Just In
- 14 min ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 8 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 8 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 9 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
Don't Miss
- News Gold Price on April 18th: ಬಂಗಾರ ದರ ತುಸು ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ? ಅಂಕಿಅಂಶಗಳ ವಿವರ ಇಲ್ಲಿದೆ
- Movies ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರೂಜಿ ಪ್ರವಚನಕ್ಕೆ ತಲೆಬಾಗುವ ಮುನ್ನ ಇದನ್ನು ಓದಿ
ಜ್ವರ ಬಂದು ಮಲಗಿದ್ದರೂ ಅಮ್ಮ, ಮಕ್ಕಳು ಹಸಿದಿರುತ್ತಾರೆ ಎಂಬ ಕಾಳಜಿಯಿಂದ ಅಡುಗೆ ಮಾಡುವುದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಹಣ ಕೂಡಿಡಲು ಅಪ್ಪ ಆಫೀಸಿಗೆ ನಡೆದೇ ಹೋಗುವುದು, ತಮ್ಮನ ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ಅಣ್ಣ ತನ್ನ ಸಂಗೀತದ ತಾಲೀಮನ್ನು ಮುಂದೂಡುವುದು, ಅಕ್ಕನಿಗೆ ಇಷ್ಟವಾದ ಜಿಲೇಬಿ ಮಾಡಲು ತಂಗಿ ತನ್ನಿಡೀ ದಿನ ಕಳೆಯುವುದು ತ್ಯಾಗ ಅಥವಾ ಕಾಳಜಿ ಎನಿಸಿಕೊಳ್ಳದೇ 'ಟೈಂ ವೇಸ್ಟ್' ಎನಿಸಿಕೊಂಡಿದೆ.
ಕೈ ತುಂಬಾ ದುಡಿದರೂ ಹೊಟ್ಟೆ ತುಂಬಾ ನೆಮ್ಮದಿಯಾಗಿ ತಿನ್ನದ ಜೀವನವನ್ನೇ ಕ್ರಿಯಾಶೀಲತೆ, ವೃತ್ತಿಪರತೆ ಎಂದೆಲ್ಲಾ ಹೊಗಳಿಕೊಂಡು ಬದುಕುವ ಮನಸ್ಸುಗಳು ಬೆಳೆಯುತ್ತಿವೆ. ಯಾವ ಕೆಲಸದಿಂದ ಆರ್ಥಿಕವಾಗಿ ಲಾಭ ಇಲ್ಲವೋ ಅದು ಕೆಲಸವೇ ಅಲ್ಲ ಎಂಬ ಇವರ ಯೋಚನೆಯಂತೂ ಅಸಹ್ಯ ಹುಟ್ಟಿಸುತ್ತದೆ.
ಸಂಬಂಧ, ವಿದ್ಯೆ, ಬದುಕನ್ನು ಆರ್ಥಿಕ ದೃಷ್ಟಿಕೋನದಿಂದ ನೋಡಲು ಆರಂಭಿಸಿರುವ ಯುವಜನರು ಈ ದಾರಿಯಲ್ಲಿ ತುಂಬಾ ದೂರ ಹೋಗುವ ಮೊದಲೇ ಶೈಕ್ಷಣಿಕವಾಗಿ ಅವರನ್ನು ಸರಿದಾರಿಗೆ ತರಬೇಕಿದೆ.
ಆಧುನಿಕ ಜಗತ್ತಿಗೆ ತೆರೆದುಕೊಂಡಂತೆಲ್ಲಾ ಮನಸ್ಸು ಕಟುವಾಸ್ತವವನ್ನು ಯೋಚಿಸುವುದು ಸಹಜ. ಅಲ್ಲಿ ಭಾವನೆಗಳಿಗೆ ಜಾಗ ಕಡಿಮೆ. ಭಾವನೆಗಳೇ ಇಲ್ಲದೇ ಹೋದರೆ ಸಂತಸಕ್ಕೆ ಎಡೆ ಇರುವುದಿಲ್ಲ. ಅದರಿಂದ ಅನುಕರಿಸುವ ಗೋಜಿನಿಂದ ಹೊರಬಂದು ಸಹಜ ಭಾವನೆಗಳನ್ನು ಸ್ಥಾಪಿಸಿಕೊಳ್ಳುವತ್ತ ಮನಸ್ಸು ಹರಿಸಬೇಕಿದೆ.