Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಬುದ್ಧಿವಂತ ರೈತ ಬೆಳೆದಿದ್ದು ಒಂದೇ ಬೆಳೆ, ಆದರೆ ಪಡೆದದ್ದು ಸಾವಿರ ಬೆಲೆ!
ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದರೆ, ಅಥವಾ ಚಿಕ್ಕ ಹಿಡುವಳಿ ಹೊಂದಿದ್ದರೆ ರೈತ ಮಿಶ್ರ ಬೆಳೆಯ ಮೊರೆ ಹೋಗಬೇಕಾಗುತ್ತದೆ. ಇಲ್ಲವೇ ಒಂದು ಬೆಳೆಯ ಫಸಲಿನ ನಂತರ ಇನ್ನೊಂದು ಬೆಳೆಯನ್ನು ಬೆಳೆಯಬೇಕಾಗುತ್ತದೆ. ಈ ರೀತಿ ಮಾಡಿದರೂ ಅದೆಷ್ಟೋ ಬಾರಿ ಸರಿಯಾದ ಇಳುವರಿ ಸಿಗದೆ ಕೈ ಸುಟ್ಟಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಇಲ್ಲೊಬ್ಬ ರೈತ ತನ್ನ ಬುದ್ಧಿ ಉಪಯೋಗಿಸಿದ್ದಾನೆ.
ಜನರ ಫೋಟೋ, ಸೆಲ್ಫೀ ಎನ್ನವ ಹುಚ್ಚಿಗೆ ತನ್ನ ಕೃಷಿ ಭೂಮಿಯನ್ನು ವೇದಿಕೆಯನ್ನಾಗಿ ಮಾಡಿದ್ದಾನೆ. ಜೊತೆಗೆ ಆ ಕೃಷಿಯಿಂದ ಬರುವ ಆದಾಯಕ್ಕಿಂತ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾನೆ. ನಿಜ, ಯಾವುದೇ ಕೆಲಸದಲ್ಲಿ ಅಥವಾ ಸನ್ನಿವೇಶದಲ್ಲಿ ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ ಉನ್ನತ ಸ್ಥಾನಕ್ಕೆ ಏರಬಹುದು ಎನ್ನವುದನ್ನು ತಿಳಿಸಿಕೊಟ್ಟಿದ್ದಾನೆ.....

ಅದ್ಯಾವ ಕೃಷಿ ಭೂಮಿ?
ಜನರ ಫೋಟೋ ಮತ್ತು ಸೆಲ್ಫೀ ಕ್ರೇಜ್ಗೆ ಆಕರ್ಷಿಸಿದ್ದು ಸೂರ್ಯಕಾಂತಿ ಹೂವಿನ ತೋಟ. ಈ ಕೃಷಿ ಭೂಮಿಯಲ್ಲಿ ಉದ್ದಗಲಕ್ಕೂ ಸೂರ್ಯಕಾಂತಿಯ ಹೂವು ಕಂಗೊಳಿಸುತ್ತವೆ. ಇವುಗಳ ನೈಸರ್ಗಿಕ ಸೌಂದರ್ಯ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಒಮ್ಮೆಯಾದರೂ ಇಲ್ಲಿ ನಿಂತು ಸೌಂದರ್ಯ ವೀಕ್ಷಿಸಬೇಕು ಎನ್ನುವ ಆಸೆ ಮೂಡುತ್ತದೆ.

ಎಲ್ಲಿ ಇದು?
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆವೃತ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ ಈ ತೋಟ. ನಿತ್ಯವೂ ಸಾವಿರಾರು ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವುದು ರೈತರನಿಗೊಂದು ಆದಾಯದ ಮೂಲವಾಗಿದೆ.

ರೈತ ಯಾರು?
ಗುಂಡ್ಲುಪೇಟೆಯ ಬೇಗೂರು ಎನ್ನುವ ಹಳ್ಳಿಯಲ್ಲಿರುವ 42 ವರ್ಷದ ಕುಮಾರ ಎನ್ನುವ ರೈತ. ಇವನಿಗೆ ಸುಮಾರು 6 ಎಕರೆ ಕೃಷಿ ಭೂಮಿಯಿದೆ. ಅದರಲ್ಲಿ ಸ್ವಲ್ಪ ಜಾಗ ರಸ್ತೆಗೆ ಸಮೀಪವಿದೆ.

ರಸ್ತೆಯ ಆಕರ್ಷಣೆ
ಈ ರೈತನ ಕೃಷಿ ಭೂಮಿಯ ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 766 ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಕೇರಳ ಮತ್ತು ಊಟಿ ಪ್ರವಾಸಿಗರು ಹೆಚ್ಚು ಸಂಚರಿಸುತ್ತಾರೆ. ಪ್ರವಾಸ ಪ್ರಿಯರಿಗೆ ರಸ್ತೆ ಮಾರ್ಗದಲ್ಲಿರುವ ಸೂರ್ಯಕಾಂತಿಯ ತೋಟ ಒಂದು ಆಕರ್ಷಕ ತಾಣವಾಗಿ ತಿರುಗಿದೆ.

