Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೈಗೆ, ಕಾಲಿಗೆ, ಬಂಗಾರ ಧರಿಸುವ ಮುನ್ನ ತಿಳಿದಿರಲಿ ಈ ಸಂಗತಿಗಳು!
ಭಾರತೀಯರಿಗೆ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಬಂಗಾರದ ಆಭರಣ ಇದ್ದರೂ ಸಾಲದು. ಪ್ರತಿಯೊಬ್ಬರಿಗೂ ಬಂಗಾರವೆಂದರೆ ಅಚ್ಚುಮೆಚ್ಚು. ಬಂಗಾರವೇ ಹಾಗೆ. ತುಂಬಾ ಮೌಲ್ಯ ಹೊಂದಿರುವಂತಹ ಹಳದಿ ಲೋಹವು ಕಷ್ಟದ ಸಮಯದಲ್ಲೂ ನಮಗೆ ನೆರವಿಗೆ ಬರುವುದು. ಬಂಗಾರವಿದ್ದರೆ ಯಾವುದೇ ಸಮಯದಲ್ಲೂ ನಮಗೆ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡರೆ ಅದನ್ನು ಅಡವಿಟ್ಟು ಹಣ ಪಡೆಯಬಹುದು.
ಆದರೆ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಬಂಗಾರ ಧರಿಸುವ ಬಗ್ಗೆ. ಹೌದು! ಬಂಗಾರ ಅಥವಾ ಬೇರೆ ಆಭರಣಗಳನ್ನು ಧರಿಸುವುದರಿಂದ ನಮ್ಮ ಗ್ರಹಗತಿ ಮೇಲೆ ಪರಿಣಾಮ ಉಂಟಾಗಬಹುದು. ಯಾವ್ಯಾವ ಲೋಹ ಹೇಗೆ ಧರಿಸಬೇಕು ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. ಇದರಿಂದ ತುಂಬಾ ಬೆಲೆ ಕೊಟ್ಟು ಖರೀದಿಸಿ ಧರಿಸಿರುವ ಆಭರಣವು ನಿಮಗೆ ದುರಾದೃಷ್ಟ ತರದಿರಲಿ ಅಥವಾ ಅನಾರೋಗ್ಯ ಉಂಟು ಮಾಡದಿರಲಿ ಎನ್ನುವುದೇ ನಮ್ಮ ಆಶಯ. ಆಭರಣಗಳನ್ನು ಹೇಗೆ ಧರಿಸಬೇಕು ಎಂದು ತಿಳಿಯಲು ಸ್ಲೈಡ್ ಕ್ಲಿಕ್ ಮಾಡುತ್ತಾ ಹೋಗಿ.....

ಎಡದ ಕೈಗೆ
ಎಡದ ಕೈಗೆ ಬಂಗಾರದ ಆಭರಣ ಧರಿಸುವುದರಿಂದ ನಿಮಗೆ ಸಮಸ್ಯೆಯಾಗಬಹುದು. ನಿಮಗೆ ಎಡ ಕೈಗೆ ಬಂಗಾರ ಧರಿಸಬೇಕೆಂದು ಇದ್ದರೆ ಮೊದಲು ಜ್ಯೋತಿಷಿಯ ಸಲಹೆ ಪಡೆಯಿರಿ.

ಕಾಲುಗಳು
ಕಾಲುಗಳಿಗೆ ಬಂಗಾರದ ಗೆಜ್ಜೆ ಅಥವಾ ಕಾಲುಂಗರ ಧರಿಸಬಾರದು. ಯಾಕೆಂದರೆ ಇದರಿಂದ ಅರೋಗ್ಯದ ಸಮಸ್ಯೆ ಬರಬಹುದು.

ಬಂಗಾರವನ್ನು ಎಲ್ಲಿ ಇಡಬೇಕು
ಮನೆಯ ಈಶಾನ್ಯ ಭಾಗದ ಕಪಾಟಿನಲ್ಲಿ ಬಂಗಾರವನ್ನು ಇಡಬೇಕು.

ಗರ್ಭಿಣಿ ಮಹಿಳೆಯರು
ಗರ್ಭ ಧರಿಸಿರುವ ಮಹಿಳೆಯರು ಹೆಚ್ಚಿನ ಬಂಗಾರ ಧರಿಸಬಾರದು. ಯಾಕೆಂದರೆ ಇದರಿಂದ ಸಮಸ್ಯೆಯಾಗಬಹುದು.

ಗರ್ಭ ಧರಿಸಬೇಕೆಂದಿದ್ದರೆ
ನಿಮಗೆ ಮಗು ಬೇಕೆಂದಿದ್ದರೂ ಮಗು ಆಗುತ್ತಿಲ್ಲವೆಂದಾದೆ ನೀವು ಉಂಗುರದ ಬೆರಳಿಗೆ ಬಂಗಾರ ಧರಿಸಬೇಕು. ಇದರಿಂದ ನಿಮ್ಮ ಗ್ರಹಗತಿಗಳಲ್ಲಿ ಸುಧಾರಣೆಯಾಗುವುದು.

ಬಂಗಾರ ದಾನ ಮಾಡುವುದು
ಸನ್ಯಾಸಿ ಅಥವಾ ಗುರುಗಳಿಗೆ ಬಂಗಾರ ದಾನ ಮಾಡುವುದರಿಂದ ಗ್ರಹಗತಿಗಳ ಆಶೀರ್ವಾದವು ನಿಮಗೆ ಸಿಗುವುದು. ನಿಮಗೆ ಆತ್ಮೀಯರಲ್ಲದೆ ಇರುವವರಿಂದ ಬಂಗಾರ ಸ್ವೀಕರಿಸಬೇಡಿ.

ಬಂಗಾರ ಸಿಗುವುದು ಮತ್ತು ಕಳಕೊಳ್ಳುವುದು
ಇವೆರಡು ತುಂಬಾ ದುರಾದೃಷ್ಟವೆಂದು ನಂಬಲಾಗಿದೆ. ಯಾವುದೇ ರೀತಿಯ ಬಂಗಾರದ ಆಭರಣ ಕಳೆದುಕೊಂಡರೆ ಅದು ಮುಂದೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಯಾರಿಂದಲಾದರೂ ಬಂಗಾರ ಸ್ವೀಕರಿಸಿದರೆ ನಿಮಗೆ ಖರ್ಚು ಹೆಚ್ಚಾಗುವುದು.



Click it and Unblock the Notifications











