Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಥಟ್ಟನೇ ತ್ವಚೆಯನ್ನು ಬೆಳ್ಳಗಾಗಿಸುವ ಫೇಸ್ ಕ್ರೀಮ್!
ಹೆಣ್ಣಿಗೆ ಸೌಂದರ್ಯ ಎಂಬುದು ದೈವದತ್ತ ವರವಾಗಿದೆ. ದೇವರು ಸ್ತ್ರೀಯನ್ನು ನಿರ್ಮಾಣ ಮಾಡಲು ಬಹು ಸಮಯವನ್ನು ತೆಗೆದುಕೊಂಡಿದ್ದರು ಎಂಬ ಮಾತು ಖಂಡಿತ ಸುಳ್ಳಲ್ಲ ಏಕೆಂದರೆ ಭೂಮಿಯ ಮೇಲಿರುವ ಪ್ರತಿಯೊಬ್ಬ ಹೆಣ್ಣು ಒಂದಿಲ್ಲೊಂದು ರೀತಿಯಿಂದ ಸುಂದರಿಯಾಗಿದ್ದಾರೆ. ಆದರೆ ಹೆಣ್ಣಿನ ಮನೋಸಹಜ ಬಯಕೆಯಿಂದ ಆಕೆಗೆ ಇನ್ನಷ್ಟು ಸುಂದರವಾಗಿ ಕಾಣಬೇಕು ಎನ್ನುವ ಮೋಹ ಮನದಲ್ಲಿ ಮೂಡುತ್ತದೆ.
ತಾವು ಇನ್ನಷ್ಟು ಸುಂದರಿಯಾಗಿ ನಾಲ್ಕು ಜನರಲ್ಲಿ ಎದ್ದುಗಾಣುವಂತಿರಬೇಕು ನಮ್ಮ ಸೌಂದರ್ಯವನ್ನು ಪ್ರತಿಯೊಬ್ಬರೂ ಹೊಗಳುವಂತಿರಬೇಕು ಎಂದೇ ಪ್ರತಿಯೊಂದು ಹೆಣ್ಣು ಅಂದುಕೊಳ್ಳುತ್ತಾಳೆ ಮತ್ತು ಅದಕ್ಕಾಗಿ ಕೊಂಚ ಹಣವನ್ನೂ ವಿನಿಯೋಗಿಸುತ್ತಾಳೆ. ಸೌಂದರ್ಯ ಸಲಹೆಗಳನ್ನು ಪಾಲಿಸುವುದು, ಸೌಂದರ್ಯಕ್ಕೆ ಸಂಬಂಧಿಸಿದ ಮಾಸಪತ್ರಿಕೆಗಳನ್ನು ಅಧ್ಯಯನ ಮಾಡುವುದು, ಇಂಟರ್ನೆಟ್ ಜಾಲಾಡುವುದು ಹೀಗೆ ಸೌಂದರ್ಯ ವೃದ್ಧಿಸುವ ಸಲಹೆಗಳಿಗಾಗಿ ಆಕೆಯ ಹುಡುಕಾಟ ಮುಗಿಯುವುದೇ ಇಲ್ಲ. ಸಹಜ ಸೌಂದರ್ಯಕ್ಕಾಗಿ ಒಂದಿಷ್ಟು ಸರಳೋಪಾಯಗಳು
ಆದರೆ ಈ ಸೌಂದರ್ಯದ ಹುಚ್ಚು ಹೆಚ್ಚಾದಲ್ಲಿ ನಾವು ಸಲಹೆಗಳನ್ನು ಪಾಲಿಸದೆಯೇ ಹಲವಾರು ಪ್ರಸಾಧನ ಸಾಮಾಗ್ರಿಗಳ ಬಳಕೆಯನ್ನು ಮಾಡುತ್ತೇವೆ. ಅದು ಒಳ್ಳೆಯದೋ ಕೆಟ್ಟದ್ದೋ ಎಂಬುದಾಗಿ ಕೂಡ ಆಲೋಚಿಸದೇ ಅದನ್ನು ಬಳಸುತ್ತಾರೆ. ಇದರಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ಅನುಭವಿಸುವುದು ಇದ್ದೇ ಇದೆ. ಇಂದಿನ ಲೇಖನದಲ್ಲಿ ಸೌಂದರ್ಯ ವೃದ್ಧಿಸುವ ಅದೂ ನೈಸರ್ಗಿಕ ರೀತಿಯಲ್ಲಿರುವ ಕೆಲವೊಂದು ಕ್ರಮಗಳನ್ನು ನಿಮ್ಮ ಮುಂದೆ ನಾವು ಇರಿಸುತ್ತಿದ್ದು ನಿಮಗೆ ಯಾವುದೇ ಅಡ್ಡಪರಿಣಾಮಗಳನ್ನು ಇದು ಉಂಟುಮಾಡದೇ ನಿಮ್ಮನ್ನು ಸುಂದರಿಯಾಗಿಸುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಆ ಸಲಹೆಗಳೇನು ಎಂಬುದನ್ನು ಅರಿಯೋಣ

