Tap to Read ➤

ಯುಗಾದಿ ಪಂಚಾಂಗ: ವೃಷಭ ರಾಶಿಯವರಿಗೆ ಹೊಸ ಸಂವತ್ಸರ ಹೇಗಿರಲಿದೆ?

ಈ ಹೊಸ ವರ್ಷದಲ್ಲಿ ಯುಗಾದಿ ಪಂಚಾಂಗ ಪ್ರಕಾರ ನಿಮ್ಮ ರಾಶಿ ಭವಿಷ್ಯ ಹೇಳಲಾಗುವುದು. ನಾವಿಲ್ಲಿಈ ಶುಭಕೃತ ನಾಮ ಸಂವತ್ಸರದಲ್ಲಿ ವೃಷಭ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ವಿವರವಾಗಿ ನೀಡಲಾಗಿದೆ ನೋಡಿ:
Reena TK
ವೃಷಭ ರಾಶಿಯ ಅಧಿಪತಿ ಶುಕ್ರ. ಯುಗಾದಿ ಪಂಚಾಂಗ ಪ್ರಕಾರ ನಿಮಗೆ ಆದಾಯ 8 ಇದ್ದರೆ ವ್ಯಯ ಕೂಡ 8 ಇರುತ್ತದೆ, ಅಂದರೆ ಗಳಿಸಿದ್ದು ಹಾಗೆಯೇ ಖರ್ಚಾಗುವುದು, ಇನ್ನು ಯೋಗ 6 ಇದ್ದರೆ ಅವಮಾನ 6 ಇದೆ. ವೃಷಭ ರಾಶಿಯಲ್ಲಿ ಕೃತಿಕಾ ನಕ್ಷತ್ರ 2, 3, 4ನೇ ಪಾದ, ರೋಹಿಣಿ ನಕ್ಷತ್ರ 4 ಪಾದ, ಮೃಗಶಿರ ನಕ್ಷತ್ರ 1 ಮತ್ತು 2ನೇ ಪಾದದಲ್ಲಿದೆ.
ಈ ವರ್ಷ ಆದಾಯ ಚೆನ್ನಾಗಿರುತ್ತದೆ, ಹಣ ಲಾಭ ಪಡೆಯುವಿರಿ, ವೃತ್ತಿಯಲ್ಲಿ ಪ್ರಗತಿ ಪಡೆಯುವಿರಿ. ಗುರು 11ನೇ ಮನೆಯಲ್ಲಿ ಇರುವುದರಿಂದ ಉದ್ಯೋಗಸ್ಥರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ.
ಕಳೆದ ವರ್ಷಕ್ಕಿಂತ ಚೆನ್ನಾಗಿ ಆದಾಯ ಗಳಿಸಲು ಸಾಧ್ಯವಾಗುವುದು. ಅಲ್ಲದೆ 9ನೇ ಮನೆಯಲ್ಲಿ ಶನಿ ಸಾಗುವುದರಿಂದ ನಿಮಗೇ ತುಂಬಾನೇ ಒಳ್ಳೆಯದು ಆಗಲಿದೆ.
ಮನೆಯಲ್ಲಿ ಶುಭ ಕಾರ್ಯಗಳಿಗೆ ಖರ್ಚು ಮಾಡುವಿರಿ. ಸೆಪ್ಟೆಂಬರ್‌ನಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲವಾಗುವುದು. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಲಿದೆ. ಮದುವೆ ವಯಸ್ಸಿನಲ್ಲಿ ಇರುವವರಿಗೆ ಕಂಕಣ ಬಲ ಕೂಡಿ ಬರಲಿದೆ.
ವಿದೇಶದಲ್ಲಿ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವುದು. ಸ್ಪರ್ಧಾತ್ಮಾಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದರೆ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಣ್ಣು ಮಕ್ಕಳು ಉನ್ನತಿಯನ್ನು ಕಾಣುವಿರಿ, ಹೂಡಿಕೆ ಮಾಡುವವರಿಗೂ ಒಳ್ಳೆಯದಾಗಲಿದೆ.
ಆರೋಗ್ಯದ ಬಗ್ಗೆ ಹೇಳುವುದಾದರೆ ಈ ವರ್ಷ ಅಂಥ ಯಾವುದೇ ದೊಡ್ಡ ತೊಂದರೆಯಿಲ್ಲ, ಆರೋಗ್ಯಕರ ಆಹಾರ ಸೇವನೆ ಒಳ್ಳೆಯದು.
ಅದೃಷ್ಟದ ಬಣ್ಣ: ಬಿಳಿ ಪರಿಹಾರ: ಗುರುವಾರ ಗುರುವಿನ ಆರಾಧನೆ, ಶನಿವಾರ ಶನೇಶ್ವರನ ಆರಾಧನೆ ಮಾಡಿ 7 ಮಂಗಳವಾರ ದುರ್ಗೆಯನ್ನು ಪೂಜಿಸಿ.