Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸಾಯುವ ಮೊದಲು ಹೆತ್ತ ತಾಯಿಯ ಬದುಕಿಸಿದ ಪುಟ್ಟ ಬಾಲಕ
ಸಂಬಂಧಗಳೊಂದಿಗೆ ನಾವು ತುಂಬಾ ಭಾವನಾತ್ಮಕವಾಗಿ ಬೆಸೆದುಕೊಂಡು ಬಿಟ್ಟಿರುತ್ತೇವೆ. ನಾವು ತುಂಬಾ ಹತ್ತಿರವಾಗಿರುವವರಿಗೆ ಏನೇ ಆದರೂ ನಮ್ಮಿಂದ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ತುಂಬಾ ಪ್ರೀತಿಯ ವ್ಯಕ್ತಿಯೊಬ್ಬರು ಜೀವನದ ಕೊನೆಯ ಘಟ್ಟದಲ್ಲಿ ಇರುವಂತಹ ಪರಿಸ್ಥಿತಿಯನ್ನು ಖಂಡಿತವಾಗಿಯೂ ಸಹಿಸಲು ಸಾಧ್ಯವಾಗಲ್ಲ. ಯಾಕೆಂದರೆ ಆ ಬಂಧನದ ಬೆಸುಗೆ ಆ ರೀತಿಯಲ್ಲಿರುವುದು.
ಅದೇ ನೀವು ಜೀವನದ ಕೊನೇ ದಿನಗಳನ್ನು ಎನಿಸುತ್ತಿದ್ದರೆ ಆಗ ನೀವು ನಿಮ್ಮ ಪ್ರೀತಿಪಾತ್ರರಿಗೆ ಒಳ್ಳೆಯದಾಗಲಿ ಎಂದೇ ಬಯಸುತ್ತೀರಿ. ಆ ಬಾಲಕನ ಸ್ಥಿತಿ ಕೂಡ ಅದೇ ಆಗಿತ್ತು. ಮೆದುಳಿನ ನಿಷ್ಕ್ರೀಯತೆಯಿಂದ ಜೀವನದ ಕೊನೆಯ ಘಟ್ಟದಲ್ಲಿದ್ದ ಆ ಹುಡುಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಾಯಿಗೆ ಕಿಡ್ನಿ ನೀಡಲು ಇಚ್ಛಿಸಿದ. ಮುಂದಿನದನ್ನು ಓದುವಾಗ ನಿಮ್ಮ ಕಣ್ಣುಗಳು ತೇವವಾಗದೆ ಇರದು...
ಚೆನ್ ಕ್ಸಿಯೊಟಿಯನ್ ಗೆ ಮೆದುಳಿನ ಗಡ್ಡೆ ಕಾಣಿಸಿಕೊಂಡಾಗ ಆತನಿಗೆ ಕೇವಲ ಐದರ ಹರೆಯ ಬಾಲಕನ ಮೆದುಳಿನಲ್ಲಿ ಗಡ್ಡೆ ಕಂಡುಬಂದಾಗ ಆತನಿಗೆ ಕೇವಲ ಐದರ ಹರೆಯ. ವೈದ್ಯರು ಆತ ಚೇತರಿಸಿಕೊಳ್ಳಬಹುದೆಂದು ಹೇಳಿದ್ದರೂ ಬಾಲಕನಿಗೆ ಆ ಅದೃಷ್ಟವಿರಲಿಲ್ಲ. ಗಡ್ಡೆ ಮತ್ತೆ ಕಾಣಿಸಿಕೊಂಡಿತು. ದೇವರು ಕಷ್ಟ ಕೊಟ್ಟವರಿಗೆ ಕೊಡುತ್ತಾನೆ ಎನ್ನುವಂತೆ ಆತನ ತಾಯಿ ಝುಯು ಲೂ(34)ಗೆ ಕಿಡ್ನಿಯ ಸಮಸ್ಯೆ ಕಾಣಿಸಿಕೊಂಡಿತು.....

