Just In
Don't Miss
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- News ಲೋಕಸಭಾ ಚುನಾವಣೆ: ಮತದಾನದ ದಿನ Rapidoದಿಂದ ಉಚಿತ ಸೇವೆ, ಯಾರಿಗೆ ಲಭ್ಯ..?
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಗೆ ಹುಣ್ಣಿಮೆಯಂದು ನದಿ ಸ್ನಾನ ಮಾಡ್ದೆ ಹೋದ್ರೆ...
ಇಂಥವರು ಅ.11 ಮಂಗಳವಾರದಂದು ಸೂರ್ಯ ಬೆಳಗಾಗುವ ಮುಂಚೆಯೆ ಬಾವಿ, ನದಿ ಅಥವಾ ಸಮುದ್ರದಲ್ಲಿ ಮುಳುಗೇಳದಿದ್ದರೆ ಅವರಿಗೆ ಅಂಟಿಕೊಂಡಿರುವ ರಾಹು ಕಾಟ ಅವರ ಮಕ್ಕಳಿಗೂ ಅಂಟಿಕೊಳ್ಳುತ್ತದೆ. ಸರಿಯಾಗಿ ಕೇಳಿಸಿಕೊಳ್ಳಿ, ಮತ್ತೆ ಮತ್ತೆ ಹೇಳುತ್ತೇನೆ. ಅಂಥವರು, ಅಂದ್ರೆ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕೈಕೊಟ್ಟು ಪಾಪು ಅಲ್ಲರೀ ಪಾಪ ಕಟ್ಟಿಕೊಂಡವರು ನಾಳೆ ಮಾತ್ರವಲ್ಲ, ವರ್ಷದಲ್ಲಿ ಸಮುದ್ರದಲ್ಲಿ ಮೂರು ಬಾರಿ ಅಥವಾ ನದಿಯಲ್ಲಿ ಐದು ಬಾರಿ ಅಥವಾ ಬಾವಿಯಲ್ಲಿ ಏಳು ಬಾರಿ ಸ್ನಾನ ಮಾಡಲೇಬೇಕು. ಕೇಳಿಸಿಕೊಳ್ತಾ ಇದ್ದೀರಿ ತಾನೆ?
ಇಲ್ಲದಿದ್ದರೆ, ಬಡ್ಡಿಮಕ್ಕಳಿಗೆ ಅಂಟಿಕೊಂಡಿರುವ ರಾಹು ಮತ್ತು ಶುಕ್ರ ಕಾಟ ಅವರ ಮಕ್ಕಳಿಗೆ ರೋಗವಾಗಿ ಕಾಣಿಸಿಕೊಳ್ಳುತ್ತದೆ. ಕಪ್ಪು ಕಟ್ಟಿಗೆಯ ಮೇಲೆ ಗೆದ್ದಲು ಹತ್ತಿಕೊಂಡು ಪುದುಪುದು ಪುಡಿ ಉದುರಿಸಿದ ಹಾಗೆ ಮಕ್ಕಳ ಮೈಮೈಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ಅಪ್ಪ ಅಮ್ಮಂದಿರು ಮಾಡಿರುವ ತಪ್ಪಿಗೆ ಮಕ್ಕಳು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ, ಶೀಗೆ ಹುಣ್ಣಿಮೆಯ ದಿನ ಮೇಲೆ ತಿಳಿಸಿದಂತೆ ಬಾವಿ, ನದಿ ಅಥವಾ ಸಮುದ್ರ ಸ್ನಾನ ಮಾಡಬೇಕು.
ಇನ್ನು ವಿದೇಶಕ್ಕೆ ಹೋದವರೇನು ಸಾಚಾಗಳಾ? ಅಲ್ಲೇ ಇದ್ದು ಯಾವಳೊಂದಿಗೋ ಮಸ್ತ್ ಮಜಾ ಮಾಡಿ ಸಖತ್ ಊಟ ಮಾಡಿದ್ದರೂ, ಇಲ್ಲಿ ಬಂದು ಅಮ್ಮಾ ಹೊಟ್ಟೆ ಹಸಿವಾಗಿದೆ ಊಟಕ್ಕೆ ಹಾಕು ಎಂದು ಹೇಳ್ತಾರೆ ಕಚಡಾ ನನ್ಮಕ್ಳು. ಇಂಥವರಿಗೂ ಕಾಟ ತಪ್ಪಿದ್ದಲ್ಲ. ಈ ಪಾಪ ಪರಿಹಾರಕ್ಕೆ ಏನು ಮಾಡಬೇಕು? ಮೇಲೆ ಹೇಳಿದ ಹಾಗೆ ಮಾಡಿ. ನಾಳೆ ಬರುವ ಶೀಗೆ ಹುಣ್ಣಿಮೆ ಅಂತಿಂಥ ಹುಣ್ಣಿಮೆಯಲ್ಲ. ಹುಣ್ಣಿಮೆಯ ಹುಣ್ಣಿಮೆಯದು.
ಹೀಗೆಂದು ಬ್ರಹ್ಮಾಂಡದಲ್ಲಿ ಪಸರಿಸಿರುವ ಎಲ್ಲ ವೀಕ್ಷಕರಿಗೆ ಅಪ್ಪಣೆ ಕೊಡಿಸಿದವರು ನಿರರ್ಗಳ ಮಾತುಗಾರಿಕೆಯಿಂದ ಖ್ಯಾತರಾಗಿರುವ, ಕೈಯಲ್ಲಿ ಷಣ್ಮುಖನ ದಂಡವನ್ನು ಹಿಡಿದೇ ಇರುವ ಬೃಹತ್ ಬ್ರಹ್ಮಾಂಡ ಖ್ಯಾತಿಯ 'ಪರಿಪೂರ್ಣ' ಜ್ಯೋತಿಷಿ ನರೇಂದ್ರ ಬಾಬು ಶರ್ಮಾ. ಬೆಂಗಳೂರಿನಂಥ ಸಿಟಿಯಲ್ಲಿರುವವರು ಬಾವಿ, ನದಿ, ಸಮುದ್ರವನ್ನು ಎಲ್ಲಿ ಹುಡುಕಿಕೊಂಡು ಹೋಗುವುದು? ಇದನ್ನು ಪಾಲಿಸುವುದು ಅಥವಾ ಮೂಢನಂಬಿಕೆಯೆಂದು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು ಪ್ರಜ್ಞಾವಂತ ಓದುಗರಿಗೆ ಬಿಟ್ಟ ವಿಚಾರ.