Sawan Shivratri: ಶ್ರಾವಣ ಶಿವರಾತ್ರಿಯಂದು ಈ 7 ಕೆಲಸಗಳನ್ನು ಮಾಡಿದರೆ ಬದುಕು ಬಂಗಾರವಾಗಲಿದೆ!

ಶ್ರಾವಣ ಶಿವರಾತ್ರಿಯೂ ಹಿಂದೂಗಳಿಗೆ ಪವಿತ್ರ ಹಬ್ಬವಾಗಿದೆ. ಈ ಹಬ್ಬವನ್ನು ಶಿವ ಮತ್ತು ಪಾರ್ವತಿಯ ಮಿಲನದ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಪವಿತ್ರವಾದ ದಿನದಂದು ಭಕ್ತರು ಮಹಾದೇವನನ್ನು ಭಕ್ತಿಯಿಂದ ಭಜಿಸಿ, ಉಪವಾಸವನ್ನು ಕೈಗೊಳ್ಳುತ್ತಾರೆ. ಹಾಗೂ ಶಿವನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಈ ಬಾರಿ ಜುಲೈ 18 ರಿಂದ ಶ್ರಾವಣ ಶುರುವಾಗಿದ್ದು ಈ ತಿಂಗಳಿನಲ್ಲಿ ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿಗಾಗಿ ದೇವರನ್ನು ಭಕ್ತಿಯಿಂದ ಭಜಿಸಬೇಕು. ಆದರೆ ಈ ಸಂದರ್ಭದಲ್ಲಿ ಶಿವನನ್ನು ಪೂಜೆ ಮಾಡುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸಿದ್ರೆ ನಿಮ್ಮ ಸಂಕಷ್ಟಗಳೆಲ್ಲಾ ಪರಿಹಾರವಾಗಿ ನೀವು ಅಂದುಕೊಂಡ ಆಸೆಗಳೆಲ್ಲಾ ನೆರವೇರಲಿದೆ. ಅಷ್ಟಕ್ಕು ಶ್ರಾವಣ ಶಿವರಾತ್ರಿಯಂದು ಶಿವನ ಆರಾಧನೆ ಹೇಗಿರಬೇಕು ಅನ್ನೋದನ್ನು ತಿಳಿಯೋಣ.

Sawan Shivratri: Things You Must Do to Embrace the Auspicious Day in Kannada

1. ಶಿವ ಪುರಾಣವನ್ನು ಓದಿ

ಶ್ರಾವಣ ಶಿವರಾತ್ರಿಯ ದಿನ ನಿಮ್ಮಿಡೀ ದಿನವನ್ನು ನೀವು ಶಿವನಿಗಾಗಿ ಮೀಸಲಿಡಬೇಕು. ಹಿಂದೂ ಪುರಾಣಗಳಲ್ಲಿ ಭಗವಾನ್ ಶಿವನ ಬಗ್ಗೆ ಇರುವ ಮಹತ್ವದ ವಿಚಾರಗಳನ್ನು ತಿಳಿಯಲು ಶಿವ ಪುರಾಣಗಳು, ಮಹಾಭಾರತ ಅಥವಾ ಇತರ ಪವಿತ್ರ ಗ್ರಂಥಗಳನ್ನು ಓದಿ. ಇದರಿಂದ ಶಿವನ ಗುಣಗಳ ಬಗ್ಗೆ ತಿಳಿಯಬಹುದು, ಜೊತೆಗೆ ಆತ ಲೋಕಕಲ್ಯಾಣಕ್ಕಾಗಿ ಏನೆಲ್ಲಾ ಮಾಡಿದನು ಅನ್ನೋ ವಿಚಾರ ಗೊತ್ತಾಗುತ್ತದೆ.

