Just In
- 2 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 11 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 12 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 12 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- News Lok Sabha Elections 2024: ಬೆಂಗಳೂರಿನಲ್ಲಿ ಮತದಾನದ ದಿನ ಏನಿರುತ್ತೆ...ಏನಿರಲ್ಲ..?
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
07-12-2017 ಗುರುವಾರದ ದಿನ ಭವಿಷ್ಯ
ಜೀವನದಲ್ಲಿ ಉತ್ತಮ ಸ್ಥಾನ ಮಾನ ಪಡೆದುಕೊಳ್ಳಬೇಕೆಂದರೆ ನಮ್ಮ ವೈಯಕ್ತಿಕ ಜೀವನ ಹಾಗೂ ವರ್ತನೆಯೂ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇರಬೇಕು. ಯಾವ ಸಂಬಂಧವಾದರೂ ಸರಿ ನಮ್ಮ ಅನಿವಾರ್ಯತೆಗಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬಾರದು.
ಹಾಗೊಮ್ಮೆ ಮಾಡಿದರೆ ನಮ್ಮೊಡನೆ ಆ ಸಂಬಂಧ ಹೆಚ್ಚು ದಿನಗಳಕಾಲ ಉಳಿಯದು. ಮುಗ್ಧ ಮನಸ್ಸಿನಿಂದ ತೋರುವ ಪ್ರೀತಿ ಹಾಗೂ ನಿಷ್ಕಲ್ಮಶವಾದ ಕಾಳಜಿ ಸದಾ ನಮ್ಮನ್ನು ರಕ್ಷಿಸುತ್ತವೆ. ಗುರುವಾರವಾದ ಈ ಶುಭದಿನದಂದು ನಿಮ್ಮ ಸಂಬಂಧಗಳು ಯಾವೆಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತವೆ? ನಿಮ್ಮ ಭವಿಷ್ಯದ ಬದಲಾವಣೆಗಳು ಯಾವವು? ಎನ್ನುವುದನ್ನು ಸಂಕ್ಷಿಪ್ತವಾಗಿ ಅರಿಯಬೇಕೆಂದರೆ ಈ ಮುಂದೆ ನೀಡಿರುವ ವಿವರಣೆಯನ್ನು ಗಮನಿಸಿ...
ಮೇಷ
ಇಂದು ನಿಮಗೆ ಸಮಾಧಾನಕರವಾದ ದಿನ. ಮಹಿಳೆಯರಿಗೆ ಮಾಡುತ್ತಿರುವ ಉದ್ಯೋಗದಲ್ಲಿ ಯಶಸ್ಸು ದೊರೆಯುವುದು. ಸೌಂದರ್ಯವರ್ಧಕ ಉತ್ಪನ್ನಗಳ ತಯಾರಕರಿಗೆ ಲಾಭ ಉಂಟಾಗುವುದು. ವಿದೇಶ ಯಾನದ ಕನಸು ಹಲವರಿಗೆ ನೆರವೇರುವುದು. ಇಂಜಿನೀಯರ್ ವೃತ್ತಿ ಹುಡುಕುತ್ತಿರುವವರಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಪತ್ರಕರ್ತರಿಗೆ ಅನುಕೂಲವುಂಟಾಗುವುದು. ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರವಾದ ಜೀವನಕ್ಕೆ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.
ವೃಷಭ
ನಿಮ್ಮ ಮನಸ್ಸಿನ ಆಳದ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಮಾನ ಹರಾಜು ಆಗುವ ಸಾಧ್ಯತೆಗಳಿವೆ. ಆದಷ್ಟು ಎಚ್ಚರಿಕೆಯಿಂದ ಇರಿ. ಸ್ತ್ರೀಯರ ವಿಚಾರದಲ್ಲಿ ಜಾಗರೂಕರಾಗಿರಿ. ರಾಜಕಾರಣಿಗಳಿಗೆ ಹಿನ್ನಡೆ. ಇಲ್ಲಸಲ್ಲದ ಆರೋಪ ಕೇಳಿಬರುವುದು. ಒಂದಿಷ್ಟು ಮಟ್ಟದ ಸಮಾಧಾನ ಪಡೆದುಕೊಳ್ಳಲು ವಿಫಲ ರಾಗುವಿರಿ. ಕಬ್ಬಿಣ, ಬಟ್ಟೆ ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ ವಹಿವಾಟಿನಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಹಲವಾರು ಬಗೆಯ ಅಡೆತಡೆಗಳನ್ನು ಅನುಭವಿಸಬೇಕಾಗುವುದು. ಸ್ನೇಹಿತರೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಶಿವ ಹಾಗೂ ಗುರುವಿನ ಆರಾಧನೆ ಮಾಡಿ.
