Just In
Don't Miss
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದರ್ಸ್ ಡೇ, ಫಾದರ್ಸ್ ಡೇ ಮಧ್ಯೆ ಅನಾಥ ಪ್ರಜ್ಞೆ ನಮಗೆ ಬೇಕಾ?
ಹೀಗೆ ಕುಟುಂಬದಿಂದ ದೂರವಾಗಿ ಬೇಕಾದಷ್ಟು ಹಣ, ಕೀರ್ತಿ ಸಂಪಾದಿಸಿ ಬದುಕಿನ ಕೊನೆಯಲ್ಲಿ ನೆಮ್ಮದಿಗಾಗಿ ಅಧ್ಯಾತ್ಮದ ಮೊರೆ ಹೋಗುವ ವಿದೇಶಿಯರನ್ನು ಕಂಡೇ ಇರುತ್ತೇವೆ. ಅವರಿಗೆ ನಿಜವಾಗಿ ಬೇಕಿರುವುದು ಆಧ್ಯಾತ್ಮಿಕ ಶಾಂತಿಯಲ್ಲ.
ಸೂಕ್ತ ವಯಸ್ಸಿನಲ್ಲಿ ಸಿಗದ ಕೌಟುಂಬಿಕ ಪ್ರೀತಿ. ಅದನ್ನು ಅವರು ಬದುಕಿನುದ್ದಕ್ಕೂ ಅರಸಿ ಸೋತು ಕಡೆಯದಾಗಿ ಮಾನಸಿಕ ನೆಮ್ಮದಿಯತ್ತ ಹೊರಳಿರುತ್ತಾರೆ. ಅಂಥ ಅನಾಥ ಪ್ರಜ್ಞೆಯನ್ನು ಭಾರತೀಯರು ಕೈಯ್ಯಾರೆ ಬರಮಾಡಿಕೊಳ್ಳಬೇಕೇ?
ತಂದೆ ತಾಯಿಯೊಂದಿಗೆ ಬದುಕು ಪೂರ್ತಿ ಇರಲು ನಮ್ಮ ಸಮಾಜ ಸಮ್ಮತಿ ನೀಡಿದೆ. ಅಂಥದ್ದರಲ್ಲಿ ಪಾಶ್ಚಾತ್ಯ ಸಮಾಜವನ್ನು ಅನುಕರಿಸುವ ಅಗತ್ಯ ನಮಗೇಕೆ? ಅನುಕರಣೆಗಳಿಗೆ ಕಟ್ಟುಬಿದ್ದು ಸಂಬಂಧಗಳ ಸುಳಿಗಳಿಂದ ಹೊರಬರುವ ಪ್ರಯತ್ನದಲ್ಲಿ ಒಂಟಿಯಾಗುವತ್ತ ಹೊರಡುವ ಆತುರವೇಕೆ?
ಉದ್ಯೋಗದ ಅನಿವಾರ್ಯತೆಯಿಂದ ಕುಟುಂಬದಿಂದ ದೂರವಾಗುವವರು, ಅವಿಭಕ್ತ ಕುಟುಂಬದಿಂದ ಬೇರೆಯಾಗಿ ಗಂಡ-ಹೆಂಡತಿ ಇಬ್ಬರೇ ಬದುಕುವ ನಿರ್ಧಾರ ಮಾಡುವವರ ಸಂಖ್ಯೆ ಹೆಚ್ಚಿದಂತೆ ಅಂತರ್ಜಾತಿ ವಿವಾಹವಾದ ದಂಪತಿಗಳು ಸಂಬಂಧಿಗಳಿಂದ ದೂರವಾಗಿ ಬದುಕುವುದು ಅನಿವಾರ್ಯವಾಗಿದೆ. ಆದರೆ ಅವುಗಳ ನಡುವೆಯೇ ಸಂಬಂಧಗಳನ್ನು ನಿಭಾಯಿಸುವ ಮನಸ್ಸು ಮಾಡಬೇಕಿದೆ.