ಆತ ಹದಿಹರೆಯಕ್ಕೆ ಕಾಲಿಡುವುದಿಲ್ಲವೆಂದು ವೈದ್ಯರು ಹೇಳಿದರು....
ದೇವರು ಕೊಟ್ಟ ಕಷ್ಟಗಳೆಲ್ಲವನ್ನೂ ಸ್ವೀಕರಿಸಿ ಮುನ್ನಡೆದ ತಾಯಿ ಮಗ ಮುಂದಿನ ಎರಡು ವರ್ಷ ಕಾಲ ಎಲ್ಲವನ್ನೂ ದಿಟ್ಟತನದಿಂದ ಎದುರಿಸಿದರು. ಗಡ್ಡೆ ಮೆದುಳಿನ ಸಂಪೂರ್ಣ ಭಾಗಕ್ಕೆ ಹರಡಿದ ಕಾರಣ ಬಾಲಕ ಕಣ್ಣ ದೃಷ್ಟಿಯನ್ನೇ ಕಳಕೊಳ್ಳ ಬೇಕಾಯಿತು. ಬಾಲಕನಿಗೆ ತಾನು ಬದುಕುವುದಿಲ್ಲವೆಂದು ಖಚಿತವಾಗಿತ್ತು. ಅದಕ್ಕೆ ಆತ ತಾಯಿಯ ಜೀವ ಉಳಿಸಲು ಬಯಸಿದ.

ಅವರಿಬ್ಬರಿಗೂ ವೈದ್ಯಕೀಯ ನೆರವು ಬೇಕಾಯಿತು..
ಸಮಯ ಹಾಗೂ ರೋಗವು ತನ್ನ ತೀವ್ರತೆ ಪಡೆಯುತ್ತಿರುವಂತೆ ತಾಯಿ ಮತ್ತು ಮಗನಿಗೆ ಪದೇ ಪದೇ ವೈದ್ಯಕೀಯ ನೆರವು ಬೇಕಾಯಿತು. ತಾಯಿಗೆ ಡಯಾಲಿಸಿಸ್ ಮಾಡಬೇಕಾದರೆ, ಹುಡುಗನಿಗೆ ಸಂಪೂರ್ಣ ಆರೈಕೆ ಬೇಕಿತ್ತು.

ಬಾಲಕನ ಅಜ್ಜಿಯ ಅಭಿಪ್ರಾಯ ಕೇಳಿದರು
ಬಾಲಕನ ಆರೋಗ್ಯ ಸ್ಥಿತಿ ತೀವ್ರ ಹದಗೆಡುತ್ತಿರುವ ಕಾರಣ ವೈದ್ಯರು ಬಾಲಕನ ಅಜ್ಜಿ ಲು ಯುನಾಕ್ಸಿ ಅಭಿಪ್ರಾಯ ಕೇಳಿದರು. ವೈದ್ಯರು ನನ್ನ ಅಭಿಪ್ರಾಯ ಕೇಳಿದರು. ಅದು ಆತನ ಅಜ್ಜಿ ಎನ್ನುವ ಕಾರಣಕ್ಕಾಗಿ ಅಲ್ಲ. ಯಾಕೆಂದರೆ ಈ ವಿಚಾರದ ಸೂಕ್ಷ್ಮತೆಯಿಂದಾಗಿ ಎಂದು ಆಕೆ ಹೇಳಿದಳು.

