Just In
- 7 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 7 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 8 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 9 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕೆ ಪಾರ್ಟಿ ಮೋಜು, ಮಸ್ತಿಯಲ್ಲೇ ಬ್ಯುಸಿ!! ಕೊನೆಗೆ ಹುಡುಗ ಮದುವೆ ಮುರಿದ,,,,
ವಿವಾಹ ಅಥವಾ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಅದೊಂದು ಪವಿತ್ರವಾದ ಬಂಧನ. ಒಮ್ಮೆ ಈ ಬಂಧನಕ್ಕೆ ಒಳಗಾದರೆ ಜೀವನದ ಕೊನೆ ಉಸಿರು ಇರುವವರೆಗೂ ಜೊತೆ ಜೊತೆಯಾಗಿ ಬದುಕುತ್ತೇವೆ ಎನ್ನುವ ಶಪತ. ಮಧುರವಾದ ಈ ಬಂಧನವು ಪವಿತ್ರವಾಗಿರಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ.
ತಾನು ಬಯಸುವ ಹುಡುಗಿ/ಹುಡುಗ ಈ ಮುಂಚೆ ಯಾರೊಂದಿಗೂ ಶಾರೀರಿಕ ಸಂಬಂಧ ಹೊಂದಿರಬಾರದು ಎಂದು ಬಯಸುತ್ತಾರೆ. ಹಾಗೊಮ್ಮೆ ಹುಡುಗ/ಹುಡುಗೆ ನಿಶ್ಚಿತವಾದ ಹುಡುಗ/ಹುಡುಗಿಯನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದರೆ ಆ ಸಂಬಂಧ ಮುಂದುವರಿಯುವುದಿಲ್ಲ. ಹಾಗಾಗಿಯೇ ಸ್ನೇಹಿತರ ಗುಂಪಲ್ಲಿ ಯಾರಿಗಾದರೂ ವಿವಾಹ ನಿಶ್ಚಯವಾಯಿತೆಂದರೆ ಅವರಿನ್ನು ಜವಾಬ್ದಾರಿ ಹಾಗೂ ಹೊಣೆಗಾರಿಕೆಯ ಸಮುದ್ರದಲ್ಲಿ ಇಳಿಯುತ್ತಿದ್ದಾರೆ ಎಂದು ಭಾವಿಸುತ್ತಾರೆ.
ಅವರ ಜೀವನದಲ್ಲಿ ಇನ್ನು ಹುಡುಗಾಟಿಕೆ ನಡೆಯುವುದಿಲ್ಲ ಎನ್ನುವ ತಮಾಷೆ ಮಾಡುತ್ತಾರೆ. ಹುಡುಗರಾಗಿದ್ದರೆ ವಿವಾಹದ ಮುಂಚೆ ಮದ್ಯಸೇವಿಸುವುದು, ದೂರದ ಊರಿಗೆ ಪ್ರವಾಸ ಹೋಗುವುದು ಹೀಗೆ ಕೆಲವು ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಆದರೆ ಇತ್ತೀಚೆಗೆ ವಿವಾಹ ಪೂರ್ವದಲ್ಲಿ ಬ್ರಹ್ಮಚರ್ಯ ಜೀವನವನ್ನು ಮುಗಿಸುತ್ತಿದ್ದೇವೆ ಎನ್ನುವುದರ ಕುರಿತು ವಿಲಕ್ಷಣ ರೀತಿಯ ಪಾರ್ಟಿ ಮೋಜು, ಮಸ್ತಿಯನ್ನು ಯುವಕರು ಕೈಗೊಳ್ಳುತ್ತಾರೆ. ಇದರ ಪರಿಣಾಮ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ? ಅಥವಾ ಕೈಗೊಳ್ಳುವ ಕೆಲಸದ ಅರ್ಥವೇನು ಎನ್ನುವ ಅರಿವೇ ಅವರಿಗೆ ಇರುವುದಿಲ್ಲ.....
ಹುಡುಗಿಯ ಈ ಅವತಾರವನ್ನು ಕಂಡು ಹುಡುಗ ಮದುವೆಯನ್ನು ಮುರಿದ...
