Just In
Don't Miss
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- News ಎನ್ಡಿಎ ಸೇರಿದ ಪ್ರಫುಲ್ ಪಟೇಲ್ ಮೇಲಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಿಬಿಐ ಎಳ್ಳುನೀರು!
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೃಹತ್ ಕಟ್ಟಡಗಳಿಂದ ಮಕ್ಕಳನ್ನು ರಕ್ಷಿಸಿ
ಮನೆಯ ಮುಂದೆ, ಹಿಂದೆ ಅಂಗಳಕ್ಕೆ ಅಷ್ಟಿಷ್ಟು ಜಾಗ ಬಿಟ್ಟೇ ಮನೆ ಕಟ್ಟುತ್ತಿದ್ದರು. ಮುಂದಿನ ಅಂಗಳದಲ್ಲಿ ಮಲ್ಲಿಗೆ, ಜಾಜಿ, ಪಾರಿಜಾತ, ಸಂಪಿಗೆಯಂತಹ ಹೂವು ಗಿಡಮರ ಬಳ್ಳಿಗಳು, ಚಿಕ್ಕು, ಚಕೋತ, ಸೀಬೆಯಂತಹ ಹಣ್ಣಿನ ಗಿಡಗಳು ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಕಾಣಬರುತ್ತಿದ್ದವು. ಇವಲ್ಲದೆ ಬಣ್ಣ ಬಣ್ಣದ ತರಹಾವರಿ ಹೂಗಿಡಗಳು ಬೇರೆ. ಅಮ್ಮನೋ ಅಜ್ಜಿಯೋ ಬಟ್ಟಲಲ್ಲಿ ಅನ್ನ ಕಲಸಿ ಪುಟ್ಟ ಮಕ್ಕಳಿಗೆ ಉಣಿಸಲು ಅಂಗಳಕ್ಕೆ ಕರೆತರುತ್ತಿದ್ದರು.
ಮಡಿಲಲ್ಲಿ ಕುಳಿತೋ ಅಥವಾ ಪುಟು ಪುಟು ಹೆಜ್ಜೆಯಿಟ್ಟು ಅಂಗಳದ ತುಂಬಾ ಓಡಾಡುತ್ತಲೋ ಕಂದಮ್ಮಗಳು ತುತ್ತು ಉಣ್ಣುತ್ತಿದ್ದವು. ಹೂವಿಂದ ಹೂವಿಗೆ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು, ಮರದ ಕೊಂಬೆಗಳಲ್ಲಿ ಜೂಜಾಟವಾಡುವ ಅಳಿಲುಗಳು, ಬೇಲಿಯ ಮೇಲಿನ ಓತಿಕೇತ, ಚೆಲ್ಲಿದ ಅಗಳನ್ನು ಹೆಕ್ಕಲು ಬರುವ ಗುಬ್ಬಚ್ಚಿಗಳು, ಈ ಎಲ್ಲ ಪುಟ್ಟ ಮಿತ್ರರನ್ನು ಬೆರಗು ಕಣ್ಣಿನಿಂದ ನೋಡುತ್ತ ಆಟವಾಡಿಕೊಂಡೇ ಊಟ ಮುಗಿಸುತ್ತಿದ್ದವು.
ಈಗ ಬೃಹತ್ ಬೆಂಗಳೂರಿನ ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ ಇವೆಲ್ಲವೂ ಕಳೆದುಹೋಗಿವೆ. ಮನೆಗಳಿಗೆ ಅಂಗಳವಿಲ್ಲ. ಗುಬ್ಬಿ, ಚಿಟ್ಟೆ, ಇಣಚಿಗಳನ್ನು ಚಿತ್ರಪಟದಲ್ಲಿ ತೋರಿಸಬೇಕಷ್ಟೆ. ಎಷ್ಟೋ ಮನೆಗಳಿಂದ ಚಂದ್ರ ನಕ್ಷತ್ರಗಳೇ ಕಾಣುವುದಿಲ್ಲ.
ವಿಧಿಯಿಲ್ಲ, ಕಾಲಾಯ ತಸ್ಮೈ ನಮಃ. ಆದರೆ ಬಹು ಮಹಡಿಗಳನ್ನು ಕಟ್ಟುವ ತಜ್ಞರು, ಮಕ್ಕಳ ಭದ್ರತೆಯ ಬಗ್ಗೆ ಗಮನಕೊಟ್ಟು, ಕಿಟಕಿ ಬಾಗಿಲುಗಳು ಸುರಕ್ಷಿತವಾಗಿರುವಂತೆ ವಿನ್ಯಾಸಗೊಳಿಸಿದಲ್ಲಿ ಮುಂದಾದರೂ ಇಂತಹ ದಾರುಣ ದುರಂತಗಳನ್ನು ತಡೆಗಟ್ಟಬಹುದೇನೋ.