Just In
- 6 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 7 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 7 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 8 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಸೂಚನೆಗೆ ಭಯಪಡಲೇ ಬೇಕು...ಯಾಕಂದ್ರೆ ಇದು ಸಾವಿನ ಸೂಚನೆ!!
ಮನುಷ್ಯನ ಹುಟ್ಟು ಸಾವು ಮೇಲ್ನೋಟಕ್ಕೆ ನೈಸರ್ಗಿಕವಾದ್ದು ಎನಿಸಬಹುದು. ಆದರೆ ಅದು ದೈವದತ್ತವಾದದ್ದು ಎನ್ನುವುದನ್ನು ನಾವು ನಂಬಲೇ ಬೇಕು. ಈ ಪ್ರಪಂಚ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರು ದೇವತೆಗಳ ಸೃಷ್ಟಿ. ಇಲ್ಲಿ ಏನೇ ನಡೆದರೂ ಅದು ಬ್ರಹ್ಮನ ಸೃಷ್ಟಿ, ವಿಷ್ಣುವಿನ ಪಾಲನೆ ಹಾಗೂ ಶಿವನ ಲಯದ ಕಾರ್ಯದ ಅನುಸಾರ ನಡೆಯುತ್ತದೆ. ಈ ಕುರಿತು ಶಿವ ಪುರಾಣದ ಪವಿತ್ರ ಗ್ರಂಥವು ಹಲವಾರು ನೀತಿ ನಿಯಮಗಳನ್ನು ಸಾರುತ್ತದೆ.
ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ!
ಪುರಾಣದ ಪ್ರಕಾರ ಪಾರ್ವತಿ ದೇವಿಯು ಒಮ್ಮೆ ವ್ಯಕ್ತಿಯ ಸಾವನ್ನು ಊಹಿಸುವ ಸೂಚನೆಗಳು ಅಥವಾ ಚಿಹ್ನೆಗಳ ಬಗ್ಗೆ ಶಿವನನ್ನು ಕೇಳಿದಳು. ಪಾರ್ವತಿಯ ಪ್ರಶ್ನೆಗೆ ಪ್ರತ್ಯುತ್ತರವಾಗಿ ಕೆಲವು ಜ್ಞಾನದ ವಿವರಣೆ ನೀಡಿದನು. ಆ ವಿವರಣೆ ವ್ಯಕ್ತಿಯು ತನ್ನ ಸಾವಿಗೂ ಮುಂಚೆ ಯಾವೆಲ್ಲ ಲಕ್ಷಣಗಳನ್ನು ಹೊಂದಿರುತ್ತಾನೆ ಎನ್ನುವುದಾಗಿತ್ತು ಎನ್ನಲಾಗುತ್ತದೆ. ಆ ವಿಚಾರದಲ್ಲಿ ಸೂಚಿಸಿದ ಸೂಚನೆಗಳ ವಿವರ ತಿಳಿಯಬೇಕೆನ್ನುವ ಬಯಕೆ ಇದ್ದರೆ ಮುಂದೆ ಓದಿ....
ವಿಶೇಷ ಸೂಚನೆ: ಈ ಸೂಚನೆಗಳು ಗ್ರಂಥಗಳಲ್ಲಿ ಕಂಡುಬಂದ ವಿಷಯಗಳನ್ನು ಆಧರಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಅನುಭವದಿಂದಲ್ಲ...
ಸೂಚನೆ-1
ಮನುಷ್ಯನ ಬಾಯಿ, ಕಿವಿ, ಕಣ್ಣು ಮತ್ತು ನಾಲಿಗೆ ಇವುಯಾವುದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ವ್ಯಕ್ತಿಗೆ 6 ತಿಂಗಳೊಳಗೆ ಸಾವು ಬರುವುದಂತೆ!
ಸೂಚನೆ-2
ವ್ಯಕ್ತಿಯು ಎಣ್ಣೆಯಲ್ಲಿ, ನೀರಿನಲ್ಲಿ ಅಥವಾ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದಾಗ, ಅದು ಕಾಣದಿದ್ದರೆ ಆತ ತನ್ನ ಜೀವನವನ್ನು 6 ತಿಂಗಳಿಗಿಂತ ಹೆಚ್ಚುಕಾಲ ನಡೆಸಲಾರ.