ಮಿಥುನ
ನಿಮಗೆ ಇಂದು ಸಾಮಾನ್ಯವಾದಂತಹ ದಿನ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಬಂಧು ಮಿತ್ರರ ನಡುವೆ ಇದ್ದ ಕಲಹಗಳು ದೂರಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಶುಭ ಸಮಾಚಾರ ಕೇಳುವಿರಿ. ಅನೇಕ ದಿನಗಳಿಂದ ನಿರ್ಧರಿಸಲ್ಪಟ್ಟ ವಿಚಾರಗಳು ನಿಮ್ಮನ್ನು ಹೈರಾಣಗೊಳಿಸುವುದು. ಜೀವನದಲ್ಲಿರುವ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಶಿವ ಮತ್ತು ಗುರುವಿನ ಆರಾಧನೆ ಮಾಡಿ.
ಕರ್ಕ
ಇಂದು ನಿಮಗೆ ಶುಭ ದಿನ. ವಿವಾಹಕ್ಕೆ ಇದ್ದ ಅಡೆತಡೆಗಳು ದೂರ ಆಗುವವು. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ನ್ಯಾಯಾಂಗ ಕ್ಷೇತ್ರದಲ್ಲಿ ಜಯ ಗಳಿಸುವಿರಿ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ ಉಂಟಾಗುವುದು. ಖಾಸಗಿ ಮತ್ತು ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ ಉಂಟಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.
ಸಿಂಹ
ನಿಮಗೆ ಇಂದು ಮಾನಸಿಕ ಕಿರಕಿರಿ ಉಂಟಾಗುವುದು. ಸ್ಥಿರಾಸ್ತಿಯಿಂದ ಲಾಭ ಉಂಟಾಗದು. ಅನೇಕ ದಿನಗಳಿಂದ ಅಂದುಕೊಂಡ ಕಾರ್ಯಗಳು ನೆರವೇರದೆ ಕಿರಿಕಿ ಉಂಟಾಗುವುದು. ಮನೆಯಲ್ಲಿ ಸಮಾಧಾನ ಸಿಗದು. ನೀವು ಮಾಡುತ್ತಿರುವ ಉದ್ಯೋಗವನ್ನು ಬದಲಿಸದಿರಿ. ಆ ಕೆಲಸದಲ್ಲಿಯೇ ಮುಂದುವರಿಯಿರಿ. ಮಾಡುವ ಕೆಲಸದಲ್ಲಿ ಪರಿಶ್ರಮವನ್ನು ತೋರಿ. ಆಧ್ಯಾತ್ಮಿಕ ಚಿಂತಕರಿಗೂ ಅಪಮಾನ ಉಂಟಾಗುವ ಸಾಧ್ಯತೆಗಳಿವೆ. ಜೀವನದಲ್ಲಿ ಕಷ್ಟಗಳ ನಿವಾರಣೆ ಹಾಗೂ ಸಂತೋಷದಾಯಕ ಬದುಕಿಗಾಗಿ ವಿಷ್ಣು ಮತ್ತು ವೆಂಟಕೇಶ್ವರನ ಆರಾಧನೆ ಮಾಡಿ.
ಕನ್ಯಾ
ಸಮಾಧಾನಕರವಾದ ಬದುಕನ್ನು ನೀವು ಕಾಣುವಿರಿ. ಬಂಧುಮಿತ್ರರ ಸಹಕಾರವನ್ನು ನೀವು ನಿರೀಕ್ಷಿಸಬಹುದು. ನಿರ್ಧರಿಸಿದ ವಿಚಾರಗಳನ್ನು ಕೈಬಿಡದಿರಿ. ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ಪ್ರಗತಿಯತ್ತ ಹೆಜ್ಜೆ ಇಡಿ. ಇನ್ನಷ್ಟು ಪ್ರಗತಿಯುತ ಜೀವನಕ್ಕಾಗಿ ವಿಷ್ಣುವಿನ ಆರಾಧನೆ ಮಾಡಿ.
ತುಲಾ
ಇಂದು ನಿಮಗೆ ಅದೃಷ್ಟಕರವಾದ ದಿನ. ಯಾವುದೇ ಕೆಲಸವನ್ನು ಕೈಗೊಂಡರೂ ಯಶಸ್ಸು ಹಾಗೂ ಲಾಭವನ್ನು ಪಡೆದುಕೊಳ್ಳುವಿರಿ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಮತ್ತು ಧಾರ್ಮಿಕ ಚಿಂತಕರಿಗೆ ಅನುಕೂಲವುಂಟಾಗುವುದು. ಅನಿರೀಕ್ಷಿತವಾದ ದೂರದ ಪ್ರಯಾಣ ಕೈಗೊಳ್ಳಬೇಕಾಗುವ ಸಾಧ್ಯತೆಗಳಿರುತ್ತವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯುತ ಜೀವನಕ್ಕಾಗಿ ವಿಷ್ಣುವಿನ ಆರಾಧನೆ ಹಾಗೂ ಗುರುವಿನ ಸ್ಮರಣೆಯನ್ನು ಮಾಡಿ.
