Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ಈ ಸ್ಮಶಾನದ ನೆಲದಲ್ಲಿ ವೇಶ್ಯೆಯರು ನರ್ತಿಸುತ್ತಾರಂತೆ! ಯಾಕೆ ಗೊತ್ತೇ?
ಭಾರತ ವೈವಿಧ್ಯತೆಗಳ ನೆಲ. ಇಲ್ಲಿ ಸಾವಿರಾರು ಸಂಸ್ಕೃತಿಗಳಿದ್ದು ಲಕ್ಷಾಂತರ ಸಂಪ್ರದಾಯಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ. ಈ ಸಂಪ್ರದಾಯಗಳ ವೈವಿಧ್ಯತೆ ಎಷ್ಟು ಹೆಚ್ಚಿವೆ ಎಂದರೆ ಇದನ್ನು ಒಂದು ಊರಿನಲ್ಲಿ ಅನುಸರಿಸುತ್ತಿದ್ದರೆ ಪಕ್ಕದ ಊರಿನವರಿಗೇ ಈ ಬಗ್ಗೆ ತಿಳಿದಿರುವುದಿಲ್ಲ. ಅದರಲ್ಲಿ ಕೆಲವು ಸಂಪ್ರದಾಯಗಳು ವಿಚಿತ್ರವೆನಿಸುತ್ತದೆ.
ಇಂತಹ ಒಂದು ಸಂಪ್ರದಾಯದಲ್ಲಿ ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಗಳ ಸುತ್ತ ವೇಶ್ಯೆಯರು ನರ್ತಿಸುತ್ತಾರೆ. ಈ ಕ್ರಮ ಅಸಹ್ಯ ಎಂದು ಹೆಚ್ಚಿನವರಿಗೆ ಅನ್ನಿಸಿದರೂ ಈ ಸಂಪ್ರದಾಯವನ್ನು ಅನುಸರಿಸುವವರು ಇದಕ್ಕೆ ನೀಡುವ ಕಾರಣ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. ಇದು ಎಲ್ಲಿ ನಡೆಯುತ್ತದೆ ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....

ಈ ಸಂಪ್ರದಾಯ ತುಂಬಾ ಹಳೆಯದು
ಈ ವಿಚಿತ್ರ ಸಂಪ್ರದಾಯಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಆ ಸಮಯದಲ್ಲಿ ರಾಜಾ ಮಾನ್ ಸಿಂಗ್ ರವರ ಆಳ್ವಿಕೆ ಇತ್ತು. ಬಳಿಕ ಆಳ್ವಿಕೆಯನ್ನು ಸ್ಮಶಾನದ ದೇವರು ಎಂದೇ ಪ್ರಖ್ಯಾತರಾಗಿದ್ದ ಬಾಬಾ ಶಂಶಾನ್ ನಾಥ್ ರವರು ಪುನ:ಸ್ಥಾಪಿಸಿದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯ ಸಮಯದಲ್ಲಿ ಈ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ.

ಈ ಸಂಪ್ರದಾಯಕ್ಕೆ ಕಾರಣ
ಈ ಸಂಪ್ರದಾಯಕ್ಕೆ ಪ್ರಮುಖ ಕಾರಣವೆಂದರೆ "ಸಂಶಾನೇಶ್ವರ ಮಹಾದೇವನ ಶೃಂಗಾರ" ಅಥವಾ ಈ ದೇವನನ್ನು ಒಲಿಸಿಕೊಳ್ಳುವ ಮೂಲಕ ಮುಂದಿನ ಜನ್ಮದಲ್ಲಿಯಾದರೂ ಒಳ್ಳೆಯ ಜೀವನ ದೊರಕಲಿ ಎಂದು ಶಿವದಾಸಪುರ, ಮಂದುವಾಯಿಧ್, ಚುನಾರ್ ಮಾತು ದಾಲ್ ಮಂಡಿ ಮೊದಲಾದ ಸ್ಥಳಗಳಲ್ಲಿರುವ ಕೆಂಪುದೇಪದ ಪ್ರದೇಶದ ವೇಶ್ಯೆಯರು ಇಲ್ಲಿ ಪೂಜೆಯ ರೂಪದಲ್ಲಿ ನರ್ತಿಸುತ್ತಾರೆ.

