Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದೇಶ ಕಾಯುವ ಸೈನಿಕನ ಜೊತೆ ಕೊಹ್ಲಿ ನಡೆದುಕೊಂಡ ರೀತಿ ಸರಿಯೇ? ಕೊಹ್ಲಿಯ ಅಭಿಮಾನಿಗಳೇ ಇದು ಬೇಡವಾಗಿತ್ತು ಅಂತಿದ್ದಾರೆ
ಇವರುಗಳಲ್ಲಿ ನಿಮ್ಮ ಪ್ರಕಾರ ರಿಯಲ್ ಸೂಪರ್ ಹೀರೋ ಯಾರು?
ಸೈನಿಕ
ಕ್ರಿಕೆಟಿಗ
ಸಿನಿಮಾ ಸೆಲೆಬ್ರಿಟಿಗಳು
ಹೀಗೆ ಪ್ರಶ್ನೆ ಕೇಳಿದರೆ ಎಲ್ಲರೂ ಸೈನಿಕ ಎಂದು ಹೇಳುತ್ತೇವೆ, ಸೈನಿಕರ ಬಗ್ಗೆ ದೊಡ್ಡ-ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ಆ ಸೈನಿಕನಿಗೆ ನಾವು ನಿಜವಾಗಿಯೂ ಬೇರೆ ಸೆಲೆಬ್ರಿಟಿಗಳಿಗೆ ನೀಡುವ ಸೌಕರ್ಯವಾಗಲಿ, ಗೌರವಾಗಲಿ ನೀಡ್ತಾ ಇದ್ದೀವಾ? ಎಂದು ಕೇಳಿದರೆ ಅದಕ್ಕೆ ಉತ್ತರವೇಈಗ ವೈರಲ್ ಆಗುತ್ತಿರುವ ವೀಡಿಯೋ.

ಕೊಹ್ಲಿ ನಡೆದುಕೊಂಡ ರೀತಿ ಸರಿಯೇ?
ಕೊಹ್ಲಿ ಎಂದರೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ದೊಡ್ಡ ಕ್ರಿಕೆಟಿಗ. ಕ್ರಿಕೆಟ್ ಜಗತ್ತಿನ ತಾರೆ ಎಲ್ಲವೂ ಸರಿಯೇ ಆದರೆ ಇವರು ದೇಶಕ್ಕಾಗಿ ಕ್ರಿಕೆಟ್ ಆಡುತ್ತಾರೆ ನಿಜ ಆದರೆ ಪ್ರಾಣವನ್ನು ಮುಡಿಪಾಗಿ ಇಟ್ಟಿದಾರೆಯೇ ಇಲ್ಲ, ಯಾವ ಕ್ಷಣದಲ್ಲಿ ಏನು ಬೇಕಾದರು ನಡೆಯಬಹುದು, ಮರು ಕ್ಷಣ ತನ್ನ ಪ್ರಾಣಕ್ಕೆ ಗ್ಯಾರಂಟಿ ಇರಲ್ಲ, ಆದರೂ ಕೊನೆಯುಸಿರು ಇರುವವರೆಗೆ ದೇಶಕ್ಕಾಗಿ ಇರುವವರು ಸೈನಿಕರು. ಕೊಹ್ಲಿ ಸೈನಿಕರೊಬ್ಬರು ಒಂದು ಸೆಲ್ಫಿ ಕೇಳಿದಾಗ ನಿರಾಕರಿಸಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಲ್ಲಿ ಒಂದು ಸೆಕೆಂಡ್ ಒಂದು ಸೆಲ್ಫಿಗೆ ನಿಂತರೆ ಕೊಹ್ಲಿ ಕಳೆದುಕೊಳ್ಳುವಂಥದ್ದೂ ಏನೂ ಇರಲಿಲ್ಲ, ಕೊಹ್ಲಿಯ ಭದ್ರತೆಗೆ ಬಂದಿದ್ದ ಸೈನಿಕ, ಅವರ ಜೊತೆ ಸೆಲ್ಫಿಗೆ ನಿರಾಕರಣೆ ಮಾಡುವ ಮೂಲಕ ದೇಶದ ಜನತೆಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಕಿಂಗ್ ಕೊಹ್ಲಿ.
विराट कोहली को इतना घमंड नहीं करना चाहिए, आर्मी रक्षा करती है ,
— sunilpathak (@sunilpathakram) January 21, 2025
आप सिर्फ क्रिकेट खेलते हो| pic.twitter.com/fHWAESoTKt
ಕ್ರಿಕೆಟ್ ಆಟಗಾರರು ಆಡಲ್ಲ ಅಂದರೂ ದೇಶಕ್ಕೇನು ನಷ್ಟವಿಲ್ಲ, ಅದೇ ಸೈನಿಕರು ನಾವು ನಮ್ಮ ಪ್ರಾಣದ ಬಲಿದಾನಕ್ಕೆ ಸಿದ್ಧರಿಲ್ಲ ಎಂದರೆ ದೇಶಕ್ಕೆ ರಕ್ಷಣೆ ಇದೆಯೇ?
