Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಭಾರತದಲ್ಲಿ ಕೋವಿಡ್ 19 ಸೋಂಕಿತರಲ್ಲಿ ಸೈಟೊಮೆಗಾಲೊವೈರಸ್ ಪತ್ತೆ, ಇದರ ಲಕ್ಷಣಗಳೇನು?
ಭಾರತದಲ್ಲಿ ಇದೇ ಮೊದಲ ಬಾರಿಗೆ ಸೈಟೊಮೆಗಾಲೊವೈರಸ್ (CVM) ಅಂದ್ರೆ ಕೋವಿಡ್ 19ನಿಂದ ಗುದನಾಳದಲ್ಲಿ ರಕ್ತ ಸೋರುವ ಕಾಯಿಲೆ ಕಂಡು ಬಂದಿದೆ. ಕೋವಿಡ್ 19 ಹಲವಾರು ಲಕ್ಷಣಗಳು ಕಂಡು ಬಂದಿದ್ದೆವು, ಆದರೆ ಗುದನಾಳದಲ್ಲಿ ರಕ್ತಸ್ರಾವ ಲಕ್ಷಣಗಳು ಇದುವರೆಗೆ ಭಾರತದಲ್ಲಿ ಇರಲಿಲ್ಲ. ಇದೀಗ 5 ಸೋಂಕಿತರಲ್ಲಿ ಈ ಲಕ್ಷಣಗಳು ಕಂಡು ಬಂದಿದೆ ಎಂದು ದೆಹಲಿಯ ಶ್ರೀ ಗಂಗ ರಾಮ್ ಆಸ್ಪತ್ರೆ ಹೇಳಿದೆ.
ಈ ಲಕ್ಷಣಗಳು ರೋಗಿಗಳಲ್ಲಿ ಕೋವಿಡ್ 19 ಪಾಸಿಟಿವ್ ಬಂದ ಬಳಿಕವಷ್ಟೇ ಕಂಡು ಬಂದಿದೆ. ಈ ಲಕ್ಷಣಗಳು ಎರಡನೇ ಅಲೆಯಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ಕಂಡು ಬಂತು ಎಂದು ಆಸ್ಪತ್ರೆಯ ವರದಿಯಲ್ಲಿದೆ. ಈ ಸಮಸ್ಯೆ ಕಂಡು ಬಂದವರಲ್ಲಿ 20-30 ದಿನಗಳಾದರೂ ರಿಪೋರ್ಟ್ ಕೋವಿಡ್ 19 ಪಾಸಿಟಿವ್ ಇರುತ್ತಿದ್ದೆವು. ಇಬ್ಬರಲ್ಲಿ ತುಂಬಾ ರಕ್ತಸ್ರಾವ ಕಂಡು ಬಂದು ತೀವ್ರ ನಿಗಾ ಘಟಕದಲ್ಲಿ ಇಡಲಾಯಿತು, ಮತ್ತೊಬ್ಬರಿಗೆ ಸರ್ಜರಿ ಮಾಡಬೇಕಾಯಿತು, ಒಬ್ಬ ಸೋಂಕಿತ ರೋಗಿ ಅತ್ಯಧಿಕ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದರು ಎಂದು ವೈದ್ಯರು ಸೂಚಿಸಿದ್ದಾರೆ.

ಸೈಟೊಮೆಗಾಲೊವೈರಸ್ ಎಂದರೇನು?
ಸೈಟೊಮೆಗಾಲೊವೈರಸ್ ಅಥವಾ CVM ಎಂಬುವುದು ಸಾಮಾನ್ಯ ವೈರಸ್ ಆಗಿದೆ. ಮಯೋ ಕ್ಲೀನಿಕ್ ಪ್ರಕಾರ ಈ ವೈರಸ್ ಒಮ್ಮೆ ತಗುಲಿದರೆ ಆ ವ್ಯಕ್ತಿಯಲ್ಲಿ ಹಾಗೇ ಉಳಿದುಕೊಳ್ಳುತ್ತದೆ. ಆರೋಗ್ಯವಂತರಿಗೆ ಏನೂ ತೊಂದರೆಯಾಗಲ್ಲ. ಆದರೆ ಯಾರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೋ ಅವರಿಗೆ ಈ ವೈರಸ್ ಅಪಾಯ ಉಂಟು ಮಾಡುವುದು. ಈ ವೈರಸ್ ಎಂಜಲು, ರಕ್ತ, ಮೂತ್ರ ಅಥವಾ ದೇಹದ ಇತರ ದ್ರವ ಮೂಲಕ ಹರಡುವುದು. ಇದು ಹರ್ಪೀಸ್ ವೈರಸ್ ಸಂಬಂಧಿಸಿದ ಒಂದು ವೈರಸ್ ಆಗಿದೆ.

ಲಕ್ಷಣಗಳು
* ಆರೋಗ್ಯಕರ ವ್ಯಕ್ತಿಗೆ ಈ ವೈರಸ್ ತಗುಲಿದರೆ ಏನೂ ತೊಂದರೆಯಾಗುವುದಿಲ್ಲ, ಆದ್ದರಿಂದ ಗೊತ್ತೇ ಆಗುವುದಿಲ್ಲ.
* ಈ ವೈರಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಮೊದಲಿಗೆ ಗಂಟಲು ನೋವು, ಮೈಕೈ ನೋವು, ತಲೆಸುತ್ತು, ಗ್ರಂಥಿಗಳಲ್ಲಿ ಊತ, ಜ್ವರ ಕಂಡು ಬರುವುದು. ಅಲ್ಲದೆ ಈ ವೈರಸ್ ಸುಲಭವಾಗಿ ಹರಡುವುದು.
* ಅದೇ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇದ್ದರೆ ಅಂದ್ರೆ ಅಂಗಾಂಗ ಕಸಿ ಮಾಡಿಸಿದವರಿಗೆ, ಗರ್ಭಿಣಿಯರಿಗೆ ಅಪಾಯಕಾರಿ. ಗರ್ಭಿಣಿಯರಿಗೆ ಈ ವೈರಸ್ ತಗುಲಿದರೆ ಮಗುವಿಗೂ ಬರುವ ಸಾಧ್ಯತೆ ಇದೆ.
* ಇದು ಶ್ವಾಸಕೋಶ, ಲಿವರ್, ಅನ್ನನಾಳ, ಹೊಟ್ಟೆ, ಕರುಳು, ಮೆದುಳಿಗೆ ಹಾನಿಯುಂಟು ಮಾಡುವುದು,

ಹೇಗೆ ಬರುತ್ತದೆ?
ಸೋಂಕಿತರ ಎಂಜಲು, ಮೂತ್ರ, ಬೆವರು, ಎದೆ ಹಾಲು, ವೀರ್ಯ, ಜನನಾಂಗದ ದ್ರವ ಇವುಗಳ ಮೂಲಕ ಮತ್ತೊಬ್ಬರಿಗೆ ಹರಡಬಹುದು.

ಪರೀಕ್ಷೆ
* ಇದನ್ನು ರಕ್ತ, ಮೂತ್ರ ಹಾಗೂ ಬಯೋಸ್ಪೈ ಮಾಡುವ ಮೂಲಕ ಪತ್ತೆ ಹಚ್ಚಲಾಗುವುದು.



Click it and Unblock the Notifications











