Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ರೈಲು ಹಳಿಗಳ ಕೆಳಗೆ ಒಡೆದ ಜಲ್ಲಿಕಲ್ಲುಗಳನ್ನೇ ಹಾಕುತ್ತಾರೆ ಏಕೆ?
ರೈಲು ಪ್ರಯಾಣ ಇಂದು ಅತ್ಯಂತ ಸಾಮಾನ್ಯವಾಗಿದೆ. ರೈಲುಹಳಿಯ ಮೇಲೆ ಯಾವುದೇ ರೈಲು ಓಡಾಡಿದರೂ, ರೈಲು ಹಳಿಗಳ ಕೆಳಗೆ ಮಾತ್ರ ಕಡ್ಡಾಯವಾಗಿ ಮಧ್ಯಮ ಗಾತ್ರದಲ್ಲಿ ಒಡೆದ ಜಲ್ಲಿಕಲ್ಲುಳಗಳನ್ನೇ ಹಾಸಿರುತ್ತಾರೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಜರಿದುಹೋಗಿದ್ದ ಕಲ್ಲುಗಳನ್ನು ಮತ್ತೆ ಸೇರಿಸುತ್ತಲೂ, ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕಲ್ಲುಗಳನ್ನು ಸೇರಿಸುತ್ತಲೂ ಇರುತ್ತಾರೆ.
ಇದನ್ನು ಗಟ್ಟಿ ಕಾಂಕ್ರೀಟಿನಿಂದ ಶಾಶ್ವತವಾಗಿಸಬಹುದಲ್ಲ, ಇಲ್ಲ, ಜಲ್ಲಿಕಲ್ಲುಗಳನ್ನೇ ಬಳಸುವುದು ಏಕೆಂದು ಗೊತ್ತೇ? ಇದಕ್ಕೆ ವೈಜ್ಞಾನಿಕವಾದ ಕಾರಣವಿದೆ. ಇಂದಿನ ಲೇಖನದಲ್ಲಿ ಜಲ್ಲಿಕಲ್ಲುಗಳನ್ನು ಬಳಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.
ಇದಕ್ಕೂ ಮೊದಲು ಜಲ್ಲಿಕಲ್ಲುಗಳಿಂದಾಗಿ ಪ್ರಾಣ ಕಳೆದುಕೊಳ್ಳುವವರ ಬಗ್ಗೆ ಅರಿತುಕೊಳ್ಳುವುದು ಅಗತ್ಯ. ಜಲ್ಲಿಕಲ್ಲುಗಳು ರೈಲುಹಳಿಗಳಿಗೆ ಸೂಕ್ತವೇ ಹೊರತು ಇದರ ಮೇಲೆ ಮನುಷ್ಯರಾಗಲೀ ಜಾನುವಾರುಗಳಾಗಲೀ ಗಟ್ಟಿನೆಲದ ಮೇಲೆ ನಡೆದಷ್ಟು ಸುಲಭವಾಗಿ ನಡೆಯಲು ಸಾಧ್ಯವಿಲ್ಲ. ಹಳಿಗಳ ಮೇಲೆ ಧಾವಿಸುತ್ತಿರುವ ರೈಲು ಥಟ್ಟನೇ ನಿಲ್ಲಲೂ ಸಾಧ್ಯವಿಲ್ಲ. ಆದ್ದರಿಂದ ರೈಲು ಹಳಿಯನ್ನು ದಾಟುವಾಗ ಅತಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

ಕಾರಣ #1
ಹಳಿಗಳ ಕೆಳಗೆ ಹಾಸುವ ಈ ಜಲ್ಲಿಕಲ್ಲುಗಳಿಗೆ ತಾಂತ್ರಿಕವಾಗಿ ಬಾಲಾಸ್ಟ್ (ballast) ಎಂದು ಕರೆಯಲಾಗುತ್ತದೆ. ರೈಲುಗಳ ಓಡಾಟಕ್ಕೆ ಈ ಕಲ್ಲುಗಳು ಅತಿ ಅಗತ್ಯವಾಗಿದೆ.

