Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಇದೆಲ್ಲಾ ನಿಜವೇ? ಸಮುದ್ರದ ನೀರು ಒಮ್ಮಿಂದೊಮ್ಮೆಗೇ ಬತ್ತಿ ಹೋಯಿತೇ!!
ನಿಸರ್ಗ ಮುನಿಸಿಕೊಂಡರೆ ಮನುಷ್ಯರು ಇದನ್ನು ತಡೆಯಲು ಸಾಧ್ಯವೇ ಇಲ್ಲ. ಈ ಪ್ರಕೋಪದ ಪರಿಣಾಮಗಳನ್ನು ಊಹಿಸಬಹುದೇ ಹೊರತು ತಡೆಗಟ್ಟಲು ಸಾಧ್ಯವಿಲ್ಲ. ಏನಿದ್ದರೂ ಇದರ ಅಟ್ಟಹಾಸವನ್ನು ನೋಡುತ್ತಿರಬೇಕು ಅಷ್ಟೇ. ನಮ್ಮ ಸುತ್ತಮುತ್ತ ಹಲವಾರು ವಾತಾವರಣದ ವೈಪರೀತ್ಯಗಳು ಕಂಡುಬರುತ್ತಿವೆ. ಒಂದೆಡೆ ಅತಿವೃಷ್ಟಿಯಿಂದ ಮಹಾಪೂರ ಎದುರಾದರೆ ಇನ್ನೊಂದೆಡೆ ಚಂಡಮಾರುತ ಸಮುದ್ರವನ್ನೇ ಎತ್ತಿ ತೀರಪ್ರದೇಶಗಳ ಮೇಲೆ ಎಸೆಯುತ್ತಿದೆ.
ಇದರ ನಡುವೆ ಚಂಡಮಾರುತದ ಪರಿಣಾಮದಿಂದ ಸಮುದ್ರದ ನೀರೇ ಒಮ್ಮೊಂದೊಮ್ಮೆಗೇ ಖಾಲಿಯಾಗಿದೆ. ಹೌದು, ಚಂಡಮಾರುತ 'ಇರ್ಮಾ'ದ ಪರಿಣಾಮದಿಂದ ಬಹಾಮಾಸ್ ಪ್ರದೇಶದಲ್ಲಿ ಈ ನಿಸರ್ಗಪ್ರಕೋಪದ ಪರಿಣಾಮ ಕಂಡುಬಂದಿದೆ, ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಈ ವಿಷಯದ ವಿನಿಮಯ ಒಂದು ಟ್ವೀಟ್ನಿಂದ ಪ್ರಾರಂಭವಾಯಿತು
ಬಹಾಮಾಸ್ ನಲ್ಲಿರುವ ಲಾಂಗ್ ಐಲ್ಯಾಂಡ್ ಎಂಬಲ್ಲಿಂದ ಮಹಿಳೆಯೊಬ್ಬರು ತಮ್ಮ ಮೊಬೈಲಿನಿಂದ ಟ್ವಿಟ್ಟರ್ ಸಂದೇಶವೊಂದನ್ನು ಕಳುಹಿಸಿದರು. ಇವರ ಸಂದೇಶ ಹೀಗಿತ್ತು: "ನಾನು ಈಗ ನೋಡುತ್ತಿರುವುದನ್ನು ನಂಬಲಿಕ್ಕೇ ಸಾಧ್ಯವಿಲ್ಲ, ಇದು ಲಾಂಗ್ ಐಲ್ಯಾಂಡ್, ಬಹಾಮಾಸ್. ಇಲ್ಲಿನ ಸಮುದ್ರದಿಂದ ನೀರು ಕಾಣೆಯಾಗಿಬಿಟ್ಟಿದೆ!!!, ಎಲ್ಲಿಯವರೆಗೆ ಇರ್ಮಾ ಚಂಡಮಾರುತ ದಿಗಂತದಲ್ಲಿ ಕಾಣುತ್ತಿದೆಯೋ ಅಲ್ಲಿಯವರೆಗೂ ಸಮುದ್ರ ಖಾಲಿಯಾಗಿಬಿಟ್ಟಿದೆ"
ಈ ವಿಡಿಯೋದಲ್ಲಿ...
