Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಹನುಮಾನ್ ಜಯಂತಿ: ಪ್ರತಿಯೊಬ್ಬ ಹನುಮಾನ್ ಭಕ್ತರು ತಿಳಿದಿರಬೇಕಾದ ಸಂಗತಿಗಳು

ರಾಮ ಭಕ್ತನಾಗಿರುವ ಹನುಮಂತನನ್ನು ಆರಾಧಿಸದವರು ತುಂಬಾ ಕಡಿಮೆ. ಅದರಲ್ಲೂ ಬ್ರಹ್ಮಚಾರಿಗಳು ಹನುಮಂತನ ಧ್ಯಾನ ಪ್ರತಿನಿತ್ಮಾ ಡುವರು. ರಾಮಾಯಣದಲ್ಲಿ ಸೀತೆಯನ್ನು ವನವಾಸದಿಂದ ಬಿಡಿಸುವುದರಿಂದ ಹಿಡಿದು, ರಾಮಸೇತು ನಿರ್ಮಾಣ ಮಾಡುವಲ್ಲಿಯು ಹನುಮಂತನ ಪಾತ್ರ ಮಹತ್ವದ್ದು.
ಚೈತ್ರಾ ಮಾಸದಲ್ಲಿ ಬರುವಂತಹ ಹುಣ್ಣೆಮೆಯಂದು ಹಿಂದೂಗಳು ಹನುಮಾನ್ ಜಯಂತಿ ಆಚರಿಸುವರು. ಇದು ಹನುಮಂತನ ಹುಟ್ಟುಹಬ್ಬದ ದಿನವೆಂದು ಪರಿಗಣಿಸಲಾಗಿದೆ. ಹನುಮಾನ್ ಜಯಂತಿ ವೇಳೆ ಹನುಮಂತ ದೇವರ ಕೆಲವೊಂದು ಪ್ರೇರಣಾತ್ಮಕ ಕಥೆಗಳನ್ನು ತಿಳಿಯುವ....

ಹನುಮಂತ-ತುಂಬಾ ಪ್ರೇರಣೆಯ ಪಾತ್ರ
ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸ ರಾಮಚರಿತಮಾನಸದಲ್ಲಿ ಹನುಮಂತನು ತನ್ನ ದೇವರು ರಾಮನ ಸೇವೆ, ಭಕ್ತಿ ಮತ್ತು ಬದ್ಧತೆಯ ರೂಪ. ರಾಮ ಒಬ್ಬ ದೇವತಾರೂಪವೆಂದು ತಿಳಿದುಕೊಂಡ ಬಳಿಕ ಹನುಮಂತನು ಆತನಿಗಾಗಿ ತನ್ನ ಸರ್ವಸ್ವ ಸಮರ್ಪಿಸುವನು. ರಾಮನ ಸೇವೆಯ ಹೊರತಾಗಿ ಆತನಿಗೆ ಜಗತ್ತಿನಲ್ಲಿ ಬೇರೆ ಯಾವುದು ಕಾಣುವುದಿಲ್ಲ.

ಜ್ಞಾನಿನಮ ಅಗ್ರೇಗ್ಯಾಮಾ (ಬುದ್ಧಿವಂತ ಅಗ್ರಗಣ್ಯ)
ಸರ್ವೋಚ್ಚ ಸಾಧನೆಯ ಬುದ್ದಿವಂತ ಅಗ್ರಗಣ್ಯ ಎಂದು ತುಳಸಿದಾಸರು ಹನುಮಂತನನ್ನು ಬಣ್ಣಿಸಿದ್ದಾರೆ. ರಾಮಾಯಣದಲ್ಲಿ ರಾಮನನ್ನು ಹಲವಾರು ಕಡೆಗಳಲ್ಲಿ ಹನುಮಂತ ಗುರುತಿಸಿರುವ ಕಾರಣ ಆತ ತುಂಬಾ ಬುದ್ಧಿವಂತ. ರಾಮಾಯಣದ ಕಿಷ್ಕಿಂದ ಕಾಂಡದಲ್ಲಿ ರಾಮ ಮತ್ತು ಹನುಮಂತನ ಮೊದಲ ಭೇಟಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಹನುಮಂತನ ಮಾತಿನಿಂದ ರಾಮ ತುಂಬಾ ಪ್ರಭಾವಿತನಾಗುತ್ತಾನೆ ಮತ್ತು ಲಕ್ಷಣನಲ್ಲಿ ಹೇಳುತ್ತಾನೆ. ಇಂತಹ ಮಾತುಗಳನ್ನು ಆಡಲು ಇಬ್ಬರಿಂದ ಮಾತ್ರ ಸಾಧ್ಯ. ಒಂದು ವೇದಗಳಲ್ಲಿ ತುಂಬಾ ಪಾರಂಗತರಾಗಿರವವರು ಮತ್ತು ಸಾಮಾಜಿಕ ಹಾಗೂ ನೈತಿಕ ವಿಜ್ಞಾನವನ್ನು ಸರಿಯಾಗಿ ಕಲಿತುಕೊಂಡಿರುವವರಿಂದ ಸಾಧ್ಯವೆಂದು ಹೇಳುತ್ತಾನೆ.

