Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೊರೊನಾವೈರಸ್ಗೆ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯೇ?
ಕೋವಿಡ್ 19 ಈ ಹೆಸರು ಕೇಳುತ್ತಿದ್ದಂತೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ವಿಶ್ವದ ಮನುಕುಲದಲ್ಲಿ ಒಂದು ಕರಾಳ ಅಧ್ಯಾಯವನ್ನೇ ಮೂಡಿಸಿರುವ ಕೊರೊನಾವೈರಸ್ಗೆ ಅಂತ್ಯ ಎಂದು ಎಂಬುವುದೇ ಯಾರಿಗೂ ತಿಳಿದಿಲ್ಲ. ಪರಿಸ್ಥಿತಿ ಕೈ ಮೀರದಂತೆ ಪ್ರತಿಯೊಂದು ರಾಷ್ಟ್ರವೂ ಮುನ್ನೆಚ್ಚರಿಕೆ ವಹಿಸುತ್ತಿದೆ.

ಭಾರತದಲ್ಲಿ 500 ಕೇಸ್ಗಳು ಪತ್ತೆಯಾಗುವ ಮುನ್ನವೇ ಲಾಕ್ಡೌನ್ ಮಾಡದ್ದರೂ 17,000 ಗಡಿ ದಾಟಿ ಮುನ್ನುಗ್ಗುತ್ತಿರುವುದು ನೋಡಿದರೆ ಲಾಕ್ಡೌನ್ ಇಲ್ಲದಿದ್ದರೆ ಪರಿಸ್ಥಿತಿ ಇನ್ನೇನು ಆಗುತ್ತಿತ್ತು ಎನ್ನುವುದು ಊಹಿಸಿದರೆ ಯಾರಿಗಾದರೂ ಭಯ ಉಂಟಾಗುವುದು.
ಕೊರೊನಾ ಜ್ವರದ ಹೊಡೆತಕ್ಕೆ ವಿಶ್ವದ ದೊಡ್ಡಣ್ಣ ಆಗಿದ್ದ ಅಮೆರಿಕ, ಶ್ರೀಮಂತ ರಾಷ್ಟ್ರಗಳಾದ್ದ ದುಬೈ, ಇಟಲಿ, ಸ್ಪೇನ್ ಆರ್ಥಿಕಕತೆಯಲ್ಲಿ ಮುನ್ನುಗ್ಗುತ್ತಿರುವ ಚೀನಾ ಮುಂತಾದ ರಾಷ್ಟ್ರಗಳೇ ತತ್ತರಿಸಿ ಹೋಗಿವೆ. ಇದೇ ಮೊದಲ ಬಾರಿಗೆ ಇಡೀ ಜಗತ್ತೇ ಸ್ತಬ್ಧವಾಗಿದೆ.
ಕೊರೊನಾ ವೈರಸ್ ನಾಶಕ್ಕೆ ಔಷಧಿಗಳನ್ನ ಕಂಡು ಹಿಡಿಯಲಾಗಿದೆ ಎಂದು ಹೇಳಲಾಗಿದ್ದರೂ ಆ ಔಷಧಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ. ಕೆಲವು ಕಡೆ ಏಡ್ಸ್ ರೋಗಕ್ಕೆ ನೀಡುತ್ತಿದ್ದ ಔಷಧಿ ನೀಡಿ ರೋಗಿಗಳನ್ನು ಗುಣ ಪಡಿಸುತ್ತಿದ್ದಾರೆ. ಇದರ ಜೊತೆಗೆ ಕೊರೊನಾಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏನಿದು ಪ್ಲಾಸ್ಮಾ ಥೆರಪಿ, ಇದು ಎಷ್ಟರ ಮಟ್ಟಿಗೆ ಕೊರೊನಾವೈರಸ್ ತಡೆಗಟ್ಟಲು ಸಹಕಾರಿ ಎಂಬುವುದನ್ನು ನೋಡೋಣ ಬನ್ನಿ:

