Latest Updates
-
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್!
ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಸಿಕ್ಕ ವ್ಯಕ್ತಿ! ವಿಡಿಯೋ ವೈರಲ್...
ಇತ್ತೀಚೆಗೆ ವೈರಲ್ ಆಗಿರುವ ವಿಷಯದಲ್ಲಿ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಸಿಕ್ಕ ವ್ಯಕ್ತಿಯ ವಿಷಯ ಪ್ರಮುಖವಾಗಿದೆ. ಸುಮಾರು ಒಂದು ದಿನದಿಂದ ಕಾಣೆಯಾಗಿದ್ದ ವ್ಯಕ್ತಿ ಹೆಬ್ಬಾವೊಂದರ ಹೊಟ್ಟೆಯಲ್ಲಿ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ವಿಚಿತ್ರ ಮತ್ತು ಭೀಕರ ಘಟನೆ ಎಲ್ಲಿ ನಡೆಯಿತು? ಈತ ಹೆಬ್ಬಾವಿಗೆ ಹೇಗೆ ಆಹಾರವಾದ?
ಸಾಮಾನ್ಯವಾಗಿ ಮನುಷ್ಯರ ಮೇಲೆ ಎರಗದ ಹೆಬ್ಬಾವು ಈತನ ಮೇಲೇಕೆ ಎರಗಿತು? ಮನುಷ್ಯನ ಶರೀರವನ್ನು ನುಂಗುವಷ್ಟು ಸಾಮರ್ಥ್ಯವಿಲ್ಲದ ಈ ಹೆಬ್ಬಾವು ಈತನನ್ನು ನುಂಗಿದ್ದಾದರೂ ಹೇಗೆ? ಆ ದುರ್ವಿಧಿಯ ದಿನ ಈ ವ್ಯಕ್ತಿಗೇನಾಯಿತು? ಈ ಎಲ್ಲಾ ಪ್ರಶ್ನೆಗಳಿಕೆ ಉತ್ತರಗಳೇನು ನೋಡೋಣ...

ಹೆಬ್ಬಾವು ಮನುಷ್ಯರ ಮೇಲೆ ಎರಗುವುದು ತೀರಾ ಕಡಿಮೆ!!
ಪ್ರಾಣಿಶಾಸ್ತ್ರಜ್ಞರ ಪ್ರಕಾರ ಹೆಬ್ಬಾವುಗಳು ಒಮ್ಮೆಲೇ ದೊಡ್ಡ ಪ್ರಾಣಿಯನ್ನು ಹಿಡಿದು ನುಂಗಿ ಹಲವಾರು ದಿನ ಹಾಗೇ ಬಿದ್ದುಕೊಂಡಿರುವ ಜೀವಿಗಳಾಗಿವೆ. ಇವುಗಳ ಆಹಾರದಲ್ಲಿ ಜಿಂಕೆ, ಸಾರಂಗ, ಕಾಡುಹಂದಿ, ಮತ್ತಿತರ ಕೊಂಚ ದೊಡ್ಡವೇ ಆದ ಪ್ರಾಣಿಗಳಾಗಿವೆ. ಆದರೆ ಇವು ಮನುಷ್ಯರ ಮೇಲೆ ಧಾಳಿ ಮಾಡುವುದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

ಈ ಮೃತ ವ್ಯಕ್ತಿಯ ಹೆಸರು ಅಕ್ಬರ್ ಸಾಲುಬ್ರಿಯೋ
ಇಂಡೋನೇಷ್ಯಾದ ಪ್ರಜೆಯಾದ ಅಕ್ಬರ್ ಸಾಲುಬ್ರಿಯೋ ಎಂಬ ಹೆಸರಿನ ಕೇವಲ ಇಪ್ಪತ್ತೈದು ವರ್ಷದ ಈ ತರುಣ ತನ್ನ ಜೀವನದಲ್ಲಿ ಎಂದೂ ಹೆಬ್ಬಾವನ್ನು ಕಂಡಿರಲಿಕ್ಕಿಲ್ಲ.