ಈ ಮಹಿಳೆ ತಾನು ಕಂಡ ವಿದ್ಯಮಾನವನ್ನು ತನ್ನ ಮೊಬೈಲಿನಲ್ಲಿ ವೀಡಿಯೋ ಮೂಲಕ ಸೆರೆಹಿಡಿದಿದ್ದು ಇವರು ನೀರು ಖಾಲಿಯಾದ ಬಳಿಕ ಉಳಿದ ಉಸುಕಿನಲ್ಲಿ ನಡೆದಾಡುತ್ತಿದ್ದಾರೆ. ಇದು ಪೂರ್ಣ ಒಣಗಿದ್ದು ದೊಡ್ಡ ದೊಡ್ಡ ಕಪ್ಪೆಚಿಪ್ಪುಗಳಿಂದ ಕೂಡಿದೆ. ಸಮುದ್ರ ತೀರ ಹಿಂದೆ ಇದ್ದುದಕ್ಕಿಂತ ಎಷ್ಟೋ ಹಿಂದೆ ಹೋಗಿದ್ದು ಇದುವರೆಗೆ ನೀರಿನಡಿಯಲ್ಲಿದ್ದ ನೆಲ ಈಗ ಆಕಾಶಕ್ಕೆ ತೆರೆದುಕೊಂಡಿದೆ.

ಇನ್ನೊಂದು ತೀರದ ನೀರನ್ನೂ ಚಂಡಮಾರುತ ನುಂಗಿತ್ತು!
ಬಹಾಮಾಸ್ನಲ್ಲಿಯೇ ಇರುವ ಇನ್ನೊಂದು ತೀರದಲ್ಲಿಯೂ ಇದೇ ರೀತಿ ನೀರು ಖಾಲಿಯಾಗಿರುವುದನ್ನು ಇನ್ನೊಬ್ಬ ವ್ಯಕ್ತಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಆದರೆ ಸುಮಾರು ಹದಿಮೂರು ಘಂಟೆಗಳ ಬಳಿಕ ಇದು ಸಾಮಾನ್ಯ ಮಟ್ಟಕ್ಕೆ ಹಿಂದಿರುಗಿದೆ.
ಮತ್ತೊಂದು ಟ್ವೀಟ್ ಪ್ರಕಾರ
ಮತ್ತೊಂದು ಟ್ವೀಟ್ ಸಹಾ ಈಗ ವೈರಲ್ ಆಗಿದ್ದು ಹೆಚ್ಚು ಹೆಚ್ಚು ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪವನಶಾಸ್ತ್ರಜ್ಞರ ಪ್ರಕಾರ
ಪವನಶಾಸ್ತ್ರಜ್ಞರ ವಿವರಣೆಯಂತೆ ಈ ಚಂಡಮಾರುತದ ಕೇಂದ್ರ ತೀರಾ ಕೆಳಗಿದ್ದುದು ಹಾಗೂ ಈ ಚಂಡಮಾರುತ ತೀರಾ ಪ್ರಬಲವಾಗಿದ್ದ ಕಾರಣ ಹತ್ತಿರದ ಅಷ್ಟೂ ನೀರನ್ನು ಮೇಲೆ, ಕೇಂದ್ರಭಾಗಕ್ಕೆ ಎಳೆದುಕೊಂಡಿದೆ. ಪರಿಣಾಮವಾಗಿ ಸುತ್ತ ಮುತ್ತಲ ನೀರು ಈ ಭಾಗಕ್ಕೆ ಹರಿದು ಬಂದಿದೆ. ತೀರ ಪ್ರದೇಶ ಹೆಚ್ಚು ಆಳವಾಗಿಲ್ಲದ ಕಾರಣ ಅಲ್ಲಿನ ನೀರೆಲ್ಲಾ ಹಿಂದೆ ಸರಿದು ನೆಲ ಆಕಾಶಕ್ಕೆ ತೆರೆದುಕೊಂಡಿದೆ.



Click it and Unblock the Notifications