Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಪವಾಡ: ಅನಂತ ಪದ್ಮನಾಭ ದೇವಾಲಯ ಕೊಳದಲ್ಲಿ ದೇವರ ಮೊಸಳೆ ಬಬಿಯಾ ಸ್ಥಾನ ತುಂಬಲು ಬಂದಿದೆ ಮರಿ ಮೊಸಳೆ!
ಕೇರಳದ ಅನಂತ ಪದ್ಮನಾಭ ದೇವಾಲಯದ ಹಲವು ವಿಶೇಷತೆಗಳಲ್ಲಿ ಅಲ್ಲಿರುವ ಕೊಳ ತುಂಬಾನೇ ವಿಶೇಷ.... ಆ ಕೊಳದಲ್ಲಿ ಬಬಿಯಾ ಎಂಬ ಮೊಸಳೆ ಇತ್ತು, ಆ ಮೊಸಳೆ ಸಸ್ಯಾಹಾರಿ ಆಗಿತ್ತು, ದೇವಾಲಯದಿಂದ ನೀಡುವ ಪ್ರಸಾದ ತಿಂದು ಜೀವಿಸುತ್ತಿತ್ತು. ಸುಮಾರು 70 ಕ್ಕೂ ಅಧಿಕ ವರ್ಷಗಳ ಬದುಕಿದ್ದ ಬಬಿಯಾ ಶ್ರೀ ವಿಷ್ಣುವಿನಲ್ಲಿ ಐಕ್ಯವಾದಾಗಿನಿಂದ ಅಲ್ಲಿಗೆ ಹೋಗುವ ಭಕ್ತರು ದೇವರ ಮೊಸಳೆಯನ್ನು ತುಂಬಾನೇ ಮಿಸ್ ಮಾಡುತ್ತಿದ್ದರು.

ಪವಾಡವೆಂಬಂತೆ ಮರಿ ಮೊಸಳೆ ಕಾಣಿಸಿಕೊಂಡಿದೆ
ಇದೀಗ ಬಬಿಯಾ ದೇವರ ಪಾದ ಸೇರಿ ಒಂದು ವರ್ಷ ಕಳೆಯುತ್ತಿದ್ದಂತೆ ಅದೇ ಕೊಳದಲ್ಲಿ ಮರಿ ಮೊಸಳೆ ಪ್ರತ್ಯಕ್ಷವಾಗಿರುವುದು ಭಕ್ತರಿಗೆ ಅಚ್ಚರಿ ಜೊತೆಗೆ ಖುಷಿ ತಂದಿದೆ. ಬಬಿಯಾ ಮತ್ತೆ ಬಂದಿದೆ ಎಂದು ಜನರು ನಂಬಲಾರಂಭಿಸಿದ್ದಾರೆ. ಈ ಮೊಸಳೆ ಎಲ್ಲರ ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ, ಜನರನ್ನು ಕಂಡರೆ ಸ್ವಲ್ಪ ಭಯವಿದೆ, ಆದರೆ ಅಲ್ಲಿಯ ಅರ್ಚಕರಿಗೆ ಹಾಗೂ ಕೆಲ ಭಕ್ತರ ಕಣ್ಣಿಗೆ ಈ ಮೊಸಳೆ ಕಂಡಿದೆ.
ದೇವಾಲಯದ ಮೂಲಗಳು ಹೇಳಿದ ಮತ್ತೊಂದು ಅಚ್ಚರಿಯ ವಿಶೇಷ
ಮೊದಲು ಈ ಮೊಸಳೆ ಕಾಣಿಸಿದ್ದು ಒಂದು ಮಗುವಿಗಂತೆ. ಕಾಙಂಗಾಡಿನಿಂದ ಒಂದು ಕುಟುಂಬ ದೇವಾಲಯಕ್ಕೆ ಬಂದಿದ್ದರು, ಆವಾಗ ಅವರ ಜೊತೆಗಿದ್ದ ಮಗು ನನಗೆ ಮೊಸಳೆ ನೋಡಬೇಕು ಎಂದು ಹಠ ಹಿಡಿಯಿತು, ಮನೆಯವರು ಈವಾಗ ಮೊಸಳೆ ಇಲ್ಲ ಎಂದು ಎಷ್ಟೇ ಸಮಧಾನ ಮಾಡಿದರೂ ಮಗು ಕೇಳಲಿಲ್ಲ, ಆದರೆ ಅಚ್ಚರಿ ಎಂಬಂತೆ ಅದೇ ಸಮಯದಲ್ಲಿ ಈ ಮರಿ ಮೊಸಳೆ ಕಣ್ಣಿಗೆ ಬಿದ್ದಿದೆ. ಅದನ್ನು ಮೊಬೈಲ್ನಲ್ಲಿ ಸೆರೆಹಿಡಿದು ಕ್ಷೇತ್ರದವರಿಗೆ ತೋರಿಸಿದಾಗ ಅವರೆಲ್ಲಾ ಬಂದು ನೋಡಿದಾಗ ಮೊಸಳೆ ಕಣ್ಣಿಗೆ ಬಿದ್ದಿಲ್ಲ. ಹಾಗಾಗಿ ಆ ಕೊಳದಲ್ಲಿ ನಿಜವಾಗಿಯೂ ಮೊಸಳೆ ಇದೆಯೇ ಎಂಬ ಸಂಶಯವಿತ್ತು.