ಬಾದಾಮಿ ಎಣ್ಣೆ
ಚರ್ಮ ಒಣಗಲು ಮತ್ತು ಕಳಾಹೀನವಾಗಲು ಮುಖ್ಯ ಕಾರಣ ಚರ್ಮದ ನೈಸರ್ಗಿಕ ತೈಲಗಳು ಆವಿಯಾಗುವುದು. ಇದಕ್ಕೆ ಬಿಸಿನೀರಿನ ಸ್ನಾನ ಮತ್ತು ವಾತಾವರಣದ ಏರುಪೇರು ಪ್ರಮುಖ ಕಾರಣವಾಗಿವೆ. ಇದನ್ನು ಸರಿಪಡಿಸಲು ಬಾದಾಮಿ ಎಣ್ಣೆ ಅತ್ಯಂತ ಸೂಕ್ತವಾಗಿದೆ. ಇದಕ್ಕಾಗಿ ಕೊಂಚ ಬಾದಾಮಿ ಎಣ್ಣೆಯನ್ನು ನಯವಾಗಿ ಮಸಾಜ್ ಮಾಡುತ್ತಾ ಒಣಗಿರುವ ಚರ್ಮದ ಮೇಲೆ ಹಚ್ಚುತ್ತಾ ಬನ್ನಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಚರ್ಮ ಕೋಮಲ ಮತ್ತು ತುಂಬಿಕೊಂಡಂತಿರುತ್ತದೆ.

ಓಟ್ಸ್ ಮತ್ತು ಜೇನು
ಓಟ್ ಮೀಲ್ ಅಥವಾ ಓಟ್ಸ್ನ ಭೂಸಾ ಸಹಾ ಉತ್ತಮ ಸೌಂದರ್ಯವರ್ಧಕವಾಗಿದೆ. ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಇದಕ್ಕೆ ಕೊಂಚ ಜೇನು ಮತ್ತು ಕೊಂಚ ಓಟ್ಸ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಪ್ಪನಾಗಿ ಮುಖಕ್ಕೆ ಹಚ್ಚಿ ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೌತೆಕಾಯಿ
ಸೂರ್ಯನ ಝಳದಿಂದ ಬಳಲಿದ ಚರ್ಮಕ್ಕೆ ಆರೈಕೆ ನೀಡಲು ಸೌತೆಕಾಯಿ ಅತ್ಯುತ್ತಮವಾಗಿದೆ. ಇದು ಚರ್ಮಕ್ಕೆ ಆರ್ದ್ರತೆ ನೀಡುವ ಜೊತೆಗೇ ಕಣ್ಣುಗಳ ಕೆಳಭಾಗದ ಕಪ್ಪುಕಲೆಯನ್ನೂ ತೊಲಗಿಸಲು ನೆರವಾಗುತ್ತದೆ. ಇದಕ್ಕಾಗಿ ಎಳೆ ಸೌತೆಯನ್ನು ನಯವಾಗಿ ಅರೆದು ನೇರವಾಗಿ ಚರ್ಮದ ಮೇಲೆ ದಪ್ಪನಾದ ಲೇಪನದಂತೆ ಹಚ್ಚಿಕೊಳ್ಳಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾದಾಮಿ
ಕೆಲವು ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಇದನ್ನು ಕೊಂಚ ಹಸಿ ಹಾಲಿನೊಂದಿಗೆ ನಯವಾಗಿ ಅರೆದು ಚರ್ಮಕ್ಕೆ ಹಚ್ಚಿಕೊಳ್ಳಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮದ ಕಲೆಗಳನ್ನು ತೊಲಗಿಸಲು ಮತ್ತು ಕಪ್ಪಾದ ಭಾಗಗಳನ್ನು ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ನಿಯಮಿತವಾಗಿ ಉಪಯೋಗಿಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.

ನೈಸರ್ಗಿಕ ಸ್ಕ್ರಬ್
ಮೂರು ಚಮಚ ಗ್ರೀನ್ ಟೀ, ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ನಿಮ್ಮ ಆಯ್ಕೆಯ ಮಾಯಿಶ್ಚರ ಕ್ರೀಮ್ನ್ನು ಸರಿಯಾಗಿ ಕಲಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾ ನಿಧಾನವಾಗಿ ಸ್ಕ್ರಬ್ ಮಾಡಿ. ಈ ಸ್ಕ್ರಬ್ ನಿಮ್ಮ ಮುಖವನ್ನು ತಾಜಾ, ಹೊಳಪು ಮತ್ತು ಸಹಜವಾಗಿರುವಂತೆ ಮಾಡುತ್ತದೆ. ಈ ನೈಸರ್ಗಿಕ ಸ್ಕ್ರಬ್ ಅನ್ನು ಸಹಜ ಮತ್ತು ಹೊಳೆಯುವ ತ್ವಚೆಗೆ ಬಳಸಿ.

ಹಸಿ ಬೀಟ್ರೂಟಿನ ರಸ
ಹಸಿ ಬೀಟ್ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.



Click it and Unblock the Notifications











