Latest Updates
-
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಗಣೇಶ ವಿಸರ್ಜನೆಗೂ ಮುನ್ನ ಈ ಒಂದು ಕೆಲಸ ಮಾಡಿ! ಮನೆಯಲ್ಲಿ ಸುಖ-ಸಮೃದ್ಧಿ ತುಂಬುತ್ತೆ
ಗಣೇಶ ವಿಸರ್ಜನೆಗೂ ಮುನ್ನ ಈ ಕಾರ್ಯ ಮಾಡಿ, ಮನೆಯಲ್ಲಿ ತುಂಬಲಿದೆ ಸುಖ-ಸಮೃದ್ಧಿ! ಹೌದು, ಗಣೇಶ ವಿಸರ್ಜನೆ (Ganesh Visarjan 2025) ಎಂದರೆ ಕೇವಲ ಮೂರ್ತಿ ನೀರಿನಲ್ಲಿ ಮುಳುಗಿಸುವುದಲ್ಲ, ಅದು ಸಂಸ್ಕಾರ, ಕೃತಜ್ಞತೆ ಮತ್ತು ಭಕ್ತಿಯ ಸಂಕೇತ. ಶಾಸ್ತ್ರದಲ್ಲಿ ಹೇಳಿರುವಂತೆ, ವಿಸರ್ಜನೆಗೂ ಮುನ್ನ ಈ ರೀತಿಯ ಸರಳ ಆಚರಣೆ ಮಾಡಿದರೆ, ಮನೆಯಲ್ಲಿ ಐಶ್ವರ್ಯ ಮತ್ತು ಸಮೃದ್ಧಿ ನೆಲೆಸುತ್ತದೆ. ಹೀಗಾಗಿ, ಬಪ್ಪನಿಗೆ ವಿದಾಯ ಹೇಳುವ ಮೊದಲು ಈ ಸಂಪ್ರದಾಯವನ್ನು ಪಾಲಿಸುವುದು ನಿಜಕ್ಕೂ ಮನೆಗೆ ಶಾಂತಿ-ಸಮೃದ್ಧಿಯನ್ನು ತರುವ ಪವಿತ್ರ ಆಚರಣೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗಣೇಶ ಚತುರ್ಥಿ ಹಬ್ಬದ (Ganesh Chaturthi) ಸಂಭ್ರಮ ಮನೆಮಾಡಿದೆ. ಪ್ರತಿಯೊಬ್ಬರ ಮನೆ ಮತ್ತು ಬೀದಿ ಬೀದಿಗಳಲ್ಲಿ ಗಣೇಶನನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಭಕ್ತರು ತಮ್ಮ ಪ್ರೀತಿಯ ಬಪ್ಪನಿಗೆ ವಿವಿಧ ಪೂಜೆ ಮತ್ತು ನೈವೇದ್ಯಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸುತ್ತಿದ್ದಾರೆ. ಮೂರು, ಐದು ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಗಣೇಶ ವಿಸರ್ಜನೆಯ ಸಮಯದಲ್ಲಿ ಶಾಸ್ತ್ರಗಳ ಪ್ರಕಾರ ಕೆಲವು ಸಂಪ್ರದಾಯಗಳನ್ನು ಪಾಲಿಸುವುದು ಬಹಳ ಮುಖ್ಯ. ಅಂತಹ ಒಂದು ವಿಶೇಷ ಸಂಪ್ರದಾಯವೆಂದರೆ, ಗಣಪತಿ ವಿಸರ್ಜನೆಗೆ ಮುನ್ನ ಮನೆಯ ಗೋಡೆಗೆ ಅರಿಶಿನ ಮತ್ತು ಕುಂಕುಮ ಹಚ್ಚುವುದು. ಈ ಸಂಪ್ರದಾಯದ ಹಿಂದಿನ ಧಾರ್ಮಿಕ ಮಹತ್ವವೇನು ಎಂಬುದನ್ನು ತಿಳಿಯಿರಿ.

ಗಣಪತಿ ವಿಸರ್ಜನೆಗೂ ಮುನ್ನ ಈ ಕೆಲಸ ಮಾಡಿ
ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಗಣಪತಿಯನ್ನು ಮನೆಗೆ ಬರಮಾಡಿಕೊಂಡಾಗ, ಪೂರ್ಣ ವಿಧಿ ವಿಧಾನಗಳೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಗಣಪತಿಯನ್ನು ಸಂತುಷ್ಟಗೊಳಿಸಲು ವಿವಿಧ ಪೂಜೆಗಳು ಮತ್ತು ನೈವೇದ್ಯಗಳನ್ನು ಸಮರ್ಪಿಸಲಾಗುತ್ತದೆ. ಭಕ್ತರ ಸೇವಾಭಾವದಿಂದ ಸಂತುಷ್ಟರಾದ ಗಣಪತಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಆದರೆ, ಗಣಪತಿಯನ್ನು ವಿಸರ್ಜನೆ ಮಾಡುವ ಮೊದಲು, ಒಂದು ಪ್ರಮುಖ ಕೆಲಸ ಮಾಡಬೇಕು.
