Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಗಣೇಶ ಚತುರ್ಥಿ 2021: ಲಂಬೋದರನಿಗೆ ಇವುಗಳೆಂದರೆ ಅಚ್ಚುಮೆಚ್ಚು
ಗಣೇಶ ದೇವತೆಗಳಲ್ಲಿ ಜನಪ್ರಿಯ ಎಂದೇ ಸಂಬೋಧಿತರಾಗಿರುವ ವಿನಾಯಕ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. 2021ರಲ್ಲಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10ರಂದು ಶುಕ್ರವಾರದಂದು ಅಚರಿಸಲಾಗುತ್ತಿದೆ.
ಸಂಕಷ್ಟ ನಿವಾರಕ, ವಿಘ್ನ ವಿನಾಶಕನಿಗೆ ಪ್ರತಿಯೊಂದು ಪೂಜೆ ಸಮಾರಂಭಗಳಲ್ಲಿ ಮೊದಲ ಪೂಜೆಯೇ ಸಲ್ಲುತ್ತದೆ. ಕೇಳಿದ್ದನ್ನು ಪ್ರಸಾದಿಸುವ ದೇವರೆಂದೇ ಖ್ಯಾತನಾಗಿರುವ ಮೂಷಿಕ ವಾಹನನಿಗೆ ನಾಮಗಳು ಹಲವು. ತಿಂಡಿಪೋತನೆಂದೇ ಕರೆಯಿಸಿಕೊಂಡಿರುವ ವಕ್ರ ತುಂಡನಿಗೆ ಸಿಹಿ ಪಂಚ ಭಕ್ಷ್ಯಗಳೆಂದರೆ ಪ್ರಾಣ.

ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಳಂಬಿತ ಸೂತ್ರ ಎಂಬ ಶ್ಲೋಕದಂತೆ ದೇವರನ್ನು ಪ್ರಾರ್ಥಿಸುವಾಗ ಕೂಡ ಮೋದಕದಿಂದಲೇ ಅವರನ್ನು ಸಂಪ್ರೀತಿಗೊಳಿಸಬೇಕು. ಮೋದಕವೆಂದರೆ ವಿನಾಯನಿಗೆ ಅಚ್ಚುಮೆಚ್ಚು. ಹಾಗಿದ್ದರೆ ಗಣಪನಿಗೆ ಇಷ್ಟವಾಗಿರುವ ಅಂಶಗಳು ಏನು? ಅವರನ್ನು ಸಂತೃಪ್ತಿಗೊಳಿಸಲು ಏನೇನು ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಬನ್ನಿ ಆ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ....

ಮೋದಕ
ಗಣಪನಿಗೆ ತಿನಿಸೆಂದರೆ ಬಲು ಪ್ರೀತಿ. ಡೊಳ್ಳು ಹೊಟ್ಟೆ ಗಣಪ ಎಂಬ ಬಿರುದೇ ಈ ದೇವರಿಗಿದೆ. ಈ ದೇವರನ್ನು ಮೆಚ್ಚಿಸಲು ಅವರ ಹೊಟ್ಟೆ ತುಂಬಿಸಿದರೆ ಆಯಿತು ಎಂಬ ಮಾತಿದೆ. ಅದರಲ್ಲೂ ಮೋದಕ ಎಂದರೆ ಬಲು ಪ್ರೀತಿ ಗಣಪನಿಗೆ. ಅದಕ್ಕೆ ಅವನನ್ನು ಮೋದಕ ಹಸ್ತ ಎಂತಲೂ ಕರೆಯುವುದುಂಡು ಅಲ್ಲವೇ....

ಮೋದಕ
ಮೋದಕ ಗಣಪನಿಗೆ ಅಚ್ಚುಮೆಚ್ಚಿನ ತಿನಿಸಾಗಿದ್ದು ಇದನ್ನು ಹಿಟ್ಟು ಮತ್ತು ಹೂರಣದಿಂದ ತಯಾರಿಸುತ್ತಾರೆ. ಗಣೇಶ ಚತುರ್ಥಿಯ ದಿನ ಈ ಸಿಹಿಯನ್ನು ತಪ್ಪದೇ ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕೇಸರಿ ಮೋದಕ

