Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಸ್ಮಯ: ಈ ಕಾಲೇಜುಗಳಲ್ಲಿ ಪ್ರೇತಾತ್ಮಗಳದ್ದೇ ಕಾರುಬಾರು!
ನಮ್ಮ ಶಾಲಾ ದಿನಗಳನ್ನು ಕಳೆದು ಕಾಲೇಜು ಸೇರುವುದೆಂದರೆ ಅದೇನೋ ನಮಗೆ ತುಂಬಾ ಖುಷಿಯ ವಿಚಾರ. ಕಾಲೇಜು ಜೀವನ ಹಾಗಿರುತ್ತದೆ, ಹೀಗಿರುತ್ತದೆ ಎಂದು ನಮಗೆ ಹಲವಾರು ಕಥೆಗಳನ್ನು ಸೀನಿಯರ್ಗಳು ಹೇಳಿರುತ್ತಾರೆ. ಅದೇ ಗುಂಗಿನಲ್ಲಿ ನಾವು ಕನಸು ಕಾಣಲು ಆರಂಭಿಸುತ್ತೇವೆ. ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?
ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಎನ್ನುವ ಮಾತಿದೆ. ಈ ಮಾತು ನಿಜ ಎನ್ನುವುದು ಕಾಲೇಜು ಸೇರಿ ನಾವು ಸಹಪಾಠಿಗಳೊಂದಿಗೆ ಜೀವನವನ್ನು ಆನಂದಿಸಲು ಆರಂಭಿಸಿದಾಗ ತಿಳಿಯುತ್ತದೆ. ಆದರೆ ನೀವು ತೆರಳುತ್ತಿರುವ ಕಾಲೇಜು ಭಾರತದಲ್ಲಿ ಪಿಶಾಚಿಗ್ರಸ್ತ ಕಾಲೇಜುಗಳಲ್ಲಿ ಒಂದಾಗಿದೆ ಎಂದರೆ ನಿಮಗೆ ಹೇಗನಿಸಬಹುದು. ಇದನ್ನು ಕೇಳಿ ನಿಮಗೆ ಸ್ವಲ್ಪ ಆಘಾತವಾಗಬಹುದು. ಸ್ವಲ್ಪ ಸುಧಾರಿಸಿಕೊಳ್ಳಿ. ಈ ಲೇಖನದಲ್ಲಿ ನಾವು ಪ್ರೇತಾತ್ಮ ಕಾಡುವ ಕೆಲವೊಂದು ಕಾಲೇಜುಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಇದನ್ನು ಸರಿಯಾಗಿ ಓದಿಕೊಂಡು ಬಳಿಕ ನೀವು ಕಾಲೇಜು ಸೇರುವ ನಿರ್ಧಾರವನ್ನು ಮಾಡಿಕೊಳ್ಳಿ!!

ಎನ್ ಐಟಿ, ಹಮಿಪುರ
ಈ ಕಾಲೇಜಿನ ಕೈಲಾಸ್ ಹುಡುಗರ ಹಾಸ್ಟೆಲ್ ನಲ್ಲಿರುವ ಬ್ಲಾಕ್ ಸಿಯಲ್ಲಿ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಇಲ್ಲಿ ಪಿಶಾಚಿ ಕಾಟವಿದೆಯೆನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡು ರೂಮ್ ನಲ್ಲಿ ಎಷ್ಟರಮಟ್ಟಿಗೆ ಪಿಶಾಚಿ ಕಾಟವಿದೆಯೆಂದರೆ ನೀವು ಹೋಗಿ ಇಲ್ಲಿ ಬ್ಲೂ ಟೂತ್ ಆನ್ ಮಾಡಿದರೆ ಸತ್ತ ಹುಡುಗ ಎನ್ನುವ ಸಂದೇಶ ತೋರಿಸುತ್ತದೆ. ರೂಮ್ ನಿಂದ ಹೊರಬಂದ ಕೂಡಲೇ ಸಂಪರ್ಕವೂ ಕಡಿತಗೊಳ್ಳುವುದು. Image courtesy

