Just In
- 16 min ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 8 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 8 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 9 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
Don't Miss
- News Gold Price on April 18th: ಬಂಗಾರ ದರ ತುಸು ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ? ಅಂಕಿಅಂಶಗಳ ವಿವರ ಇಲ್ಲಿದೆ
- Movies ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಜೈಲಿನಲ್ಲಿರುವವರು ಖೈದಿಗಳಾಗಿದ್ದರೂ ಸಿಗುವುದು 'ರಾಜ ಮರ್ಯಾದೆ'!
ಸಮಾಜಕ್ಕೆ ಅಹಿತಕರವಾದ ಅಥವಾ ಹಾನಿಯುಂಟು ಮಾಡುವವರಿಗೆ ಬಂಧಿಸುವುದು/ಶಿಕ್ಷೆ ನೀಡುವುದು ಸಹಜ. ಅದು ಸರಿಯಾದ ಮಾರ್ಗವೂ ಹೌದು. ತಪ್ಪು ಮಾಡಿದವರಿಗೆ ತಪ್ಪಿನ ಅರಿವಾಗಿ, ತಮ್ಮನ್ನು ತಾವು ತಿದ್ದಿಕೊಳ್ಳಲು ಕೊಡುವ ಒಂದು ಸುವರ್ಣ ಅವಕಾಶ. ಅದೇ ಅಹಿತಕರ ಕೆಲಸ ಮಾಡಿದವರಿಗೆ ಸನ್ಮಾನಿಸುವುದು ಹಾಗೂ ರಾಜ ಮರ್ಯಾದೆಯ ವಸತಿ ವ್ಯವಸ್ಥೆ ಕಲ್ಪಿಸಿಕೊಡುವುದು ಎಂದರೆ ಅದೊಂದು ಹಾಸ್ಯ ಎನಿಸುವುದರಲ್ಲಿ ಸಂದೇಹವಿಲ್ಲ. ಆದರೆ ಇದು ನಿಜ.
ಹೌದು, ನಾರ್ವೆಯಲ್ಲಿ ತಪ್ಪು ಮಾಡಿದ ವ್ಯಕ್ತಿಗಳಿಗೆ ಯಾವುದೇ ರೀತಿಯ ಬಲವಂತವಾದ ಜೈಲು ಶಿಕ್ಷೆ ನೀಡುವುದಿಲ್ಲ. ಬದಲಿಗೆ ರಾಜ ಮರ್ಯಾದೆ ದೊರೆಯುತ್ತದೆ. ತಿನ್ನಲು ಬರೇ ಮುದ್ದೆ-ಸಾರು ಅಲ್ಲ. ಫೈ-ಸ್ಟಾರ್ ಹೋಟೆಲ್ಗಳಲ್ಲಿ ನೀಡುವ ಆಹಾರೋಪಚಾರಕ್ಕಿಂತಲೂ ಹೆಚ್ಚು ಗುಣಮಟ್ಟ ಮತ್ತು ವಿವಿಧ ಬಗೆಯ ಊಟ-ತಿಂಡಿಗಳನ್ನು ನೀಡುತ್ತಾರೆ.
ಭಾರತೀಯ 'ಸರಣಿ ಹಂತಕರ' ಕಂಪ್ಲೀಟ್ ಬಯೋಡೇಟಾ
ನಿಮಗಿದನ್ನು ಕೇಳುತ್ತಿದ್ದರೆ ನಂಬಲಸಾಧ್ಯ ಎನಿಸಬಹುದು ಅಥವಾ ಯಾಕೆ ಹೀಗೆ ಮಾಡುತ್ತಾರೆ ಎನ್ನುವ ಪ್ರಶ್ನೆ ಕಾಡಬಹುದು. ಈ ಎಲ್ಲ ಬಗೆಯ ಕುತೂಹಲಕ್ಕೆ ಮಾಹಿತಿಯನ್ನು ಈ ಲೇಖನ ತೆರೆದಿಡುತ್ತದೆ....
ಜೈಲಿನ ಇತಿಹಾಸ
ನಾರ್ವೆಯಲ್ಲಿರುವ ಈ ಜೈಲಿನಲ್ಲಿ ಮೊದಲು ಕ್ರೂರ ರೀತಿಯ ಶಿಕ್ಷೆ ನೀಡಲಾಗುತ್ತಿತ್ತು. ನಿರಾಶ್ರಿತ ಅಪರಾಧಿಗಳು, ತಂದೆತಾಯಿಗಳ ನಿರ್ಲಕ್ಷಕ್ಕೆ ಒಳಗಾದ ಖೈದಿಗಳು ಮತ್ತು ಬಡತನಕ್ಕೆ ಸೋತು ಬಂದ ಅಪರಾಧಿಗಳಿಗೆ ನರಕ ತಾಣವಾಗಿತ್ತು.
