Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿವಾಹ ಸಮಾರಂಭ ನಿಷೇಧಿಸಿದ ಬೆಂಗಳೂರು ದೇವಾಲಯ; ಕಾರಣ ಏನ್ ಗೊತ್ತಾ?
ಮದುವೆ ಅನ್ನೋದು ಮಾನವರ ಬದುಕಿನ ಬಹುಮುಖ್ಯ ಭಾಗವಾಗ. ಹಲವರು ವಿಭಿನ್ನ ರೀತಿಯಲ್ಲಿ ವಿವಾಹವಾಗಬೇಕು ಅಂದುಕೊಳ್ಳುತ್ತಾರೆ. ಮತ್ತೆ ಕೆಲವರು ದುಬಾರಿ ಮದುವೆಯಾದರೆ ಇನ್ನು ಕೆಲವರು ಸರಳವಾಗಿ ವಿವಾಹವಾಗಲು ಬಯಸುತ್ತಾರೆ. ಆದ್ರೆ ಮತ್ತೊಂದಿಷ್ಟು ಜನರು ದೇವಸ್ಥಾನಗಳಲ್ಲಿ ಮದುವೆಯಾಗುವುದು ಉತ್ತಮ ಆಶೀರ್ವಾದಕ್ಕೆ ಕಾರಣವಾಗಲಿದೆ ಎಂದು ಸಹ ನಂಬುತ್ತಾರೆ.
ದೇವಾಲಯಗಳಲ್ಲಿ ಮದುವೆಯಾಗುವುದು ದಾಂಪತ್ಯದಲ್ಲಿ ಸಂತಸಕ್ಕೆ ಕಾರಣವಾಗುತ್ತೆ, ದೇವರ ಸಾಕ್ಷಿಯಾಗಿ ವಿವಾಹವಾದ ನೆಮ್ಮದಿ ಇರಲಿದೆ ಎಂದು ಸಹ ಹೇಳುತ್ತಾರೆ, ಆದ್ರೆ ಇಂತಹ ಹಲವು ವಿಚಾರಗಳ ನಡುವೆ ಈಗ ಇಲ್ಲೊಂದು ದೇವಾಲಯವು ವಿವಾಹ ಆಗುವುದನ್ನೇ ನಿಷೇಧಿಸಿದೆ. ಹೌದು ಬೆಂಗಳೂರಿನ ದೇವಾಲಯವೊಂದು ಈ ರೀತಿಯ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ.

ಈ ದೇವಾಲಯವು ಬೆಂಗಳೂರಿನ ಹಲಸೂರು ಬಳಿ ಇರುವ ಅತ್ಯಂತ ಹಳೆಯ ದೇವಾಲಯವಾಗಿದೆ. ಹಲಸೂರಿನ ಸೋಮೇಶ್ವರಸ್ವಾಮಿ ದೇವಾಲವು ಈ ನಿರ್ಧಾರ ತೆಗೆದುಕೊಂಡಿರುವುದು ಈಗ ಅಚ್ಚರಿ ಮೂಡಿಸಿದೆ. ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯ ವಿವಾಹ ಮಹೋತ್ಸವಗಳಿಗೆ ಬಹಳ ಹೆಸರುವಾಸಿಯಾಗಿತ್ತು, ಆದ್ರೆ ಈಗ ದೇವಾಲಯವು ವಿವಾಹ ಮಹೋತ್ಸವಕ್ಕೆ ಬ್ರೇಕ್ ಹಾಕಿದೆ.
ವಿವಾಹ ನಿಷೇಧವೇಕೆ?
ದೇವಾಲಯದಲ್ಲಿ ವಿವಾಹವಾಗುತ್ತಿರುವ ಜೋಡಿ ಮುಂದೆ ಹೊಂದಾಣಿಕೆ ಇಲ್ಲದೆ ವಿಚ್ಛೇದನ ಪಡೆಯುತ್ತಿದ್ದಾರೆ. ಇದು ದೇವಾಲಯದ ಹೆಸರು ಕೆಡಿಸುತ್ತಿದೆ ಎಂಬುದು ಮೊದಲ ಕಾರಣವಾಗಿದೆ. ಅದ್ರಲ್ಲೂ ಈ ಇತ್ತೀಚಿಗೆ ವಿವಾಹಕ್ಕಿಂತ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗೆ ಈ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದು, ದೇವಾಲಯದ ಹೆಸರು ಹಾಳಾಗುತ್ತಿದೆ ಎಂದು ಹೇಳಲಾಗಿದೆ.
