Just In
- 24 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 59 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
Don't Miss
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Movies "ಭೂಮಿ ತಾಯಿಯನ್ನು ಉಳಿಸಿಕೊಳ್ಳಬೇಕು" ಎಂದು ಕರೆ ನೀಡಿದ ಕಿರುತೆರೆ ನಟಿ ಶ್ವೇತಾ ಪ್ರಸಾದ್
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಜಾನೆ ಇದನ್ನು ಕೇಳಿ ನಿದ್ದೆಯಿಂದ ಎದ್ದರೆ ಅಂದು ನಿಮಗೆ ಅದೃಷ್ಟದ ದಿನ!
ನಮ್ಮ ಭವಿಷ್ಯ ಮತ್ತು ಅದೃಷ್ಟಗಳು ನಾವು ಮಾಡುವ ಕೆಲಸ-ಕಾರ್ಯ, ನೀತಿ-ನಿಯಮ, ಸತ್ಯ-ಸುಳ್ಳುಗಳ ಮೇಲೆ ನಿಂತಿರುತ್ತದೆ. ನಮಗೆ ಒಳ್ಳೆಯದಾಗಬೇಕು, ಅದೃಷ್ಟಗಳು ನಮ್ಮ ಪಾಲಾಗಬೇಕು, ಬಯಸಿದ ಬಯಕೆ ಈಡೇರಬೇಕು, ಸದಾ ಖುಷಿಯಲ್ಲಿರಬೇಕು ಎಂದು ಮನಸ್ಸು ಬಯಸುವುದು ಸಾಮಾನ್ಯ. ಇಂತಹ ಬಯಕೆಗಳು ಈಡೇರಬೇಕಾದರೆ ಕೆಲವು ಕಾರ್ಯಗಳನ್ನು ಮಾಡಬೇಕು. ಆಗಲೇ ನಮ್ಮ ಬದುಕು ಸಾರ್ಥಕ ಎನಿಸಿಕೊಳ್ಳುತ್ತದೆ.
ದೈನಂದಿನ ಕಾರ್ಯ ಶುಭಕರ ರೀತಿಯಲ್ಲಿ ಆರಂಭವಾಗಿ ಮುಕ್ತಾಯಗೊಳ್ಳಬೇಕು ಎಂಬುದಾದರೆ, ಮಲಗುವ ಮುನ್ನ ಹಾಗೂ ಬೆಳಗ್ಗೆ ಏಳುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. ವಾಸ್ತು ಪ್ರಕಾರವಾಗಿ ಇದನ್ನು ಅನುಸರಿಸಿದರೆ ಧನಾತ್ಮಕ ಶಕ್ತಿಯು ನಮ್ಮನ್ನು ಆಕರ್ಷಿಸುವ ಮೂಲಕ ಅದೃಷ್ಟವನ್ನು ಹೆಚ್ಚಿಸುತ್ತದೆ. ಕೆಲವು ದಿನದ ಹಿಂದೆ ರಾತ್ರಿ ಮಲಗುವಾಗ ಅನುಸರಿಸಬೇಕಾದ ನಿಯಮಗಳ ಪರಿಚಯ ಮಾಡಿಕೊಂಡಿದ್ದೇವೆ. ಇದೀಗ ಮುಂಜಾನೆ ಏಳುವ ಪರಿ ಹಾಗೂ ಅದೃಷ್ಟದ ಬಗ್ಗೆ ತಿಳಿಯೋಣ...
ಈ ಸಂಗತಿಗಳನ್ನು ನೆನಪಿಡಿ....
ಋಣಾತ್ಮಕ ಫೋಟೋ ಅಥವಾ ದೃಶ್ಯಾವಳಿಗಳನ್ನು ನೋಡಬಾರದು. ಯುದ್ಧದ ಚಿತ್ರ ಅಥವಾ ಮಹಾಭಾರತದ ಯುದ್ಧದ ಸನ್ನಿವೇಶ ಅಥವಾ ಇನ್ಯಾವುದೇ ಬಗೆಯ ಚಿತ್ರಗಳಾಗಿರಲಿ, ಅವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಅಷ್ಟೇ ಅಲ್ಲದೆ ತಮ್ಮ ಬೇಟಿಗೆ ಕಾಯುತ್ತಿರುವಂತಹ ಚಿತ್ರವಿರುವ ಮತ್ತು ಬೇಟೆ ಸಿಕ್ಕಿದ ಬಳಿಕ ಅದನ್ನು ಆನಂದಿಸುವಂತಹ ವರ್ಣಚಿತ್ರಗಳನ್ನು ಕಡೆಗಣಿಸಿ. ಇದು ಸಂಬಂಧದಲ್ಲಿ ಹಿಂಸೆಯನ್ನು ಉಂಟು ಮಾಡುವುದು. ಇಂತಹ ಯಾವುದೇ ವರ್ಣಚಿತ್ರಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಈಗಲೇ ತೆಗೆದುಹಾಕಿ.
ಬೆಡ್ರೂಮ್ನಲ್ಲಿ ಇಂತಹ ವರ್ಣಚಿತ್ರಗಳನ್ನು ಮಾತ್ರ ಇಡಬೇಡಿ!
ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಾರದು
ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಾರದು. ಹಾಗೊಮ್ಮೆ ಕನ್ನಡಿ ಎದ್ದಾಗ ಮುಖಕ್ಕೆ ಕಾಣುವಂತೆಯೇ ಇದ್ದರೆ ಅದಕ್ಕೆ ಒಂದು ಬಟ್ಟೆಯ ಕವರ್ ಮಾಡಿ ಮುಚ್ಚಿಡಿ.
ಕನ್ನಡಿಯನ್ನು ಒಡೆದರೆ ಏಳು ವರ್ಷಗಳ ದುರಾದೃಷ್ಟವಂತೆ ಹೌದೇ?
ದೇವಸ್ಥಾನದ ಘಂಟೆಯ ಶಬ್ದ
ಮುಂಜಾನೆ ಏಳುವಾಗ ದೇವಸ್ಥಾನದ ಘಂಟೆಯ ಶಬ್ದವನ್ನು ಕೇಳಿ ಎಚ್ಚಗೊಳ್ಳುವುದು ಒಳ್ಳೆಯದು. ಘಂಟೆಯನ್ನು ಮಂಗಳಕರ ಎಂದು ಭಾವಿಸಲಾಗುತ್ತದೆ.
ನವಿಲಿನ ಕೂಗು
ನವಿಲಿನ ಕೂಗಿನಿಂದ ಎಚ್ಚರವಾದರೆ ಅದನ್ನು ಅದೃಷ್ಟ ಎಂದು ಪರಿಗಣಿಸಲಾಗುವುದು.
ಶಂಖದ ಧ್ವನಿ
ಶಂಖದ ಧ್ವನಿ ಶುಭಕರವಾದದ್ದು. ಇದರಲ್ಲಿ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ ಎನ್ನುವ ನಂಬಿಕೆಯಿದೆ. ಇದರ ಶಬ್ಧದಿಂದ ಎಚ್ಚರವಾದರೆ ಅದು ಅದೃಷ್ಟದ ಸೂಚನೆ ಎನ್ನಲಾಗುವುದು.
ಹಾಲು ಕುದಿಯುವುದನ್ನು ನೋಡಿದರೆ
ಎದ್ದ ತಕ್ಷಣ ಹಾಲು ಕುದಿಯುವುದನ್ನು ನೋಡಿದರೆ ಅಂದಿನ ದಿನ ಶುಭಕರವಾಗಿ ನಡೆಯುವುದು ಎನ್ನುವ ನಂಬಿಕೆ ಇದೆ.