Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೈಗೆ, ಕಾಲಿಗೆ, ಬಂಗಾರ ಧರಿಸುವ ಮುನ್ನ ತಿಳಿದಿರಲಿ ಈ ಸಂಗತಿಗಳು!
ಭಾರತೀಯರಿಗೆ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಬಂಗಾರದ ಆಭರಣ ಇದ್ದರೂ ಸಾಲದು. ಪ್ರತಿಯೊಬ್ಬರಿಗೂ ಬಂಗಾರವೆಂದರೆ ಅಚ್ಚುಮೆಚ್ಚು. ಬಂಗಾರವೇ ಹಾಗೆ. ತುಂಬಾ ಮೌಲ್ಯ ಹೊಂದಿರುವಂತಹ ಹಳದಿ ಲೋಹವು ಕಷ್ಟದ ಸಮಯದಲ್ಲೂ ನಮಗೆ ನೆರವಿಗೆ ಬರುವುದು. ಬಂಗಾರವಿದ್ದರೆ ಯಾವುದೇ ಸಮಯದಲ್ಲೂ ನಮಗೆ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡರೆ ಅದನ್ನು ಅಡವಿಟ್ಟು ಹಣ ಪಡೆಯಬಹುದು.
ಆದರೆ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಬಂಗಾರ ಧರಿಸುವ ಬಗ್ಗೆ. ಹೌದು! ಬಂಗಾರ ಅಥವಾ ಬೇರೆ ಆಭರಣಗಳನ್ನು ಧರಿಸುವುದರಿಂದ ನಮ್ಮ ಗ್ರಹಗತಿ ಮೇಲೆ ಪರಿಣಾಮ ಉಂಟಾಗಬಹುದು. ಯಾವ್ಯಾವ ಲೋಹ ಹೇಗೆ ಧರಿಸಬೇಕು ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. ಇದರಿಂದ ತುಂಬಾ ಬೆಲೆ ಕೊಟ್ಟು ಖರೀದಿಸಿ ಧರಿಸಿರುವ ಆಭರಣವು ನಿಮಗೆ ದುರಾದೃಷ್ಟ ತರದಿರಲಿ ಅಥವಾ ಅನಾರೋಗ್ಯ ಉಂಟು ಮಾಡದಿರಲಿ ಎನ್ನುವುದೇ ನಮ್ಮ ಆಶಯ. ಆಭರಣಗಳನ್ನು ಹೇಗೆ ಧರಿಸಬೇಕು ಎಂದು ತಿಳಿಯಲು ಸ್ಲೈಡ್ ಕ್ಲಿಕ್ ಮಾಡುತ್ತಾ ಹೋಗಿ.....

ಎಡದ ಕೈಗೆ
ಎಡದ ಕೈಗೆ ಬಂಗಾರದ ಆಭರಣ ಧರಿಸುವುದರಿಂದ ನಿಮಗೆ ಸಮಸ್ಯೆಯಾಗಬಹುದು. ನಿಮಗೆ ಎಡ ಕೈಗೆ ಬಂಗಾರ ಧರಿಸಬೇಕೆಂದು ಇದ್ದರೆ ಮೊದಲು ಜ್ಯೋತಿಷಿಯ ಸಲಹೆ ಪಡೆಯಿರಿ.

ಕಾಲುಗಳು
ಕಾಲುಗಳಿಗೆ ಬಂಗಾರದ ಗೆಜ್ಜೆ ಅಥವಾ ಕಾಲುಂಗರ ಧರಿಸಬಾರದು. ಯಾಕೆಂದರೆ ಇದರಿಂದ ಅರೋಗ್ಯದ ಸಮಸ್ಯೆ ಬರಬಹುದು.

ಬಂಗಾರವನ್ನು ಎಲ್ಲಿ ಇಡಬೇಕು
ಮನೆಯ ಈಶಾನ್ಯ ಭಾಗದ ಕಪಾಟಿನಲ್ಲಿ ಬಂಗಾರವನ್ನು ಇಡಬೇಕು.

ಗರ್ಭಿಣಿ ಮಹಿಳೆಯರು
ಗರ್ಭ ಧರಿಸಿರುವ ಮಹಿಳೆಯರು ಹೆಚ್ಚಿನ ಬಂಗಾರ ಧರಿಸಬಾರದು. ಯಾಕೆಂದರೆ ಇದರಿಂದ ಸಮಸ್ಯೆಯಾಗಬಹುದು.

ಗರ್ಭ ಧರಿಸಬೇಕೆಂದಿದ್ದರೆ
ನಿಮಗೆ ಮಗು ಬೇಕೆಂದಿದ್ದರೂ ಮಗು ಆಗುತ್ತಿಲ್ಲವೆಂದಾದೆ ನೀವು ಉಂಗುರದ ಬೆರಳಿಗೆ ಬಂಗಾರ ಧರಿಸಬೇಕು. ಇದರಿಂದ ನಿಮ್ಮ ಗ್ರಹಗತಿಗಳಲ್ಲಿ ಸುಧಾರಣೆಯಾಗುವುದು.

ಬಂಗಾರ ದಾನ ಮಾಡುವುದು
ಸನ್ಯಾಸಿ ಅಥವಾ ಗುರುಗಳಿಗೆ ಬಂಗಾರ ದಾನ ಮಾಡುವುದರಿಂದ ಗ್ರಹಗತಿಗಳ ಆಶೀರ್ವಾದವು ನಿಮಗೆ ಸಿಗುವುದು. ನಿಮಗೆ ಆತ್ಮೀಯರಲ್ಲದೆ ಇರುವವರಿಂದ ಬಂಗಾರ ಸ್ವೀಕರಿಸಬೇಡಿ.

ಬಂಗಾರ ಸಿಗುವುದು ಮತ್ತು ಕಳಕೊಳ್ಳುವುದು
ಇವೆರಡು ತುಂಬಾ ದುರಾದೃಷ್ಟವೆಂದು ನಂಬಲಾಗಿದೆ. ಯಾವುದೇ ರೀತಿಯ ಬಂಗಾರದ ಆಭರಣ ಕಳೆದುಕೊಂಡರೆ ಅದು ಮುಂದೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಯಾರಿಂದಲಾದರೂ ಬಂಗಾರ ಸ್ವೀಕರಿಸಿದರೆ ನಿಮಗೆ ಖರ್ಚು ಹೆಚ್ಚಾಗುವುದು.



Click it and Unblock the Notifications











