Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹನುಮಾನ್ ಜಯಂತಿ: ಪ್ರತಿಯೊಬ್ಬ ಹನುಮಾನ್ ಭಕ್ತರು ತಿಳಿದಿರಬೇಕಾದ ಸಂಗತಿಗಳು
ರಾಮ ಭಕ್ತನಾಗಿರುವ ಹನುಮಂತನನ್ನು ಆರಾಧಿಸದವರು ತುಂಬಾ ಕಡಿಮೆ. ಅದರಲ್ಲೂ ಬ್ರಹ್ಮಚಾರಿಗಳು ಹನುಮಂತನ ಧ್ಯಾನ ಪ್ರತಿನಿತ್ಮಾ ಡುವರು. ರಾಮಾಯಣದಲ್ಲಿ ಸೀತೆಯನ್ನು ವನವಾಸದಿಂದ ಬಿಡಿಸುವುದರಿಂದ ಹಿಡಿದು, ರಾಮಸೇತು ನಿರ್ಮಾಣ ಮಾಡುವಲ್ಲಿಯು ಹನುಮಂತನ ಪಾತ್ರ ಮಹತ್ವದ್ದು.
ಹನುಮಾನ್ ಜಯಂತಿ ಹಬ್ಬದ ಮಹತ್ವ ಹಾಗೂ ದಂತಕಥೆಗಳು
ಚೈತ್ರಾ ಮಾಸದಲ್ಲಿ ಬರುವಂತಹ ಹುಣ್ಣೆಮೆಯಂದು ಹಿಂದೂಗಳು ಹನುಮಾನ್ ಜಯಂತಿ ಆಚರಿಸುವರು. ಇದು ಹನುಮಂತನ ಹುಟ್ಟುಹಬ್ಬದ ದಿನವೆಂದು ಪರಿಗಣಿಸಲಾಗಿದೆ. ಹನುಮಾನ್ ಜಯಂತಿ ವೇಳೆ ಹನುಮಂತ ದೇವರ ಕೆಲವೊಂದು ಪ್ರೇರಣಾತ್ಮಕ ಕಥೆಗಳನ್ನು ತಿಳಿಯುವ....
ಹನುಮಂತ-ತುಂಬಾ ಪ್ರೇರಣೆಯ ಪಾತ್ರ
ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸ ರಾಮಚರಿತಮಾನಸದಲ್ಲಿ ಹನುಮಂತನು ತನ್ನ ದೇವರು ರಾಮನ ಸೇವೆ, ಭಕ್ತಿ ಮತ್ತು ಬದ್ಧತೆಯ ರೂಪ. ರಾಮ ಒಬ್ಬ ದೇವತಾರೂಪವೆಂದು ತಿಳಿದುಕೊಂಡ ಬಳಿಕ ಹನುಮಂತನು ಆತನಿಗಾಗಿ ತನ್ನ ಸರ್ವಸ್ವ ಸಮರ್ಪಿಸುವನು. ರಾಮನ ಸೇವೆಯ ಹೊರತಾಗಿ ಆತನಿಗೆ ಜಗತ್ತಿನಲ್ಲಿ ಬೇರೆ ಯಾವುದು ಕಾಣುವುದಿಲ್ಲ.
ಜ್ಞಾನಿನಮ ಅಗ್ರೇಗ್ಯಾಮಾ (ಬುದ್ಧಿವಂತ ಅಗ್ರಗಣ್ಯ)
ಸರ್ವೋಚ್ಚ ಸಾಧನೆಯ ಬುದ್ದಿವಂತ ಅಗ್ರಗಣ್ಯ ಎಂದು ತುಳಸಿದಾಸರು ಹನುಮಂತನನ್ನು ಬಣ್ಣಿಸಿದ್ದಾರೆ. ರಾಮಾಯಣದಲ್ಲಿ ರಾಮನನ್ನು ಹಲವಾರು ಕಡೆಗಳಲ್ಲಿ ಹನುಮಂತ ಗುರುತಿಸಿರುವ ಕಾರಣ ಆತ ತುಂಬಾ ಬುದ್ಧಿವಂತ. ರಾಮಾಯಣದ ಕಿಷ್ಕಿಂದ ಕಾಂಡದಲ್ಲಿ ರಾಮ ಮತ್ತು ಹನುಮಂತನ ಮೊದಲ ಭೇಟಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಹನುಮಂತನ ಮಾತಿನಿಂದ ರಾಮ ತುಂಬಾ ಪ್ರಭಾವಿತನಾಗುತ್ತಾನೆ ಮತ್ತು ಲಕ್ಷಣನಲ್ಲಿ ಹೇಳುತ್ತಾನೆ. ಇಂತಹ ಮಾತುಗಳನ್ನು ಆಡಲು ಇಬ್ಬರಿಂದ ಮಾತ್ರ ಸಾಧ್ಯ. ಒಂದು ವೇದಗಳಲ್ಲಿ ತುಂಬಾ ಪಾರಂಗತರಾಗಿರವವರು ಮತ್ತು ಸಾಮಾಜಿಕ ಹಾಗೂ ನೈತಿಕ ವಿಜ್ಞಾನವನ್ನು ಸರಿಯಾಗಿ ಕಲಿತುಕೊಂಡಿರುವವರಿಂದ ಸಾಧ್ಯವೆಂದು ಹೇಳುತ್ತಾನೆ.
