Latest Updates
-
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ! -
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ!
ಕುಂಭಮೇಳಕ್ಕೆ ಹೋಗಿಲ್ವಾ? ಚಿಂತೆ ಬಿಡಿ ₹500 ನೀಡಿ ಮನೆಯಲ್ಲೇ ಕುಳಿತು ಫೋಟೋ ಸ್ನಾನದಿಂದ ಪುಣ್ಯ ಸಂಪಾದಿಸಿ!
ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನವಾಗಿರುವ ಮಹಾ ಕುಂಭಮೇಳೆ ಇನ್ನೇನು ಕೆಲವೇ ದಿನದಲ್ಲಿ ಮುಗಿಯಲಿದೆ. 144 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕುಂಭ ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಯಿಂದಲೂ ಕೋಟಿ ಕೋಟಿ ಭಕ್ತರು ಪ್ರಯಾಗ್ರಾಜ್ಗೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಕೋಟಿ ಕೋಟಿ ಜನರು ನದಿ ತೀರಕ್ಕೆ ತೆರಳಿದ್ದಾರೆ. ನಿತ್ಯವೂ ಭಕ್ತರ ಸಂಖ್ಯೆ ಕೋಟಿ ದಾಟುತ್ತಿದೆ. ಹೀಗಾಗಿ ಇದೊಂದು ವಿಶ್ವದಾಖಲೆ ಬರೆಯುತ್ತಿದೆ.
ಇನ್ನು ವಿದೇಶಗಳಿಂದಲೂ ಕೂಡ ಭಕ್ತರು ಆಗಮಿಸುವುದು ನೋಡಬಹುದು. ಹಾಗೆ ಭಾರತದಲ್ಲೂ ಅದೆಷ್ಟೋ ಮಂದಿ ಇಲ್ಲಿಗೆ ತೆರಳಬೇಕು ಎಂಬ ಮಹದಾಸೆ ಇಟ್ಟುಕೊಂಡಿರುತ್ತಾರೆ, ಅದರಲ್ಲೂ ಈ ಮಹಾ ಕುಂಭ 144 ವರ್ಷಕ್ಕೊಮ್ಮೆ ನಡೆಯುವುದರಿಂದ ಎಲ್ಲರು ಒಮ್ಮೆಯಾದರು ಭಾಗಿಯಾಗಬೇಕು ಅಂದುಕೊಳ್ಳುತ್ತಾರೆ. ಆದ್ರೆ ಅದು ಸುಲಭದ ಮಾತಲ್ಲ. ಕೋಟಿ ಕೋಟಿ ಭಕ್ತರ ನಡುವೆ ಪ್ರಯಾಗ್ರಾಜ್ ತಲುಪುವುದು ಕೂಡ ಸಾಹಸವೇ ಸರಿ.

ಹೀಗಾಗಿ ಸರ್ಕಾರ ವಿಶೇಷ ರೈಲುಗಳು, ಸಂಚಾರಕ್ಕೆ ಅನುಗುಣವಾದ ಸೌಲಭ್ಯಗಳ ಮಾಡಿರುತ್ತದೆ. ಆದರೂ ಕೆಲವರಿಗೆ ಪ್ರಯಾಗ್ರಾಜ್ ಕನಸಾಗಿ ಉಳಿಯುತ್ತದೆ. ಆದ್ರೆ ನೀವೇನಾದರು ಕುಂಭ ಮೇಳಕ್ಕೆ ತೆರಳುವ ಕನಸು ಹೊತ್ತಿದ್ದರೆ ಇನ್ನು ಕೂಡ ಸಮಯವಿದೆ. ಆದ್ರೆ ನಿಮಗೆ ಹೋಗಲು ಸಾಧ್ಯವಿಲ್ಲ ಅಂದರೂ ನಿಮಗಾಗಿ ಹೊಸದಂದು ಯೋಜನೆ ಇದೆ.
