For Quick Alerts
ALLOW NOTIFICATIONS  
For Daily Alerts

ಈ ಸೂಚನೆಗೆ ಭಯಪಡಲೇ ಬೇಕು...ಯಾಕಂದ್ರೆ ಇದು ಸಾವಿನ ಸೂಚನೆ!!

By Divya
|

ಮನುಷ್ಯನ ಹುಟ್ಟು ಸಾವು ಮೇಲ್ನೋಟಕ್ಕೆ ನೈಸರ್ಗಿಕವಾದ್ದು ಎನಿಸಬಹುದು. ಆದರೆ ಅದು ದೈವದತ್ತವಾದದ್ದು ಎನ್ನುವುದನ್ನು ನಾವು ನಂಬಲೇ ಬೇಕು. ಈ ಪ್ರಪಂಚ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರು ದೇವತೆಗಳ ಸೃಷ್ಟಿ. ಇಲ್ಲಿ ಏನೇ ನಡೆದರೂ ಅದು ಬ್ರಹ್ಮನ ಸೃಷ್ಟಿ, ವಿಷ್ಣುವಿನ ಪಾಲನೆ ಹಾಗೂ ಶಿವನ ಲಯದ ಕಾರ್ಯದ ಅನುಸಾರ ನಡೆಯುತ್ತದೆ. ಈ ಕುರಿತು ಶಿವ ಪುರಾಣದ ಪವಿತ್ರ ಗ್ರಂಥವು ಹಲವಾರು ನೀತಿ ನಿಯಮಗಳನ್ನು ಸಾರುತ್ತದೆ.

ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ!

ಪುರಾಣದ ಪ್ರಕಾರ ಪಾರ್ವತಿ ದೇವಿಯು ಒಮ್ಮೆ ವ್ಯಕ್ತಿಯ ಸಾವನ್ನು ಊಹಿಸುವ ಸೂಚನೆಗಳು ಅಥವಾ ಚಿಹ್ನೆಗಳ ಬಗ್ಗೆ ಶಿವನನ್ನು ಕೇಳಿದಳು. ಪಾರ್ವತಿಯ ಪ್ರಶ್ನೆಗೆ ಪ್ರತ್ಯುತ್ತರವಾಗಿ ಕೆಲವು ಜ್ಞಾನದ ವಿವರಣೆ ನೀಡಿದನು. ಆ ವಿವರಣೆ ವ್ಯಕ್ತಿಯು ತನ್ನ ಸಾವಿಗೂ ಮುಂಚೆ ಯಾವೆಲ್ಲ ಲಕ್ಷಣಗಳನ್ನು ಹೊಂದಿರುತ್ತಾನೆ ಎನ್ನುವುದಾಗಿತ್ತು ಎನ್ನಲಾಗುತ್ತದೆ. ಆ ವಿಚಾರದಲ್ಲಿ ಸೂಚಿಸಿದ ಸೂಚನೆಗಳ ವಿವರ ತಿಳಿಯಬೇಕೆನ್ನುವ ಬಯಕೆ ಇದ್ದರೆ ಮುಂದೆ ಓದಿ....

ವಿಶೇಷ ಸೂಚನೆ: ಈ ಸೂಚನೆಗಳು ಗ್ರಂಥಗಳಲ್ಲಿ ಕಂಡುಬಂದ ವಿಷಯಗಳನ್ನು ಆಧರಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಅನುಭವದಿಂದಲ್ಲ...

ಸೂಚನೆ-1

ಸೂಚನೆ-1

ಮನುಷ್ಯನ ಬಾಯಿ, ಕಿವಿ, ಕಣ್ಣು ಮತ್ತು ನಾಲಿಗೆ ಇವುಯಾವುದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ವ್ಯಕ್ತಿಗೆ 6 ತಿಂಗಳೊಳಗೆ ಸಾವು ಬರುವುದಂತೆ!

ಸೂಚನೆ-2

ಸೂಚನೆ-2

ವ್ಯಕ್ತಿಯು ಎಣ್ಣೆಯಲ್ಲಿ, ನೀರಿನಲ್ಲಿ ಅಥವಾ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದಾಗ, ಅದು ಕಾಣದಿದ್ದರೆ ಆತ ತನ್ನ ಜೀವನವನ್ನು 6 ತಿಂಗಳಿಗಿಂತ ಹೆಚ್ಚುಕಾಲ ನಡೆಸಲಾರ.

