Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣೇಶನನನ್ನು ವಿಸರ್ಜನೆ ಮಾಡುವುದೇಕೆ? ಇದರ ಹಿಂದಿರುವ 3 ಪ್ರಮುಖ ಕಾರಣಗಳೇನು?
ಗಣೇಶ ಚತುರ್ಥಿಯಂದು ಗಣೇಶನ ಪ್ರತಿಷ್ಠಾಪನೆ ಮಾಡಿ ನಂತರ ವಿಸರ್ಜನೆ ಮಾಡಲಾಗುವುದು. ಕೆಲವರು ಪ್ರತಿಷ್ಠಾಪನೆ ಮಾಡಿದ ದಿನದಂದೇ ವಿಸರ್ಜನೆ ಮಾಡಿದರೆ ಇನ್ನು ಕೆಲವರು 3, 7, 10ನೇ ದಿನಕ್ಕೆ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ಏಕೆ ನೀರಿನಲ್ಲಿ ವಿಸರ್ಜನೆ ಮಾಡಬೇಕು ಇದರ ಹಿಂದಿರುವ ಕಾರಣವೇನು ಎಂದು ನೋಡುವುದಾರೆ, ದಾರ್ಮಿಕ ಕಾರಣದ ಜೊತೆಗೆ ಇದರಿಂದ ಪರಿಸರಕ್ಕೂ ಕೆಲವೊಂದು ಗುಣಗಳಿವೆ ( ಪ್ಲಾಸ್ಟರ್ ಆಫ್ ಪ್ಯಾರೀಸ್ನ ಮೂರ್ತಿಗಳಲ್ಲ).
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಪರಿಸರಕ್ಕೆ ಹಾನಿಕಾರಕ. ಯಾವತ್ತಿಗೂ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು, ಆವಾಗ ಮಾತ್ರ ಗಣೇಶನಿಗೂ ಇಷ್ಟವಾಗುವುದು. ನಾವು ಪರಿಸರಕ್ಕೆ ಹಾನಿಯುಂಟಾಗುವ ಗಣೇಶನ ಮೂರ್ತಿಗಳನ್ನು ಬಳಸುವುದು ಒಳ್ಳೆಯದಲ್ಲ. ಜೇಡಿಮಣ್ಣಿನಿಂದ ಮಾಡಿದ ಗಣೇಶನನ್ನು ಬಳಸಿ.
ಗಣೇಶ ಚತುರ್ಥಿಗೆ ಬಳಸಿದ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಲಾಗುವುದು. ಏಕೆ ಗಣೇಶನನ್ನು ವಿಸರ್ಜನೆ ಮಾಡಬೇಕು, ಇದರ ಹಿಂದಿರುವ ಕಾರಣಗಳೇನು ಎಂದು ನೋಡೋಣ ಬನ್ನಿ:

1. ಧಾರ್ಮಿಕ ಕಾರಣ
ಗಣೇಶನನ್ನು ಮನೆಗೆ ತರುವ ತುಂಬಾನೇ ಸಂತೋಷ-ಸಂಭ್ರಮದಿಂದ ತರುತ್ತೇವೆ, ಆದರೆ ಬೀಳ್ಗೊಡುವಾಗ ತುಂಬಾನೇ ದುಃಖವಾಗುತ್ತದೆ, ನೀರು ಅನಂತದ ಸಂಕೇತ, ಸಮುದ್ರಕ್ಕೆ ಕೊನೆಯಿಲ್ಲ, ಆದ್ದರಿಂದ ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ನೀರಿನಲ್ಲಿ ಮುಳುಗಿಸಿದ ಮೇಲೆ ಗಣೇಶ ಸ್ವರ್ಗದ ಕಡೆಗೆ ಹೋಗುತ್ತಾನೆ ಎಂದು ಹೇಳಲಾಗಿದೆ. ಅಲ್ಲದೆ ಈ ಆಚರಣೆಯು ಹುಟ್ಟು-ಜೀವನ-ಮರಣದ ಚಕ್ರವನ್ನು ಕೂಡ ಸೂಚಿಸುತ್ತದೆ. ಉತ್ತರ ಪೂಜೆಯನ್ನು ಮಾಡಿದ ಬಳಿಕ ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುವುದು.
2. ಗಣೇಶ ಚತುರ್ಥಿಯೆಂಬುವುದು ಬರೀ ಹಿಂದೂಗಳ ಆಚರಣೆಯಲ್ಲ, ಈ ಆಚರಣೆಗೂ ಪ್ರಕೃತಿಗೂ ಸಂಬಂಧವಿದೆ.
ಮಳೆಗಾಲದಲ್ಲಿ ಕೆರೆ, ಕೊಳ ಅಥವಾ ಇತರ ನೀರಿನ ಮೂಲಗಳಿಂದ ಹಳೆಯ ಜೇಡಿಮಣ್ಣು ತೆಗೆಯಬೇಕು. ಈ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ಮಾಡಲಾಗುವುದು. ಗಣೇಶನ ವುಸರ್ಜನೆ ಮಾಡುವ ಸಮಯದಲ್ಲಿ ದೊಡ್ಡ ಮಳೆಗಾಲ ಮುಗಿದಿರುತ್ತದೆ, ಈ ಅವಧಿಯಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು. ಗಣೇಶ ಮೂರ್ತಿಗೆ ಅರಿಶಿಣ ಹಚ್ಚಲಾಗಿರುತ್ತದೆ, ಹೂಗಳಿಂದ ಅಲಂಕಾರ ಮಾಡಲಾಗಿರುತ್ತದೆ. ನಾವು ಗಣೇಶ ಮೂರ್ತಿಯನ್ನು ನೀರಿನಲ್ಲಿ ಬಿಟ್ಟಾಗ ಹೂಗಳು, ಅರಿಶಿಣ ಇವುಗಳಲ್ಲಿರುವ ಔಷಧೀಯ ಗುಣಗಳು ಜಲಚರ ಪ್ರಾಣಿಗಳಿಗೆ ಸಿಗುತ್ತದೆ.
ಆದ್ದರಿಂದ ನೀವು ಗಣೇಶ ಮೂರ್ತಿಗಳಿಗೆ ರಾಸಾಯನಿಕ ಬಳಸಬೇಡಿ, ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಬಳಸಬೇಡಿ ಎಂದು ಹೇಳಲಾಗುವುದು.
3. ಪೂಜಿಸಿದ ಗಣೇಶನ ಮೂರ್ತಿಯನ್ನು ಮತ್ತೆ ಬಳಸಬಾರದು
ಈ ವರ್ಷ ಬಳಸಿದ ಗಣೇಶನ ಮೂರ್ತಿಯನ್ನು ಮುಂದಿನ ವರ್ಷ ಬಳಸಬಾರದು ಈ ಕಾರಣದಿಂದ ಕೂಡ ಗಣೇಶನ ಮೂರ್ತಿಗಳನ್ನು ಬಳಸಬಾರದು.



Click it and Unblock the Notifications