Just In
- 19 min ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 2 hrs ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 10 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 11 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Movies "ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರನ್ನೇ ಆಗಲಿ, ಅತಿಯಾಗಿ ನಂಬುವ ಮುನ್ನ ಈ ವಿಚಾರಗಳನ್ನು ನೆನಪಿನಲ್ಲಿರಲಿ
ನಂಬಿಕೆ ಒಳ್ಳೆಯದು, ಆದರೆ ಅತಿಯಾದ ನಂಬಿಕೆ ಒಳ್ಳೆಯದಲ್ಲ, ಅದು ಯಾರೇ ಆಗಿರಲಿ, ಯಾವ ವಿಚಾರಗಳನ್ನು ಹಂಚಿಕೊಳ್ಳಬೇಕು? ಯಾವದನ್ನು ಖಾಸಗಿಯಾಗಿ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ನಾವೇ ಸರಿಯಾಗಿ ತಿಳಿದಿರಬೇಕು. ಇಲ್ಲವಾದಲ್ಲಿ ನೋವು ಕಟ್ಟಿಟ್ಟ ಬುತ್ತಿ. ಏಕೆಂದರೆ, ನಾವು ಯಾರನ್ನೂ ಹೆಚ್ಚು ನಂಬಿರುತ್ತೇವೆಯೋ, ಅವರಿಂದಲೇ ನೋವು ಹೆಚ್ಚು ಸಿಗುವುದು.
ಅತಿಯಾದ ನಂಬಿಕೆಯ ಅಭ್ಯಾಸವು ನಮ್ಮನ್ನು ಹೆಚ್ಚಾಗಿ ತೊಂದರೆಗೆ ಸಿಲುಕಿಸುತ್ತದೆ. ಆದರೂ, ಈ ತಪ್ಪುಗಳಿಂದ ನಾವು ಬುದ್ಧಿ ಕಲಿಯುವುದಿಲ್ಲ. ಆದ್ದರಿಂದ, ಮುಂದಿನ ಬಾರಿ ಜನರನ್ನು ಅತಿಯಾಗಿ ನಂಬುವ ಮುನ್ನ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.
ಯಾರನ್ನಾದರೂ ಅತಿಯಾಗಿ ನಂಬುವ ಮುನ್ನ ನೆನಪಿಡಬೇಕಾದ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಅತಿಯಾದ ನಂಬಿಕೆಯು ನಿಮ್ಮ ಹೃದಯವನ್ನು ಒಡೆಯಬಹುದು:
ಹೌದು, ಇದು ಸಾಮಾನ್ಯವಾಗಿ ಆಗುವಂತಹ ಸಂಗತಿ. ನಾವು ಯಾರ ಮೇಲೆ ಅತಿಯಾಗಿ ನಂಬಿಕೆ ಇಡುತ್ತೇವೆಯೋ, ಮುಂದೆ ಆ ವ್ಯಕ್ತಿಯಿಂದಲೇ ನಿಮ್ಮ ಮನಸ್ಸು ಚೂರಾಗಬಹುದು. ನಿಮ್ಮ ಅತಿಯಾದ ನಂಬಿಕೆಯಿಂದ ಹೃದಯ ಒಡೆದಾಗ, ನಿಮ್ಮನ್ನು ನೀವೇ ದೂಷಿಸಬೇಕೇ ಹೊರತು, ಅದನ್ನು ಮಾಡಿದವರನ್ನಲ್ಲ. ಖಾಸಗಿಯಾಗಿ ಇಡಬೇಕಾದ ವಿಷಯಗಳನ್ನು ಖಾಸಗಿಯಾಗಿಯೇ ಇಡಬೇಕು. ನಂಬಿಕೆಯಿದೆ ಎಂದು ವಿಚಾರಗಳನ್ನು ಹೇಳಿಕೊಂಡರೆ, ಮುಂದೆ ಅದೇ ನಿಮ್ಮ ಪಾಲಿಗೆ ಮುಳುವಾಗಬಹುದು. ಜನರನ್ನು ನಂಬಬೇಕು ಆದರೆ ಅತಿಯಾಗಿ ನಂಬಬೇಡಿ. ಏನನ್ನು ಹಂಚಿಕೊಳ್ಳಬೇಕು ಮತ್ತು ಏನು ಹೇಳಬಾರದು ಎಂಬುದರ ಸ್ಪಷ್ಟ ಅರಿವಿರಲಿ. ನಿಮ್ಮ ರಹಸ್ಯಗಳು ಮತ್ತು ವೀಕ್ನೆಸ್ಗಳನ್ನು ಹೇಳಿಕೊಂಡರೆ, ಅದನ್ನು ನಿಮ್ಮ ವಿರುದ್ಧವೇ ಬಳಸಿಕೊಳ್ಳಬಹುದು. ಆಗ ಮನಸ್ಸು ಚೂರಾಗುವುದು ಖಂಡಿತ. ಏಕೆಂದರೆ ಆ ವ್ಯಕ್ತಿಯು ನಿಮ್ಮ ಬಗ್ಗೆ ಏನು ಮನಸ್ಸಿನಲ್ಲಿಟ್ಟುಕೊಂಡಿದ್ದಾನೆಂದು ನಿಮಗೆ ತಿಳಿದಿರುವುದಿಲ್ಲ.