ವೃಶ್ಚಿಕ
ನಿಮಗೆ ಶನಿ ಪ್ರಭಾವ ಮುಂದಿವರಿಯುತ್ತಿದೆ. ಆದಷ್ಟು ಜಾಗರೂಕತೆಯಲ್ಲಿರಬೇಕು. ಯಾವುದೇ ಜಗಳಕ್ಕೆ ಮುಂದಾಗದಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ನೀಡಿ. ಬಂಧು ಮಿತ್ರರಿಂದ ನಿರೀಕ್ಷಿತ ಸಹಕಾರ ದೊರೆಯದು. ತಂದೆತಾಯಿಯ ಆಶೀರ್ವಾದ ಲಭಿಸುವುದು. ಸ್ಥಿರಾಸ್ತಿಯಿಂದ ಲಾಭಾಂಶ ದೊರೆಯದು. ಸಮಸ್ಯೆಗಳ ನಿವಾರಣೆಗೆ ವಿಷ್ಣು ಮತ್ತು ಶಕ್ತಿಯ ಆರಾಧನೆ ಮಾಡಿ.
ಧನು
ವಿಪರೀತವಾದ ಆಯಾಸ ಹಾಗೂ ಅನಾರೋಗ್ಯ ನಿಮ್ಮನ್ನು ಕಾಡುವುದು. ಇಲ್ಲ ಸಲ್ಲದ ಆರೋಪಗಳು ನಿಮ್ಮ ಬೆನ್ನೇರುವ ಸಾಧ್ಯತೆಗಳಿವೆ. ನೀವು ಮಾಡದ ತಪ್ಪಿಗೆ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಯಾರೊಂದಿಗೂ ಜಗಳ ಅಥವಾ ಮುನಿಸನ್ನು ತೋರದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಆಂಜನೇಯನ ಆರಾಧನೆ ಮತ್ತು ಗುರುವಿನ ಸ್ಮರಣೆಯನ್ನು ಮಾಡಿ.
ಮಕರ
ಮನಸ್ಸಿಗೆ ಅಷ್ಟು ಸಮಾಧಾನ ಸಿಗದು. ಕಲೆ, ಸಂಗೀತ, ನೃತ್ಯಗಳಲ್ಲಿ ಇರುವವರು ಸರಸ್ವತಿಯ ಆರಾಧನೆ ಮಾಡಿದರೆ ಶುಭವಾಗುವುದು. ಬಂಧುಗಳು ಅಗಲಿದ ವಾರ್ತೆಯನ್ನು ಕೇಳುವಿರಿ. ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಹೈರಾಣ ಗೊಳಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದಾಯಕ ಬದುಕಿಗಾಗಿ ಶಕ್ತಿಯ ಉಪಾಸನೆ ಹಾಗೂ ಶಿವನ ಆರಾಧನೆ ಮಾಡಿ.
ಕುಂಬ
ಇಂದು ನೀವು ಸಮಾಧಾನಕರವಾದ ಬದುಕನ್ನು ಕಾಣುವಿರಿ. ಬಂಧು ಮಿತ್ರರಿಂದಲೂ ನಿರೀಕ್ಷಿತ ಸಹಕಾರವನ್ನು ಪಡೆದುಕೊಳ್ಳಬಹುದು. ನಿಮ್ಮ ಸಮಸ್ಯೆಗಳು ನಿವಾರಣೆ ಹೊಂದುವುದು. ಮಾಡುತ್ತಿರುವ ಕೆಲಸದಲ್ಲಿ ಅಲ್ಪ ಪ್ರಮಾಣದ ಲಾಭ ಉಂಟಾಗುವುದು. ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣುವರು. ಚಿಕ್ಕವರಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಶಿವ ಮತ್ತು ಗುರುವಿನ ಆರಾಧನೆ ಮಾಡಿ.
ಮೀನ
ಸುಂದರವಾದ ಜೀವನಕ್ಕೆ ನೀವು ಸಾಕ್ಷಿಯಾಗುವಿರಿ. ಬಂಧು ಮಿತ್ರರಿಂದ ಸಹಕಾರ ದೊರೆಯುವುದು. ಸಹೋದರರೊಂದಿಗೆ ದೂರದ ಪ್ರಯಾಣ ಮಾಡುವಿರಿ. ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿ ಮತ್ತು ಹಣಗಳ ಉಡುಗೊರೆ ದೊರೆಯುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಹಾಗೂ ಗುರುವಿನ ಸ್ಮರಣೆ ಮಾಡಿ.