Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮುಂಜಾನೆ ಇದನ್ನು ಕೇಳಿ ನಿದ್ದೆಯಿಂದ ಎದ್ದರೆ ಅಂದು ನಿಮಗೆ ಅದೃಷ್ಟದ ದಿನ!
ನಮ್ಮ ಭವಿಷ್ಯ ಮತ್ತು ಅದೃಷ್ಟಗಳು ನಾವು ಮಾಡುವ ಕೆಲಸ-ಕಾರ್ಯ, ನೀತಿ-ನಿಯಮ, ಸತ್ಯ-ಸುಳ್ಳುಗಳ ಮೇಲೆ ನಿಂತಿರುತ್ತದೆ. ನಮಗೆ ಒಳ್ಳೆಯದಾಗಬೇಕು, ಅದೃಷ್ಟಗಳು ನಮ್ಮ ಪಾಲಾಗಬೇಕು, ಬಯಸಿದ ಬಯಕೆ ಈಡೇರಬೇಕು, ಸದಾ ಖುಷಿಯಲ್ಲಿರಬೇಕು ಎಂದು ಮನಸ್ಸು ಬಯಸುವುದು ಸಾಮಾನ್ಯ. ಇಂತಹ ಬಯಕೆಗಳು ಈಡೇರಬೇಕಾದರೆ ಕೆಲವು ಕಾರ್ಯಗಳನ್ನು ಮಾಡಬೇಕು. ಆಗಲೇ ನಮ್ಮ ಬದುಕು ಸಾರ್ಥಕ ಎನಿಸಿಕೊಳ್ಳುತ್ತದೆ.
ದೈನಂದಿನ ಕಾರ್ಯ ಶುಭಕರ ರೀತಿಯಲ್ಲಿ ಆರಂಭವಾಗಿ ಮುಕ್ತಾಯಗೊಳ್ಳಬೇಕು ಎಂಬುದಾದರೆ, ಮಲಗುವ ಮುನ್ನ ಹಾಗೂ ಬೆಳಗ್ಗೆ ಏಳುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. ವಾಸ್ತು ಪ್ರಕಾರವಾಗಿ ಇದನ್ನು ಅನುಸರಿಸಿದರೆ ಧನಾತ್ಮಕ ಶಕ್ತಿಯು ನಮ್ಮನ್ನು ಆಕರ್ಷಿಸುವ ಮೂಲಕ ಅದೃಷ್ಟವನ್ನು ಹೆಚ್ಚಿಸುತ್ತದೆ. ಕೆಲವು ದಿನದ ಹಿಂದೆ ರಾತ್ರಿ ಮಲಗುವಾಗ ಅನುಸರಿಸಬೇಕಾದ ನಿಯಮಗಳ ಪರಿಚಯ ಮಾಡಿಕೊಂಡಿದ್ದೇವೆ. ಇದೀಗ ಮುಂಜಾನೆ ಏಳುವ ಪರಿ ಹಾಗೂ ಅದೃಷ್ಟದ ಬಗ್ಗೆ ತಿಳಿಯೋಣ...

ಈ ಸಂಗತಿಗಳನ್ನು ನೆನಪಿಡಿ....
ಋಣಾತ್ಮಕ ಫೋಟೋ ಅಥವಾ ದೃಶ್ಯಾವಳಿಗಳನ್ನು ನೋಡಬಾರದು. ಯುದ್ಧದ ಚಿತ್ರ ಅಥವಾ ಮಹಾಭಾರತದ ಯುದ್ಧದ ಸನ್ನಿವೇಶ ಅಥವಾ ಇನ್ಯಾವುದೇ ಬಗೆಯ ಚಿತ್ರಗಳಾಗಿರಲಿ, ಅವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಅಷ್ಟೇ ಅಲ್ಲದೆ ತಮ್ಮ ಬೇಟಿಗೆ ಕಾಯುತ್ತಿರುವಂತಹ ಚಿತ್ರವಿರುವ ಮತ್ತು ಬೇಟೆ ಸಿಕ್ಕಿದ ಬಳಿಕ ಅದನ್ನು ಆನಂದಿಸುವಂತಹ ವರ್ಣಚಿತ್ರಗಳನ್ನು ಕಡೆಗಣಿಸಿ. ಇದು ಸಂಬಂಧದಲ್ಲಿ ಹಿಂಸೆಯನ್ನು ಉಂಟು ಮಾಡುವುದು. ಇಂತಹ ಯಾವುದೇ ವರ್ಣಚಿತ್ರಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಈಗಲೇ ತೆಗೆದುಹಾಕಿ.

ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಾರದು
ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಾರದು. ಹಾಗೊಮ್ಮೆ ಕನ್ನಡಿ ಎದ್ದಾಗ ಮುಖಕ್ಕೆ ಕಾಣುವಂತೆಯೇ ಇದ್ದರೆ ಅದಕ್ಕೆ ಒಂದು ಬಟ್ಟೆಯ ಕವರ್ ಮಾಡಿ ಮುಚ್ಚಿಡಿ.

ದೇವಸ್ಥಾನದ ಘಂಟೆಯ ಶಬ್ದ
ಮುಂಜಾನೆ ಏಳುವಾಗ ದೇವಸ್ಥಾನದ ಘಂಟೆಯ ಶಬ್ದವನ್ನು ಕೇಳಿ ಎಚ್ಚಗೊಳ್ಳುವುದು ಒಳ್ಳೆಯದು. ಘಂಟೆಯನ್ನು ಮಂಗಳಕರ ಎಂದು ಭಾವಿಸಲಾಗುತ್ತದೆ.

ನವಿಲಿನ ಕೂಗು
ನವಿಲಿನ ಕೂಗಿನಿಂದ ಎಚ್ಚರವಾದರೆ ಅದನ್ನು ಅದೃಷ್ಟ ಎಂದು ಪರಿಗಣಿಸಲಾಗುವುದು.

ಶಂಖದ ಧ್ವನಿ
ಶಂಖದ ಧ್ವನಿ ಶುಭಕರವಾದದ್ದು. ಇದರಲ್ಲಿ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ ಎನ್ನುವ ನಂಬಿಕೆಯಿದೆ. ಇದರ ಶಬ್ಧದಿಂದ ಎಚ್ಚರವಾದರೆ ಅದು ಅದೃಷ್ಟದ ಸೂಚನೆ ಎನ್ನಲಾಗುವುದು.

ಹಾಲು ಕುದಿಯುವುದನ್ನು ನೋಡಿದರೆ
ಎದ್ದ ತಕ್ಷಣ ಹಾಲು ಕುದಿಯುವುದನ್ನು ನೋಡಿದರೆ ಅಂದಿನ ದಿನ ಶುಭಕರವಾಗಿ ನಡೆಯುವುದು ಎನ್ನುವ ನಂಬಿಕೆ ಇದೆ.



Click it and Unblock the Notifications