Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಇದೆಲ್ಲಾ ನಿಜವೇ? ಸಮುದ್ರದ ನೀರು ಒಮ್ಮಿಂದೊಮ್ಮೆಗೇ ಬತ್ತಿ ಹೋಯಿತೇ!!
ನಿಸರ್ಗ ಮುನಿಸಿಕೊಂಡರೆ ಮನುಷ್ಯರು ಇದನ್ನು ತಡೆಯಲು ಸಾಧ್ಯವೇ ಇಲ್ಲ. ಈ ಪ್ರಕೋಪದ ಪರಿಣಾಮಗಳನ್ನು ಊಹಿಸಬಹುದೇ ಹೊರತು ತಡೆಗಟ್ಟಲು ಸಾಧ್ಯವಿಲ್ಲ. ಏನಿದ್ದರೂ ಇದರ ಅಟ್ಟಹಾಸವನ್ನು ನೋಡುತ್ತಿರಬೇಕು ಅಷ್ಟೇ. ನಮ್ಮ ಸುತ್ತಮುತ್ತ ಹಲವಾರು ವಾತಾವರಣದ ವೈಪರೀತ್ಯಗಳು ಕಂಡುಬರುತ್ತಿವೆ. ಒಂದೆಡೆ ಅತಿವೃಷ್ಟಿಯಿಂದ ಮಹಾಪೂರ ಎದುರಾದರೆ ಇನ್ನೊಂದೆಡೆ ಚಂಡಮಾರುತ ಸಮುದ್ರವನ್ನೇ ಎತ್ತಿ ತೀರಪ್ರದೇಶಗಳ ಮೇಲೆ ಎಸೆಯುತ್ತಿದೆ.
ಇದರ ನಡುವೆ ಚಂಡಮಾರುತದ ಪರಿಣಾಮದಿಂದ ಸಮುದ್ರದ ನೀರೇ ಒಮ್ಮೊಂದೊಮ್ಮೆಗೇ ಖಾಲಿಯಾಗಿದೆ. ಹೌದು, ಚಂಡಮಾರುತ 'ಇರ್ಮಾ'ದ ಪರಿಣಾಮದಿಂದ ಬಹಾಮಾಸ್ ಪ್ರದೇಶದಲ್ಲಿ ಈ ನಿಸರ್ಗಪ್ರಕೋಪದ ಪರಿಣಾಮ ಕಂಡುಬಂದಿದೆ, ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಈ ವಿಷಯದ ವಿನಿಮಯ ಒಂದು ಟ್ವೀಟ್ನಿಂದ ಪ್ರಾರಂಭವಾಯಿತು
ಬಹಾಮಾಸ್ ನಲ್ಲಿರುವ ಲಾಂಗ್ ಐಲ್ಯಾಂಡ್ ಎಂಬಲ್ಲಿಂದ ಮಹಿಳೆಯೊಬ್ಬರು ತಮ್ಮ ಮೊಬೈಲಿನಿಂದ ಟ್ವಿಟ್ಟರ್ ಸಂದೇಶವೊಂದನ್ನು ಕಳುಹಿಸಿದರು. ಇವರ ಸಂದೇಶ ಹೀಗಿತ್ತು: "ನಾನು ಈಗ ನೋಡುತ್ತಿರುವುದನ್ನು ನಂಬಲಿಕ್ಕೇ ಸಾಧ್ಯವಿಲ್ಲ, ಇದು ಲಾಂಗ್ ಐಲ್ಯಾಂಡ್, ಬಹಾಮಾಸ್. ಇಲ್ಲಿನ ಸಮುದ್ರದಿಂದ ನೀರು ಕಾಣೆಯಾಗಿಬಿಟ್ಟಿದೆ!!!, ಎಲ್ಲಿಯವರೆಗೆ ಇರ್ಮಾ ಚಂಡಮಾರುತ ದಿಗಂತದಲ್ಲಿ ಕಾಣುತ್ತಿದೆಯೋ ಅಲ್ಲಿಯವರೆಗೂ ಸಮುದ್ರ ಖಾಲಿಯಾಗಿಬಿಟ್ಟಿದೆ"
ಈ ವಿಡಿಯೋದಲ್ಲಿ...