ಅತಿಯಾದ ನಂಬಿಕೆ ಒಂದು ದೌರ್ಬಲ್ಯ:
ಈ ಮಾತು ಖಂಡಿತವಾಗಿಯೂ ಸತ್ಯ. ಅತಿಯಾಗಿ ನಂಬಿಕೆಯಿಡುವುದು ಒಳ್ಳೆಯ ಮನಸ್ಸಿನ ಜನರ ದೌರ್ಬಲ್ಯ. ನೀವು ಎಲ್ಲರೊಂದಿಗೆ ಒಳ್ಳೆಯವರಾಗಿರುತ್ತೀರಿ, ಹಾಗಂತ ಅವರೂ ಹಾಗೆಯೇ ಇರುತ್ತಾರೆ ಎಂದರ್ಥವಲ್ಲ. ಏಕೆಂದರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಆದ್ದರಿಂದ, ಅವರನ್ನು ತಿಳಿದುಕೊಳ್ಳಬೇಕಾಗಿರುವುದು, ಅವರು ಹೇಗೆ ಎಂದು ಅರ್ಥ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅದಕ್ಕೂ ಮುನ್ನವೇ, ಅವರ ಮೇಲ ಅತಿಯಾಗಿ ನಂಬಿಕೆಯಿಟ್ಟು ಎಡವಿದರೆ, ಅದು ನಿಮ್ಮದೇ ತಪ್ಪಾಗುವುದು.
ಎಲ್ಲರೂ ಸ್ನೇಹಿತರಲ್ಲ ಎಂಬುದನ್ನು ನೆನಪಿಡಿ:
ಇದು ಹೆಚ್ಚಿನವರು ತಿಳಿದುಕೊಳ್ಲಬೇಕಾದ ಕಹಿಸತ್ಯ. ನಿಮ್ಮ ಸ್ನೇಹಿತರಂತೆ ನಟಿಸುವ ನೂರಾರು ಜನರು ಇರುತ್ತಾರೆ, ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ನಿಮ್ಮ ನಿಜವಾದ ಸ್ನೇಹಿತರಾಗುತ್ತಾರೆ. ಎಲ್ಲರೂ ನಿಮ್ಮ ಕಡೆಗೆ ಸಹಾನುಭೂತಿ ಹೊಂದಿರುವುದಿಲ್ಲ. ಹೆಚ್ಚಿನವರು ನಿಮ್ಮ ಕಷ್ಟವನ್ನು ಕಂಡು ನಗುತ್ತಾರೆ. ಕೆಲವರು ನಿಮ್ಮ ಮಾತುಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಆದ್ದರಿಂದ, ನಿಮ್ಮ ನಂಬಿಕೆಯನ್ನು ಇಡಲು ಮತ್ತು ಉಳಿದವರನ್ನು ಪರಿಚಯ ಮಾಡಿಕೊಳ್ಳಲು ಉತ್ತಮ ಜನರ ಗುಂಪನ್ನು ಆಯ್ಕೆಮಾಡಿ.