ವಿನಮ್ರ ಸೇವಕ
ಹನುಮಂತನು ಸಂಪೂರ್ಣವಾಗಿ ತನ್ನ ಅಹಂನ್ನು ಧ್ವಂಸ ಮಾಡಿಕೊಂಡಿದ್ದ. ವಾಲ್ಮೀಕಿ ಮತ್ತು ತುಳಸಿದಾಸರ ರಾಮಾಯಣದಲ್ಲಿ ಇದನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದೆ. ಹನುಮಂತದಲ್ಲಿ ಸ್ವಯಂಸೇವೆಯ ಒಳ್ಳೆಯ ಗುಣವಿದೆ. ಹನುಮಂತ ನೀನು ನನಗೆ ಏನು ಮಾಡುತ್ತಿ ಎಂದು ರಾಮ ಹೇಳುತ್ತಾನೆ. ಈ ವೇಳೆ ಉತ್ತರಿಸುವ ಹನುಮಂತ, ನನ್ನ ಗೌರವ ಮತ್ತು ಪ್ರೀತಿ ಯಾವತ್ತೂ ಕಡಿಮೆಯಾಗದಿರಲಿ ಮತ್ತು ನಿಮ್ಮನ್ನು ಬಿಟ್ಟು ಬೇರೆ ಯಾವುದನ್ನು ನಾನು ಧ್ಯಾನಿಸದಂತೆ ಆಗಲಿ ಎನ್ನುತ್ತಾನೆ. ಹನುಮಂತನು ಮೋಕ್ಷ ಅಥವಾ ಸ್ವರ್ಗ ಕೇಳಲಿಲ್ಲ. ವಿನಮ್ರತೆಯಿಂದ ಸೇವೆ ಮಾಡಿದರೆ ಆಗ ಖಂಡಿತವಾಗಿಯೂ ಶ್ರೇಷ್ಠವಾಗಿರುವುದನ್ನು ಸಾಧಿಸಬಹುದು ಎಂದು ಹನುಮಂತ ಹೇಳಿಕೊಟ್ಟಿದ್ದಾನೆ.

ಹನುಮಂತ ಒಳ್ಳೆಯ ಗೆಳೆಯ
ಹನುಮಂತ ಮತ್ತು ಸುಗ್ರೀವನ ಗೆಳೆತನವು ಗಾಳಿ ಮತ್ತು ಬೆಂಕಿಯಂತಿತ್ತು. ತುಂಬಾ ಕಠಿಣ ಸಮಯದಲ್ಲಿ ಹನುಮಂತನು ಸುಗ್ರೀವನ ಕೈಬಿಡಲಿಲ್ಲ. ಆತನು ತನ್ನ ಗೆಳೆಯನಿಗೆ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿದ್ದಾನೆ.

ಹನುಮಂತ ಒಳ್ಳೆಯ ರಾಜತಾಂತ್ರಿಕ
ರಾಮನಿಗೆ ಹನುಮಂತನ ರಾಜತಾಂತ್ರಿಕತೆ ಮತ್ತು ಜ್ಞಾನದಲ್ಲಿ ಹೆಚ್ಚಿನ ನಂಬಿಕೆಯಿತ್ತು. ರಾವಣನ ಸೋದರ ವಿಭಿಷಣ ರಾಮನ ಬಳಿಗೆ ಬಂದಾಗ ಆತನನ್ನು ಸ್ನೇಹಿತನಾಗಿ ಸ್ವೀಕರಿಸಬೇಕೇ ಅಥವಾ ಬೇಡವೇ ಎನ್ನುವ ಗೊಂದಲವಿತ್ತು. ವಿಭಿಷಣನನ್ನು ಗೆಳೆಯನಂತೆ ಸ್ವೀಕರಿಸುವಂತೆ ಹೇಳಿದ ಹನುಮಂತ ತನ್ನ ರಾಜತಾಂತ್ರಿಕತೆ ತೋರಿಸಿದ. ಇದರಿಂದಾಗಿ ರಾವನನ್ನು ಕೊಲ್ಲಲು ವಿಭಿಷಣನ ಪಾತ್ರ ತುಂಬಾ ಮಹತ್ವದ್ದಾಗಿತ್ತು. ಹನುಮಂತನು ಲಂಕೆಗೆ ಬೆಂಕಿಯನ್ನಿಟ್ಟನು. ಇದು ಒಂದು ರಾಜಕೀಯ ನಡೆ. ಇದರಿಂದಾಗಿ ಹನುಮಂತನು ಅರ್ಧ ಯುದ್ಧ ಗೆದ್ದುಕೊಂಡಿದ್ದ.



Click it and Unblock the Notifications