ಜೈಲಿನ ಕಥೆ
1915ರ ವೇಳೆಯಲ್ಲಿ ಇಲ್ಲಿ ಬಂಧಿತರಾದ ಅಪರಾಧಿಗಳು ಶಿಕ್ಷೆಯನ್ನು ಸಹಿಸಲಾಗದೇ ದಂಗೆಗೇಳುವುದು ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದ್ವೀಪ ಪ್ರದೇಶದಲ್ಲಿದ್ದ ಈ ಜೈಲಿಗೆ ಮಿಲಿಟರಿ ಕಾವಲನ್ನು ಸಹ ನೀಡಲಾಗಿತ್ತು. 1953ರಲ್ಲಿ ಮಹಿಳೆಯರಿಗಾಗಿ ಇದ್ದ ಜೈಲನ್ನು ಮುಚ್ಚಲಾಯಿತು. 1970ರಲ್ಲಿ ಆ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿತು.
|
ಮರು ಸ್ಥಾಪನೆ
1982ರಲ್ಲಿ ಜೈಲಿನ ಮರು ಸ್ಥಾಪನೆಯಾಯಿತು. ಸುಮಾರು 115 ಅಪರಾಧಿಗಳನ್ನು ಹೊಂದಿರುವ ಈ ಜೈಲು ವಿಶ್ವದ ಅತ್ಯಂತ ಉದಾರವಾದ ಕಾರಾಗೃಹ ಎಂದು ಗುರುತಿಸಲಾಯಿತು.
ಸೆರೆಮನೆಯ ವಿಶೇಷತೆ
ಇಲ್ಲಿ ಅಪರಾಧಿಗಳಿಗಾಗಿ ಟಿವಿ, ಅಡುಗೆ ಮನೆ, ಹಾಲ್, ಖಾಸಗಿ ಬೆಡ್ರೂಮ್ಗಳ ವ್ಯವಸ್ಥೆಯಿದೆ. ಮನೆಯ ಕೆಲಸವನ್ನು ಪ್ರತಿಯೊಬ್ಬರು ಬೆಳಗ್ಗೆ 8.30 ರಿಂದ 3.30ರ ವರೆಗೆ ಮಾಡಬೇಕು.
ವಿಶೇಷ ಚಟುವಟಿಕೆಗಳು
ಬಿಡುವಿನ ಸಮಯದಲ್ಲಿ ಖೈದಿಗಳು ತಮಗಿಷ್ಟವಾಗುವ ಕುದುರೆ ಸವಾರಿ, ಮೀನು ಹಿಡಿಯುವುದು, ಟೆನ್ನಿಸ್ ಆಟ, ಸಮುದ್ರ ತೀರದಲ್ಲಿ ಓಡಾಡುವುದು ಮತ್ತು ಈಜುವ ಕೆಲಸವನ್ನು ಮಾಡಬಹುದು.
ಮೇಲ್ವಿಚಾರಣಾ ಸಿಬ್ಬಂದಿಗಳು
ಈ ಜೈಲಿನಲ್ಲಿ ಅಪರಾಧಿಗಳನ್ನು ಕಾಯಲು ಕೇವಲ 5 ಸಿಬ್ಬಂದಿಗಳಿದ್ದಾರೆ. ಈ ಖೈದಿಗಳಿಗೆ ಯಾವುದೇ ಸಮವಸ್ತ್ರಗಳಿಲ್ಲ. ಇವರು ದ್ವೀಪದೆಲ್ಲೆಡೆಯೂ ಓಡಾಡುತ್ತಾರೆ.
|
ವಿಚಿತ್ರವಾದ ಸಂಗತಿ
ಇಲ್ಲಿ ಅಪರಾಧಿಗಳಿಗೆ ಒಳ್ಳೆಯ ಸೌಲಭ್ಯ ಹಾಗೂ ಚಿಕಿತ್ಸೆಯನ್ನು ನೀಡುತ್ತಿದೆಯಾದರೂ ಅಪರಾಧಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿವೆ. ಮೊದಲು ಶೇ.70 ರಷ್ಟಿದ್ದ ಅಪರಾಧಗಳು ಶೇ. 16ಕ್ಕೆ ಇಳಿದಿದೆ. ಕಳೆದ 33 ವರ್ಷಗಳಿಂದ ತೆರೆದುಕೊಂಡಿದ್ದ ಈ ಸೆರೆಮನೆಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ತಪ್ಪಿಸಿಕೊಂಡು ಹೋಗಿರುವುದು ವರದಿಯಾಗಿದೆ. ಒಟ್ಟಿನಲ್ಲಿ ಈ ಸೆರೆಮನೆ ಅದ್ಭುತ ಮತ್ತು ಆಶ್ವರ್ಯವನ್ನು ಸೃಷ್ಟಿಸುತ್ತದೆ.