Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಈ ಸೂಚನೆಗೆ ಭಯಪಡಲೇ ಬೇಕು...ಯಾಕಂದ್ರೆ ಇದು ಸಾವಿನ ಸೂಚನೆ!!
ಮನುಷ್ಯನ ಹುಟ್ಟು ಸಾವು ಮೇಲ್ನೋಟಕ್ಕೆ ನೈಸರ್ಗಿಕವಾದ್ದು ಎನಿಸಬಹುದು. ಆದರೆ ಅದು ದೈವದತ್ತವಾದದ್ದು ಎನ್ನುವುದನ್ನು ನಾವು ನಂಬಲೇ ಬೇಕು. ಈ ಪ್ರಪಂಚ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರು ದೇವತೆಗಳ ಸೃಷ್ಟಿ. ಇಲ್ಲಿ ಏನೇ ನಡೆದರೂ ಅದು ಬ್ರಹ್ಮನ ಸೃಷ್ಟಿ, ವಿಷ್ಣುವಿನ ಪಾಲನೆ ಹಾಗೂ ಶಿವನ ಲಯದ ಕಾರ್ಯದ ಅನುಸಾರ ನಡೆಯುತ್ತದೆ. ಈ ಕುರಿತು ಶಿವ ಪುರಾಣದ ಪವಿತ್ರ ಗ್ರಂಥವು ಹಲವಾರು ನೀತಿ ನಿಯಮಗಳನ್ನು ಸಾರುತ್ತದೆ.
ಪುರಾಣದ ಪ್ರಕಾರ ಪಾರ್ವತಿ ದೇವಿಯು ಒಮ್ಮೆ ವ್ಯಕ್ತಿಯ ಸಾವನ್ನು ಊಹಿಸುವ ಸೂಚನೆಗಳು ಅಥವಾ ಚಿಹ್ನೆಗಳ ಬಗ್ಗೆ ಶಿವನನ್ನು ಕೇಳಿದಳು. ಪಾರ್ವತಿಯ ಪ್ರಶ್ನೆಗೆ ಪ್ರತ್ಯುತ್ತರವಾಗಿ ಕೆಲವು ಜ್ಞಾನದ ವಿವರಣೆ ನೀಡಿದನು. ಆ ವಿವರಣೆ ವ್ಯಕ್ತಿಯು ತನ್ನ ಸಾವಿಗೂ ಮುಂಚೆ ಯಾವೆಲ್ಲ ಲಕ್ಷಣಗಳನ್ನು ಹೊಂದಿರುತ್ತಾನೆ ಎನ್ನುವುದಾಗಿತ್ತು ಎನ್ನಲಾಗುತ್ತದೆ. ಆ ವಿಚಾರದಲ್ಲಿ ಸೂಚಿಸಿದ ಸೂಚನೆಗಳ ವಿವರ ತಿಳಿಯಬೇಕೆನ್ನುವ ಬಯಕೆ ಇದ್ದರೆ ಮುಂದೆ ಓದಿ....
ವಿಶೇಷ ಸೂಚನೆ: ಈ ಸೂಚನೆಗಳು ಗ್ರಂಥಗಳಲ್ಲಿ ಕಂಡುಬಂದ ವಿಷಯಗಳನ್ನು ಆಧರಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಅನುಭವದಿಂದಲ್ಲ...

ಸೂಚನೆ-1
ಮನುಷ್ಯನ ಬಾಯಿ, ಕಿವಿ, ಕಣ್ಣು ಮತ್ತು ನಾಲಿಗೆ ಇವುಯಾವುದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ವ್ಯಕ್ತಿಗೆ 6 ತಿಂಗಳೊಳಗೆ ಸಾವು ಬರುವುದಂತೆ!

ಸೂಚನೆ-2
ವ್ಯಕ್ತಿಯು ಎಣ್ಣೆಯಲ್ಲಿ, ನೀರಿನಲ್ಲಿ ಅಥವಾ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದಾಗ, ಅದು ಕಾಣದಿದ್ದರೆ ಆತ ತನ್ನ ಜೀವನವನ್ನು 6 ತಿಂಗಳಿಗಿಂತ ಹೆಚ್ಚುಕಾಲ ನಡೆಸಲಾರ.