ಈ ನರ್ತನ ಎಲ್ಲಿ ನಡೆಯುತ್ತದೆ?
ವಾರಣಾಸಿಯ ಪ್ರಮುಖ ಸ್ಮಶಾನದಲ್ಲಿ ಈ ಸಂಪ್ರದಾಯ ನಡೆಯುತ್ತದೆ. ಈ ಸ್ಮಶಾನಕ್ಕೆ 'ಮಹಾಸ್ಮಶಾನಂ' ಎಂದೂ ಕರೆಯಲಾಗುತ್ತದೆ. ಬೇರೆ ಸ್ಮಶಾನಗಳಿಗೆ ಇವರು ಹೋಗದಿರಲು ಕಾರಣವೇನೆಂದರೆ ಇಲ್ಲಿ ಸದಾ ಒಂದಲ್ಲಾ ಒಂದು ಚಿತೆ ಉರಿಯುತ್ತಲೇ ಇರುತ್ತದೆ ಹಾಗೂ ಪ್ರತಿದಿನ ಮುಸ್ಸಂಜೆಯ ಹೊತ್ತಿನಲ್ಲಿ ಈ ನರ್ತನ ಸರಿಸುಮಾರು ಪ್ರತಿದಿನ ನಡೆಯುತ್ತದೆ.

ಈ ನರ್ತನ ಎಲ್ಲಿ ನಡೆಯುತ್ತದೆ?
ಈ ನರ್ತನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕುತೂಹಲಿಗರು ಆಗಮಿಸುತ್ತಾರೆ. ಈ ನರ್ತನದ ಬಳಿಕ ನಡೆಯುವ ಪೂಜೆಯಲ್ಲಿ ಪ್ರಸಾದದ ರೂಪದಲ್ಲಿ ಮಾಂಸ, ಭಾಂಗ್, ಗಾಂಜಾ, ಹಣ ಮತ್ತು ಮದ್ಯದ ಬಾಟಲಿಗಳನ್ನೂ ದೇವರಿಗೆ ಅರ್ಪಿಸಲಾಗುತ್ತದೆ.

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?
ವೇಶ್ಯೆಯರು ತಿಳಿಸುವ ಪ್ರಕಾರ ಈ ಪೂಜೆ ಮತ್ತು ನರ್ತನದ ಮೂಲಕ ಬಾಬಾರವರ ಅನುಗ್ರಹವನ್ನು ಪಡೆದು ಮುಂದಿನ ಜನ್ಮದಲ್ಲಿ ಒಳ್ಳೆಯ ಜೀವನವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಬಗ್ಗೆ ವೇಶ್ಯೆಯರೇನು ಹೇಳುತ್ತಾರೆ?
ಮುಂದಿನ ಜನ್ಮದ ಜೀವನ ಒಳ್ಳೆಯದಾಗಲಿ ಎಂದೇ ಈ ಜನ್ಮದಲ್ಲಿ ಚಿತೆಗಳ ಸುತ್ತ ನರ್ತಿಸುವುದು ವಿಚಿತ್ರವಾದರೂ ನಿಜವಾಗಿರುವ ಸಂಪ್ರದಾಯವಾಗಿದೆ. ಈ ಮಾಹಿತಿ ನಿಮ್ಮಲ್ಲಿ ಕುತೂಹಲ ಮೂಡಿಸಿದರೆ ನಿಮ್ಮ ಪರಿಚಿತರು ಸ್ನೇಹಿತರಲ್ಲಿಯೂ ಹಂಚಿಕೊಳ್ಳಿ.



Click it and Unblock the Notifications
