Just In
- 2 hrs ago ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- 2 hrs ago ತಿಂಡಿ ಮಾಡಲು ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುತ್ತೀರಾ? ಆರೋಗ್ಯಕ್ಕಾಗಿ ಈ ಟಿಪ್ಸ್ ಅನುಸರಿಸಿ
- 3 hrs ago ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- 4 hrs ago ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
Don't Miss
- News ಬಿಜೆಪಿ ಮೈತ್ರಿ ಧರ್ಮ ಅನುಸರಿಸದಿದ್ರೆ ದಾವಣಗೆರೆಯಲ್ಲಿ ಗೆಲುವು ಕಷ್ಟ: ಜೆಡಿಎಸ್ ಮುಖಂಡರೇ ಹೀಗೆ ಹೇಳಿದ್ಯಾಕೆ?
- Automobiles ಅದ್ಭುತ ಫೀಚರ್ಸ್ ಪಡೆದುಕೊಂಡ ಟಾಟಾ ಟಿಯಾಗೋ ಇವಿ: ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ
- Sports IPL 2024: ಗಾಯದ ಕಾರಣದಿಂದ ಆಟಗಾರ ಲೀಗ್ನಿಂದ ಹೊರ ನಡೆದರೆ ಸಿಗುವ ಹಣವೆಷ್ಟು?
- Movies ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಹಿಯಾದ ಸಂಬಂಧದಲ್ಲಿ ಕಹಿ ಬಿತ್ತುವ ವಿಚಾರಗಳಿವು
ಪ್ರೀತಿಯಲ್ಲಿ ಏರಿಳಿತಗಳು ಸಹಜ, ಆದರೆ ಸಂಬಂಧದಲ್ಲಿ ಕಹಿಯೇ ತುಂಬಿದ್ದರೆ, ಅಲ್ಲಿ ಪ್ರೀತಿಗೆ ಜಾಗವೆಲ್ಲಿಂದ ಬರಬೇಕು ಹೇಳಿ? ನಮ್ಮ ಮಾತು, ಹಾವ-ಭಾವ ನಡವಳಿಕೆ ಹೀಗೆ ಪ್ರತಿಯೊಂದು ನಮ್ಮ ಸಂಬಂಧದ ಮೇಲೆ ಪ್ರಭಾವ ಬೀರುವುದು. ಆದ್ದರಿಂದ ಪ್ರತಿಕ್ಷಣವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಇಲ್ಲಿ ನಾವು ನಿಮ್ಮ ಸಂಬಂಧ ಕಹಿಮಾಡುವ ಅಂದರೆ ಸಂಬಂಧದಲ್ಲಿ ಬಿರುಕು ತರುವ ಕೆಲವೊಂದು ವಿಚಾರಗಳ ಬಗ್ಗೆ ಹೇಳಿದ್ದೇವೆ. ಇವುಗಳ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡದಿರುವುದು ಉತ್ತಮ.
ಸಂಬಂಧದಲ್ಲಿ ಕಹಿತರುವ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಮಾತಿನಲ್ಲಿ ವ್ಯಂಗ್ಯತೆ:
ಸಂಬಂಧದಲ್ಲಿ ವ್ಯಂಗ್ಯತೆ ಬರಲೇಬಾರದು. ನಿಮ್ಮ ಮಾತಿನ ಮೂಲಕ ಸಂಗಾತಿಗೆ ಕಿರಿಕಿರಿಯುಂಟಾಗುತ್ತಿದೆ ಅಂದರೆ ಅಲ್ಲಿ ಪ್ರೀತಿಗೆ ಜಾಗವೇ ಇರುವುದಿಲ್ಲ ಆದ್ದರಿಂದ ನಿಮ್ಮ ಮಾತುಗಳ ಮೂಲಕ ನೋಯಿಸುವುದು, ವ್ಯಂಗ್ಯವಾಗಿ ಮಾತನಾಡುವುದನ್ನು ಮಾಡಬೇಡಿ. ಇವುಗಳ ಈಗಾಗಲೇ ನೊಂದಿರುವ ಜೀವಕ್ಕೆ ಮತ್ತಷ್ಟು ನೋವು ಮಾಡುವುದು. ಪ್ರೀತಿಯಲ್ಲಿ ಕಷ್ಟದ ಸಮಯಗಳು ಬಂದೇ ಬರುತ್ತವೆ. ಹಾಗಂತ ಅದೇ ಸಮಯವನ್ನು ಬಳಸಿಕೊಂಡು ನೋವಿನ ಮಾತನಾಡಬಾರದು. ಈ ವೇಳೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು. ಆಗ ಎಷ್ಟೋ ಮನಸ್ತಾಪಗಳು ಬರೆಹರಿಯುತ್ತವೆ.