ಈ ಮಹಿಳೆ ತಾನು ಕಂಡ ವಿದ್ಯಮಾನವನ್ನು ತನ್ನ ಮೊಬೈಲಿನಲ್ಲಿ ವೀಡಿಯೋ ಮೂಲಕ ಸೆರೆಹಿಡಿದಿದ್ದು ಇವರು ನೀರು ಖಾಲಿಯಾದ ಬಳಿಕ ಉಳಿದ ಉಸುಕಿನಲ್ಲಿ ನಡೆದಾಡುತ್ತಿದ್ದಾರೆ. ಇದು ಪೂರ್ಣ ಒಣಗಿದ್ದು ದೊಡ್ಡ ದೊಡ್ಡ ಕಪ್ಪೆಚಿಪ್ಪುಗಳಿಂದ ಕೂಡಿದೆ. ಸಮುದ್ರ ತೀರ ಹಿಂದೆ ಇದ್ದುದಕ್ಕಿಂತ ಎಷ್ಟೋ ಹಿಂದೆ ಹೋಗಿದ್ದು ಇದುವರೆಗೆ ನೀರಿನಡಿಯಲ್ಲಿದ್ದ ನೆಲ ಈಗ ಆಕಾಶಕ್ಕೆ ತೆರೆದುಕೊಂಡಿದೆ.

ಇನ್ನೊಂದು ತೀರದ ನೀರನ್ನೂ ಚಂಡಮಾರುತ ನುಂಗಿತ್ತು!
ಬಹಾಮಾಸ್ನಲ್ಲಿಯೇ ಇರುವ ಇನ್ನೊಂದು ತೀರದಲ್ಲಿಯೂ ಇದೇ ರೀತಿ ನೀರು ಖಾಲಿಯಾಗಿರುವುದನ್ನು ಇನ್ನೊಬ್ಬ ವ್ಯಕ್ತಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಆದರೆ ಸುಮಾರು ಹದಿಮೂರು ಘಂಟೆಗಳ ಬಳಿಕ ಇದು ಸಾಮಾನ್ಯ ಮಟ್ಟಕ್ಕೆ ಹಿಂದಿರುಗಿದೆ.
ಮತ್ತೊಂದು ಟ್ವೀಟ್ ಪ್ರಕಾರ
ಮತ್ತೊಂದು ಟ್ವೀಟ್ ಸಹಾ ಈಗ ವೈರಲ್ ಆಗಿದ್ದು ಹೆಚ್ಚು ಹೆಚ್ಚು ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪವನಶಾಸ್ತ್ರಜ್ಞರ ಪ್ರಕಾರ
ಪವನಶಾಸ್ತ್ರಜ್ಞರ ವಿವರಣೆಯಂತೆ ಈ ಚಂಡಮಾರುತದ ಕೇಂದ್ರ ತೀರಾ ಕೆಳಗಿದ್ದುದು ಹಾಗೂ ಈ ಚಂಡಮಾರುತ ತೀರಾ ಪ್ರಬಲವಾಗಿದ್ದ ಕಾರಣ ಹತ್ತಿರದ ಅಷ್ಟೂ ನೀರನ್ನು ಮೇಲೆ, ಕೇಂದ್ರಭಾಗಕ್ಕೆ ಎಳೆದುಕೊಂಡಿದೆ. ಪರಿಣಾಮವಾಗಿ ಸುತ್ತ ಮುತ್ತಲ ನೀರು ಈ ಭಾಗಕ್ಕೆ ಹರಿದು ಬಂದಿದೆ. ತೀರ ಪ್ರದೇಶ ಹೆಚ್ಚು ಆಳವಾಗಿಲ್ಲದ ಕಾರಣ ಅಲ್ಲಿನ ನೀರೆಲ್ಲಾ ಹಿಂದೆ ಸರಿದು ನೆಲ ಆಕಾಶಕ್ಕೆ ತೆರೆದುಕೊಂಡಿದೆ.



Click it and Unblock the Notifications