ಪ್ಲಾಸ್ಮಾ ಥೆರಪಿ ಎಂದರೇನು?
ಇದೊಂದು ಹೊಸ ಬಗೆಯ ಚಿಕಿತ್ಸೆ ಆಗಿದೆ. ಕೊರೊನಾ ಪೀಡಿತ ರೋಗಿಗಳಿಗೆ ಈ ಚಿಕಿತ್ಸೆ ನೀಡಿ ಒಂದಿಷ್ಟು ಯಶಸ್ಸುಯಾಗಿರುವ ಉದಾಹರಣೆಗಳು ನಮ್ಮ ಮುಂದೆ ಇದೆ. ಕೋವಿಡ್ 19ನಿಂದ ಚೇತರಿಸಿಕೊಂಡ ವ್ಯಕ್ತಿಗಳ ರಕ್ತವನ್ನು ಈ ಪ್ಲಾಸ್ಮಾ ಥೆರಪಿಯಲ್ಲಿ ಬಳಸಲಾಗುವುದು.
ನಮ್ಮ ದೇಹದ ರಕ್ತನಾಳಗಳಲ್ಲಿ ಹರಿಯುವ ರಕ್ತದಲ್ಲಿ ಪ್ಲಾಸ್ಮಾ ಮತ್ತು ರಕ್ತಕಣಗಳು ಇರುತ್ತದೆ. ಈ ರಕ್ತಗಳನ್ನು ಬೇರ್ಪಡಿಸಿದಾಗ ಸಿಗುವ ದ್ರವವೇ ಪ್ಲಾಸ್ಮಾ ಆಗಿರುತ್ತದೆ. ಈ ಪ್ಲಾಸ್ಮಾದಲ್ಲಿ ಸಾಕಷ್ಟು ಆ್ಯಂಟಿಬಾಡಿಗಳಿರುತ್ತವೆ. ಒಬ್ಬ ವ್ಯಕ್ತಿಯಿಂದ ತೆಗೆದ ಪ್ಲಾಸ್ಮಾದಿಂದ 3-5 ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬಹುದು.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಒಬ್ಬ ವ್ಯಕ್ತಿಯ ದೇಹಕ್ಕೆ ವೈರಾಣು ಸೇರಿದಾಗ ಅದು ಸಹಜವಾಗಿಯೇ ರಕ್ತವನ್ನು ಸೇರಿಕೊಳ್ಳುತ್ತದೆ. ದೇಹಕ್ಕೆ ಹೊರಗಿನ ಅಪರಿಚಿತ ವೈರಾಣು ಬಂದಾಗ ರೋಗ ನಿರೋಧಕ ಶಕ್ತಿಗಳು ಚುರುಕಾಗುತ್ತವೆ. ನಮ್ಮ ದೇಹದಲ್ಲಿ ಲಿಂಪೊಸೈಟ್ ಎಂಬ ಬಿಳಿ ರಕ್ತಕಣಗಳು ಆ್ಯಂಟಿಬಾಡಿಗಳನ್ನು ಉತ್ಪಾದಿಸಿ ವೈರಾಣುಗಳ ವಿರುದ್ಧ ಹೋರಾಡುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಮಾತ್ರ ವೈರಾಣು ತನ್ನ ಪ್ರಭಾವ ಬೀರುತ್ತವೆ.

ಈ ಕಲ್ಪನೆ ಹುಟ್ಟಿದ್ದು ಯಾವಾಗ?
ಫ್ಲಾಸ್ಮಾಥೆರಪಿ ಎಂಬ ಚಿಕಿತ್ಸಾ ವಿಧಾನವನ್ನು ಜರ್ಮನ್ನ ಡಾ. ಎಮಿಲ್ವಾನ್ ಬೆಹ್ರಿಂಗ್ ಎಂಬ ವೈದ್ಯ 1890ರಲ್ಲಿ ಕಂಡು ಹಿಡಿದರು. ಡಿಪ್ತೀರಿಯಾ ವಿರುದ್ಧ ಆ್ಯಂಟಿಬಾಡಿಗಳನ್ನು ಗುರುತಿಸಿದ ಈತ ಪ್ಲಾಸ್ಮಾ ಥೆರಪಿ ಮೂಲಕ ಮೊಲಗಳಿಗೆ ಡಿಫ್ತೀರಿಯಾ ಬರದಂತೆ ತಡೆದಿದ್ದ. ಇದಕ್ಕಾಗಿ ಈತನಿಗೆ ನೊಬೆಲ್ ಪ್ರಶಸ್ತಿ ಕೂಡ ಲಭಿಸಿದೆ.

