Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣೇಶ ವಿಸರ್ಜನೆಗೂ ಮುನ್ನ ಈ ಒಂದು ಕೆಲಸ ಮಾಡಿ! ಮನೆಯಲ್ಲಿ ಸುಖ-ಸಮೃದ್ಧಿ ತುಂಬುತ್ತೆ
ಗಣೇಶ ವಿಸರ್ಜನೆಗೂ ಮುನ್ನ ಈ ಕಾರ್ಯ ಮಾಡಿ, ಮನೆಯಲ್ಲಿ ತುಂಬಲಿದೆ ಸುಖ-ಸಮೃದ್ಧಿ! ಹೌದು, ಗಣೇಶ ವಿಸರ್ಜನೆ (Ganesh Visarjan 2025) ಎಂದರೆ ಕೇವಲ ಮೂರ್ತಿ ನೀರಿನಲ್ಲಿ ಮುಳುಗಿಸುವುದಲ್ಲ, ಅದು ಸಂಸ್ಕಾರ, ಕೃತಜ್ಞತೆ ಮತ್ತು ಭಕ್ತಿಯ ಸಂಕೇತ. ಶಾಸ್ತ್ರದಲ್ಲಿ ಹೇಳಿರುವಂತೆ, ವಿಸರ್ಜನೆಗೂ ಮುನ್ನ ಈ ರೀತಿಯ ಸರಳ ಆಚರಣೆ ಮಾಡಿದರೆ, ಮನೆಯಲ್ಲಿ ಐಶ್ವರ್ಯ ಮತ್ತು ಸಮೃದ್ಧಿ ನೆಲೆಸುತ್ತದೆ. ಹೀಗಾಗಿ, ಬಪ್ಪನಿಗೆ ವಿದಾಯ ಹೇಳುವ ಮೊದಲು ಈ ಸಂಪ್ರದಾಯವನ್ನು ಪಾಲಿಸುವುದು ನಿಜಕ್ಕೂ ಮನೆಗೆ ಶಾಂತಿ-ಸಮೃದ್ಧಿಯನ್ನು ತರುವ ಪವಿತ್ರ ಆಚರಣೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗಣೇಶ ಚತುರ್ಥಿ ಹಬ್ಬದ (Ganesh Chaturthi) ಸಂಭ್ರಮ ಮನೆಮಾಡಿದೆ. ಪ್ರತಿಯೊಬ್ಬರ ಮನೆ ಮತ್ತು ಬೀದಿ ಬೀದಿಗಳಲ್ಲಿ ಗಣೇಶನನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಭಕ್ತರು ತಮ್ಮ ಪ್ರೀತಿಯ ಬಪ್ಪನಿಗೆ ವಿವಿಧ ಪೂಜೆ ಮತ್ತು ನೈವೇದ್ಯಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸುತ್ತಿದ್ದಾರೆ. ಮೂರು, ಐದು ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಗಣೇಶ ವಿಸರ್ಜನೆಯ ಸಮಯದಲ್ಲಿ ಶಾಸ್ತ್ರಗಳ ಪ್ರಕಾರ ಕೆಲವು ಸಂಪ್ರದಾಯಗಳನ್ನು ಪಾಲಿಸುವುದು ಬಹಳ ಮುಖ್ಯ. ಅಂತಹ ಒಂದು ವಿಶೇಷ ಸಂಪ್ರದಾಯವೆಂದರೆ, ಗಣಪತಿ ವಿಸರ್ಜನೆಗೆ ಮುನ್ನ ಮನೆಯ ಗೋಡೆಗೆ ಅರಿಶಿನ ಮತ್ತು ಕುಂಕುಮ ಹಚ್ಚುವುದು. ಈ ಸಂಪ್ರದಾಯದ ಹಿಂದಿನ ಧಾರ್ಮಿಕ ಮಹತ್ವವೇನು ಎಂಬುದನ್ನು ತಿಳಿಯಿರಿ.

ಗಣಪತಿ ವಿಸರ್ಜನೆಗೂ ಮುನ್ನ ಈ ಕೆಲಸ ಮಾಡಿ
ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಗಣಪತಿಯನ್ನು ಮನೆಗೆ ಬರಮಾಡಿಕೊಂಡಾಗ, ಪೂರ್ಣ ವಿಧಿ ವಿಧಾನಗಳೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಗಣಪತಿಯನ್ನು ಸಂತುಷ್ಟಗೊಳಿಸಲು ವಿವಿಧ ಪೂಜೆಗಳು ಮತ್ತು ನೈವೇದ್ಯಗಳನ್ನು ಸಮರ್ಪಿಸಲಾಗುತ್ತದೆ. ಭಕ್ತರ ಸೇವಾಭಾವದಿಂದ ಸಂತುಷ್ಟರಾದ ಗಣಪತಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಆದರೆ, ಗಣಪತಿಯನ್ನು ವಿಸರ್ಜನೆ ಮಾಡುವ ಮೊದಲು, ಒಂದು ಪ್ರಮುಖ ಕೆಲಸ ಮಾಡಬೇಕು.
