Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಮಿಥುನ, ವೃಶ್ಚಿಕ, ಕುಂಭ- ಈ ಮೂರು 'ಜನ್ಮರಾಶಿ'ಯವರು ಬಹಳ ಬುದ್ಧಿವಂತರಂತೆ!
ವಿಜ್ಞಾನದ ಪ್ರಕಾರ ಜಾಣ್ಮೆಯಲ್ಲಿ ಎರಡು ವಿಧಗಳಿವೆ. ವಿಶ್ಲೇಷಣಾತ್ಮಕ ಹಾಗೂ ಭಾವಾತ್ಮಕ. ವಿಶ್ಲೇಷಣೆಯ ಜಾಣ್ಮೆಯನ್ನು ಐಕ್ಯೂ ಪರೀಕ್ಷೆಯ ಮೂಲಕ ನಿರ್ಧರಿಸಿದರೆ ಎರಡನೆಯ ಜಾಣ್ಮೆಯನ್ನು ಒಳಜ್ಞಾನ ಹಾಗೂ ಭಾವನೆಯಗಳ ಮೂಲಕ ಕೈಗೊಳ್ಳುವ ತರ್ಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
ಜ್ಯೋತಿಷ್ಯಾಸ್ತ್ರದಲ್ಲಿ ಹನ್ನೆರಡು ರಾಶಿಗಳಿವೆ. ಇವುಗಳಲ್ಲಿ ಮೂರು ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಈ ಎರಡೂ ಬಗೆಯ ಜಾಣ್ಮೆಯನ್ನು ಅತಿ ಹೆಚ್ಚಾಗಿ ಪಡೆದಿರುತ್ತಾರೆ. ಈ ಮಾಹಿತಿಯನ್ನು ಆಧರಿಸಿ ಈ ರಾಶಿಯ ಜನರು ಅತಿ ಹೆಚ್ಚು ಬುದ್ಧಿವಂತರು ಎಂದು ಕಂಡುಕೊಳ್ಳಲಾಗಿದೆ.
ಇಂತಹ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಂಡಿದ್ದು ಇತರರ ಮೇಲೆ ಪ್ರಭಾವ ಬೀರಬಲ್ಲ ವ್ಯಕ್ತಿಗಳಾಗಿದ್ದಾರೆ.ಇದರರ್ಥ ಬೇರೆ ರಾಶಿಯಲ್ಲಿ ಹುಟ್ಟಿದ ಜನರು ದಡ್ಡರೆಂದು ಅರ್ಥವಲ್ಲ. ಬದಲಿಗೆ ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಕೆಲವು ಗ್ರಹಗಳು ಇತರರಿಗಿಂತ ಹೆಚ್ಚು ಪ್ರಭಾವ ಬೀರುತ್ತವೆ. ಬನ್ನಿ, ಈ ರಾಶಿಗಳು ಯಾವುವು ಎಂಬುದನ್ನು ನೋಡೋಣ.....

ಮಿಥುನ
ಈ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ಇವರು ಗಣಿತದಲ್ಲಿ ಉತ್ತಮರಾಗಿದ್ದು ವಾಣಿಜ್ಯ ವಹಿವಾಟುದಾರದು, ಲೆಕ್ಕಪರಿಶೀಲಿಕರು, ಭೌತವಿಜ್ಞಾನಿ ಹಾಗೂ ಬ್ಯಾಂಕ್ ಮ್ಯಾನೇಜರ್ ಹುದ್ದೆಗಳನ್ನು ಸಫಲವಾಗಿ ನಿರ್ವಹಿಸುವವರಾಗಿರುತ್ತಾರೆ.

ಮಿಥುನ
ಈ ರಾಶಿಯಲ್ಲಿ ಜನಿಸಿದ ಖ್ಯಾತ ವ್ಯಕ್ತಿಗಳು: ಡೇನಿಯಲ್ ಫ್ಯಾರೆನ್ ಹೀಟ್ (ಡಿಗ್ರಿ ಎಫ್ ತಾಪಮಾನದ ಸೂಚಿ ನೀಡಿದವರು) ಫ್ರಾನ್ಸಿಸ್ ಕ್ರಿಕ್ (ಡಿ ಎನ್ ಎ ರಚನೆಯನ್ನು ಕಂಡುಹಿಡಿದವರು), ಮೇರಿ ಆನಿಂಗ್ (ಖ್ಯಾತ ಪ್ರಾಕ್ತನಶಾಸ್ತ್ರಜ್ಞೆ), ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ (ಆಧುನಿಕ ಭೌತವಿಜ್ಞಾನದ ಪಿತಾಮಹ, ವಿದ್ಯುದಾಯಸ್ಕಾಂತ ಶಕ್ತಿಯನ್ನು ಕಂಡುಹಿಡಿದವರು)