ಮಹಿಳಾ ಕಾಲೇಜು, ಕೊಲ್ಕತ್ತಾ
ಸರ್ ವಾರೆನ್ ಹಾಸ್ಟಿಂಗ್ ತನ್ನ ಮನೆಯಾಗಿ ಈ ಕಾಲೇಜನ್ನು ಬಳಸುತ್ತಿದ್ದರು. ಆದರೆ ಈಗಲೂ ಅವರು ಅಲ್ಲೇ ಇದ್ದಾರೆ ಎನ್ನಲಾಗುತ್ತಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ವಾರೆನ್ ಹಾಸ್ಟಿಂಗ್ ಕಾಣಿಸಿಕೊಂಡಿದ್ದರು ಎಂದು ಹೆಚ್ಚಿನ ವಿದ್ಯಾರ್ಥಿಗಳು ಹೇಳಿದ್ದಾರೆ. ಲಂಚದ ಆರೋಪವನ್ನು ಎದುರಿಸಿದ್ದ ವಾರೆನ್ ಆತ್ಮವು ತನ್ನ ದಾಖಲೆಗಳನ್ನು ಹುಡುಕುತ್ತಾ ಮೆಟ್ಟಿಲುಗಳನ್ನು ಹತ್ತುತ್ತದೆ ಎನ್ನಲಾಗುತ್ತಿದೆ. Image courtesy

ಖೈರತ್ಬಾದ್ ವಿಜ್ಞಾನ ಕಾಲೇಜು, ಹೈದರಾಬಾದ್
ಈ ಕಾಲೇಜು ಮೋಡಗಳಲ್ಲಿ ಆವರಿಸಿಕೊಂಡಂತೆ ಕಾಣಿಸುವುದರಿಂದ ಇದನ್ನು ನೋಡಿದಾಗ ಯಾರಿಗೂ ಭಯ ಉಂಟಾಗಬಹುದು. ಕಾಲೇಜು ಆವರಣದಲ್ಲಿ ಹಲವಾರು ನಿಗೂಢ ಸಾವುಗಳು ಸಂಭವಿಸಿದ್ದು, ಶವಗಳನ್ನು ಸರಿಯಾಗಿ ಅಂತ್ಯಸಂಸ್ಕಾರ ಮಾಡಿಲ್ಲವೆಂದು ಹೇಳಲಾಗಿದೆ. ಕಾಲೇಜು ಆವರಣದಲ್ಲಿ ಕೂಗುವ ಸದ್ದು, ಅಸ್ಥಿಪಂಜರ ನಡೆದಾಡಿದಂತಾಗುವುದು ಮುಂತಾದವುಗಳನ್ನು ವಿದ್ಯಾರ್ಥಿಗಳು ಇಲ್ಲಿ ನೋಡಿದ್ದಾರೆ. ಇಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದಾನೆ. Image courtesy

ಕ್ರಿಶ್ಚಿಯನ್ ಕಾಲೇಜು ಮದ್ರಾಸ್
ಭಾರತದಲ್ಲಿರುವ ಪಿಶಾಚಿಗ್ರಸ್ತ ಕಾಲೇಜುಗಳಲ್ಲಿ ಇದು ಒಂದಾಗಿದೆ. ಇಲ್ಲಿನ ಕೆಮೆಸ್ಟ್ರೀ ಲ್ಯಾಬ್ ನಿಂದ ಯಾವಾಗಲೂ ವಿಚಿತ್ರ ಶಬ್ದಗಳು ಬರುತ್ತದೆ ಎನ್ನಲಾಗುತ್ತಿದೆ. ಯಾರೋ ಕೆಮಿಸ್ಟ್ರಿ ಪಾಠ ಮಾಡಿದಂತೆ ಶಬ್ದ ಕೇಳಿಬರುತ್ತದೆ. ಇಹಲೋಕ ತ್ಯಜಿಸಿದರೂ ಉಪನ್ಯಾಸಕರಿಗೆ ತನ್ನ ವಿಷಯದ ಬಗ್ಗೆ ಈಗಲೂ ಪ್ರೀತಿಯಿದ್ದು, ಖಾಲಿ ಕೋಣೆಗಳಿಗೆ ಪಾಠ ಮಾಡುತ್ತಿರಬಹುದು. Image courtesy

