Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮನ ಕಲಕುವ ನಿಜ ಘಟನೆ ಇದು-ಈ ಸ್ಥಿತಿಗೆ ಯಾರು ಹೊಣೆ?
ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರ ಎನಿಸಿಕೊಂಡಿದ್ದರೂ, ಅದೆಷ್ಟೋ ಬಡವರು ನಮ್ಮಲ್ಲಿದ್ದಾರೆ. ಒಂದು ಹೊತ್ತಿನ ಊಟ, ತೊಡಲು ಬಟ್ಟೆ, ಇರಲು ಮನೆಯಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವವರ ಸಂಖ್ಯೆಗೇನು ಕಡಿಮೆಯಿಲ್ಲ. ಮಾನವೀಯತೆ ಇಲ್ಲದ ಸಮಾಜ ಇಂತಹ ಬಡವರನ್ನು ಕುಕ್ಕಿ ತಿನ್ನುತ್ತಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಆಗೊಂದು ಈಗೊಂದು ಸುದ್ದಿ ಹೊರಬೀಳುತ್ತಿರುತ್ತದೆ. ಅಂತಹ ಸುದ್ದಿಗಳಲ್ಲಿ ಇದೂ ಒಂದು. ರಾಜಸ್ಥಾನದಲ್ಲಿ ರಿಕ್ಷಾ ಚಾಲಕನೊಬ್ಬ ತನ್ನ ನವಜಾತ ಶಿಶುವನ್ನು ಬಗಲಿಗೆ ಕಟ್ಟಿಕೊಂಡು, ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತಿರುವುದು.
ಭಾರವಾದ ಮನಸ್ಸಿನಿಂದ ಕೆಲಸ ನಿರ್ವಹಿಸುತ್ತಿರುವ ಈ ದೃಶ್ಯ ದೇಶ ವಿದೇಶದೆಲ್ಲೆಡೆ ಚರ್ಚೆಯ ಮಾತಾಗಿತ್ತು. ಇದನ್ನು ಕಂಡ ಜನತೆ ಕೈಲಾದ ಸಹಾಯ ಮಾಡಲು ಮುಂದಾಗಿ ಧನ ಸಹಾಯ ಮಾಡಿದ್ದಾರೆ. ಮನ ಕಲಕುವಂತಹ ಈ ವಿಚಾರದ ಹೆಚ್ಚಿನ ಮಾಹಿತಿ ಮುಂದಿದೆ ಓದಿ...

ಭಾರವಾದ ಮನಸ್ಸು
ರಾಜಸ್ಥಾನ ಮೂಲದ ಬಾಬ್ಲು ಜತವ್ ಎನ್ನುವವನು ತನ್ನ ಮಗುವನ್ನು ಬಗಲಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ವ್ಯಕ್ತಿ.

ಭಾರವಾದ ಮನಸ್ಸು
ಕಡು ಬಡತನದಲ್ಲಿದ್ದ ಈತನ ಹೆಂಡತಿ ಹೆಣ್ಣು ಮಗುವೊಂದಕ್ಕೆ ಜೀವ ನೀಡಿ ಐದು ದಿನದೊಳಗೆ ಮರಣ ಹೊಂದಿದ್ದಳು. ಹಾಗಾಗಿ ಮಗುವಿನ ಆರೈಕೆ ಮತ್ತು ಜೀವನ ನಿರ್ವಹಣೆಗೆ ಜತನ್ ಮಗುವನ್ನು ಬಗಲಿಗೆ ಕಟ್ಟಿಕೊಂಡೇ ದುಡಿಯ ಬೇಕಾಯಿತು.

ಧನ ಸಹಾಯ
ಮಗಳಾದ ದಾಮಿನಿ ಶಿಶುವಾಗಿರುವುದರಿಂದ ಅವಳನ್ನು ಬಗಲಿನಲ್ಲೇ ಇಟ್ಟುಕೊಂಡು ಬಾಬ್ಲು ಜತವ್ ತನ್ನ ಕೆಲಸ ನಿರ್ವಹಿಸುತ್ತಿದ್ದ. ಈ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಕಂಡ ದಾನಿಗಳು ಹಣ ಸಹಾಯ ಮಾಡಿದ್ದಾರೆ.

ಮಗುವಿಗೋಸ್ಕರ ಎರಡನೇ ಮದುವೆ ನಿರಾಕರಿಸಿದ್ದೇನೆ..
ಊರಿನಲ್ಲಿ ಎಲ್ಲರೂ ಇನ್ನೊಂದು ಮದುವೆ ಆಗಲು ಒತ್ತಾಯ ಪಡಿಸಿದರೂ, ಎಲ್ಲಿ ತನ್ನ ಎರಡನೇ ಪತ್ನಿ ಮಗುವನ್ನು ಸರಿಯಾಗಿ ನೋಡದಿದ್ದರೆ, ಎಂಬ ಒಂದೇ ಭಯದಲ್ಲಿ ಮದುವೆಯನ್ನು ನಿರಾಕರಿಸಿದ್ದೇನೆ, ನನಗೆ ನನ್ನ ಮಗಳ ಭವಿಷ್ಯವೇ ಮುಖ್ಯ ಎಂದು ದುಃಖಭರಿತ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಹೇಳುತ್ತಾನೆ ಬಾಬ್ಲು

ಮಗುವಿನ ಬೆಳವಣಿಗೆ
ಬಾಬ್ಲು ಜಾತವ್ ಅವರ ಮಗಳಿಗೆ 23 ಲಕ್ಷ ರೂ. ಸಹಾಯ ಧನ ದೊರೆಯಿತು. ಇದನ್ನು ಜಾತವ್ ಸ್ಟೇಟ್ ಬ್ಯಾಂಕ್ ಆಫ್ ಬಿಕಾನರ್ ಎಂಬ ಬ್ಯಾಂಕ್ನಲ್ಲಿ ಠೇವಣಿ ಕೂಡ ಇರಿಸಿದ್ದಾರೆ, ಇದೆಲ್ಲಾ ಆರ್ಥಿಕ ಸಹಾಯ ಮಗುವಿನ ಮುಂದಿನ ಭವಿಷ್ಯಕ್ಕೆ ವಿನಿಯೋಗವಾಗಲಿದೆಯಂತೆ, ಭರತ್ಪುರ ಸರ್ಕಾರದ ಆರೋಗ್ಯ ತಪಾಸಣೆಯ ಅಡಿಯಲ್ಲಿ ಬೆಳವಣಿಗೆ ಕಂಡ ಮಗುವಿಗೆ ಈಗ ನಾಲ್ಕು ವರ್ಷ.



Click it and Unblock the Notifications











