Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನಾಗರ ಪಂಚಮಿ ಬಳಿಕ ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ
ಹಿಂದೂಗಳ ಪ್ರಮುಖ ಹಬ್ಬವಾದ ನಾಗರಪಂಚಮಿ ಹಬ್ಬ ಆಗಸ್ಟ್ 21ಕ್ಕೆ ಬಂದಿದೆ, ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನ ನಾಗರ ಪಂಚಮಿಯನ್ನು ಆಚರಿಸಲಾಗುವುದು. ನಾಗರ ಪಂಚಮಿ ಹಬ್ಬ ಬಂತೆಂದರೆ ಸಾಲು-ಸಾಲು ಹಬ್ಬಗಳ ಸಂಭ್ರಮ ಶುರುವಾಗಲಿದೆ. ರಕ್ಷಾ ಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ , ನವರಾತ್ರಿ, ದಸರಾ, ದೀಪಾವಳಿ ಹೀಗೆ ಪ್ರಮುಖ ಹಬ್ಬಗಳು ಬರಲಿದೆ.

ನಾಗರ ಪಂಚಮಿ ಹಬ್ಬವನ್ನು ದೇಶದ ಎಲ್ಲಾ ಕಡೆ ಆಚರಿಸುವ ವಿಧಾನ ಒಂದೇ ರೀತಿ ಇದೆ. ಈ ದಿನ ಹಾವಿನ ಹುತ್ತಕ್ಕೆ ಹಾಲೆರೆದು, ಹಾವಿನ ಮೂರ್ತಿಗಳನ್ನು ಪೂಜಿಸಿ ನಾಗದೇವನ ಆಶೀರ್ವಾದ ಕೋರಲಾಗುವುದು. ಈ ದಿನದಂದು ಶೇಷನಾಗ ಹಾಗೂ ಶ್ರೀವಿಷ್ಣುವನ್ನು ಭಕ್ತಿಯಿಂದ ಆರಾಧಿಸಲಾಗುವುದು.
ಈ ಹಬ್ಬದ ಹಿನ್ನೆಲೆಯ ವಿಶೇಷತೆ ನೋಡುವುದಾರೆ
ಮಳೆಗಾಲದಲ್ಲಿ ಹಾವುಗಳು ಹುತ್ತವನ್ನು ಸೇರಿರುತ್ತದೆ, ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಮಾಡಲಾಗುವುದು, ಈ ಸಮಯದಲ್ಲಿ ನಮಗೇನೂ ತೊಂದರೆ ಮಾಡಬೇಡ ಎಂದು ಕೋರಿ ಹಾವಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಭಕ್ತಿಗೆ ಶಕ್ತಿಯಿದೆ ಎಂಬುವುದನ್ನು ತಳ್ಳಿ ಹಾಕುವಂತಿಲ್ಲ.. ಮೂಕ ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದಿದ್ದರೆ ಅವು ಕೂಡ ಏನೂ ತೊಂದರೆ ಮಾಡುವುದಿಲ್ಲ, ಹಾವನ್ನು ಪೂಜಿಸಿದರೆ ಪೂಜಾ ಭಾವನೆಯಿಂದ ಮನುಷ್ಯರು ಅದರ ಮೇಲೆ ದಾಳಿ ಮಾಡುವುದು ಕೂಡ ಕಡಿಮೆಯಾಗುವುದು, ಈ ಉದ್ದೇಶದಿಂದ ನಾಗರ ಪಂಚಮಿ ಆಚರಣೆಯನ್ನು ನಮ್ಮ ಪೂರ್ವಜರು ಪ್ರಾರಂಭಿಸಿರಬಹುದು ಅಲ್ವಾ? ಏನೇ ಆಗಲಿ ಈ ಹಬ್ಬ ನಮಗೆ ಸಂತೋಷವನ್ನು ಹೊತ್ತು ಬರುವುದಂತು ನಿಜ. ಈ ನಾಗರ ಪಂಚಮಿ ಹಬ್ಬ ಎಲ್ಲರಿಗೂ ಒಳಿತು ಮಾಡಲಿ, ಜ್ಯೋತಿಷ್ಯ ಪ್ರಕಾರ ಈ ನಾಗ ಪಂಚಮಿ ಬಳಿಕ ಈ ರಾಶಿಯವರಿಗೆ ಶುಭ ಸಮಯ:
ಮೇಷ ರಾಶಿ
ಮೇಷ ರಾಶಿಯವರ ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ವ್ಯಾಪಾರಸ್ಥರು ಉತ್ತಮ ಲಾಭ ಪಡೆಯುವಿರಿ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವ್ಯಾಪಾರ ವಿಸ್ತರಿಸಲಿದೆ.
ವೃಶ್ಚಿಕ ರಾಶಿ
ನೀವು ಏನಾದರೂ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ನಾಗರಪಂಚಮಿ ಉತ್ತಮ ದಿನವಾಗಿರುತ್ತದೆ. ನೀವು ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ವ್ಯಾಪಾರಸ್ಥರಿಗೆ ತುಂಬಾ ಒಳ್ಳೆಯದಿದೆ.
ಧನು ರಾಶಿ
ಈ ದಿನವು ಧನು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ನೀವು ಹಣ ಗಳಿಸುವ ಅವಕಾಶಗಳನ್ನು ಪಡೆಯುತ್ತೀರಿ. ಹೂಡಿಕೆಯಿಂದಲೂ ಲಾಭವಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.
ಮಕರ ರಾಶಿ
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ನಾಗರ ಪಂಚಮಿ ಬಳಿಕ ಪೂರ್ಣಗೊಳ್ಳಲಿವೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಆದಾಯ ಹೆಚ್ಚಾಗಲಿದೆ.
ಕುಂಭ ರಾಶಿ
ನೀವು ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ, ನಿಮ್ಮ ಸಂಪತ್ತು ವೃದ್ಧಿಸಲಿದೆ. ಮದುವೆಯ ಮಾತುಕತೆಗಳು ಯಶಸ್ವಿಯಾಗಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ.



Click it and Unblock the Notifications