ವೃಶ್ಚಿಕ
ಈ ರಾಶಿಯ ಜನರು ಕೊಂಚ ಭಿನ್ನ ವ್ಯಕ್ತಿತ್ವ ಹೊಂದಿದ್ದು ತರ್ಕಬದ್ದವಲ್ಲದ ನಿರ್ಧಾರಗಳನ್ನು ಪ್ರಕಟಿಸುವವರಾಗಿದ್ದರೂ ಜಾಣರು ಹೇಗಾಗುತ್ತಾರೆ ಎಂದು ಅಚ್ಚರಿ ಪಡಬೇಡಿ. ಆದರೆ ಇವರು ಇಷ್ಟಪಟ್ಟ ವಿಷಯದ ಕುರಿತು ನಡೆಸುವ ಆಳವಾದ ಅಧ್ಯಯನ ಇವರ ಏಕಾಗ್ರತೆಯನ್ನು ಹೆಚ್ಚಿಸಿ ಹೆಚ್ಚು ಹೆಚ್ಚಾಗಿ ಪ್ರೇರಣೆ ನೀಡುವವರೂ ಆಗಿರುತ್ತಾರೆ. ಇವರು ವಿಷಯದ ಸೂಕ್ಷ್ಮತೆಗಳನ್ನು ಕೆದಕಿ ಅರಿಯುವ ಹಾಗೂ ಸುಲಭದ ದಾರಿಯನ್ನು ಕಂಡುಕೊಳ್ಳುವವರೂ ಆಗಿರುತ್ತಾರೆ.

ವೃಶ್ಚಿಕ
ಖ್ಯಾತ ವ್ಯಕ್ತಿಗಳು:ಹೋಮಿ ಜಹಾಂಗೀರ್ ಭಾಭಾ, ಸರ್ ಸಿ.ವಿ. ರಾಮನ್, ಮ್ಯಾಡಮ್ ಕ್ಯೂರಿ, ಬಿಲ್ ಗೇಟ್ಸ್

ಕುಂಭ
ಈ ರಾಶಿಯ ಅಧಿಪತಿ ಶನಿಯಾಗಿದ್ದು ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೂ ತಮ್ಮದೇ ವಿಚಾರಗಳನ್ನು ಮಂಡಿಸುತ್ತಾರೆ.ಇವರು ಹೆಚ್ಚು ಪ್ರತ್ಯಕ್ಷಜನಿತರೂ ಹಾಗೂ ಪ್ರತಿಫಲಾಪೇಕ್ಷಿಗಳೂ ಆಗಿರುತ್ತಾರೆ. ಇವರು ಜನ್ಮತಃ ಸಮಾಜದ ಕುಂದು ಕೊರತೆಗಳನ್ನು ಪ್ರಶ್ನಿಸುವ ಎದೆಗಾರಿಕೆ ಹೊಂದಿರುತ್ತಾರೆ ಹಾಗೂ ದೂರದೃಷ್ಟಿಯುಳ್ಳವರಾಗಿರುತ್ತಾರೆ. ಈ ಕಾರಣಗಳಿಂದ ಇವರಿಗೆ ಜಾಣರು ಎಂಬ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ಕುಂಭ
ಖ್ಯಾತ ವ್ಯಕ್ತಿಗಳು:ಚಾರ್ಲ್ಸ್ ಡಾರ್ವಿನ್(ಜೀವಶಾಸ್ತ್ರಜ್ಞ), ಗೆಲಿಲಿಯೋ ಗೆಲಿಲೈ(ವಿಜ್ಞಾನಿ), ಥೋಮಸ್ ಆಲ್ವಾ ಎಡಿಸನ್ (ಎಲೆಕ್ಟ್ರಿಕ್ ಬಲ್ಬ್ ಕಂಡುಹಿಡಿದವರು)



Click it and Unblock the Notifications