ನೀವು ತ್ರಿವೇಣಿ ಸಂಗಮನದಲ್ಲಿ ಸ್ನಾನ ಮಾಡುವ ಕನಸು ಹೊತ್ತಿದ್ದರು ಅದರ ಪುಣ್ಯ ಪಡೆಯಬೇಕು ಎಂದುಕೊಂಡಿದ್ದರೆ ಮನೆಯಲ್ಲೇ ಕುಳಿತು ಪುಣ್ಯ ಪಡೆಯಬಹುದು. ನಿಮಗೆ ಅಚ್ಚರಿ ಎನಿಸಬಹುದು. ಕೇವಲ 500 ರೂಪಾಯಿ ನೀಡಿದರೆ ತ್ರಿವೇಣಿ ಸಂಗಮದಲ್ಲಿನ ಸ್ನಾನದ ಫೋಟೋ ನಿಮ್ಮ ಮನೆಗೆ ಬರುತ್ತೆ. ನಿಮ್ಮ ಫೋಟೊವನ್ನು ಬಳಸಿ ನೀವು ತ್ರಿವೇಣಿ ಸಂಗಮನದಲ್ಲಿ ಸ್ನಾನ ಮಾಡುತ್ತಿರುವಂತೆ ಫೋಟೋವನ್ನು ಕಳುಹಿಸಲಾಗುತ್ತದೆ.
ಇಂತಹ ವಿನೂತನ ಐಡಿಯಾ ಇರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಮ್ಮ ಫೋಟೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ ಸಾಕು. ನೀವು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿರುವ ಫೋಟೋ ನಿಮ್ಮ ಕೈ ಸೇರಲಿದೆ. ಈ ಮೂಲಕವೂ ನೀವು ಆತ್ಮ ಶುದ್ಧಿಯಿಂದ ಪುಣ್ಯ ಸಂಪಾದಿಸಬಹುದು ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಆನ್ಲೈನ್ನಲ್ಲಿ 500 ರೂಪಾಯಿ ಪೇಮೆಂಟ್ ಮಾಡಿ ಅವರಿಗೆ ಸ್ಕೀನ್ ಶಾಟ್ ಕಳುಹಿಸಿ ನಿಮ್ಮ ಫೋಟೋ ಹಾಕಿದರೆ ಮನೆಗೆ ನಿಮ್ಮ ಫೋಟೋ ಬರಲಿದೆ. ಹಾಗೆ ಫೋಟೋ ಜೊತೆಗೆ ಪುಣ್ಯವೂ ನೀವು ಕುಳಿತಲ್ಲಿಯೇ ಬರಲಿದೆ.
ಈ ಪೋಸ್ಟ್ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ. ಈ ಜಾಹಿರಾತು ನೀಡಿದ್ದು ಯಾರು? ಅವರ ಆಲೋಚನೆಗೆ ಸರಿ ಎನ್ನಬೇಕೋ ಅಥವಾ ಇದೊಂದು ವ್ಯಾಪಾರ ಎನ್ನಬೇಕೋ ಎಂದು ತಿಳಿಯದೆ ಬಳಕೆದಾರರು ಕೂಡ ಗೊಂದಲಕ್ಕೆ ಸಿಲುಕಿದ್ದಾರೆ. ಮತ್ತೆ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಕುಳಿತಲ್ಲೇ ಪುಣ್ಯ ಸಂಪಾದಿಸುವ ಈ ಮಾರ್ಗವನ್ನ ಕಂಡು ಅಚ್ಚರಿ ಹೊರಹಾಕಿದ್ದಾರೆ.
ತ್ರಿವೇಣಿ ಸಂಗಮಕ್ಕೆ ಬಂದು ಅಲ್ಲಿ ಸ್ನಾನ ಮಾಡಿ ವಾಪಾಸು ತೆರಳಲು ನಿಮಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತೆ. ಆದ್ರೆ ಇಲ್ಲಿ ಬರಿ 500 ರೂಪಾಯಿಗೆ ಸುಲಭವಾಗಿ ಮನೆಯಲ್ಲೇ ಕುಳಿತು ಪುಣ್ಯ ಪಡೆಯಬಹುದು ಎಂದು ಹೇಳಲಾಗಿದೆ. ಇದೊಂದು ಡಿಜಿಟಲ್ ಇಂಡಿಯಾಗೆ ಸಾಕ್ಷಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈವರೆಗೆ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ನು ಇದರಲ್ಲೇ ಒಂದಿಷ್ಟು ಮಂದಿ ಈ ಫೋಟೋ ಕಾಪಿ ತರಿಸಿಕೊಂಡಿರಬಹುದು.



Click it and Unblock the Notifications