Just In
- 3 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 5 hrs ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 13 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 14 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- News India Weather: ಮುಂದಿನ ಮೂರು ದಿನ ದೇಶದ ಈ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲಿಲ್ಲಿ?-ಮಾಹಿತಿ
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Movies 5 ವರ್ಷದ ಹಿಂದೆ ಸುಮಲತಾ ಬೆಂಬಲಿಸಿದ್ದ ದರ್ಶನ್; ಈಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರವೇಕೆ?
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆತ ಸಿಟ್ಟಿನ ಭರದಲ್ಲಿ ಪತ್ನಿಯನ್ನೇ ಚಾಕು ಇರಿದು ಕೊಂದ!
ದಂತವೈದ್ಯನಾಗಿರುವ ಉಮೇಶ್ ಬೊಬಾಲೆ ಎನ್ನುವಾತ ತನ್ನ 36ರ ಹರೆಯದ ಪತ್ನಿಯನ್ನು ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಾನೆ. ಇದಕ್ಕೂ ಮಿಗಿಲಾಗಿ ಆತ ಕೊಲೆಯ ಬಳಿಕ ಮಾಡಿದಂತಹ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ...
ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡಬಾರದು ಎಂದು ಹಿರಿಯರು ಹೇಳುತ್ತಾ ಇರುತ್ತಾರೆ. ಸಿಟ್ಟಿನ ಭರದಲ್ಲಿ ನಾವು ಏನು ಮಾಡುತ್ತೇವೆಂದು ತಿಳಿಯಲ್ಲ. ಸಿಟ್ಟು ಇಳಿದ ಬಳಿಕ ಆದ ಘಟನೆಯ ಬಗ್ಗೆ ಪಶ್ಚಾತ್ತಾಪವಾದರೂ ಸಮಯ ಕೈಮೀರಿ ಹೋಗಿರುತ್ತದೆ. ಸಿಟ್ಟಿನಿಂದ ಎಂತಹ ದುರ್ಘಟನೆ ನಡೆದು ಹೋಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕೆಂಡದಂತಹ ಕೋಪ, ನಿಮ್ಮನ್ನೇ ಸುಟ್ಟು ಬಿಡಬಹುದು!
ದಂತವೈದ್ಯನಾಗಿರುವ ಉಮೇಶ್ ಬೊಬಾಲೆ ಎನ್ನುವಾತ ತನ್ನ 36ರ ಹರೆಯದ ಪತ್ನಿಯನ್ನು ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಾನೆ. ಇದಕ್ಕೂ ಮಿಗಿಲಾಗಿ ಆತ ಕೊಲೆಯ ಬಳಿಕ ಮಾಡಿದಂತಹ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ. ಪತ್ನಿಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ ಮತ್ತು ಕೊಲೆಯ ಬಳಿಕ ಏನು ಮಾಡಿದ ಎಂದು ತಿಳಿದುಕೊಳ್ಳುವ.....
ಅಪರಾಧಿ
40ರ ಹರೆಯದ ದಂತವೈದ್ಯ ಉಮೇಶ್ ಬೊಬಾಲೆ ಎನ್ನುವಾತ ತನ್ನ 4ರ ಹರೆಯದ ಮಗುವಿನ ಎದುರೇ ಪತ್ನಿಯನ್ನು ಕೊಲೆ ಮಾಡಿದ.
ಅವರಿಗೆ ಏನಾಗಿತ್ತು?
ಪತಿಪತ್ನಿ ನಡುವೆ ಕಳೆದ ಕೆಲವು ತಿಂಗಳಿಂದ ಮನಸ್ತಾಪವಿತ್ತು ಮತ್ತು ಅವರಿಬ್ಬರು ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದರು.
ಪತಿಯ ವಿರುದ್ಧ ದೂರು ನೀಡಿದ್ದಳು
ಪತ್ನಿಯು ತನ್ನ ಪತಿ ದೈಹಿಕ ಹಿಂಸೆ ನೀಡುತ್ತಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ಇದರ ಬಳಿಕ ಅವರಿಬ್ಬರು ಬೇರ್ಪಟ್ಟಿದ್ದರು.
ಮತ್ತೆ ಒಂದಾಗಿಸಲು ಕುಟುಂಬ ಹಾಗೂ ಸ್ನೇಹಿತರ ಪ್ರಯತ್ನ
ನಿಮ್ಮಿಬ್ಬರ ಮನಸ್ತಾಪವನ್ನು ಮರೆತು ಮತ್ತೆ ಜತೆಯಾಗಿ ವಾಸಿಸಬೇಕೆಂದು ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಒತ್ತಾಯಿಸಿದ್ದರು. ಆದರೆ ಅವರು ಮಾತನ್ನೇ ಕೇಳಲಿಲ್ಲ.
ಕೆಟ್ಟ ಘಟನೆ ನಡೆಯಿತು
ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಮಹಿಳೆಯು ತನ್ನ ಪತಿಯ ಜತೆ ವಾದಕ್ಕೆ ಇಳಿದಳು. ಈ ವೇಳೆ ತಾಳ್ಮೆ ಕಳೆದುಕೊಂಡ ಆತ ಕೊಲೆ ಮಾಡಿಬಿಟ್ಟ.
ಮಗುವಿನ ಎದುರೇ ಆಕೆಯನ್ನು ಇರಿದು ಕೊಂದ
ಉಮೇಶ್ ಪತ್ನಿಯ ಕಾಲುಗಳು, ಎದೆ ಮತ್ತು ಹೊಟ್ಟೆಗೆ ಹಲವಾರು ಬಾರಿ ಇರಿದ. ಇದನ್ನು ಮಗು ಕಣ್ಣಾರೇ ನೋಡುತ್ತಲೇ ಇತ್ತು. ಕೊಲೆಯ ಬಳಿಕ ಶವದ ಬಳಿಯಲ್ಲೇ ಆತ ಸುಮಾರು 3 ಗಂಟೆಗಳ ಕಾಲ ಕುಳಿತುಕೊಂಡ.
ಪೊಲೀಸರನ್ನು ತಾನೇ ಕರೆದ
ಪತ್ನಿಯ ಶವದ ಬಳಿ ಸುಮಾರು ಮೂರು ಗಂಟೆಗಳ ಕಾಲ ಕುಳಿತುಕೊಂಡ ಆತ ಪೊಲೀಸರಿಗೆ ಕರೆ ಮಾಡಿ ಶರಣಾದ. ಓಡಿ ಹೋಗದೆ ಶರಣಾಗಿರುವುದು ತುಂಬಾ ಒಳ್ಳೆಯ ವಿಚಾರವೆನ್ನಬಹುದು.