Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕನ್ನಡ ರಾಜ್ಯೋತ್ಸವ 2023 : ಮೈಸೂರು ರಾಜ್ಯ ಕರ್ನಾಟಕ ಆದ ಇತಿಹಾಸ, ಕನ್ನಡ ಬಾವುಟದ ಮಹತ್ವ
ಎಲ್ಲಾದರು ಇರು ಎಂತಾದರು ಇರು ||೨||
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕವಿ ಕುವೆಂಪುರವರ ಈ ಸಾಲುಗಳನ್ನು ಪ್ರತಿಯೊಬ್ಬ ಕನ್ನಡಿಗ ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ ಖಂಡಿತ ಮರೆಯಲ್ಲ, ನಮ್ಮ ಕನ್ನಡ ನಾಡು, ಇಲ್ಲಿಯ ಭಾಷೆ, ಇಲ್ಲಿಯ ಸಂಸ್ಕೃತಿ, ಪರಂಪರೆ, ಅಚಾರ-ವಿಚಾರ, ವನ್ಯ ಸಂಪತ್ತು ಇವುಗಳಿಂದ ಶ್ರೀಮಂತವಾಗಿರುವ ನಾಡಾಗಿದೆ. ಈ ನಮ್ಮ ಕನ್ನಡ ನಾಡು, ಈ ಭಾಷೆಯನ್ನು ಕೊಂಡಾಡುತ್ತಾ ಸಂಭ್ರಮದಿಂದ ಆಚರಿಸುವ ದಿನವೇ ನವೆಂಬರ್ 1. ವಿವಿಧ ಭಾಗಗಳಾಗಿ ಹರಡಿ ಹೋಗಿದ್ದ ಕನ್ನಡಿಗರನ್ನು ಒಂದಾಗಿಸಿದ ದಿನವನ್ನು ನಾವೆಲ್ಲಾ ಕನ್ನಡ ರಾಜ್ಯೋತ್ಸವವೆಂದು ಆಚರಿಸುತ್ತೇವೆ.
ಕನ್ನಡವನ್ನು ಪ್ರತಿನಿಮಿಷ, ಪ್ರತಿದಿನ ಉಸಿರಾಡುತ್ತೇವೆ, ನವೆಂಬರ್ 1ರಂದು ಹಬ್ಬವಾಗಿ ಸಂಭ್ರಮಿಸುತ್ತೇವೆ. ಕನ್ನಡ ರಾಜ್ಯೋತ್ಸವದ ಇತಿಹಾಸ ಈ ದಿನದ ಮಹತ್ವದ ಬಗ್ಗೆ ಮತ್ತಷ್ಟು ವಿವರವಾಗಿ ನೋಡೋಣ ಬನ್ನಿ:

ಕನ್ನಡ ರಾಜ್ಯೋತ್ಸವ ಇತಿಹಾಸ
ಭಾರತಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಕರ್ನಾಟಕದ ಏಕೀಕರಣವಾಗಿರಲಿಲ್ಲ. 1956ರ ರಾಜ್ಯ ಪುನರ್ವಿಗಂಡನಾ ಕಾಯ್ದೆ ಜಾರಿಯಾದ ಬಳಿಕ ಕೂರ್ಗ್(ಕೊಡಗು), ಮದರಾಸು. ಹೈದರಾಬಾದ್, ಬಾಂಬೆ ಸಂಸ್ತಾನವನ್ನು ಮೈಸೂರಿಗೆ ಸೇರಿಸಲಾಯಿತು. 1956 ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಭಾಷೆಗಳ ಅಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಲಾಯಿತು, ಆದರೆ ಉತ್ತರ ಕರ್ನಾಟಕದ ಜನರಿಗೆ ಮೈಸೂರು ಹೆಸರನ್ನು ಉಳಿಸಿಕೊಳ್ಳಲು ಯಾವುದೇ ಒಲವು ಇರಲಿಲ್ಲ, ಹೀಗಾಗಿ 1873 ನವೆಂಬರ್ 1ರಂದು ಮೈಸಊರು ರಾಜ್ಯ ಅಂತ ಇದ್ದಿದ್ದನ್ನು ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು. ಅಗ ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದರು.

ಈ ನಾಡಿಗೆ ಕರ್ನಾಟಕ ಎಂದು ಹೆಸರು ಬಂದಿದ್ದೇಗೆ?
ಕರು+ನಾಡು=ಕರ್ನಾಟಕವಾಗಿದೆ. ಕರುನಾಡು ಅಂದರೆ ಕಪ್ಪು ಮಣ್ಣಿನ ನಾಡು, ಹಾಗಾಗಿ ಇದಕ್ಕೆ ಕರ್ನಾಟಕ ಎಂದು ಕರೆಯಲಾಗಿದೆ. ಭಾರತದಲ್ಲಿ ಕರ್ನಾಟಕ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 6ನೇ ದೊಡ್ಡ ರಾಜ್ಯವಾಗಿದೆ.

ಕನ್ನಡದ ಬಾವುಟ
ಕರ್ನಾಟಕಕ್ಕೆ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ. ಕನ್ನಡ ಹೋರಾಟಗಾರರಾದ ರಾಮಮೂರ್ತಿಯವರು ಕನ್ನಡ ಬಾವುಟ ಸಿದ್ಧಪಡಿಸಿದರು. ಹಳದಿ ಬಣ್ಣ ಸೌಹಾರ್ದತೆಯ ಸಂಕೇತ ಕೆಂಪು ಕ್ರಾಂತಿಯ ಸಂಕೇತ. ನಾವು ಕನ್ನಡಿಗರು ಕ್ರಾಂತಿಗೂ ಸೈ, ಶಾಂತಿಗೂ ಸೈ ಎಂಬ ಸಂದೇಶ ಸೂಚಿಸುತ್ತದೆ.
ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ



Click it and Unblock the Notifications