ಸೂಚನೆ-3
ವ್ಯಕ್ತಿಗೆ ಅಚಾನಕ್ ಎನ್ನುವ ರೀತಿಯಲ್ಲಿ ಜಗತ್ತೆಲ್ಲಾ ನೀಲಿಮಯವಾಗಿ ಕಂಡರೆ, ಅವನ ಸಾವು ಒಂದು ತಿಂಗಳಲ್ಲೇ ಬರುವುದು.

ಸೂಚನೆ-4
ವ್ಯಕ್ತಿ ಓರ್ವನಿಗೆ ಅವನ ನೆರಳಲ್ಲಿ ತಲೆಯ ಭಾಗ ಕಾಣದಿದ್ದರೆ, ಅದು ಸಾವಿನ ಸೂಚನೆಯಾಗುತ್ತದೆ.

ಸೂಚನೆ-5
ಯಾರಿಗೆ ತಮ್ಮ ನೆರಳು ಕಾಣುವುದಿಲ್ಲವೋ ಅಥವಾ ತಲೆ ಇಲ್ಲದ ನೆರಳು ಕಾಣುತ್ತದೆಯೋ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಬದುಕುಳಿಯಲಾರರು.

ಸೂಚನೆ-6
ಹದ್ದು, ಪಾರಿವಾಳ ಮತ್ತು ಕಾಗೆ ಇವುಗಳಲ್ಲಿ ಯಾವುದಾದರೊಂದು ತಲೆಯಮೇಲೆ ಕುಳಿತುಕೊಂಡರೆ ಅದು ಸಾವಿನ ಸೂಚನೆಯನ್ನು ನೀಡಿದಂತೆ.

ಸೂಚನೆ-7
ಇದ್ದಕ್ಕಿದ್ದಂತೆಯೇ ದೇಹವು ಹೆಚ್ಚು ಬಿಳುಪು, ಹಳದಿ ಅಥವಾ ಕೆಂಪು ಕಲೆಗಳಿಂದ ಆವರಿಸಿಕೊಂಡರೆ, ವ್ಯಕ್ತಿ 6 ತಿಂಗಳೊಳಗೆ ಸಾಯುತ್ತಾನಂತೆ!

ಸೂಚನೆ-8
ಗಂಟಲು ಮತ್ತು ನಾಲಿಗೆ ಪದೇ ಪದೇ ಒಣಗಲು ಪ್ರಾರಂಭಿಸಿದರೆ ಅದು ಸಾವಿನ ಶಕುನವನ್ನು ಹೇಳಿದಂತೆ.

ಸೂಚನೆ-9
ಎಂದು ಸೂರ್ಯನ ಕಿರಣ, ಚಂದ್ರನ ಕಿರಣ ಅಥವಾ ಬೆಂಕಿಯನ್ನು ನೋಡುವ ಶಕ್ತಿಯನ್ನು ಕಳೆದುಕೊಂಡಿರುತ್ತೀರೋ, ಆಗ ಸಾವು ನಿಮ್ಮ ಸುತ್ತ ಒಂದು ಮೂಲೆಯಲ್ಲಿ ನಿಂತಿದೆ ಎಂದು ಪರಿಗಣಿಸಬಹುದು.

ಸೂಚನೆ-10
ವ್ಯಕ್ತಿಗೆ ಉತ್ತರ ದಿಕ್ಕಿನ ನಕ್ಷತ್ರ ಕಾಣದಿರುವುದು ಅಥವಾ ಆಕಾಶ, ಸೂರ್ಯ, ಚಂದ್ರರೆಲ್ಲರೂ ಕೆಂಪು ಬಣ್ಣದಲ್ಲಿ ಕಂಡರೆ ಇದು ಸ್ಪಷ್ಟವಾದ ಸಾವಿನ ಸೂಚನೆ ಎನ್ನಲಾಗುತ್ತದೆ.



Click it and Unblock the Notifications