ಗರಿಕೆ ಹುಲ್ಲು
ನೆಲದಲ್ಲಿ ವಿಸ್ತಾರವಾಗಿ ಬೆಳೆಯುವ ಒಂದು ಬಗೆಯ ಹುಲ್ಲಾಗಿದೆ ಗರಿಕೆ. ಗಣೇಶನಿಗೆ ಗರಿಕೆ ಎಂದರೆ ಏಕಿಷ್ಟ ಎಂಬುದಕ್ಕೆ ಒಂದು ಕಥೆಯೇ ಇದೆ. ದೇವತೆಗಳನ್ನು ಹಿಂಸಿಸುತ್ತಿದ್ದ ಅಸುರ ಅನಲಾಸುರನನ್ನು ಗಣಪತಿ ನುಂಗಿಬಿಡುತ್ತಾರೆ.
ಆದರೆ ಅಸುರನನ್ನು ನುಂಗಿದ ನಂತರ ಈತ ಜೀರ್ಣನಾಗದೇ ಗಣಪತಿಗೆ ಹೊಟ್ಟೆನೋವು ಉಂಟಾಗುತ್ತದೆ. ಈ ಸಂದರ್ಭದಲ್ಲಿ ಗರಿಕೆಯನ್ನು ಸೇವಿಸಲು ಗಣಪನಿಗೆ ನೀಡಿದಾಗ ಹೊಟ್ಟೆ ನೋವು ಮಾಯವಾಗುತ್ತದೆ. ಇದರ ನಂತರ ಗಣಪನಿಗೆ ಗರಿಕೆ ಎಂದರೆ ಅಚ್ಚುಮೆಚ್ಚಿನದಾಗಿ ಬಿಡುತ್ತದೆ.ಗರಿಕೆ ಇಲ್ಲದೆ ಗಣಪನ ಪೂಜೆ ಅಪೂರ್ಣ.

ಚೆಂಡು ಹೂವು
ಗಣೇಶನ ವಿಗ್ರಹವನ್ನು ತಂದು ಮನೆಯಲ್ಲಿ ಅದನ್ನು ಇರಿಸಿ ಪೂಜೆ ಮಾಡುವವರು ದೇವರನ್ನು ಚೆಂಡು ಹೂವಿನಿಂದ ಅಲಂಕಾರ ಮಾಡುತ್ತಾರೆ. ಇದು ಕೆಂಪು ಮತ್ತು ಹಳದಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ.ಶ್ರೀ ಗಣೇಶನಿಗೆ ಚೆಂಡು ಹೂವೆಂದರೆ ಬಲು ಪ್ರೀತಿ. ಚೆಂಡು ಹೂವು ಮತ್ತು ಗರಿಕೆಯಿಂದ ತಯಾರಿಸಿದ ಹಾರವೇ ಗಣಪನಿಗೆ ಪ್ರಮುಖ ಅಲಂಕಾರವಾಗಿರುತ್ತದೆ.

ಶಂಖ
ಗಣಪತಿ ನಾಲ್ಕು ಕೈಗಳನ್ನು ಹೊಂದಿದ್ದು ಅದರಲ್ಲೊಂದರಲ್ಲಿ ಶಂಖವನ್ನು ಹಿಡಿದುಕೊಂಡಿದ್ದಾರೆ. ಶಂಖಗಳನ್ನು ಊದುವುದರ ಮೂಲಕವೇ ಹೆಚ್ಚಿನ ಹಬ್ಬಗಳು ಆರಂಭಗೊಳ್ಳುತ್ತವೆ.
ಗಣಪನಿಗೆ ಶಂಖದ ನಾದವೆಂದರೆ ತುಂಬಾ ಇಷ್ಟ. ಗಣೇಶನಿಗೆ ಆರತಿ ಬೆಳಗುವ ಸಂದರ್ಭದಲ್ಲಿ ಭಕ್ತರು ಶಂಖವನ್ನು ಊದುತ್ತಾರೆ. ಶಂಖದ ನಾದವು ದುಷ್ಟ ಶಕ್ತಿಗಳನ್ನು ಹೊಡೆದೋಡಿಸುತ್ತದೆ.

ತೆಂಗಿನ ಕಾಯಿ, ಬಾಳೆಹಣ್ಣು
ತೆಂಗಿನ ಕಾಯಿ ಮತ್ತು ಬಾಳೆಹಣ್ಣು ದೇವರಿಗೆ ಹೆಚ್ಚು ಇಷ್ಟದ್ದಾಗಿದೆ. ಗಣಪನ ತಲೆಯು ಆನೆಯದ್ದಾಗಿರುವುದರಿಂದ ಬಾಳೆಹಣ್ಣು ದೇವರಿಗೆ ಹೆಚ್ಚು ಪ್ರೀತಿಯದ್ದಾಗಿದೆ. ಬಾಳೆ ಎಲೆಗಳಿಂದ ಮಾಡಿದ ಅಲಂಕಾರವನ್ನು ದೇವರಿಗೆ ಮಾಡುತ್ತಾರೆ. ಗಣೇಶನಿಗೆ ಇಷ್ಟವಾಗಿರುವ ಐದು ಅಂಶಗಳು ಇದಾಗಿದ್ದು ಈ ಬಾರಿಯ ಹಬ್ಬದಲ್ಲಿ ಈ ಅಂಶಗಳು ಇರುವಂತೆ ನೋಡಿಕೊಂಡು ಗಣಪನ ಕೃಪಾಕಟಾಕ್ಷವನ್ನು ಪಡೆಯಿರಿ.



Click it and Unblock the Notifications