ಈತ ಕಾಣೆಯಾಗಿರುವ ಬಗ್ಗೆ ದೂರು ಬಂದಿತ್ತು
ಈತ ಕಾಣೆಯಾದ ಬಳಿಕ ಹುಡುಕಾಟ ನಡೆಸಿ ವಿಫಲರಾದ ಸ್ನೇಹಿತರು ಮತ್ತು ಕುಟುಂಬದವರು ಈತನ ಕಾಣೆಯಾದ ಬಗ್ಗೆ ಪೋಲೀಸರಲ್ಲಿ ದೂರನ್ನು ನೀಡಿದ್ದರು. ಪಶ್ಚಿಮ ಸುಲವಾಸಿಯಲ್ಲಿರುವ ಈತನ ಮನೆಯಿಂದ ಕೊಂಚ ದೂರದಲ್ಲಿದ್ದ ತಾಳೆಮರದ ಕಟಾವಿಗೆ ಈಗ ಹೋಗಿದ್ದು ಹಿಂದಿರುಗಿರಲಿಲ್ಲ.

ಹುಡುಕಾಟದಲ್ಲಿ ಸಿಕ್ಕ ಹೆಬ್ಬಾವು
ಈತನ ಹುಡುಕಾಟಕ್ಕೆಂದು ತಂಡವನ್ನು ಕಳಿಸಿದ ಪೋಲೀಸರು ಈ ಬಗ್ಗೆ ವಿಚಾರಣೆ ನಡೆಸಿದರು. ಈತನ ಪಕ್ಕದ ಮನೆಯವರು ಮನೆಯ ಹಿಂಬದಿಯಲ್ಲಿ ಈತನ ರೋದನ ಕೇಳಿದಂತಾಯ್ತು ಎಂದು ವರದಿ ಮಾಡಿದ್ದರು. ಈ ವಿವರಗಳನ್ನು ಪರಿಶೀಲಿಸಲು ಮನೆಯ ಹಿತ್ತಲಿನಲ್ಲಿ ಹುಡುಕಾಟ ನಡೆಸಿದಾಗ 23 ಅಡಿಯಷ್ಟು ಉದ್ದನೆಯ ಭಾರೀ ಹೆಬ್ಬಾವು ಹೊಟ್ಟೆಯುಬ್ಬಿಸಿಕೊಂಡು ಆರಾಮವಾಗಿ ಮಲಗಿತ್ತು. ಅನತಿ ದೂರದಲ್ಲಿಯೇ ತಾಳೆ ಕಟಾವಿಗೆ ಬಳಸುತ್ತಿದ್ದ ಕತ್ತಿ ಕಂಡುಬಂದಿತ್ತು.
ಹೆಬ್ಬಾವನ್ನು ಸೀಳಲು ನಿರ್ಧಾರ
ಕತ್ತಿ ಇಲ್ಲೇ ಇದೆ ಎಂದ ಮೇಲೆ ಈತನನ್ನು ಈ ಹೆಬ್ಬಾವೇ ನುಂಗಿರಬೇಕು ಎಂದು ಸ್ಥೂಲವಾಗಿ ಊಹಿಸಿದ ತಂಡ ಒಂದು ವೇಳೆ ಅಕ್ಬರ್ ಜೀವಂತವಿದ್ದರೆ ಎಂಬ ದೂರದ ಆಸೆಯಿಂದ ಹೆಬ್ಬಾವಿನ ಹೊಟ್ಟೆಯನ್ನು ಸೀಳುವ ನಿರ್ಧಾರ ಕೈಗೊಂಡರು. ಅಂತೆಯೇ ಹೊಟ್ಟೆಯನ್ನು ಸೀಳಿದಾಗ ಅಕ್ಬರ್ ತನ್ನ ಎರಡೂ ಕೈಗಳನ್ನು ಎದೆಗವಚಿ ಮಲಗಿದ್ದ ಭಂಗಿಯಲ್ಲಿಯೇ ಮೃತನಾಗಿ ಪತ್ತೆಯಾದ. ಈ ಹೆಬ್ಬಾವು ಈತನ್ನು ಇಡಿಯಾಗಿ ನುಂಗಿತ್ತು. ಈ ಭಯಾನಕ ದೃಶ್ಯದ ವೀಡೀಯೋ ನೋಡಿ...



Click it and Unblock the Notifications