Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಆತ ಸಿಟ್ಟಿನ ಭರದಲ್ಲಿ ಪತ್ನಿಯನ್ನೇ ಚಾಕು ಇರಿದು ಕೊಂದ!
ದಂತವೈದ್ಯನಾಗಿರುವ ಉಮೇಶ್ ಬೊಬಾಲೆ ಎನ್ನುವಾತ ತನ್ನ 36ರ ಹರೆಯದ ಪತ್ನಿಯನ್ನು ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಾನೆ. ಇದಕ್ಕೂ ಮಿಗಿಲಾಗಿ ಆತ ಕೊಲೆಯ ಬಳಿಕ ಮಾಡಿದಂತಹ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ...
ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡಬಾರದು ಎಂದು ಹಿರಿಯರು ಹೇಳುತ್ತಾ ಇರುತ್ತಾರೆ. ಸಿಟ್ಟಿನ ಭರದಲ್ಲಿ ನಾವು ಏನು ಮಾಡುತ್ತೇವೆಂದು ತಿಳಿಯಲ್ಲ. ಸಿಟ್ಟು ಇಳಿದ ಬಳಿಕ ಆದ ಘಟನೆಯ ಬಗ್ಗೆ ಪಶ್ಚಾತ್ತಾಪವಾದರೂ ಸಮಯ ಕೈಮೀರಿ ಹೋಗಿರುತ್ತದೆ. ಸಿಟ್ಟಿನಿಂದ ಎಂತಹ ದುರ್ಘಟನೆ ನಡೆದು ಹೋಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕೆಂಡದಂತಹ ಕೋಪ, ನಿಮ್ಮನ್ನೇ ಸುಟ್ಟು ಬಿಡಬಹುದು!
ದಂತವೈದ್ಯನಾಗಿರುವ ಉಮೇಶ್ ಬೊಬಾಲೆ ಎನ್ನುವಾತ ತನ್ನ 36ರ ಹರೆಯದ ಪತ್ನಿಯನ್ನು ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಾನೆ. ಇದಕ್ಕೂ ಮಿಗಿಲಾಗಿ ಆತ ಕೊಲೆಯ ಬಳಿಕ ಮಾಡಿದಂತಹ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ. ಪತ್ನಿಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ ಮತ್ತು ಕೊಲೆಯ ಬಳಿಕ ಏನು ಮಾಡಿದ ಎಂದು ತಿಳಿದುಕೊಳ್ಳುವ.....

ಅಪರಾಧಿ
40ರ ಹರೆಯದ ದಂತವೈದ್ಯ ಉಮೇಶ್ ಬೊಬಾಲೆ ಎನ್ನುವಾತ ತನ್ನ 4ರ ಹರೆಯದ ಮಗುವಿನ ಎದುರೇ ಪತ್ನಿಯನ್ನು ಕೊಲೆ ಮಾಡಿದ.

ಅವರಿಗೆ ಏನಾಗಿತ್ತು?
ಪತಿಪತ್ನಿ ನಡುವೆ ಕಳೆದ ಕೆಲವು ತಿಂಗಳಿಂದ ಮನಸ್ತಾಪವಿತ್ತು ಮತ್ತು ಅವರಿಬ್ಬರು ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದರು.

ಪತಿಯ ವಿರುದ್ಧ ದೂರು ನೀಡಿದ್ದಳು
ಪತ್ನಿಯು ತನ್ನ ಪತಿ ದೈಹಿಕ ಹಿಂಸೆ ನೀಡುತ್ತಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ಇದರ ಬಳಿಕ ಅವರಿಬ್ಬರು ಬೇರ್ಪಟ್ಟಿದ್ದರು.

ಮತ್ತೆ ಒಂದಾಗಿಸಲು ಕುಟುಂಬ ಹಾಗೂ ಸ್ನೇಹಿತರ ಪ್ರಯತ್ನ
ನಿಮ್ಮಿಬ್ಬರ ಮನಸ್ತಾಪವನ್ನು ಮರೆತು ಮತ್ತೆ ಜತೆಯಾಗಿ ವಾಸಿಸಬೇಕೆಂದು ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಒತ್ತಾಯಿಸಿದ್ದರು. ಆದರೆ ಅವರು ಮಾತನ್ನೇ ಕೇಳಲಿಲ್ಲ.

ಕೆಟ್ಟ ಘಟನೆ ನಡೆಯಿತು
ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಮಹಿಳೆಯು ತನ್ನ ಪತಿಯ ಜತೆ ವಾದಕ್ಕೆ ಇಳಿದಳು. ಈ ವೇಳೆ ತಾಳ್ಮೆ ಕಳೆದುಕೊಂಡ ಆತ ಕೊಲೆ ಮಾಡಿಬಿಟ್ಟ.

ಮಗುವಿನ ಎದುರೇ ಆಕೆಯನ್ನು ಇರಿದು ಕೊಂದ
ಉಮೇಶ್ ಪತ್ನಿಯ ಕಾಲುಗಳು, ಎದೆ ಮತ್ತು ಹೊಟ್ಟೆಗೆ ಹಲವಾರು ಬಾರಿ ಇರಿದ. ಇದನ್ನು ಮಗು ಕಣ್ಣಾರೇ ನೋಡುತ್ತಲೇ ಇತ್ತು. ಕೊಲೆಯ ಬಳಿಕ ಶವದ ಬಳಿಯಲ್ಲೇ ಆತ ಸುಮಾರು 3 ಗಂಟೆಗಳ ಕಾಲ ಕುಳಿತುಕೊಂಡ.

ಪೊಲೀಸರನ್ನು ತಾನೇ ಕರೆದ
ಪತ್ನಿಯ ಶವದ ಬಳಿ ಸುಮಾರು ಮೂರು ಗಂಟೆಗಳ ಕಾಲ ಕುಳಿತುಕೊಂಡ ಆತ ಪೊಲೀಸರಿಗೆ ಕರೆ ಮಾಡಿ ಶರಣಾದ. ಓಡಿ ಹೋಗದೆ ಶರಣಾಗಿರುವುದು ತುಂಬಾ ಒಳ್ಳೆಯ ವಿಚಾರವೆನ್ನಬಹುದು.



Click it and Unblock the Notifications