ಸೂಚನೆ-3

ಸೂಚನೆ-3

ವ್ಯಕ್ತಿಗೆ ಅಚಾನಕ್ ಎನ್ನುವ ರೀತಿಯಲ್ಲಿ ಜಗತ್ತೆಲ್ಲಾ ನೀಲಿಮಯವಾಗಿ ಕಂಡರೆ, ಅವನ ಸಾವು ಒಂದು ತಿಂಗಳಲ್ಲೇ ಬರುವುದು.

ಸೂಚನೆ-4

ಸೂಚನೆ-4

ವ್ಯಕ್ತಿ ಓರ್ವನಿಗೆ ಅವನ ನೆರಳಲ್ಲಿ ತಲೆಯ ಭಾಗ ಕಾಣದಿದ್ದರೆ, ಅದು ಸಾವಿನ ಸೂಚನೆಯಾಗುತ್ತದೆ.

ಸೂಚನೆ-5

ಸೂಚನೆ-5

ಯಾರಿಗೆ ತಮ್ಮ ನೆರಳು ಕಾಣುವುದಿಲ್ಲವೋ ಅಥವಾ ತಲೆ ಇಲ್ಲದ ನೆರಳು ಕಾಣುತ್ತದೆಯೋ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಬದುಕುಳಿಯಲಾರರು.

ಸೂಚನೆ-6

ಸೂಚನೆ-6

ಹದ್ದು, ಪಾರಿವಾಳ ಮತ್ತು ಕಾಗೆ ಇವುಗಳಲ್ಲಿ ಯಾವುದಾದರೊಂದು ತಲೆಯಮೇಲೆ ಕುಳಿತುಕೊಂಡರೆ ಅದು ಸಾವಿನ ಸೂಚನೆಯನ್ನು ನೀಡಿದಂತೆ.

ಸೂಚನೆ-7

ಸೂಚನೆ-7

ಇದ್ದಕ್ಕಿದ್ದಂತೆಯೇ ದೇಹವು ಹೆಚ್ಚು ಬಿಳುಪು, ಹಳದಿ ಅಥವಾ ಕೆಂಪು ಕಲೆಗಳಿಂದ ಆವರಿಸಿಕೊಂಡರೆ, ವ್ಯಕ್ತಿ 6 ತಿಂಗಳೊಳಗೆ ಸಾಯುತ್ತಾನಂತೆ!

ಸೂಚನೆ-8

ಸೂಚನೆ-8

ಗಂಟಲು ಮತ್ತು ನಾಲಿಗೆ ಪದೇ ಪದೇ ಒಣಗಲು ಪ್ರಾರಂಭಿಸಿದರೆ ಅದು ಸಾವಿನ ಶಕುನವನ್ನು ಹೇಳಿದಂತೆ.

ಸೂಚನೆ-9

ಸೂಚನೆ-9

ಎಂದು ಸೂರ್ಯನ ಕಿರಣ, ಚಂದ್ರನ ಕಿರಣ ಅಥವಾ ಬೆಂಕಿಯನ್ನು ನೋಡುವ ಶಕ್ತಿಯನ್ನು ಕಳೆದುಕೊಂಡಿರುತ್ತೀರೋ, ಆಗ ಸಾವು ನಿಮ್ಮ ಸುತ್ತ ಒಂದು ಮೂಲೆಯಲ್ಲಿ ನಿಂತಿದೆ ಎಂದು ಪರಿಗಣಿಸಬಹುದು.

ಸೂಚನೆ-10

ಸೂಚನೆ-10

ವ್ಯಕ್ತಿಗೆ ಉತ್ತರ ದಿಕ್ಕಿನ ನಕ್ಷತ್ರ ಕಾಣದಿರುವುದು ಅಥವಾ ಆಕಾಶ, ಸೂರ್ಯ, ಚಂದ್ರರೆಲ್ಲರೂ ಕೆಂಪು ಬಣ್ಣದಲ್ಲಿ ಕಂಡರೆ ಇದು ಸ್ಪಷ್ಟವಾದ ಸಾವಿನ ಸೂಚನೆ ಎನ್ನಲಾಗುತ್ತದೆ.

ಆಯಸ್ಸು ಮುಗಿಯುತ್ತಾ ಬಂದಿದ್ದರೆ, ಹೀಗೆಲ್ಲಾ ನಡೆಯುತ್ತವೆಯಂತೆ!

English summary

Signs of death that Lord Shiva told Parvati

The ancient scripture of Shiv Purana is an important source of information on the theology behind Shaivism, and contains chapters with Shiva-centered cosmology, mythology, ethics and other topics. What's interesting and lesser known is that Lord Shiva narrated some unknown and rare symptoms of death in its text.
X
Desktop Bottom Promotion