ವೈದ್ಯರು ಆಕೆಗೆ ಹೇಳಿರುವುದು
ಮೊಮ್ಮಗ ಬದುಕುಳಿಯುವುದಿಲ್ಲ. ಆದರೆ ಆತನ ಕಿಡ್ನಿಗಳನ್ನು ತಾಯಿಗೆ ನೀಡಬಹುದು ಮತ್ತು ಇತರ ಎರಡು ಜೀವಗಳನ್ನು ರಕ್ಷಿಸಬಹುದು ಎಂದು ವೈದ್ಯರು ಹೇಳಿರುವುದಾಗಿ ಆಕೆ ತಿಳಿಸಿದಳು. ಇದರ ಬಗ್ಗೆ ಬಾಲಕನ ತಾಯಿಯೊಂದಿಗೆ ತಾನು ಚರ್ಚೆ ಮಾಡಿದೆ ಮತ್ತು ಆಕೆ ಸ್ಪಷ್ಟವಾಗಿ ಇದಕ್ಕೆ ನಿರಾಕರಿಸಿದಳು. ಇದರ ಬಳಿಕ ಆಕೆ ಈ ಬಗ್ಗೆ ಪ್ರಗತಿ ಕಾಣುವ ಬಗ್ಗೆ ಯೋಚಿಸಲಿಲ್ಲ.

ಪುಟ್ಟ ಹುಡುಗ ಎಲ್ಲಾ ಮಾತುಕತೆ ಕೇಳಿದ. ಮುಂದೆ ಏನಾಯಿತು...
ಈ ವಿಚಾರದ ಬಗ್ಗೆ ಪುಟ್ಟ ಹುಡುಗ ಚೆನ್ಗೆ ತಿಳಿಯಿತು ಮತ್ತು ಆತ ತನ್ನ ಕಿಡ್ನಿ ತೆಗೆದು ತಾಯಿಯನ್ನು ರಕ್ಷಿಸಬೇಕೆಂದು ಹೇಳಿದ. ಕೋಶಗಳು ಸರಿಯಾಗಿ ಹೊಂದಾಣಿಕೆಯಾಗುವ ಕಾರಣ ಬಾಲಕ ಸತ್ತ ಕೂಡಲೇ ಆತನನ್ನು ಆಪರೇಷನ್ ಕೊಠಡಿಗೆ ಕೊಂಡುಹೋಗಿ ಅಲ್ಲಿ ಆತನ ಕಿಡ್ನಿಯನ್ನು ತಾಯಿಗೆ ಮತ್ತು ಯಕೃತ್ನ್ನು ಬೇರೆ ಇಬ್ಬರಿಗೆ ನೀಡಲಾಗುವುದು ಎಂದು ವೈದ್ಯರು ದೃಢಪಡಿಸಿದರು. ಈ ಮೂಲಕ ಪುಟ್ಟ 7ರ ಹರೆಯದ ಚೆನ್ ಮೂರು ಜೀವಗಳನ್ನು ಉಳಿಸಿದ.

ವೈದ್ಯಕೀಯ ತಂಡ ಬಾಲಕನಿಗಾಗಿ ದೀರ್ಘ ಪ್ರಾರ್ಥಿಸಿತು...
ಯುವ ಚೆನ್ ಗೆ ಗೌರವ ಅರ್ಪಿಸುವ ಸಲುವಾಗಿ ವೈದ್ಯಕೀಯ ತಂಡವು ಆಪರೇಷನ್ ಗೆ ಮೊದಲು ಬಾಲಕನಿಗಾಗಿ ಪ್ರಾರ್ಥನೆ ಸಲ್ಲಿಸಿತು. ಈ ಘಟನೆ ನಡೆದಾಗ ಆಸ್ಪತ್ರೆಯಲ್ಲಿದ್ದವರ ಕಣ್ಣುಗಳು ನೀರಿನಿಂದ ತುಂಬಿದ್ದವು. ಇಂತಹ ಸ್ಫೂರ್ತಿದಾಯಕ ಕಥೆಗಳನ್ನು ಓದಲು ನೀವು ಬಯಸುವಿರಾದರೆ ಕಮೆಂಟ್ ಸೆಕ್ಷನ್ ನಲ್ಲಿ ಅಭಿಪ್ರಾಯ ತಿಳಿಸಿ.



Click it and Unblock the Notifications