2. ಮಂತ್ರ ಹಾಗೂ ಭಜನೆಗಳನ್ನು ಹೇಳಿ

ಶ್ರಾವಣ ಶಿವರಾತ್ರಿಯಂದು ಪವಿತ್ರ ಮಂತ್ರಗಳನ್ನು ಪಠಿಸುವ ಮೂಲಕ ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾದ ಭಕ್ತಿ ಭಜನೆಗಳನ್ನು ಹಾಡುವ ಮೂಲಕ ನಿಮ್ಮನ್ನು ನೀವು ಶಿವನಿಗೆ ಸಮರ್ಪಿಸಿಕೊಳ್ಳಿ. ಶಿವನ ಆಶೀರ್ವಾದ ಮತ್ತು ರಕ್ಷಣೆಯನ್ನು ಪಡೆಯಲು "ಓಂ ನಮಃ ಶಿವಾಯ" ಮಂತ್ರವನ್ನು ಪಠಿಸಿ. ಅತ್ಯಂತ ಭಕ್ತಿಯಿಂದ ಮಂತ್ರ ಹಾಗೂ ಭಜನೆಯನ್ನು ಹಾಡಿದರೆ ಶಿವ ಒಲಿಯುತ್ತಾನೆ ಎನ್ನುವ ನಂಬಿಕೆಯಿದೆ.

3. ಪೂಜಾ ವಿಧಿ ವಿಧಾನಗಳನ್ನು ಕೈಗೊಳ್ಳಿ

ಶ್ರಾವಣ ಶಿವರಾತ್ರಿಯ ದಿನ ಪೂಜಾ ವಿಧಿ-ವಿಧಾನಗಳನ್ನು ಕೈಗೊಳ್ಳುವಾಗ ಯಾವುದೇ ರೀತಿ ತಪ್ಪಾಗದಂತೆ ನೋಡಿಕೊಳ್ಳಬೇಕು. ಅದ್ರಲ್ಲಿ ಶ್ರಾವಣ ಶಿವರಾತ್ರಿಯ ದಿನ ಕೆಲವೊಂದು ಕಟ್ಟು ನಿಟ್ಟಿನ ಆಚರಣೆಗಳನ್ನು ಕೈಗೊಳ್ಳಬೇಕಾಗುತ್ತದೆ.

ಪವಿತ್ರ ಮಂತ್ರಗಳನ್ನು ಪಠಿಸುವಾಗ ಶಿವಲಿಂಗವನ್ನು ನೀರು, ಹಾಲು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡುವ ಮೂಲಕ ಪ್ರಾರಂಭಿಸಬೇಕು. ಧೂಪದ್ರವ್ಯವನ್ನು ಬೆಳಗಿಸಿ, ತಾಜಾ ಹೂವುಗಳನ್ನು ಅರ್ಪಿಸಿ ಮತ್ತು ಪವಿತ್ರ ಬೂದಿ ಅಥವಾ ಶ್ರೀಗಂಧದಿಂದ ದೇವರನ್ನು ಅಲಂಕರಿಸಬೇಕು. ನಿಮ್ಮ ಮನೆಯಲ್ಲಿ ಈ ಆಚರಣೆ ಸಾಧ್ಯವಾಗದಿದ್ದರೆ ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದು.

4. ಉಪವಾಸ ಕೈಗೊಳ್ಳಿ

ಶ್ರಾವಣ ಶಿವರಾತ್ರಿಯಂದು ಆಚರಿಸಲಾಗುವ ಪ್ರಾಥಮಿಕ ಆಚರಣೆಗಳಲ್ಲಿ ಉಪವಾಸ ಕೂಡ ಒಂದಾಗಿದೆ. ಭಕ್ತರು ಉಪವಾಸದ ಅವಧಿಯಲ್ಲಿ ಆಹಾರ ಮತ್ತು ನೀರು ಸೇವಿಸುವುದನ್ನು ತ್ಯಜಿಸುತ್ತಾರೆ. ಮಾನಸಿಕ ಶುದ್ಧೀಕರಣ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಬಯಸುತ್ತಾರೆ. ಉಪವಾಸವು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಹಾಗೂ ಭಗವಾನ್ ಶಿವನೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸೋದಕ್ಕೆ ಸಹಾಯ ಮಾಡುತ್ತದೆ.