ಆದರೆ ಅದೇ ಕುಟುಂಬ ಮತ್ತೊಮ್ಮೆ ಆ ದೇವಾಲಯಕ್ಕೆ ಬಂದಾಗ ಅವರಿಗೆ ಎರಡನೇ ಬಾರಿ ಕೂಡ ಮೊಸಳೆ ಕಾಣಿಸಿತು. ಈ ಬಾರಿ ದೇವಾಲಯದ ಅರ್ಚಕರಿಗೆ, ಅಲ್ಲಿಗೆ ಬಂದಿದ್ದ ಭಕ್ತರಿಗೆಲ್ಲಾ ಕಾಣಿಸಿತು. ಜನರ ಜೊತೆ ಇನ್ನೂ ಬರೆಯುತ್ತಿಲ್ಲ, ನಿಧಾನಕ್ಕೆ ಬಬಿಯಾ ರೀತಿಯೇ ಈ ಮೊಸಳೆ ಎಲ್ಲರಿಗೂ ದರ್ಶನ ಭಾಗ್ಯ ನೀಡಬಹುದು.ಮರಿ ಬಬಿಯಾ ಬಂದಿರುವುದಂತೂ ಭಕ್ತರಿಗೆ ತುಂಬಾನೇ ಖುಷಿ ತಂದಿದೆ.
ಈ ಕೊಳದಲ್ಲಿ ಒಂದು ಮೊಸಳೆ ಹೋದರೆ ಮತ್ತೊಂದು ತಾನಾಗಿಯೇ ಬರುತ್ತದೆ ಎಂಬ ಮಾತು ನಿಜವಾಗಿದೆ
ಬಬಿಯಾ ಬರುವುದಕ್ಕಿಂತ ಮುಂಚೆ ಒಂದು ಮೊಸಳೆಯಿತ್ತು, ಅದನ್ನು ಬ್ರಿಟಿಷರು ಗುಂಡು ಹಾಕಿ ಕೊಂಡರು, ಅದಾದ ಸ್ವಲ್ಪ ದಿನಗಳಲ್ಲಿ ಅಲ್ಲಿ ಮತ್ತೊಂದು ಮೊಸಳೆ ಮರಿ ಕಾಣಿಸಿತು. ಅದುವೇ ಬಬಿಯಾ... 70ಕ್ಕೂ ಅಧಿಕ ವರ್ಷ ಜೀವಿಸಿದ ಆ ಮೊಸಳೆ ಅರ್ಚಕರು ಬಬಿಯಾ ಅಂತ ಕೂಗಿದರೆ ಸಾಕು ಪ್ರತ್ಯಕ್ಷವಾಗಿ ಬಂದು ಪ್ರಸಾದ ತಿಂದು ಹೋಗುತ್ತಿತ್ತು,ಅರ್ಚರು ಮೊಸಳೆ ಬಂದಾಗ ಯಾವುದೇ ಭಯವಿಲ್ಲದೆ ಅದರ ಹಣೆಮುಟ್ಟಿ, ಹಣೆಗೆ ಚಂದನವಿಡುತ್ತಿದ್ದರು. ದೇವರ ಈ ಚಮತ್ಕಾರ ನೋಡಲೆಂದೇ ಭಕ್ತರು ಕಾಯುತ್ತಿದ್ದರು. ಬಬಿಯಾ ಕಾಲವಾದ ಬಳಿಕ ದೇವಾಸ್ಥಾನಕ್ಕೆ ಬಂದವರೆಲ್ಲಾ ಬಬಿಯಾವನ್ನು ತುಂಬಾನೇ ಮಿಸ್ ಮಾಡುತ್ತಿದ್ದರು. ಮತ್ತೊಂದು ಮೊಸಳೆ ಖಂಡಿತ ಬರುತ್ತದೆ ಎಂದು ಜನರು ಬಲವಾಗಿ ನಂಬಿದ್ದರು, ಅದರಂತೆ ಮೊಸಳೆ ಕಾಣಿಸಿಕೊಂಡಿದೆ.



Click it and Unblock the Notifications