Just In
Don't Miss
- Movies ಸಂಯುಕ್ತಾ ಹೊರನಾಡು ತೆರೆದಿದ್ದ ಆರ್ಟ್ ರೂಮ್ ಈಗ ಹೇಗಿದೆ?
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಸ್ಮಶಾನದ ನೆಲದಲ್ಲಿ ವೇಶ್ಯೆಯರು ನರ್ತಿಸುತ್ತಾರಂತೆ! ಯಾಕೆ ಗೊತ್ತೇ?
ಭಾರತ ವೈವಿಧ್ಯತೆಗಳ ನೆಲ. ಇಲ್ಲಿ ಸಾವಿರಾರು ಸಂಸ್ಕೃತಿಗಳಿದ್ದು ಲಕ್ಷಾಂತರ ಸಂಪ್ರದಾಯಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ. ಈ ಸಂಪ್ರದಾಯಗಳ ವೈವಿಧ್ಯತೆ ಎಷ್ಟು ಹೆಚ್ಚಿವೆ ಎಂದರೆ ಇದನ್ನು ಒಂದು ಊರಿನಲ್ಲಿ ಅನುಸರಿಸುತ್ತಿದ್ದರೆ ಪಕ್ಕದ ಊರಿನವರಿಗೇ ಈ ಬಗ್ಗೆ ತಿಳಿದಿರುವುದಿಲ್ಲ. ಅದರಲ್ಲಿ ಕೆಲವು ಸಂಪ್ರದಾಯಗಳು ವಿಚಿತ್ರವೆನಿಸುತ್ತದೆ.
ಇದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ವೇಶ್ಯೆಯ ಕಣ್ಣೀರ ಕಥೆ
ಇಂತಹ ಒಂದು ಸಂಪ್ರದಾಯದಲ್ಲಿ ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಗಳ ಸುತ್ತ ವೇಶ್ಯೆಯರು ನರ್ತಿಸುತ್ತಾರೆ. ಈ ಕ್ರಮ ಅಸಹ್ಯ ಎಂದು ಹೆಚ್ಚಿನವರಿಗೆ ಅನ್ನಿಸಿದರೂ ಈ ಸಂಪ್ರದಾಯವನ್ನು ಅನುಸರಿಸುವವರು ಇದಕ್ಕೆ ನೀಡುವ ಕಾರಣ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. ಇದು ಎಲ್ಲಿ ನಡೆಯುತ್ತದೆ ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....
ಈ ಸಂಪ್ರದಾಯ ತುಂಬಾ ಹಳೆಯದು
ಈ ವಿಚಿತ್ರ ಸಂಪ್ರದಾಯಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಆ ಸಮಯದಲ್ಲಿ ರಾಜಾ ಮಾನ್ ಸಿಂಗ್ ರವರ ಆಳ್ವಿಕೆ ಇತ್ತು. ಬಳಿಕ ಆಳ್ವಿಕೆಯನ್ನು ಸ್ಮಶಾನದ ದೇವರು ಎಂದೇ ಪ್ರಖ್ಯಾತರಾಗಿದ್ದ ಬಾಬಾ ಶಂಶಾನ್ ನಾಥ್ ರವರು ಪುನ:ಸ್ಥಾಪಿಸಿದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯ ಸಮಯದಲ್ಲಿ ಈ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ.
ಈ ಸಂಪ್ರದಾಯಕ್ಕೆ ಕಾರಣ
ಈ ಸಂಪ್ರದಾಯಕ್ಕೆ ಪ್ರಮುಖ ಕಾರಣವೆಂದರೆ "ಸಂಶಾನೇಶ್ವರ ಮಹಾದೇವನ ಶೃಂಗಾರ" ಅಥವಾ ಈ ದೇವನನ್ನು ಒಲಿಸಿಕೊಳ್ಳುವ ಮೂಲಕ ಮುಂದಿನ ಜನ್ಮದಲ್ಲಿಯಾದರೂ ಒಳ್ಳೆಯ ಜೀವನ ದೊರಕಲಿ ಎಂದು ಶಿವದಾಸಪುರ, ಮಂದುವಾಯಿಧ್, ಚುನಾರ್ ಮಾತು ದಾಲ್ ಮಂಡಿ ಮೊದಲಾದ ಸ್ಥಳಗಳಲ್ಲಿರುವ ಕೆಂಪುದೇಪದ ಪ್ರದೇಶದ ವೇಶ್ಯೆಯರು ಇಲ್ಲಿ ಪೂಜೆಯ ರೂಪದಲ್ಲಿ ನರ್ತಿಸುತ್ತಾರೆ.