ಯಾವ ಮಾರಕ ರೋಗಗಳಿಗೆ ಈ ಚಿಕಿತ್ಸೆ ಪರಿಣಾಮಕಾರಿಯಾಗಿವೆ?
- 1918ರಲ್ಲಿ ಸ್ಪಾನಿಷ್ ಪ್ಲೂ ಬಂತು ಆಗ ಈ ವಿಧಾನವನ್ನು ಚಿಕಿತ್ಸೆಯಲ್ಲಿ ಬಳಸಲಾಗಿತ್ತು.
- 1920ರಲ್ಲಿ ಡಿಫ್ತೀರಿಯಾ ಸಾಂಕ್ರಾಮಿಕ ರೋಗ ಬಂದಾಗಲೂ ಈ ಥೆರಪಿ ಬಳಸಿದ್ದು ಪ್ರಯೋಜನಕಾರಿಯಾಗಿತ್ತು.
- 2012ರಲ್ಲಿ ಕೊರೊನಾವೈರಸ್ ರೀತಿಯಲ್ಲಿ ಕಾಡಿದ MERS ರೋಗ ಚಿಕಿತ್ಸೆಗೂ ಇದು ಪರಿಣಾಮಕಾರಿಯಾಗಿತ್ತು.
- ಇನ್ನು ಅತ್ಯಂತ ಭಯಂಕರ ಸೋಂಕು ಆಗಿದ್ದ ಎಬೋಲಾ ಚಿಕಿತ್ಸೆಯಲ್ಲಿಯೂ ಈ ವಿಧಾನವನ್ನು ಬಳಸಲಾಗಿತ್ತು.

ಭಾರತದಲ್ಲಿ ಈ ತಂತ್ರಜ್ಞಾನ ಇನ್ನೂ ಬಂದಿಲ್ಲ
ಈ ಪ್ಲಾಸ್ಮಾ ಚಿಕಿತ್ಸಾ ವಿಧಾನವನ್ನು ಚೀನಾದಲ್ಲಿ ಮಾಡಿ ಯಶಸ್ವಿ ಕಂಡಿದ್ದರು. 10 ರೋಗಿಗಳಿಗೆ ಪ್ರಯೋಗಿಸಿದ್ದರು, ಅವರಲ್ಲಿನ 7 ರೋಗಿಗಳು ಗುಣಮುಖರಾದರು ಎಂದು ಅಧ್ಯಯನ ವರದಿಗಳು ಹೇಳಿವೆ. ಆದರೆ ಭಾರತದಲ್ಲಿ ಈ ತಂತ್ರಜ್ಞಾನವನ್ನೂ ಇನ್ನೂ ಬಳಸಿಲ್ಲ. ದೆಹಲಿ, ಗುಜರಾತ್, ಕೇರಳ, ಮಹಗಾರಾಷ್ಟ್ರ ಈ ಚಿಕಿತ್ಸೆ ಮಾಡಲು ರೋಗ ನಿಯಂತ್ರಣ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿವೆ. ಸದ್ಯಕ್ಕೆ ಕೇರಳ ರಾಜ್ಯಕ್ಕೆ ಅನುಮತಿ ಸಿಕ್ಕಿದೆ.
ಈ ಚಿಕಿತ್ಸೆ ಫಲಕಾರಿಯಾಗಿ ದೇಶದಲ್ಲಿ ಕೋವಿಡ್ 19 ಭಯ ಇಲ್ಲವಾಗಲಿ ಎಂದು ಬಯಸೋಣ....



Click it and Unblock the Notifications