5. ರುದ್ರಾಭಿಷೇಕ ಮಾಡಬೇಕು

ಶ್ರಾವಣ ಶಿರಾತ್ರಿಯಂದು ಶಿವನಿಗೆ ರುದ್ರ ಅಭಿಷೇಕವನ್ನು ಮಾಡುವಾಗ ವೈದಿಕ ಮಂತ್ರಗಳನ್ನು ಪಠಿಸುತ್ತಾ ಶಿವಲಿಂಗದ ಮೇಲೆ ನೀರು, ಹಾಲು ಅಥವಾ ಇತರ ಪವಿತ್ರ ದ್ರವಗಳನ್ನು ಸುರಿಯುವುದು ಮಹತ್ವದ ಆಚರಣೆಯಾಗಿದೆ. ಈ ಅರ್ಪಣೆಯು ಶಿವನ ಆಶೀರ್ವಾದ ಮತ್ತು ದೈವಿಕ ಅನುಗ್ರಹವನ್ನು ಪಡೆಯಲು ಸಹಾಯವಾಗುತ್ತೆ ಎಂದು ನಂಬಲಾಗಿದೆ. ಶ್ರಾವಣ ಶಿವರಾತ್ರಿಯಂದು ರುದ್ರ ಅಭಿಷೇಕದಲ್ಲಿ ಭಾಗವಹಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ನಿಮ್ಮಲ್ಲಿ ಆಧ್ಯಾತ್ಮಿಕತೆ ಹೆಚ್ಚಾಗುತ್ತದೆ. ಮತ್ತು ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ.

6. ದಾನ ಮಾಡಿ

ಶ್ರಾವಣ ಶಿವರಾತ್ರಿಯ ಆಚರಣೆಯ ಭಾಗವಾಗಿ ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ದತ್ತಿ ಸಂಸ್ಥೆಗಳಿಗೆ ಆಹಾರ, ಬಟ್ಟೆ ಅಥವಾ ವಿತ್ತೀಯ ವಸ್ತುಗಳನ್ನು ಕೊಡುಗೆಯಾಗಿ ನೀಡಿ. ಈ ರೀತಿ ಮಾಡಿದರೆ ಬಡವರು, ಕಷ್ಟದಲ್ಲಿರುವವರಿಗೆ ನೀವು ನಿಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಆ ಮಹಾದೇವನ ಕೃಪೆಗೆ ಪಾತ್ರವಾಗಲು ಸಹಾಯವಾಗುತ್ತಂತೆ.

7. ಆತ್ಮಾವಲೋಕನ ಮಾಡಿಕೊಳ್ಳಿ

ಶ್ರಾವಣ ಶಿವರಾತ್ರಿಯ ಸಮಯದಲ್ಲಿ ನಿಮ್ಮ ಆತ್ಮಾವಲೋಕನಕ್ಕೆ ಸೂಕ್ತ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಮೌಲ್ಯಮಾಪನ ಮಾಡಲು ಸಮಯ ತೆಗೆದುಕೊಳ್ಳಿ. ವೈಯಕ್ತಿಕ ಬೆಳವಣಿಗೆಗೆ ಉದ್ದೇಶಗಳನ್ನು ಇಟ್ಟುಕೊಳ್ಳಿ. ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ಶ್ರಾವಣ ಶಿವರಾತ್ರಿಯು ಶಿವನ ಭಕ್ತರಿಗೆ ಆಧ್ಯಾತ್ಮಿಕ ಅರ್ಥವನ್ನು ಹೊಂದಿರುವ ಮಹತ್ವದ ಹಬ್ಬವಾಗಿದೆ. ಈ ಮೇಲಿನ ಏಳು ಚಟುವಟಿಕೆಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸಬಹುದು. ಜೊತೆಗೆ ಶಿವನ ಆಶೀರ್ವಾದಕ್ಕೆ ಪಾತ್ರವಾಗಬಹುದು.

English summary

Sawan Shivratri: Things You Must Do to Embrace the Auspicious Day in Kannada

Sawan Shivratri: These Things You Must Do to Embrace the Auspicious Day. Read more.
Story first published: Tuesday, July 18, 2023, 17:00 [IST]
X
Desktop Bottom Promotion