ಈ ವಿಡಿಯೋ ನೋಡಿದ ಮೇಲೆ ಇಂದಿನ ಕೆಲವು ಹುಡುಗಿಯರಿಗೆ ಸಂಬಂಧ, ವಿವಾಹ, ಸ್ನೇಹ ಹಾಗೂ ದೈಹಿಕ ಸಂಬಂಧದ ಬಗ್ಗೆ ಸೂಕ್ತ ಅರಿವಿನ ಪಾಠದ ಅಗತ್ಯವಿದೆ ಎನಿಸುತ್ತದೆ. ತಮಾಷೆ, ಸ್ನೇಹಿತರೊಂದಿಗೆ ಒಂದಿಷ್ಟು ಸಮಯ ಕಳೆಯುವುದು ಅಥವಾ ಸುಂದರ ತಾಣಕ್ಕೆ ಭೇಟಿ ನೀಡುವುದು ತಪ್ಪಲ್ಲ. ಹಾಗಂತ ಮೈ ಮರೆತು ಮನಸ್ಸಿಗೆ ಕಂಡಂತೆ ವರ್ತಿಸುವುದು ವಿಲಕ್ಷಣ ಎನಿಸಿಕೊಳ್ಳುತ್ತದೆ. ನಾವು ಎಷ್ಟೇ ಆಧುನಿಕತೆಗೆ ತೆರೆದುಕೊಂಡಿದ್ದರೂ ಮನಸ್ಸು ಕೆಲವು ವಿಚಾರದಲ್ಲಿ ಅದರಲ್ಲೂ ದೈಹಿಕ ಸಂಬಂಧದ ಬಗ್ಗೆ ಪವಿತ್ರವಾಗಿರುವುದನ್ನು ಬಯಸುತ್ತದೆ.
ಹುಡುಗಿಯ ಈ ಅವತಾರವನ್ನು ಕಂಡು ಹುಡುಗ ಮದುವೆಯನ್ನು ಮುರಿದ...
ಕಾರ್ಮೆಲೋ ಡೆಲ್ವಾ ಎನ್ನುವ ವ್ಯಕ್ತಿ ಈ ವಿಡಿಯೋವನ್ನು ಫೇಸ್ಬುಕ್ ಎನ್ನುವ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾನೆ. ಇದು ಈಗಾಗಲೇ ಎಲ್ಲೆಡೆ ಹರಡಿದೆ. ಸುಮಾರು 17 ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಇಂದಿನ ಜಗತ್ತು ಇಂಟನ್ನೆಟ್ ಎನ್ನುವ ಪ್ರಪಂಚದಲ್ಲೇ ಇರುವುದರಿಂದ ಹೆಚ್ಚು ಜನರನ್ನು ತಲುಪುತ್ತಿದೆ. ಇದು ಪಾಶ್ಚಾತ್ಯ ದೇಶದಲ್ಲಿ ನಡೆದಿರಬಹುದು. ಆದರೆ ಸಂಸ್ಕೃತಿ ಸಂಪ್ರದಾಯಕ್ಕೆ ಕನ್ನಡಿ ಹಿಡಿಯುವ ನಮ್ಮ ಭಾರತದಲ್ಲಿ ಇಂತಹ ಘಟನೆ ಯಾವುದೇ ಬಗೆಯ ಕ್ಷಮೆಯಿಲ್ಲ.
ಹುಡುಗಿಯ ಈ ಅವತಾರವನ್ನು ಕಂಡು ಹುಡುಗ ಮದುವೆಯನ್ನು ಮುರಿದ...
ಈ ವಿಡಿಯೋ ನೋಡಿದ ಮೇಲೆ ಇಂದಿನ ಕೆಲವು ಹುಡುಗಿಯರಿಗೆ ಸಂಬಂಧ, ವಿವಾಹ, ಸ್ನೇಹ ಹಾಗೂ ದೈಹಿಕ ಸಂಬಂಧದ ಬಗ್ಗೆ ಸೂಕ್ತ ಅರಿವಿನ ಪಾಠದ ಅಗತ್ಯವಿದೆ ಎನಿಸುತ್ತದೆ. ತಮಾಷೆ, ಸ್ನೇಹಿತರೊಂದಿಗೆ ಒಂದಿಷ್ಟು ಸಮಯ ಕಳೆಯುವುದು ಅಥವಾ ಸುಂದರ ತಾಣಕ್ಕೆ ಭೇಟಿ ನೀಡುವುದು ತಪ್ಪಲ್ಲ. ಹಾಗಂತ ಮೈ ಮರೆತು ಮನಸ್ಸಿಗೆ ಕಂಡಂತೆ ವರ್ತಿಸುವುದು ವಿಲಕ್ಷಣ ಎನಿಸಿಕೊಳ್ಳುತ್ತದೆ. ನಾವು ಎಷ್ಟೇ ಆಧುನಿಕತೆಗೆ ತೆರೆದುಕೊಂಡಿದ್ದರೂ ಮನಸ್ಸು ಕೆಲವು ವಿಚಾರದಲ್ಲಿ ಅದರಲ್ಲೂ ದೈಹಿಕ ಸಂಬಂಧದ ಬಗ್ಗೆ ಪವಿತ್ರವಾಗಿರುವುದನ್ನು ಬಯಸುತ್ತದೆ.