ಗಣೇಶ ಮೂರ್ತಿಯನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವ ಮೊದಲು, ಆ ಮೂರ್ತಿಯನ್ನು ಇರಿಸಿದ್ದ ಸ್ಥಳದ ಹಿಂದಿರುವ ಗೋಡೆಗೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಬೇಕು. ಗೋಡೆಯ ಒಂದು ಬದಿಯಲ್ಲಿ ಅರಿಶಿನವನ್ನು ಮತ್ತು ಇನ್ನೊಂದು ಬದಿಯಲ್ಲಿ ಕುಂಕುಮವನ್ನು ಹಚ್ಚಿ ಇದನ್ನು ಸಂಕೇತಿಕವಾಗಿ ಸೂಚಿಸಲಾಗುತ್ತದೆ. ಈ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಈ ಸಂಪ್ರದಾಯದ ಹಿಂದಿನ ನಂಬಿಕೆ
ಶಾಸ್ತ್ರಗಳ ಪ್ರಕಾರ, ಭಕ್ತರ ಮನೆಗೆ ಗಣೇಶನು ತನ್ನ ಪತ್ನಿಯರಾದ ರಿಧಿ (ಸಮೃದ್ಧಿ) ಮತ್ತು ಸಿದ್ಧಿ (ಯಶಸ್ಸು) ಯೊಂದಿಗೆ ಆಗಮಿಸುತ್ತಾನೆ. ಗಣಪತಿ ವಿಸರ್ಜನೆಯಾದಾಗ, ಆತನು ತನ್ನ ಮೂಲ ಸ್ಥಾನಕ್ಕೆ ಹಿಂತಿರುಗುತ್ತಾನೆ. ಆದರೆ, ಮನೆಯಲ್ಲಿದ್ದ ರಿಧಿ ಮತ್ತು ಸಿದ್ಧಿಯನ್ನು ಕೂಡ ಕರೆದುಕೊಂಡು ಹೋಗಬಾರದು ಎಂಬುದು ಈ ಸಂಪ್ರದಾಯದ ಹಿಂದಿನ ನಂಬಿಕೆ. ಅರಿಶಿನ ಮತ್ತು ಕುಂಕುಮವನ್ನು ಹಚ್ಚುವುದರ ಮೂಲಕ, ಭಕ್ತರು ರಿಧಿ-ಸಿದ್ಧಿಯರನ್ನು ತಮ್ಮ ಮನೆಯಲ್ಲಿಯೇ ಇರುವಂತೆ ಆಹ್ವಾನಿಸುತ್ತಾರೆ.
ಪತಿ-ಪತ್ನಿ ಸಂಬಂಧದ ಸಂಕೇತ
ಒಬ್ಬ ವ್ಯಕ್ತಿ ಕೆಲಸಕ್ಕೆಂದು ಹೊರಗೆ ಹೋಗುವಾಗ, ಆತನ ಪತ್ನಿ ಮನೆಯಲ್ಲೇ ಇರುತ್ತಾಳೆ. ಅದೇ ರೀತಿ, ಗಣಪತಿಯು ತನ್ನ ಮೂಲ ಸ್ಥಾನಕ್ಕೆ ವಾಪಸ್ ಹೋಗುವಾಗ, ಆತನೊಂದಿಗಿದ್ದ ರಿಧಿ ಮತ್ತು ಸಿದ್ಧಿ ಮನೆಯಲ್ಲೇ ಉಳಿಯುತ್ತಾರೆ ಎಂಬುದು ಇದರ ಹಿಂದಿನ ಆಶಯ. ಈ ವಿಶಿಷ್ಟ ಆಚರಣೆಯು, ಗಣೇಶನ ಆಗಮನದಿಂದ ಮನೆಯಲ್ಲಿ ನೆಲೆಸಿದ ಸುಖ, ಶಾಂತಿ ಮತ್ತು ಸಮೃದ್ಧಿ ಶಾಶ್ವತವಾಗಿರಲಿ ಎಂದು ಭಕ್ತರು ಬಯಸುವುದನ್ನು ಸೂಚಿಸುತ್ತದೆ. ಈ ಸಂಪ್ರದಾಯವನ್ನು ಪಾಲಿಸುವುದರಿಂದ ಗಣೇಶನ ಆಶೀರ್ವಾದದೊಂದಿಗೆ ಮನೆಯಲ್ಲಿ ಅದೃಷ್ಟ ಮತ್ತು ಸಂಪತ್ತು ಸದಾ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
ಪ್ರಸ್ತುತ ಕಾಲ ಬದಲಾದಂತೆ, ಅನೇಕ ಪ್ರಾಚೀನ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಆದರೆ, ಕೆಲವು ಭಾಗಗಳಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಭಕ್ತಿಯಿಂದ ಪಾಲಿಸಲಾಗುತ್ತದೆ. ಇದು ಹಬ್ಬದ ಕೊನೆಯಲ್ಲಿ ಗಣೇಶನಿಗೆ ವಿದಾಯ ಹೇಳುವ ಸುಂದರ ಮಾರ್ಗವಾಗಿದೆ. ಗಣೇಶನ ಆಶೀರ್ವಾದ ಸದಾ ಕಾಲ ಮನೆಯವರೊಂದಿಗೆ ಇರಲಿ ಎಂದು ಪ್ರಾರ್ಥಿಸುವ ಒಂದು ಪದ್ಧತಿಯಾಗಿದೆ.



Click it and Unblock the Notifications
