Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಆತ ಸಿಟ್ಟಿನ ಭರದಲ್ಲಿ ಪತ್ನಿಯನ್ನೇ ಚಾಕು ಇರಿದು ಕೊಂದ!
ದಂತವೈದ್ಯನಾಗಿರುವ ಉಮೇಶ್ ಬೊಬಾಲೆ ಎನ್ನುವಾತ ತನ್ನ 36ರ ಹರೆಯದ ಪತ್ನಿಯನ್ನು ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಾನೆ. ಇದಕ್ಕೂ ಮಿಗಿಲಾಗಿ ಆತ ಕೊಲೆಯ ಬಳಿಕ ಮಾಡಿದಂತಹ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ...
ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡಬಾರದು ಎಂದು ಹಿರಿಯರು ಹೇಳುತ್ತಾ ಇರುತ್ತಾರೆ. ಸಿಟ್ಟಿನ ಭರದಲ್ಲಿ ನಾವು ಏನು ಮಾಡುತ್ತೇವೆಂದು ತಿಳಿಯಲ್ಲ. ಸಿಟ್ಟು ಇಳಿದ ಬಳಿಕ ಆದ ಘಟನೆಯ ಬಗ್ಗೆ ಪಶ್ಚಾತ್ತಾಪವಾದರೂ ಸಮಯ ಕೈಮೀರಿ ಹೋಗಿರುತ್ತದೆ. ಸಿಟ್ಟಿನಿಂದ ಎಂತಹ ದುರ್ಘಟನೆ ನಡೆದು ಹೋಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕೆಂಡದಂತಹ ಕೋಪ, ನಿಮ್ಮನ್ನೇ ಸುಟ್ಟು ಬಿಡಬಹುದು!
ದಂತವೈದ್ಯನಾಗಿರುವ ಉಮೇಶ್ ಬೊಬಾಲೆ ಎನ್ನುವಾತ ತನ್ನ 36ರ ಹರೆಯದ ಪತ್ನಿಯನ್ನು ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಾನೆ. ಇದಕ್ಕೂ ಮಿಗಿಲಾಗಿ ಆತ ಕೊಲೆಯ ಬಳಿಕ ಮಾಡಿದಂತಹ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ. ಪತ್ನಿಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ ಮತ್ತು ಕೊಲೆಯ ಬಳಿಕ ಏನು ಮಾಡಿದ ಎಂದು ತಿಳಿದುಕೊಳ್ಳುವ.....

ಅಪರಾಧಿ
40ರ ಹರೆಯದ ದಂತವೈದ್ಯ ಉಮೇಶ್ ಬೊಬಾಲೆ ಎನ್ನುವಾತ ತನ್ನ 4ರ ಹರೆಯದ ಮಗುವಿನ ಎದುರೇ ಪತ್ನಿಯನ್ನು ಕೊಲೆ ಮಾಡಿದ.

ಅವರಿಗೆ ಏನಾಗಿತ್ತು?
ಪತಿಪತ್ನಿ ನಡುವೆ ಕಳೆದ ಕೆಲವು ತಿಂಗಳಿಂದ ಮನಸ್ತಾಪವಿತ್ತು ಮತ್ತು ಅವರಿಬ್ಬರು ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದರು.

ಪತಿಯ ವಿರುದ್ಧ ದೂರು ನೀಡಿದ್ದಳು
ಪತ್ನಿಯು ತನ್ನ ಪತಿ ದೈಹಿಕ ಹಿಂಸೆ ನೀಡುತ್ತಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ಇದರ ಬಳಿಕ ಅವರಿಬ್ಬರು ಬೇರ್ಪಟ್ಟಿದ್ದರು.

ಮತ್ತೆ ಒಂದಾಗಿಸಲು ಕುಟುಂಬ ಹಾಗೂ ಸ್ನೇಹಿತರ ಪ್ರಯತ್ನ
ನಿಮ್ಮಿಬ್ಬರ ಮನಸ್ತಾಪವನ್ನು ಮರೆತು ಮತ್ತೆ ಜತೆಯಾಗಿ ವಾಸಿಸಬೇಕೆಂದು ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಒತ್ತಾಯಿಸಿದ್ದರು. ಆದರೆ ಅವರು ಮಾತನ್ನೇ ಕೇಳಲಿಲ್ಲ.

ಕೆಟ್ಟ ಘಟನೆ ನಡೆಯಿತು
ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಮಹಿಳೆಯು ತನ್ನ ಪತಿಯ ಜತೆ ವಾದಕ್ಕೆ ಇಳಿದಳು. ಈ ವೇಳೆ ತಾಳ್ಮೆ ಕಳೆದುಕೊಂಡ ಆತ ಕೊಲೆ ಮಾಡಿಬಿಟ್ಟ.

ಮಗುವಿನ ಎದುರೇ ಆಕೆಯನ್ನು ಇರಿದು ಕೊಂದ
ಉಮೇಶ್ ಪತ್ನಿಯ ಕಾಲುಗಳು, ಎದೆ ಮತ್ತು ಹೊಟ್ಟೆಗೆ ಹಲವಾರು ಬಾರಿ ಇರಿದ. ಇದನ್ನು ಮಗು ಕಣ್ಣಾರೇ ನೋಡುತ್ತಲೇ ಇತ್ತು. ಕೊಲೆಯ ಬಳಿಕ ಶವದ ಬಳಿಯಲ್ಲೇ ಆತ ಸುಮಾರು 3 ಗಂಟೆಗಳ ಕಾಲ ಕುಳಿತುಕೊಂಡ.

ಪೊಲೀಸರನ್ನು ತಾನೇ ಕರೆದ
ಪತ್ನಿಯ ಶವದ ಬಳಿ ಸುಮಾರು ಮೂರು ಗಂಟೆಗಳ ಕಾಲ ಕುಳಿತುಕೊಂಡ ಆತ ಪೊಲೀಸರಿಗೆ ಕರೆ ಮಾಡಿ ಶರಣಾದ. ಓಡಿ ಹೋಗದೆ ಶರಣಾಗಿರುವುದು ತುಂಬಾ ಒಳ್ಳೆಯ ವಿಚಾರವೆನ್ನಬಹುದು.



Click it and Unblock the Notifications