ಹುಡುಗಿಯ ಈ ಅವತಾರವನ್ನು ಕಂಡು ಹುಡುಗ ಮದುವೆಯನ್ನು ಮುರಿದ...
ಹುಡುಗಿಯರು ಅದೆಷ್ಟೇ ಓದಿರಬಹುದು ಅಥವಾ ಕೈತುಂಬಾ ಹಣವನ್ನು ಗಳಿಸುವ ಸಾಮರ್ಥ್ಯ ಇರಬಹುದು. ಅವರಿಗೆ ನಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿರಬೇಕು. ಜೊತೆಗೆ ತನ್ನ ಹೆತ್ತವರ ಗೌರವ ಹಾಗೂ ಮರ್ಯಾದೆಗೆ ಅಡ್ಡಿ ಉಂಟಾಗುವಂತಹ ಕೃತ್ಯವನ್ನು ಎಸಗಬಾರದು.
ಹುಡುಗಿಯ ಈ ಅವತಾರವನ್ನು ಕಂಡು ಹುಡುಗ ಮದುವೆಯನ್ನು ಮುರಿದ...
ನಮ್ಮ ಸಮಾಜದಲ್ಲಿ ಹೆಣ್ಣಿಗೆ ಗೌರವದ ಸ್ಥಾನ ನೀಡಲಾಗಿದೆ. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಹೊಣೆ. ಹೆಣ್ಣು ಸೀರೆ ಇದ್ದಂತೆ. ಅದು ಮುಳ್ಳಿನ ಮೇಲೆ ಬೀಳಲಿ ಅಥವಾ ಮುಳ್ಳೇ ಸೀರೆಯ ಮೇಲೆ ಬೀಳಲಿ. ಹರಿಯುವುದು ಸೀರೆಯೇ ಹೊರತು ಮುಳ್ಳಲ್ಲ. ಹಾಗಾಗಿ ಹೆಣ್ಣು ತನ್ನ ಜೀವನದಲ್ಲಿ ಆದಷ್ಟು ಹೆಚ್ಚು ಕಾಳಜಿಯಿಂದ ಹೆಜ್ಜೆ ಇಡಬೇಕಾಗುತ್ತದೆ.
ಹುಡುಗಿಯ ಈ ಅವತಾರವನ್ನು ಕಂಡು ಹುಡುಗ ಮದುವೆಯನ್ನು ಮುರಿದ...
ಈಗ ಸುದ್ದಿಯಾದ ಹುಡುಗಿಯ ಕಥೆಯೂ ಹಾಗೆಯೇ ಆಗಿದೆ. ಆಕೆ ಇಷ್ಟು ದಿನ ಬ್ರಹ್ಮಚರ್ಯವನ್ನು ಕಾಪಾಡಿಕೊಂಡು, ಕೊನೆಯಲ್ಲಿ ಶೀಲ ಕಳೆದುಕೊಳ್ಳುವ ಕೃತ್ಯ ಎಸಗಿಕೊಂಡು. ವಿವಾಹ ಎನ್ನುವ ಮಧುರ ಬಂಧನದಿಂದ ದೂರಾದಳು.
ಹುಡುಗಿಯ ಈ ಅವತಾರವನ್ನು ಕಂಡು ಹುಡುಗ ಮದುವೆಯನ್ನು ಮುರಿದ...
ಹಾಗೊಮ್ಮೆ ಆಕೆ ಈ ಕೃತ್ಯದಿಂದ ಗರ್ಭಿಣಿಯಾದರೆ ಆಕೆಯ ಭವಿಷ್ಯ ಏನು? ಎನ್ನುವುದು ಸಹ ಪ್ರಶ್ನೆಯಾಗುತ್ತದೆ ಅಲ್ಲವೇ? ಸದಾ ಉತ್ತಮ ನಡತೆ ಹಾಗೂ ಸುಂದರ ಬದುಕು ನಿಮ್ಮದಾಗುವಂತಹ ವರ್ತನೆಯನ್ನು ತೋರಬೇಕು. ಆಗ ಜೀವನ ಸುಂದರವಾಗಿರುತ್ತದೆ. ಈಗ ಹೇಳಿ... ನಿಮ್ಮ ವಿವಾಹವಾಗುವ ಹುಡುಗಿ/ಹುಡುಗ ಹೀಗೆ ಮಾಡಿದ್ದರೆ ನೀವೇನು ನಿರ್ಧಾರ ತೆಗೆದುಕೊಳ್ಳುತ್ತಿದ್ದಿರಿ? ಎನ್ನುವುದನ್ನು ಯೋಚಿಸಿ.