ಪುಣೆ ವಿಶ್ವವಿದ್ಯಾನಿಲಯ
ಇದು ಶಿಕ್ಷಣಕ್ಕೆ ಹೇಳಿ ಮಾಡಿಸಿದಂತಹ ವಿಶ್ವವಿದ್ಯಾನಿಲಯ. ಆದರೆ ಒಳಗೆ ಮಾತ್ರ ಪಿಶಾಚಿ ಕಾಟ ಇದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. 1886ರಲ್ಲಿ ಕಾಲರಾ ರೋಗದಿಂದ ಆಸ್ಟ್ರೇಲಿಯಾದ ಅಲಿಸ್ ರಿಚ್ಮೆನ್ ಎಂಬಾಕೆ ಸಾವನ್ನಪ್ಪಿದ್ದಳು. ಆಕೆಯ ಆತ್ಮ ಇಲ್ಲಿ ಕಾಡುತ್ತಿದೆ ಎಂದು ನಂಬಲಾಗಿದೆ. Image courtesy

ಎನ್ ಐಟಿ ರೌಕೆಲಾ
ಈ ಕಾಲೇಜನ್ನು ಸ್ಮಶಾನವೊಂದರಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕ್ಯಾಂಪಸ್ ನಲ್ಲಿ ಪಾತ್ರೆಗಳು ತಮ್ಮಷ್ಟಕ್ಕೆ ಬೀಳುವುದನ್ನು ನೋಡಿರುವ ವಿದ್ಯಾರ್ಥಿಗಳು ಕಾಲೇಜು ಮೈದಾನದಲ್ಲಿ ತಲೆಬುರುಡೆಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಎಲ್ಲವೂ ಸ್ಮಶಾನದ ಮಹಿಮೆ. Image courtesy

ಸೇಂಟ್ ಬೇಡೆ ಕಾಲೇಜು, ಶಿಮ್ಲಾ
ಬಾಲಿವುಡ್ ನಟಿ ಪ್ರೀತಿ ಜಿಂಟಾ ಇದೇ ಕಾಲೇಜಿನಿಂದ ಪದವಿ ಪಡೆದಿರುವ ಕಾರಣ ಈ ಕಾಲೇಜು ತುಂಬಾ ಜನಪ್ರಿಯವಾಗಿದೆ. ವಿಷಲ್ ಹಾಕುವುದು ಮತ್ತು ಇತರ ಕೆಲವೊಂದು ಶಬ್ದಗಳು ಡೈನಿಂಗ್ ಹಾಲ್ ನಿಂದ ಕೇಳಿಬರುತ್ತಿರುತ್ತದೆ. ಆದರೆ ಕಾಲೇಜು ಆಡಳಿತವು ಇದನ್ನು ನಿರಾಕರಿಸಿದೆ. Image courtesy

ಐಐಟಿ ರೂರ್ಕೆ
ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ಕಾಲೇಜು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಇಲ್ಲಿ ಪೇತಾತ್ಮದ ಕಾಟವು ಶುರುವಾಗಿದೆ ಎನ್ನಲಾಗಿದೆ. ಇದನ್ನು ಕೂಡ ಪ್ರೇತಾತ್ಮ ಕಾಡುವ ಕಾಲೇಜುಗಳ ಪಟ್ಟಿಗೆ ಸೇರಿಸಬಹುದಾಗಿದೆ. Image courtesy



Click it and Unblock the Notifications