ಗಣೇಶ ಮೂರ್ತಿಯನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವ ಮೊದಲು, ಆ ಮೂರ್ತಿಯನ್ನು ಇರಿಸಿದ್ದ ಸ್ಥಳದ ಹಿಂದಿರುವ ಗೋಡೆಗೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಬೇಕು. ಗೋಡೆಯ ಒಂದು ಬದಿಯಲ್ಲಿ ಅರಿಶಿನವನ್ನು ಮತ್ತು ಇನ್ನೊಂದು ಬದಿಯಲ್ಲಿ ಕುಂಕುಮವನ್ನು ಹಚ್ಚಿ ಇದನ್ನು ಸಂಕೇತಿಕವಾಗಿ ಸೂಚಿಸಲಾಗುತ್ತದೆ. ಈ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಈ ಸಂಪ್ರದಾಯದ ಹಿಂದಿನ ನಂಬಿಕೆ
ಶಾಸ್ತ್ರಗಳ ಪ್ರಕಾರ, ಭಕ್ತರ ಮನೆಗೆ ಗಣೇಶನು ತನ್ನ ಪತ್ನಿಯರಾದ ರಿಧಿ (ಸಮೃದ್ಧಿ) ಮತ್ತು ಸಿದ್ಧಿ (ಯಶಸ್ಸು) ಯೊಂದಿಗೆ ಆಗಮಿಸುತ್ತಾನೆ. ಗಣಪತಿ ವಿಸರ್ಜನೆಯಾದಾಗ, ಆತನು ತನ್ನ ಮೂಲ ಸ್ಥಾನಕ್ಕೆ ಹಿಂತಿರುಗುತ್ತಾನೆ. ಆದರೆ, ಮನೆಯಲ್ಲಿದ್ದ ರಿಧಿ ಮತ್ತು ಸಿದ್ಧಿಯನ್ನು ಕೂಡ ಕರೆದುಕೊಂಡು ಹೋಗಬಾರದು ಎಂಬುದು ಈ ಸಂಪ್ರದಾಯದ ಹಿಂದಿನ ನಂಬಿಕೆ. ಅರಿಶಿನ ಮತ್ತು ಕುಂಕುಮವನ್ನು ಹಚ್ಚುವುದರ ಮೂಲಕ, ಭಕ್ತರು ರಿಧಿ-ಸಿದ್ಧಿಯರನ್ನು ತಮ್ಮ ಮನೆಯಲ್ಲಿಯೇ ಇರುವಂತೆ ಆಹ್ವಾನಿಸುತ್ತಾರೆ.
ಪತಿ-ಪತ್ನಿ ಸಂಬಂಧದ ಸಂಕೇತ
ಒಬ್ಬ ವ್ಯಕ್ತಿ ಕೆಲಸಕ್ಕೆಂದು ಹೊರಗೆ ಹೋಗುವಾಗ, ಆತನ ಪತ್ನಿ ಮನೆಯಲ್ಲೇ ಇರುತ್ತಾಳೆ. ಅದೇ ರೀತಿ, ಗಣಪತಿಯು ತನ್ನ ಮೂಲ ಸ್ಥಾನಕ್ಕೆ ವಾಪಸ್ ಹೋಗುವಾಗ, ಆತನೊಂದಿಗಿದ್ದ ರಿಧಿ ಮತ್ತು ಸಿದ್ಧಿ ಮನೆಯಲ್ಲೇ ಉಳಿಯುತ್ತಾರೆ ಎಂಬುದು ಇದರ ಹಿಂದಿನ ಆಶಯ. ಈ ವಿಶಿಷ್ಟ ಆಚರಣೆಯು, ಗಣೇಶನ ಆಗಮನದಿಂದ ಮನೆಯಲ್ಲಿ ನೆಲೆಸಿದ ಸುಖ, ಶಾಂತಿ ಮತ್ತು ಸಮೃದ್ಧಿ ಶಾಶ್ವತವಾಗಿರಲಿ ಎಂದು ಭಕ್ತರು ಬಯಸುವುದನ್ನು ಸೂಚಿಸುತ್ತದೆ. ಈ ಸಂಪ್ರದಾಯವನ್ನು ಪಾಲಿಸುವುದರಿಂದ ಗಣೇಶನ ಆಶೀರ್ವಾದದೊಂದಿಗೆ ಮನೆಯಲ್ಲಿ ಅದೃಷ್ಟ ಮತ್ತು ಸಂಪತ್ತು ಸದಾ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
ಪ್ರಸ್ತುತ ಕಾಲ ಬದಲಾದಂತೆ, ಅನೇಕ ಪ್ರಾಚೀನ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಆದರೆ, ಕೆಲವು ಭಾಗಗಳಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಭಕ್ತಿಯಿಂದ ಪಾಲಿಸಲಾಗುತ್ತದೆ. ಇದು ಹಬ್ಬದ ಕೊನೆಯಲ್ಲಿ ಗಣೇಶನಿಗೆ ವಿದಾಯ ಹೇಳುವ ಸುಂದರ ಮಾರ್ಗವಾಗಿದೆ. ಗಣೇಶನ ಆಶೀರ್ವಾದ ಸದಾ ಕಾಲ ಮನೆಯವರೊಂದಿಗೆ ಇರಲಿ ಎಂದು ಪ್ರಾರ್ಥಿಸುವ ಒಂದು ಪದ್ಧತಿಯಾಗಿದೆ.



Click it and Unblock the Notifications