ಇಂದು ನಮ್ಮ ದೇಶ ಇಷ್ಟೊಂದು ಸುರಕ್ಷತೆವಾಗಿದೆ, ನಾವೆಲ್ಲಾ ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ಪ್ರತಿ ಒಬ್ಬೊಬ್ಬ ಸೈನಿಕರ ಶ್ರಮ, ಬಲಿದಾನ ಕಾರಣವಾಗಿದೆ, ಇಂದು ನಾವೆಲ್ಲಾ ನಮ್ಮ ಮನೆಯಲ್ಲಿ ಬೆಚ್ಚಗೆ ಮಲಗಿರಲು ಗಡಿಯಲ್ಲಿ ಕೊರೆಯುವ ಚಳಿಯಲ್ಲಿ, ತನ್ನ ಕುಟುಂಬವನ್ನೆಲ್ಲಾ ಬಿfಟು ಯೋದರು ದೇಶದ ರಕ್ಷಣೆ ಮಾಡ್ತಾ ಇರುತ್ತಾರೆ. ಸಂಬಳ ಸಿಗುತ್ತೆ ಅಂತ ಅವರು ಅಷ್ಟು ಶ್ರಮ ಪಡುತ್ತಿಲ್ಲ, ಅಲ್ಲಿ ಸಿಗುವ ಸಂಬಳ ಅವರಿಗೆ ತಮ್ಮ-ತಮ್ಮ ಊರಿನಲ್ಲಿಯೇ ದುಡಿಯಬಹುದು, ಆದರೆ ಅವರು ತಮ್ಮೆಲ್ಲಾ ಪ್ರಾಮುಖ್ಯತೆ ಬದಿಗೊತ್ತಿ ದೇಶದ ರಕ್ಷಣೆ ಮಾಡ್ತಾ ಇದ್ದಾರೆ ಎಂದರೆ ಅದು ಅವರು ದೇಶದ ಮೇಲಿಟ್ಟಿರುವ ಪ್ರೀತಿ ಅಲ್ಲದೆ ಸೇನೆಯ ಜವಾಬ್ದಾರಿಯನ್ನು ಅರಿತಿರುವ ರೀತಿ. ಇದಕ್ಕೆ ಪ್ರತಿಯೊಬ್ಬ ಭಾರತೀಯನು ಗೌರವ ಸೂಚಿಸಲೇಬೇಕಾಗಿದೆ.
ಈ ವೈರಲ್ ವೀಡಿಯೋ ಮುಂಬೈಯದು ಎನ್ನಲಾಗುತ್ತಿದೆ
ವಿರಾಟ್ ಕೊಹ್ಲಿ ಕಾರಿನಿಂದ ಇಳಿದು ಬಂದು ಒಂದು ಕಡೆ ನಿಂತಿರುತ್ತಾರೆ, ಆವಾಗ ಅಲ್ಲಿಯೇ ಇದ್ದ ಸೈನಿಕರೊಬ್ಬರು ಒಂದು ಸೆಲ್ಫಿ ಕೇಳುತ್ತಾರೆ, ಅದಕ್ಕೆ ವಿರಾಟ್ ಕೊಹ್ಲಿ ಸ್ವಲ್ಪ ಅಹಂಕಾರದಿಂದಲೇ ತಿರಸ್ಕರಿಸಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಎಲ್ಲಿಗೋ ಧಾವಂತದಿಂದ ಸಾಗುತ್ತಿದ್ದರೆ ಒಕೆ, ಆ ವೀಡಿಯೋದಲ್ಲಿ ಕಾಣಬಹುದು ಅಲ್ಲಿ ಒಂದು ಸೆಕಂಡ್ ಸೆಲ್ಫಿಗೆ ಪೋಸ್ ನೀಡುವಷ್ಟು ಸಮಯವಿತ್ತು.
ಜನರ ಮೈಂಡ್ಸೆಟ್ ಬದಲಾಗಬೇಕಾಗಿದೆ
ಎಲ್ಲರೂ ಅವರವರ ವೃತ್ತಿ ಮಾಡ್ತಾ ಇರ್ತಾರೆ, ಹಾಗಾಗಿ ಸೆಲೆಬ್ರಿಟಿಗಳೆಂದರೆ ಅವರೇನೋ ದೇವಲೋಕದವರು ಎಂಬ ಭಾವನೆ ಬಿಡಿ, ಅಲ್ಲದೆ ಅವರಿಗೆ ಅವರದ್ದೇ ಬದುಕು ಕೂಡ ಇರುತ್ತದೆ, ಹೊರಗಡೆ ನಮ್ಮಂತೆ ಮುಕ್ತವಾಗಿ ಓಡಾಡುವ ಆಸೆಯೂ ಇರುತ್ತದೆ, ಹೆಜ್ಜೆ-ಹೆಜ್ಜೆಗೆ ಸೆಲ್ಫಿ ಅಂತ ಮುಗಿ ಬೀಳಬೇಡಿ, ಅವರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾಗ ಒಂದು ಫೋಟೋಗೆ ಕೇಳಿದರೆ ತೊಂದರೆಯಿಲ್ಲ, ಅವರು ಯಾವುದೋ ಧಾವಂತದಲ್ಲಿ ಓಡುವಾಗ ನಾವು ಸೆಲ್ಫಿ ಅಂತ ಮುಗಿ ಬೀಳುವುದನ್ನು ಬಿಡಬೇಕು, ಅಲ್ವಾ?



Click it and Unblock the Notifications