ವಿನಮ್ರ ಸೇವಕ
ಹನುಮಂತನು ಸಂಪೂರ್ಣವಾಗಿ ತನ್ನ ಅಹಂನ್ನು ಧ್ವಂಸ ಮಾಡಿಕೊಂಡಿದ್ದ. ವಾಲ್ಮೀಕಿ ಮತ್ತು ತುಳಸಿದಾಸರ ರಾಮಾಯಣದಲ್ಲಿ ಇದನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದೆ. ಹನುಮಂತದಲ್ಲಿ ಸ್ವಯಂಸೇವೆಯ ಒಳ್ಳೆಯ ಗುಣವಿದೆ. ಹನುಮಂತ ನೀನು ನನಗೆ ಏನು ಮಾಡುತ್ತಿ ಎಂದು ರಾಮ ಹೇಳುತ್ತಾನೆ. ಈ ವೇಳೆ ಉತ್ತರಿಸುವ ಹನುಮಂತ, ನನ್ನ ಗೌರವ ಮತ್ತು ಪ್ರೀತಿ ಯಾವತ್ತೂ ಕಡಿಮೆಯಾಗದಿರಲಿ ಮತ್ತು ನಿಮ್ಮನ್ನು ಬಿಟ್ಟು ಬೇರೆ ಯಾವುದನ್ನು ನಾನು ಧ್ಯಾನಿಸದಂತೆ ಆಗಲಿ ಎನ್ನುತ್ತಾನೆ. ಹನುಮಂತನು ಮೋಕ್ಷ ಅಥವಾ ಸ್ವರ್ಗ ಕೇಳಲಿಲ್ಲ. ವಿನಮ್ರತೆಯಿಂದ ಸೇವೆ ಮಾಡಿದರೆ ಆಗ ಖಂಡಿತವಾಗಿಯೂ ಶ್ರೇಷ್ಠವಾಗಿರುವುದನ್ನು ಸಾಧಿಸಬಹುದು ಎಂದು ಹನುಮಂತ ಹೇಳಿಕೊಟ್ಟಿದ್ದಾನೆ.
ಹನುಮಂತ ಒಳ್ಳೆಯ ಗೆಳೆಯ
ಹನುಮಂತ ಮತ್ತು ಸುಗ್ರೀವನ ಗೆಳೆತನವು ಗಾಳಿ ಮತ್ತು ಬೆಂಕಿಯಂತಿತ್ತು. ತುಂಬಾ ಕಠಿಣ ಸಮಯದಲ್ಲಿ ಹನುಮಂತನು ಸುಗ್ರೀವನ ಕೈಬಿಡಲಿಲ್ಲ. ಆತನು ತನ್ನ ಗೆಳೆಯನಿಗೆ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿದ್ದಾನೆ.
ಹನುಮಂತ ಒಳ್ಳೆಯ ರಾಜತಾಂತ್ರಿಕ
ರಾಮನಿಗೆ ಹನುಮಂತನ ರಾಜತಾಂತ್ರಿಕತೆ ಮತ್ತು ಜ್ಞಾನದಲ್ಲಿ ಹೆಚ್ಚಿನ ನಂಬಿಕೆಯಿತ್ತು. ರಾವಣನ ಸೋದರ ವಿಭಿಷಣ ರಾಮನ ಬಳಿಗೆ ಬಂದಾಗ ಆತನನ್ನು ಸ್ನೇಹಿತನಾಗಿ ಸ್ವೀಕರಿಸಬೇಕೇ ಅಥವಾ ಬೇಡವೇ ಎನ್ನುವ ಗೊಂದಲವಿತ್ತು. ವಿಭಿಷಣನನ್ನು ಗೆಳೆಯನಂತೆ ಸ್ವೀಕರಿಸುವಂತೆ ಹೇಳಿದ ಹನುಮಂತ ತನ್ನ ರಾಜತಾಂತ್ರಿಕತೆ ತೋರಿಸಿದ. ಇದರಿಂದಾಗಿ ರಾವನನ್ನು ಕೊಲ್ಲಲು ವಿಭಿಷಣನ ಪಾತ್ರ ತುಂಬಾ ಮಹತ್ವದ್ದಾಗಿತ್ತು. ಹನುಮಂತನು ಲಂಕೆಗೆ ಬೆಂಕಿಯನ್ನಿಟ್ಟನು. ಇದು ಒಂದು ರಾಜಕೀಯ ನಡೆ. ಇದರಿಂದಾಗಿ ಹನುಮಂತನು ಅರ್ಧ ಯುದ್ಧ ಗೆದ್ದುಕೊಂಡಿದ್ದ.