ಸೂಚನೆ-3
ವ್ಯಕ್ತಿಗೆ ಅಚಾನಕ್ ಎನ್ನುವ ರೀತಿಯಲ್ಲಿ ಜಗತ್ತೆಲ್ಲಾ ನೀಲಿಮಯವಾಗಿ ಕಂಡರೆ, ಅವನ ಸಾವು ಒಂದು ತಿಂಗಳಲ್ಲೇ ಬರುವುದು.
ಸೂಚನೆ-4
ವ್ಯಕ್ತಿ ಓರ್ವನಿಗೆ ಅವನ ನೆರಳಲ್ಲಿ ತಲೆಯ ಭಾಗ ಕಾಣದಿದ್ದರೆ, ಅದು ಸಾವಿನ ಸೂಚನೆಯಾಗುತ್ತದೆ.
ಸೂಚನೆ-5
ಯಾರಿಗೆ ತಮ್ಮ ನೆರಳು ಕಾಣುವುದಿಲ್ಲವೋ ಅಥವಾ ತಲೆ ಇಲ್ಲದ ನೆರಳು ಕಾಣುತ್ತದೆಯೋ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಬದುಕುಳಿಯಲಾರರು.
ಸೂಚನೆ-6
ಹದ್ದು, ಪಾರಿವಾಳ ಮತ್ತು ಕಾಗೆ ಇವುಗಳಲ್ಲಿ ಯಾವುದಾದರೊಂದು ತಲೆಯಮೇಲೆ ಕುಳಿತುಕೊಂಡರೆ ಅದು ಸಾವಿನ ಸೂಚನೆಯನ್ನು ನೀಡಿದಂತೆ.
ಸೂಚನೆ-7
ಇದ್ದಕ್ಕಿದ್ದಂತೆಯೇ ದೇಹವು ಹೆಚ್ಚು ಬಿಳುಪು, ಹಳದಿ ಅಥವಾ ಕೆಂಪು ಕಲೆಗಳಿಂದ ಆವರಿಸಿಕೊಂಡರೆ, ವ್ಯಕ್ತಿ 6 ತಿಂಗಳೊಳಗೆ ಸಾಯುತ್ತಾನಂತೆ!
ಸೂಚನೆ-8
ಗಂಟಲು ಮತ್ತು ನಾಲಿಗೆ ಪದೇ ಪದೇ ಒಣಗಲು ಪ್ರಾರಂಭಿಸಿದರೆ ಅದು ಸಾವಿನ ಶಕುನವನ್ನು ಹೇಳಿದಂತೆ.
ಸೂಚನೆ-9
ಎಂದು ಸೂರ್ಯನ ಕಿರಣ, ಚಂದ್ರನ ಕಿರಣ ಅಥವಾ ಬೆಂಕಿಯನ್ನು ನೋಡುವ ಶಕ್ತಿಯನ್ನು ಕಳೆದುಕೊಂಡಿರುತ್ತೀರೋ, ಆಗ ಸಾವು ನಿಮ್ಮ ಸುತ್ತ ಒಂದು ಮೂಲೆಯಲ್ಲಿ ನಿಂತಿದೆ ಎಂದು ಪರಿಗಣಿಸಬಹುದು.
ಸೂಚನೆ-10
ವ್ಯಕ್ತಿಗೆ ಉತ್ತರ ದಿಕ್ಕಿನ ನಕ್ಷತ್ರ ಕಾಣದಿರುವುದು ಅಥವಾ ಆಕಾಶ, ಸೂರ್ಯ, ಚಂದ್ರರೆಲ್ಲರೂ ಕೆಂಪು ಬಣ್ಣದಲ್ಲಿ ಕಂಡರೆ ಇದು ಸ್ಪಷ್ಟವಾದ ಸಾವಿನ ಸೂಚನೆ ಎನ್ನಲಾಗುತ್ತದೆ.