Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 4 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 13 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 13 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನ ಕಲಕುವ ನಿಜ ಘಟನೆ ಇದು-ಈ ಸ್ಥಿತಿಗೆ ಯಾರು ಹೊಣೆ?
ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರ ಎನಿಸಿಕೊಂಡಿದ್ದರೂ, ಅದೆಷ್ಟೋ ಬಡವರು ನಮ್ಮಲ್ಲಿದ್ದಾರೆ. ಒಂದು ಹೊತ್ತಿನ ಊಟ, ತೊಡಲು ಬಟ್ಟೆ, ಇರಲು ಮನೆಯಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವವರ ಸಂಖ್ಯೆಗೇನು ಕಡಿಮೆಯಿಲ್ಲ. ಮಾನವೀಯತೆ ಇಲ್ಲದ ಸಮಾಜ ಇಂತಹ ಬಡವರನ್ನು ಕುಕ್ಕಿ ತಿನ್ನುತ್ತಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಆಗೊಂದು ಈಗೊಂದು ಸುದ್ದಿ ಹೊರಬೀಳುತ್ತಿರುತ್ತದೆ. ಅಂತಹ ಸುದ್ದಿಗಳಲ್ಲಿ ಇದೂ ಒಂದು. ರಾಜಸ್ಥಾನದಲ್ಲಿ ರಿಕ್ಷಾ ಚಾಲಕನೊಬ್ಬ ತನ್ನ ನವಜಾತ ಶಿಶುವನ್ನು ಬಗಲಿಗೆ ಕಟ್ಟಿಕೊಂಡು, ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತಿರುವುದು.
ಭಾರವಾದ ಮನಸ್ಸಿನಿಂದ ಕೆಲಸ ನಿರ್ವಹಿಸುತ್ತಿರುವ ಈ ದೃಶ್ಯ ದೇಶ ವಿದೇಶದೆಲ್ಲೆಡೆ ಚರ್ಚೆಯ ಮಾತಾಗಿತ್ತು. ಇದನ್ನು ಕಂಡ ಜನತೆ ಕೈಲಾದ ಸಹಾಯ ಮಾಡಲು ಮುಂದಾಗಿ ಧನ ಸಹಾಯ ಮಾಡಿದ್ದಾರೆ. ಮನ ಕಲಕುವಂತಹ ಈ ವಿಚಾರದ ಹೆಚ್ಚಿನ ಮಾಹಿತಿ ಮುಂದಿದೆ ಓದಿ...
ಭಾರವಾದ ಮನಸ್ಸು
ರಾಜಸ್ಥಾನ ಮೂಲದ ಬಾಬ್ಲು ಜತವ್ ಎನ್ನುವವನು ತನ್ನ ಮಗುವನ್ನು ಬಗಲಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ವ್ಯಕ್ತಿ.
ಭಾರವಾದ ಮನಸ್ಸು
ಕಡು ಬಡತನದಲ್ಲಿದ್ದ ಈತನ ಹೆಂಡತಿ ಹೆಣ್ಣು ಮಗುವೊಂದಕ್ಕೆ ಜೀವ ನೀಡಿ ಐದು ದಿನದೊಳಗೆ ಮರಣ ಹೊಂದಿದ್ದಳು. ಹಾಗಾಗಿ ಮಗುವಿನ ಆರೈಕೆ ಮತ್ತು ಜೀವನ ನಿರ್ವಹಣೆಗೆ ಜತನ್ ಮಗುವನ್ನು ಬಗಲಿಗೆ ಕಟ್ಟಿಕೊಂಡೇ ದುಡಿಯ ಬೇಕಾಯಿತು.
ಧನ ಸಹಾಯ
ಮಗಳಾದ ದಾಮಿನಿ ಶಿಶುವಾಗಿರುವುದರಿಂದ ಅವಳನ್ನು ಬಗಲಿನಲ್ಲೇ ಇಟ್ಟುಕೊಂಡು ಬಾಬ್ಲು ಜತವ್ ತನ್ನ ಕೆಲಸ ನಿರ್ವಹಿಸುತ್ತಿದ್ದ. ಈ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಕಂಡ ದಾನಿಗಳು ಹಣ ಸಹಾಯ ಮಾಡಿದ್ದಾರೆ.
ಮಗುವಿಗೋಸ್ಕರ ಎರಡನೇ ಮದುವೆ ನಿರಾಕರಿಸಿದ್ದೇನೆ..
ಊರಿನಲ್ಲಿ ಎಲ್ಲರೂ ಇನ್ನೊಂದು ಮದುವೆ ಆಗಲು ಒತ್ತಾಯ ಪಡಿಸಿದರೂ, ಎಲ್ಲಿ ತನ್ನ ಎರಡನೇ ಪತ್ನಿ ಮಗುವನ್ನು ಸರಿಯಾಗಿ ನೋಡದಿದ್ದರೆ, ಎಂಬ ಒಂದೇ ಭಯದಲ್ಲಿ ಮದುವೆಯನ್ನು ನಿರಾಕರಿಸಿದ್ದೇನೆ, ನನಗೆ ನನ್ನ ಮಗಳ ಭವಿಷ್ಯವೇ ಮುಖ್ಯ ಎಂದು ದುಃಖಭರಿತ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಹೇಳುತ್ತಾನೆ ಬಾಬ್ಲು
ಮಗುವಿನ ಬೆಳವಣಿಗೆ
ಬಾಬ್ಲು ಜಾತವ್ ಅವರ ಮಗಳಿಗೆ 23 ಲಕ್ಷ ರೂ. ಸಹಾಯ ಧನ ದೊರೆಯಿತು. ಇದನ್ನು ಜಾತವ್ ಸ್ಟೇಟ್ ಬ್ಯಾಂಕ್ ಆಫ್ ಬಿಕಾನರ್ ಎಂಬ ಬ್ಯಾಂಕ್ನಲ್ಲಿ ಠೇವಣಿ ಕೂಡ ಇರಿಸಿದ್ದಾರೆ, ಇದೆಲ್ಲಾ ಆರ್ಥಿಕ ಸಹಾಯ ಮಗುವಿನ ಮುಂದಿನ ಭವಿಷ್ಯಕ್ಕೆ ವಿನಿಯೋಗವಾಗಲಿದೆಯಂತೆ, ಭರತ್ಪುರ ಸರ್ಕಾರದ ಆರೋಗ್ಯ ತಪಾಸಣೆಯ ಅಡಿಯಲ್ಲಿ ಬೆಳವಣಿಗೆ ಕಂಡ ಮಗುವಿಗೆ ಈಗ ನಾಲ್ಕು ವರ್ಷ.