ಸಮಯ ನೀಡದಿರುವುದು:
ನಿಮ್ಮ ಪ್ರಿತಿಸುವ ಹೃದಯ ಸಂತೋಷವಾಗಿರಬೇಕೆಂದರೆ ಮೊದಲು ಆ ಹೃದಯದ ಬಳಿ ಮನಸ್ಸು ಬಿಚ್ಚಿ ಮಾತನಾಡಿ. ಆ ಹೃದಯಕ್ಕಾಗಿ ಅಮೂಲ್ಯವಾದ ಸಮಯ ನೀಡಿ. ಏಕೆಂದರೆ ನಿಮ್ಮ ಸಂಗಾತಿ ಅದಕ್ಕಾಗಿ ಸದಾ ಕಾಯುತ್ತಿರುತ್ತಾಳೆ. ಅದು ಬಿಟ್ಟು ಸಿಕ್ಕ ಸಮಯದಲ್ಲಿ ನೋವು ನೀಡುವ ಮಾತುಗಳನ್ನಾಡಿದರೆ, ಸಂಬಂಧ ಆರೋಗ್ಯಕರವಾಗಿರುವುದಾದರೂ ಹೇಗೆ ಹೇಳಿ? ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ. ಇದರ ಜೊತೆಗೆ ಆಕೆಯ ಮನಸ್ಸಿನಲ್ಲಿರುವ ವಿಚಾರಗಳನ್ನು ಅರಿತು ಬಗೆಹರಿಸಲು ಪ್ರಯತ್ನಿಸಿ.
ನಿರಂತರ ಜಗಳ:
ಸಂಬಂಧವೆಂದರೆ ಅಲ್ಲಿ ಸರಸ-ವಿರಸ ಸಾಮಾನ್ಯ. ಆದರೆ ವಿರಸವೇ ಬದುಕಾಗಾಬಾರದು. ಯಾವಾಗ ಜಗಳ-ಮನಸ್ತಾಪ ಕ್ರಮೇಣ ಹೆಚ್ಚಾಗುತ್ತವೆಯೋ ಆಗ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಇದು ಉತ್ತಮ ಸಂಬಂಧದ ಲಕ್ಷಣವಲ್ಲ. ಹೆಚ್ಚಿನವರು ತಮ್ಮ ಸಂಗಾತಿಯೊಂದಿಗೆ ಸಣ್ಣ ಸಣ್ಣ ವಿಷಯಗಳಿಗಾಗಿ ಜಗಳವಾಡಲು ಪ್ರಾರಂಭಿಸುತ್ತಾರೆ. ಆದರೆ ಅದೇ ಮುಂದೆ ನಿಮ್ಮ ನಡುವಿನ ಬಂಧವನ್ನು ಮುರಿಯುವ ದೊಡ್ಡ ಕಾರಣವಾಗಬಾರದು. ಆದ್ದರಿಂದ ಇಂತಹ ಸಂದರ್ಭದಲ್ಲಿ ಜಗಳದ ಕಾರಣಗಳನ್ನು ಅರಿತುಕೊಂಡು, ಅವರ ಜೊತೆ ಮಾತನಾಡಲು ಪ್ರಯತ್ನಿಸಬೇಕು.
ಸಮಸ್ಯೆ ಹಂಚಿಕೊಳ್ಳದಿರುವುದು:
ಯಾವುದೇ ಸಮಸ್ಯೆಗಳನ್ನು ಹಂಚಿಕೊಂಡರೆ ಮಾತ್ರ ಅದಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗುವುದು. ನೀವು ನಿಮಗಾಗುತ್ತಿರುವ ಸಮಸ್ಯೆಯನ್ನು ನಿಮ್ಮ ಸಂಗಾತಿಯ ಬಳಿ ಹೇಳಿಕೊಳ್ಳದೇ, ನಿಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತಿದ್ದರೆ, ಅದರಿಂದ ಏನೂ ಪ್ರಯೋಜನ ಸಿಗುವುದಿಲ್ಲ. ಈ ಕಾರಣದಿಂದಾಗಿ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಾಗಲು ಆರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕು, ಒಟ್ಟಿಗೆ ಸಮಯ ಕಳೆಯಬೇಕು, ಎಲ್ಲವನ್ನು ಹೇಳಿಕೊಳ್ಳಬೇಕು. ಆಗ ಅದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದು.
ಅತಿಯಾದ ಆಲೋಚನೆ:
ನಿಜ, ಇದು ಕೂಡ ಸಂಬಂಧದಲ್ಲಿ ಕಹಿ ಉಂಟುಮಾಡಲು ಕಾರಣವಾಗುವುದು. ಯಾವುದೋ ಒಂದು ವಿಚಾರದ ಬಗ್ಗೆ ಅತಿಯಾಗಿ ಯೋಚಿಸುವುದರಿಂದ ನಿಮ್ಮ ಮನಸ್ಸು ಕೆಡುವುದರ ಜೊತೆಗೆ ನಿಮ್ಮ ಸಂಗಾತಿಯ ಮನಸ್ಸನ್ನು ಹಾಳು ಮಾಡುತ್ತೀರಿ. ಆದ್ದರಿಂದ ಇಲ್ಲದ ವಿಚಾರದ ಬಗ್ಗೆ ಅತಿಯಾಗಿ ಯೋಚಿಸುವುದನ್ನು ಬಿಡಿ. ಅಂತಹದ್ದೇನಾದರೂ ತಲೆಯೊಳಗೆ ಕೊರೆಯುತ್ತಿದ್ದರೆ, ಕೂಡಲೇ ನಿಮ್ಮ ಸಂಗಾತಿಯ ಜೊತೆ ಕೂತು ಮಾತನಾಡಿ, ಪರಿಹರಿಸಿಕೊಳ್ಳಿ.