Latest Updates
-
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ? -
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್: ಭಾರಿ ಮಳೆ ಮತ್ತು ಭೂಕುಸಿತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ಮಳೆಗಾಲದಲ್ಲಿ ಕಚೇರಿಗೆ ಹೋಗುವವರು ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ -
ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್: ಹೊಸ ಫೋಲ್ಡಬಲ್ ಫೋನ್ಗಳ ಲಾಂಚ್ಗೆ ಕೌಂಟ್ಡೌನ್, ನೀವು ರೆಡಿನಾ? -
ಅಂತರಾಷ್ಟ್ರೀಯ ಚೆಸ್ ದಿನ: ಆಟದ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್! -
ಭಾರಿ ಮಳೆ: ಅಮರನಾಥ-ವೈಷ್ಣೋದೇವಿ ಯಾತ್ರೆ ಸ್ಥಗಿತ; ಯಾತ್ರಿಕರು ಈಗ ಏನು ಮಾಡಬೇಕು? -
ಬಿರುಗಾಳಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ -
ಆನ್ಲೈನ್ ಫುಡ್ ಆರ್ಡರ್ ಮಾಡ್ತೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು! -
ಲಾರ್ಡ್ಸ್ ಅಂಗಳದಲ್ಲಿ ಹೈ-ವೋಲ್ಟೇಜ್ ಕದನ: ಭಾರತ-ಇಂಗ್ಲೆಂಡ್ ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲೋದು ಯಾರು? -
ಮಂಗಳೂರು ಮಳೆ: ಬೈಕ್ ಸವಾರರೇ ಎಚ್ಚರ! ಸ್ನಾಯು ನೋವು ತಡೆಯಲು ಮನೆಯಿಂದ ಹೊರಡುವ ಮುನ್ನ ಈ 6 ನಿಮಿಷದ ವ್ಯಾಯಾಮ ಮಾಡಿ
Shivratri Special: ಬೆಂಗಳೂರಿನ ಈ ಶಿವನ ದೇವಾಲಯವು ಭಕ್ತರಿಗೆ ಪ್ರಸಾದದ ರೂಪದಲ್ಲಿ ಮಜ್ಜಿಗೆ ಕೊಡುತ್ತದೆ
ಶಿವನನ್ನು ಯಾರು ಭಕ್ತಿಯಿಂದ ಆರಾಧಿಸುತ್ತಾರೋ ಅವರನ್ನು ಶಿವ ಎಂದಿಗೂ ಕೈ ಬಿಡಲ್ಲ ಎಂಬುವುದು ಭಕ್ತರ ಬಲವಾದ ನಂಬಿಕೆ. ಶಿವನಿಗೆ ಪೂಜೆಯಲ್ಲಿ ಅಭಿಷೇಕ ಕೂಡ ಪ್ರಮುಖವಾದದ್ದು. ಶಿವನಿಗೆ ಹಾಲು, ನೀರು, ಜೇನು ತುಪ್ಪ, ತುಪ್ಪ, ಸಕ್ಕರೆ, ಎಳನೀರು, ಶ್ರೀಗಂಧ, ಹಣ್ಣಿನ ರಸ ಇವುಗಳಿಂದ ಅಭಿಷೇಕ ಮಾಡಲಾಗುವುದು. ಶಿವನಿಗೆ ಅಭಿಷೇಕ ಮಾಡಿ ಮಾಡುವ ಪೂಜೆಗೆ ಹೆಚ್ಚಿನ ಫಲ ಸಿಗುವುದು ಎಂಬ ನಂಬಿಕೆ.

ಶಿವನಿಗೆ ಅಭಿಷೇಕ ಮಾಡಿ ಮಾಡುವ ಸಂಕಲ್ಪಕ್ಕೆ ಬೇಗ ಫಲ ಸಿಗುವುದು. ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವನಿಗೆ ಅಭಿಷೇಕ ಮಾಡಲಾಗುವುದು. ಹೆಚ್ಚಿನ ಭಕ್ತಾದಿಗಳು ಶಿವನಿಗೆ ಹಾಲಾಭಿಷೇಕ ಮಾಡಿಸುತ್ತಾರೆ. ಹೀಗೆ ಹಾಲಾಭಿಷೇಕ ಮಾಡಿದವರಿಗೆ ಮೊಸರನ್ನು ಪ್ರಸಾದವಾಗಿ ಬೆಂಗಳೂರಿನ ಶಿವನ ದೇವಾಲಯದಲ್ಲಿ ನೀಡಲಾಗುತ್ತಿದೆ.
ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿರುವ ಗಂಗಾಧರೇಶ್ವರ ದೇವಾಲಯದಲ್ಲಿ ಶಿವನಿಗೆ ಹಾಲಾಭಿಷೇಕ ಮಾಡಿದವರಿಗೆ ಮಜ್ಜಿಗೆಯನ್ನು ಪ್ರಸಾದವಾಗಿ ನೀಡಲಾಗುವುದು.
ಸೋಮವಾರವೆಂದರೆ ಶಿವನ ಆರಾಧನೆಗೆ ಮೀಸಲಿಟ್ಟ ದಿನ. ಈ ದಿನದಂದು ಸುಮಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಒಂದು ಅಂದಾಜು ಪ್ರಕಾರ ಭಕ್ತರು ಹಾಲಾಭಿಷೇಕಕ್ಕೆ ನೀಡುವ ಹಾಲು ಸುಮಾರು 500 ಲೀಟರ್ಗೂ ಅಧಿಕವಿರುತ್ತದೆ.
ಪ್ರದುಷ ವ್ರತ, ಶಿವರಾತ್ರಿ ಮುಂತಾದ ವಿಶೇಷ ದಿನಗಳಲ್ಲಿ ಇನ್ನೂ ಹೆಚ್ಚಿನ ಹಾಲು ಸಂಗ್ರಹವಾಗುತ್ತದೆ. ಈ ಹಾಲು ಶಿವಲಿಂಗಕ್ಕೆ ಅಭಿಷೇಕ ಮಾಡಿದ ಬಳಿಕ ವ್ಯರ್ಥ ಆಗಬಾರದೆಂದು ಅದರಿಂದ ಮೊಸರು ತಯಾರಿಸಿ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.
ಹಾಲು ವ್ಯರ್ಥವಾಗಬಾರದೆಂದು ಎಲ್ಲಾ ವ್ಯವಸ್ಥೆ ಮಾಡಿದ್ದು ನೈರ್ಮಲ್ಯ ಕಾಪಾಡಿಕೊಂಡಿದೆ.
ಇಲ್ಲಿ ಮಜ್ಜಿಗೆಯ ಗುಣಮಟ್ಟವನ್ನು ಪರಿಶೀಲಿಸದ ಬಳಿಕ ಭಕ್ತರಿಗೆ ಹಂಚಲಾಗುತ್ತಿದೆ.



Click it and Unblock the Notifications