ಕಾರಣ #2
ಎರಡೂ ಕಂಬಿಗಳ ನಡುವೆ ಅಡ್ಡಲಾಗಿ ಮರದ ಅಥವಾ ಕಾಂಕ್ರೀಟಿನ ಅಡ್ಡಪಟ್ಟಿಗಳನ್ನು ರೈಲುಹಳಿಯ ಉದ್ದಕ್ಕೂ ಹಾಸಲಾಗಿರುತ್ತದೆ. ಈ ಅಡ್ಡಪಟ್ಟಿಗಳು ಸರಿಸುಮಾರು ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಭಾಗ ಜಲ್ಲಿಕಲ್ಲುಗಳ ನಡುವೆ ಹುದುಗಿರುತ್ತದೆ. ರೈಲು ಹಳಿಗಳ ಮೇಲೆ ಓಡುವಾಗ ರೈಲಿನ ಭಾರವನ್ನು ಈ ಪಟ್ಟಿಗಳು ಒಂದೇ ಸ್ಥಳದ ಮೇಲೆ ಹಾಕದೇ ಚಿಕ್ಕ ಚಿಕ್ಕ ಜಲ್ಲಿಕಲ್ಲುಗಳ ಮೂಲಕ ವಿಶಾಲ ಪ್ರದೇಶದ ಮೇಲೆ ಹರಡುತ್ತದೆ. ಅಲ್ಲದೇ ಹಳಿಗಳು ಗಟ್ಟಿಯಾಗಿ ನೆಲಕ್ಕೆ ಕಚ್ಚಿರುವಂತೆ ನೋಡಿಕೊಳ್ಳುತ್ತದೆ.

ಕಾರಣ #3
ಜಲ್ಲಿಕಲ್ಲುಗಳ ಅಂಚುಗಳು ತೀಕ್ಷ್ಣವಾಗಿದ್ದು ಮರದ ಅಥವಾ ಕಾಂಕ್ರೀಟಿನ ಪಟ್ಟಿಗಳನ್ನು ಒತ್ತಡದಲ್ಲಿ ಭದ್ರವಾಗಿ ಕಚ್ಚಿಕೊಂಡಿರಲು ನೆರವಾಗುತ್ತವೆ. ಹೀಗೆ ಹಿಡಿದುಕೊಂಡಿರಬೇಕೆಂದಲೇ ಒಡೆದ ಜಲ್ಲಿಕಲ್ಲುಗಳನ್ನೇ ಆಯ್ದುಕೊಳ್ಳಲಾಗುತ್ತದೆ.

ಕಾರಣ #4
ಹಳಿಗಳು ನೆಲಮಟ್ಟಕ್ಕಿಂತಲೂ ಕೊಂಚ ಎತ್ತರದಲ್ಲಿದ್ದರೆ ಮಾತ್ರ ಮಳೆಗಾಲದಲ್ಲಿ ಹಳಿಗಳು ನೀರಿನಿಂದ ಆವೃತವಾಗದಿರಲು ಸಾಧ್ಯ. ಆದ್ದರಿಂದ ಜಲ್ಲಿಕಲ್ಲುಗಳ ಕೆಳಗೆ ಹೆಚ್ಚಿನ ಮಣ್ಣನ್ನು ಹಾಕಿ ನೆಲಮಟ್ಟಕ್ಕಿಂತಲೂ ಕೊಂಚ ಎತ್ತರವಿರುವಂತೆ ಮಾಡಲಾಗುತ್ತದೆ.

ಕಾರಣ #5
ಹಳಿಗಳ ನಡುವೆ ಮಣ್ಣಿದ್ದರೆ ಕಳೆ ಗಿಡಗಳು ಸುಲಭವಾಗಿ ಬೆಳೆದುಬಿಡುತ್ತವೆ. ಇವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿವುದು ಹೆಚ್ಚಿನ ಖರ್ಚು ಮತ್ತು ಅನಾವಶ್ಯಕ ವಿಳಂಬಕ್ಕೆ ಕಾರಣವಾಗಬಹುದು. ಜಲ್ಲಿಕಲ್ಲುಗಳ ಮೇಲೆ ಕಳೆ ಬೆಳೆಯುವ ಸಾಧ್ಯತೆ ಕಡಿಮೆ ಇರುವುದರಿಂದ ಈ ತೊಂದರೆಯನ್ನು ತಡೆದ ಹಾಗಾಗುತ್ತದೆ.



Click it and Unblock the Notifications
