಗಳು ವಿಚಿತ್ರವೆನಿಸುತ್ತದೆ.
ಇಂತಹ ಒಂದು ಸಂಪ್ರದಾಯದಲ್ಲಿ ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಗಳ ಸುತ್ತ ವೇಶ್ಯೆಯರು ನರ್ತಿಸುತ್ತಾರೆ. ಈ ಕ್ರಮ ಅಸಹ್ಯ ಎಂದು ಹೆಚ್ಚಿನವರಿಗೆ ಅನ್ನಿಸಿದರೂ ಈ ಸಂಪ್ರದಾಯವನ್ನು ಅನುಸರಿಸುವವರು ಇದಕ್ಕೆ ನೀಡುವ ಕಾರಣ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. ಇದು ಎಲ್ಲಿ ನಡೆಯುತ್ತದೆ ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....

ಈ ಸಂಪ್ರದಾಯ ತುಂಬಾ ಹಳೆಯದು
ಈ ವಿಚಿತ್ರ ಸಂಪ್ರದಾಯಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಆ ಸಮಯದಲ್ಲಿ ರಾಜಾ ಮಾನ್ ಸಿಂಗ್ ರವರ ಆಳ್ವಿಕೆ ಇತ್ತು. ಬಳಿಕ ಆಳ್ವಿಕೆಯನ್ನು ಸ್ಮಶಾನದ ದೇವರು ಎಂದೇ ಪ್ರಖ್ಯಾತರಾಗಿದ್ದ ಬಾಬಾ ಶಂಶಾನ್ ನಾಥ್ ರವರು ಪುನ:ಸ್ಥಾಪಿಸಿದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯ ಸಮಯದಲ್ಲಿ ಈ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ.

ಈ ಸಂಪ್ರದಾಯಕ್ಕೆ ಕಾರಣ
ಈ ಸಂಪ್ರದಾಯಕ್ಕೆ ಪ್ರಮುಖ ಕಾರಣವೆಂದರೆ "ಸಂಶಾನೇಶ್ವರ ಮಹಾದೇವನ ಶೃಂಗಾರ" ಅಥವಾ ಈ ದೇವನನ್ನು ಒಲಿಸಿಕೊಳ್ಳುವ ಮೂಲಕ ಮುಂದಿನ ಜನ್ಮದಲ್ಲಿಯಾದರೂ ಒಳ್ಳೆಯ ಜೀವನ ದೊರಕಲಿ ಎಂದು ಶಿವದಾಸಪುರ, ಮಂದುವಾಯಿಧ್, ಚುನಾರ್ ಮಾತು ದಾಲ್ ಮಂಡಿ ಮೊದಲಾದ ಸ್ಥಳಗಳಲ್ಲಿರುವ ಕೆಂಪುದೇಪದ ಪ್ರದೇಶದ ವೇಶ್ಯೆಯರು ಇಲ್ಲಿ ಪೂಜೆಯ ರೂಪದಲ್ಲಿ ನರ್ತಿಸುತ್ತಾರೆ.

ಈ ನರ್ತನ ಎಲ್ಲಿ ನಡೆಯುತ್ತದೆ?
ವಾರಣಾಸಿಯ ಪ್ರಮುಖ ಸ್ಮಶಾನದಲ್ಲಿ ಈ ಸಂಪ್ರದಾಯ ನಡೆಯುತ್ತದೆ. ಈ ಸ್ಮಶಾನಕ್ಕೆ 'ಮಹಾಸ್ಮಶಾನಂ' ಎಂದೂ ಕರೆಯಲಾಗುತ್ತದೆ. ಬೇರೆ ಸ್ಮಶಾನಗಳಿಗೆ ಇವರು ಹೋಗದಿರಲು ಕಾರಣವೇನೆಂದರೆ ಇಲ್ಲಿ ಸದಾ ಒಂದಲ್ಲಾ ಒಂದು ಚಿತೆ ಉರಿಯುತ್ತಲೇ ಇರುತ್ತದೆ ಹಾಗೂ ಪ್ರತಿದಿನ ಮುಸ್ಸಂಜೆಯ ಹೊತ್ತಿನಲ್ಲಿ ಈ ನರ್ತನ ಸರಿಸುಮಾರು ಪ್ರತಿದಿನ ನಡೆಯುತ್ತದೆ.

ಈ ನರ್ತನ ಎಲ್ಲಿ ನಡೆಯುತ್ತದೆ?
ಈ ನರ್ತನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕುತೂಹಲಿಗರು ಆಗಮಿಸುತ್ತಾರೆ. ಈ ನರ್ತನದ ಬಳಿಕ ನಡೆಯುವ ಪೂಜೆಯಲ್ಲಿ ಪ್ರಸಾದದ ರೂಪದಲ್ಲಿ ಮಾಂಸ, ಭಾಂಗ್, ಗಾಂಜಾ, ಹಣ ಮತ್ತು ಮದ್ಯದ ಬಾಟಲಿಗಳನ್ನೂ ದೇವರಿಗೆ ಅರ್ಪಿಸಲಾಗುತ್ತದೆ.

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?
ವೇಶ್ಯೆಯರು ತಿಳಿಸುವ ಪ್ರಕಾರ ಈ ಪೂಜೆ ಮತ್ತು ನರ್ತನದ ಮೂಲಕ ಬಾಬಾರವರ ಅನುಗ್ರಹವನ್ನು ಪಡೆದು ಮುಂದಿನ ಜನ್ಮದಲ್ಲಿ ಒಳ್ಳೆಯ ಜೀವನವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?
ಮುಂದಿನ ಜನ್ಮದ ಜೀವನ ಒಳ್ಳೆಯದಾಗಲಿ ಎಂದೇ ಈ ಜನ್ಮದಲ್ಲಿ ಚಿತೆಗಳ ಸುತ್ತ ನರ್ತಿಸುವುದು ವಿಚಿತ್ರವಾದರೂ ನಿಜವಾಗಿರುವ ಸಂಪ್ರದಾಯವಾಗಿದೆ. ಈ ಮಾಹಿತಿ ನಿಮ್ಮಲ್ಲಿ ಕುತೂಹಲ ಮೂಡಿಸಿದರೆ ನಿಮ್ಮ ಪರಿಚಿತರು ಸ್ನೇಹಿತರಲ್ಲಿಯೂ ಹಂಚಿಕೊಳ್ಳಿ.



Click it and Unblock the Notifications