ಕೋರ್ಟ್ ಮೆಟ್ಟಿಲೇರುವ ಅರ್ಚಕರು
ವಿಚ್ಛೇದನ ಸಂಬಂಧವಾಗಿ ದಂಪತಿ ಮಾತ್ರ ಕೋರ್ಟ್ ಮೆಟ್ಟಿಲೇರುತ್ತಿಲ್ಲ ಬದಲಾಗಿ ಮದುವೆ ಮಾಡಿಸಿರುವ ದೇವಾಲಯದ ಅರ್ಚಕರು ಕೂಡ ಕೋರ್ಟ್ ಮೆಟ್ಟಿಲೇರಬೇಕಾಗಿದೆ. ನ್ಯಾಯಾಲಯದಲ್ಲಿ ವಿವಾಹ ಮಾಡಿಸಿರುವ ಕುರಿತು ಅರ್ಚಕರು ಕೂಡ ಮೌಖಿಕ ಹೇಳಿಕೆ ನೀಡಬೇಕಾಗುತ್ತದೆ. ಇದು ಅರ್ಚಕರಿಗೆ ಸಮಸ್ಯೆಯ ಜೊತೆಗೆ ತಲೆನೋವಿಗೂ ಕಾರಣವಾಗಿದೆ.
ಹೀಗಾಗಿ ದೇವಾಲಯದಲ್ಲಿ ಅರ್ಚಕರು ಮದುವೆ ಮಾಡಿಸಲು ಹಿಂದು ಮುಂದು ನೋಡಬೇಕಾದ ಸ್ಥಿತಿ ಬಂದೊದಗಿದೆ. ಅಲ್ಲದೆ ದೇವಾಲಯದಲ್ಲಿ ಅರ್ಚಕರು ವಿವಾಹ ಮಾಡಿಸಲು ಮುಂದೆ ಬರುತ್ತಿರಲಿಲ್ಲ. ಕಳೆದೊಂದು ವರ್ಷದಿಂದ ದೇವಾಲಯದಲ್ಲಿ ವಿವಾಹ ನಡೆಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿತ್ತು, ಇದು ಭಕ್ತರಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಆದ್ರೆ ಈಗ ದೇವಾಲಯ ಅಧಿಕೃತವಾಗಿ ಪ್ರಕಟಣೆಯ ಮೂಲಕ ವಿವಾಹ ಕಾರ್ಯಗಳನ್ನು ನಡೆಸುವುದಿಲ್ಲ ಎಂದು ತಿಳಿಸಿದೆ.
12 ನೇ ಶತಮಾನದಷ್ಟು ಹಿಂದಿನ ಮತ್ತು ಶಿವನಿಗೆ ಸಮರ್ಪಿತವಾದ ಹಲಸೂರು ಸೋಮೇಶ್ವರ ದೇವಾಲಯವು ನಗರದಲ್ಲಿ ಹಿಂದೂ ವಿವಾಹಗಳಿಗೆ ಪವಿತ್ರ ಸ್ಥಳವಾಗಿ ದೀರ್ಘಕಾಲ ಸೇವೆ ಸಲ್ಲಿಸಿದೆ. ವರ್ಷವೊಂದಕ್ಕೆ ನೂರಾರು ಜೋಡಿಗಳು ಇಲ್ಲಿ ವಿವಾಹವಾಗುತ್ತವೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾದಂತೆ ದೇವಾಲಯದ ಹೆಸರು ಹಾಳಾಗ ತೊಡಗಿತ್ತು.
ದೇವಾಲಯದ ಅಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ 50 ಕ್ಕೂ ಹೆಚ್ಚು ವಿಚ್ಛೇದನ ಸಂಬಂಧಿತ ದೂರುಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಮನೆ ಬಿಟ್ಟು ಬಂದು ವಿವಾಹವಾಗಲು ಜೋಡಿ ನಕಲಿ ದಾಖಲೆಗಳನ್ನು ಸಹ ನೀಡಿ ವಿವಾಹವಾಗುತ್ತಿದ್ದ ಪ್ರಕರಣಗಳು ಸಹ ವರದಿಯಾಗಿದ್ದವು. ಇದು ದೇವಾಲಯದ ಆಡಳಿತ ಮಂಡಳಿಯನ್ನು ಸಮಸ್ಯೆಗಳಿಗೆ ತಳ್ಳಿತ್ತು. ನ್ಯಾಯಾಲಯದಲ್ಲಿ ಈ ಪ್ರಕರಣಗಳು ಬಂದಾಗ ದೇವಾಲಯದ ಸಿಬ್ಬಂದಿ ಉತ್ತರ ನೀಡಬೇಕಾದ ಇಕ್ಕಟ್ಟಿಗೆ ಸಿಲುಕುತ್ತಿದ್ದರು.
ಹೀಗಾಗಿ ವಿವಾಹ ಸಮಾರಂಭಗಳು ಇನ್ನು ಮುಂದೆ ನಡೆಸದೆ ಇರಲು ತೀರ್ಮಾನಿಸಿರುವುದಾಗಿ ದೇವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಇದು ಹಲವರಿಗೆ ಅಚ್ಚರಿ ಎನಿಸಿದರು. ಮತ್ತೆ ಕೆಲವರು ದೇವಾಲಯದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.



Click it and Unblock the Notifications