ಈ ನರ್ತನ ಎಲ್ಲಿ ನಡೆಯುತ್ತದೆ?
ವಾರಣಾಸಿಯ ಪ್ರಮುಖ ಸ್ಮಶಾನದಲ್ಲಿ ಈ ಸಂಪ್ರದಾಯ ನಡೆಯುತ್ತದೆ. ಈ ಸ್ಮಶಾನಕ್ಕೆ 'ಮಹಾಸ್ಮಶಾನಂ' ಎಂದೂ ಕರೆಯಲಾಗುತ್ತದೆ. ಬೇರೆ ಸ್ಮಶಾನಗಳಿಗೆ ಇವರು ಹೋಗದಿರಲು ಕಾರಣವೇನೆಂದರೆ ಇಲ್ಲಿ ಸದಾ ಒಂದಲ್ಲಾ ಒಂದು ಚಿತೆ ಉರಿಯುತ್ತಲೇ ಇರುತ್ತದೆ ಹಾಗೂ ಪ್ರತಿದಿನ ಮುಸ್ಸಂಜೆಯ ಹೊತ್ತಿನಲ್ಲಿ ಈ ನರ್ತನ ಸರಿಸುಮಾರು ಪ್ರತಿದಿನ ನಡೆಯುತ್ತದೆ.
ಈ ನರ್ತನ ಎಲ್ಲಿ ನಡೆಯುತ್ತದೆ?
ಈ ನರ್ತನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕುತೂಹಲಿಗರು ಆಗಮಿಸುತ್ತಾರೆ. ಈ ನರ್ತನದ ಬಳಿಕ ನಡೆಯುವ ಪೂಜೆಯಲ್ಲಿ ಪ್ರಸಾದದ ರೂಪದಲ್ಲಿ ಮಾಂಸ, ಭಾಂಗ್, ಗಾಂಜಾ, ಹಣ ಮತ್ತು ಮದ್ಯದ ಬಾಟಲಿಗಳನ್ನೂ ದೇವರಿಗೆ ಅರ್ಪಿಸಲಾಗುತ್ತದೆ.
ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?
ವೇಶ್ಯೆಯರು ತಿಳಿಸುವ ಪ್ರಕಾರ ಈ ಪೂಜೆ ಮತ್ತು ನರ್ತನದ ಮೂಲಕ ಬಾಬಾರವರ ಅನುಗ್ರಹವನ್ನು ಪಡೆದು ಮುಂದಿನ ಜನ್ಮದಲ್ಲಿ ಒಳ್ಳೆಯ ಜೀವನವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?
ಮುಂದಿನ ಜನ್ಮದ ಜೀವನ ಒಳ್ಳೆಯದಾಗಲಿ ಎಂದೇ ಈ ಜನ್ಮದಲ್ಲಿ ಚಿತೆಗಳ ಸುತ್ತ ನರ್ತಿಸುವುದು ವಿಚಿತ್ರವಾದರೂ ನಿಜವಾಗಿರುವ ಸಂಪ್ರದಾಯವಾಗಿದೆ. ಈ ಮಾಹಿತಿ ನಿಮ್ಮಲ್ಲಿ ಕುತೂಹಲ ಮೂಡಿಸಿದರೆ ನಿಮ್ಮ ಪರಿಚಿತರು ಸ್ನೇಹಿತರಲ್ಲಿಯೂ ಹಂಚಿಕೊಳ್ಳಿ.