Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಕೈಗೆ, ಕಾಲಿಗೆ, ಬಂಗಾರ ಧರಿಸುವ ಮುನ್ನ ತಿಳಿದಿರಲಿ ಈ ಸಂಗತಿಗಳು!
ಭಾರತೀಯರಿಗೆ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಬಂಗಾರದ ಆಭರಣ ಇದ್ದರೂ ಸಾಲದು. ಪ್ರತಿಯೊಬ್ಬರಿಗೂ ಬಂಗಾರವೆಂದರೆ ಅಚ್ಚುಮೆಚ್ಚು. ಬಂಗಾರವೇ ಹಾಗೆ. ತುಂಬಾ ಮೌಲ್ಯ ಹೊಂದಿರುವಂತಹ ಹಳದಿ ಲೋಹವು ಕಷ್ಟದ ಸಮಯದಲ್ಲೂ ನಮಗೆ ನೆರವಿಗೆ ಬರುವುದು. ಬಂಗಾರವಿದ್ದರೆ ಯಾವುದೇ ಸಮಯದಲ್ಲೂ ನಮಗೆ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡರೆ ಅದನ್ನು ಅಡವಿಟ್ಟು ಹಣ ಪಡೆಯಬಹುದು.
ಆದರೆ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಬಂಗಾರ ಧರಿಸುವ ಬಗ್ಗೆ. ಹೌದು! ಬಂಗಾರ ಅಥವಾ ಬೇರೆ ಆಭರಣಗಳನ್ನು ಧರಿಸುವುದರಿಂದ ನಮ್ಮ ಗ್ರಹಗತಿ ಮೇಲೆ ಪರಿಣಾಮ ಉಂಟಾಗಬಹುದು. ಯಾವ್ಯಾವ ಲೋಹ ಹೇಗೆ ಧರಿಸಬೇಕು ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. ಇದರಿಂದ ತುಂಬಾ ಬೆಲೆ ಕೊಟ್ಟು ಖರೀದಿಸಿ ಧರಿಸಿರುವ ಆಭರಣವು ನಿಮಗೆ ದುರಾದೃಷ್ಟ ತರದಿರಲಿ ಅಥವಾ ಅನಾರೋಗ್ಯ ಉಂಟು ಮಾಡದಿರಲಿ ಎನ್ನುವುದೇ ನಮ್ಮ ಆಶಯ. ಆಭರಣಗಳನ್ನು ಹೇಗೆ ಧರಿಸಬೇಕು ಎಂದು ತಿಳಿಯಲು ಸ್ಲೈಡ್ ಕ್ಲಿಕ್ ಮಾಡುತ್ತಾ ಹೋಗಿ.....

ಎಡದ ಕೈಗೆ
ಎಡದ ಕೈಗೆ ಬಂಗಾರದ ಆಭರಣ ಧರಿಸುವುದರಿಂದ ನಿಮಗೆ ಸಮಸ್ಯೆಯಾಗಬಹುದು. ನಿಮಗೆ ಎಡ ಕೈಗೆ ಬಂಗಾರ ಧರಿಸಬೇಕೆಂದು ಇದ್ದರೆ ಮೊದಲು ಜ್ಯೋತಿಷಿಯ ಸಲಹೆ ಪಡೆಯಿರಿ.

ಕಾಲುಗಳು
ಕಾಲುಗಳಿಗೆ ಬಂಗಾರದ ಗೆಜ್ಜೆ ಅಥವಾ ಕಾಲುಂಗರ ಧರಿಸಬಾರದು. ಯಾಕೆಂದರೆ ಇದರಿಂದ ಅರೋಗ್ಯದ ಸಮಸ್ಯೆ ಬರಬಹುದು.

ಬಂಗಾರವನ್ನು ಎಲ್ಲಿ ಇಡಬೇಕು
ಮನೆಯ ಈಶಾನ್ಯ ಭಾಗದ ಕಪಾಟಿನಲ್ಲಿ ಬಂಗಾರವನ್ನು ಇಡಬೇಕು.

ಗರ್ಭಿಣಿ ಮಹಿಳೆಯರು
ಗರ್ಭ ಧರಿಸಿರುವ ಮಹಿಳೆಯರು ಹೆಚ್ಚಿನ ಬಂಗಾರ ಧರಿಸಬಾರದು. ಯಾಕೆಂದರೆ ಇದರಿಂದ ಸಮಸ್ಯೆಯಾಗಬಹುದು.

ಗರ್ಭ ಧರಿಸಬೇಕೆಂದಿದ್ದರೆ
ನಿಮಗೆ ಮಗು ಬೇಕೆಂದಿದ್ದರೂ ಮಗು ಆಗುತ್ತಿಲ್ಲವೆಂದಾದೆ ನೀವು ಉಂಗುರದ ಬೆರಳಿಗೆ ಬಂಗಾರ ಧರಿಸಬೇಕು. ಇದರಿಂದ ನಿಮ್ಮ ಗ್ರಹಗತಿಗಳಲ್ಲಿ ಸುಧಾರಣೆಯಾಗುವುದು.

ಬಂಗಾರ ದಾನ ಮಾಡುವುದು
ಸನ್ಯಾಸಿ ಅಥವಾ ಗುರುಗಳಿಗೆ ಬಂಗಾರ ದಾನ ಮಾಡುವುದರಿಂದ ಗ್ರಹಗತಿಗಳ ಆಶೀರ್ವಾದವು ನಿಮಗೆ ಸಿಗುವುದು. ನಿಮಗೆ ಆತ್ಮೀಯರಲ್ಲದೆ ಇರುವವರಿಂದ ಬಂಗಾರ ಸ್ವೀಕರಿಸಬೇಡಿ.

ಬಂಗಾರ ಸಿಗುವುದು ಮತ್ತು ಕಳಕೊಳ್ಳುವುದು
ಇವೆರಡು ತುಂಬಾ ದುರಾದೃಷ್ಟವೆಂದು ನಂಬಲಾಗಿದೆ. ಯಾವುದೇ ರೀತಿಯ ಬಂಗಾರದ ಆಭರಣ ಕಳೆದುಕೊಂಡರೆ ಅದು ಮುಂದೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಯಾರಿಂದಲಾದರೂ ಬಂಗಾರ ಸ್ವೀಕರಿಸಿದರೆ ನಿಮಗೆ ಖರ್ಚು ಹೆಚ್ಚಾಗುವುದು.



Click it and Unblock the Notifications