ಸಂಪಾದನೆ ಹೇಗೆ?
ರೈತನ ಭೂಮಿಯಲ್ಲಿ ಸೂರ್ಯಕಾಂತಿ ಕಂಗೊಳಿಸುವುದನ್ನು ಕಂಡ ಪ್ರವಾಸಿಗರು ಹೂವಿನೊಂದಿಗೆ ಸೆಲ್ಫೀ, ಫೋಟೋ ತೆಗೆದುಕೊಳ್ಳಲು ಬರುತ್ತಿದ್ದರು. ದಿನದಲ್ಲಿ ಒಬ್ಬರು ಅಥವಾ ಇಬ್ಬರು ಬಂದಿದ್ದರೆ ತೊಂದರೆ ಇರುತ್ತಿರಲಿಲ್ಲ. ನೂರಾರು ಮಂದಿ ಬರುವುದರಿಂದ ಬೆಳೆಯ ನಾಶವೂ ಆಗುತ್ತಿತ್ತು. ಈ ವಿಷಯದ ಬಗ್ಗೆ ಹೆಚ್ಚು ಚಿಂತಿಸಿದ ರೈತ, ಫೋಟೋ ಮತ್ತು ಸೆಲ್ಫೀ ತೆಗೆಯಲು ಹಣವನ್ನು ನಿಗಧಿ ಪಡಿಸಿದ. ಹಾಗಾಗಿಯೇ ಬೆಳೆ ಹಾಳಾದರೂ ರೈತನಿಗೆ ಸಂಪಾದನೆಗೆ ತೊಂದರೆ ಆಗಲಿಲ್ಲ.

ಹಾಗಾದರೆ ಸಂಪಾದನೆ ಎಷ್ಟು?
ರೈತ ಹೇಳುವ ಪ್ರಕಾರ ಒಬ್ಬ ವ್ಯಕ್ತಿ ಫೋಟೋ/ಸೆಲ್ಫೀ ತೆಗೆದುಕೊಳ್ಳಲು 20 ರೂಪಾಯಿ ನೀಡಬೇಕು ಎಂದು ಫಲಕ(ಬೋರ್ಡ್)ಹಾಕಿದ್ದೇನೆ. ಅದಕ್ಕೆ ಅನುಗುಣವಾಗಿ ಫೋಟೋ ಪ್ರಿಯರು ಹಣಕೊಟ್ಟು ಫೋಟೋ ತೆಗೆದುಕೊಳ್ಳುತ್ತಾರೆ. ರಜದ ಸಂದರ್ಭದಲ್ಲಿ ಹೆಚ್ಚು ಸಂಪಾದನೆಯಾಗುತ್ತದೆ. ಉಳಿದ ದಿನದಲ್ಲಿ ಸಾಧಾರಣ ಎನ್ನಬಹುದು. ಕಳೆದ ವಾರ ಸುಮಾರು 40,000 ರೂ ಸಂಪಾದನೆ ಆಗಿದೆ. ರಜ ಇರದ ದಿನಗಳಲ್ಲಿ ಫೋಟೋ ತೆಗೆದುಕೊಳ್ಳುವುದರ ಬೆಲೆ ಇಳಿಸುತ್ತೇನೆ ಎನ್ನುತ್ತಾರೆ.

ಲಾಭ ನಷ್ಟ ಎರಡೂ ಇದೆ
ಫೋಟೋ ತೆಗೆಯಲು ಬಂದವರು ಹೂವನ್ನು ಕೀಳುವುದು, ಕೃಷಿ ಭೂಮಿಯಲ್ಲಿ ಓಡಾಡುವುದರಿಂದ ಬೆಳೆಗೆ ಹಾಕಿರುವ ಮಣ್ಣುಗಳು ಹರಡಿಕೊಳ್ಳುತ್ತವೆ. ಇದನ್ನು ಸರಿ ಪಡಿಸಿಕೊಳ್ಳಬೇಕು. ನಾಶವಾಗುವ ಬೆಳೆಯ ರಕ್ಷಣೆಗಾಗಿ ಈ ವಿಧಾನವನ್ನು ಅನುಸರಿಸಿದೆ. ಈಗ ಬೆಳೆಯ ರಕ್ಷಣೆ ಹಾಗೂ ಸಂಪಾದನೆ ಎರಡೂ ಅನುಕೂಲಕರವಾಗಿವೆ ಎಂದು ಸಂತಸ ಪಡುತ್ತಾರೆ.



Click it and Unblock the Notifications