Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 2 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 2 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 4 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೌರವ ಗಳಿಸಲು ಹಾಗೂ ಉಳಿಸಿಕೊಳ್ಳಲು ಈ ಗುಣಗಳಿದ್ದರೆ ಸಾಕು
ಸಮಾಜದಲ್ಲಿ ಒಮ್ಮೆ ಉತ್ತಮ ಹೆಸರು, ಸಾಧನೆ ಮಾಡಿದರೆ ಅದನ್ನು ಉಳಿಸಿಕೊಳ್ಳುವುದು ಸಹ ಒಂದು ಸಾಧನೆಯೇ. ಕೆಲವರಿಗೆ ಇದು ಕರಗತವಾಗಿ ಬಂದಿದ್ದರೆ ಇನ್ನೂ ಹಲವರು ಇತರರನ್ನು ನೋಡಿ ಈ ಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತಾರೆ. ಸಾಧಕರು ಸಾಧನೆಯಿಂದ ಸಾಧಕರಾಗುವುದಲ್ಲದೆ ಅವರ ಗುಣಗಳು ಇವರ ಸಾಧನೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.
ನೀವು ಸಹ ಇಂಥಾ ಸಾಧಕರ ಸಾಲಿಗೆ ಸೇರಬೇಕಾದರೆ ಹಾಗೂ ಸಮಾಜದಲ್ಲಿ ಉತ್ತಮ ಮನುಷ್ಯ ಎಂದು ಕರೆಯಬೇಕಾದರೆ ನಿಮ್ಮಲ್ಲಿ ಕೆಲವು ಗುಣಗಳು ಇರಲೇಬೇಕು. ಅಧ್ಯಯನದ ಪ್ರಕಾರ ಸಮಾಜದಲ್ಲಿ ಗೌರವಿಸಲ್ಪಡುವ ಮತ್ತು ಸುತ್ತಲೂ ಜನರನ್ನು ಆಕರ್ಷಿಸುವ ಸೆಳವು ಹೊಂದಿರುವ ವ್ಯಕ್ತಿತ್ವ ಬಹುತೇಕ ಹೀಗೆ ಇರುತ್ತದೆ ಎಂದು ಹೇಳಿದೆ. ಯಾವೆಲ್ಲಾ ನಿಯಮಗಳನ್ನು ಹೊಂದಿದ್ದರೆ ಹಾಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಸಹ ಉತ್ತಮಗುಣವುಳ್ಳ ಸಾಧಕರಾಗಬಹುದು.
ಒಳ್ಳೆಯ ಕೇಳುಗರು
ಯಾವ ವ್ಯಕ್ತಿ ಹೆಚ್ಚು ಕೇಳಿಸಿಕೊಂಡು ಕಡಿಮೆ ಮಾತನಾಡುತ್ತಾರೋ ಅವರು ಹೆಚ್ಚು ಗೌರವವನ್ನು ಪಡೆಯುತ್ತಾರೆ ಅಷ್ಟೇ ಅಲ್ಲದೇ ಸಾಧಕರಾಗುವ ಲಕ್ಷಣವಿದು ಎನ್ನಲಾಗುತ್ತದೆ. ನೀವು ಇದನ್ನು ಪಾಲಿಸುವುದುರಿಂದ ಅದೆಷ್ಟೋ ಅನಾಹುತಗಳು, ತಪ್ಪು ತಿಳುವಳಿಕೆಗಳಿಗೆ ಕಡಿವಾಣ ಹಾಕಬಹುದು. ಅದಕ್ಕೇ ಅತೀ ವಿನಯ, ಸಾಧಕ ಅಥವಾ ಬುದ್ಧಿವಂತರನ್ನು ಮಿತಭಾಷಿ ಎನ್ನುತ್ತಾರೆ.
ಶಾಂತ ಸ್ವಭಾವ
ಉತ್ತಮ ವ್ಯಕ್ತಿತ್ವ ಹಾಗೂ ಆದರ್ಶಯುತ ಜನರು ಕೋಪಗೊಂಡಾಗ ಅದನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಅವರು ಯಾವಾಗಲೂ ತಮ್ಮನ್ನು ಶಾಂತವಾಗಿ ತೋರಿಸಿಕೊಳ್ಳುತ್ತಾರೆ ಮತ್ತು ಯಾವುದೇ ಪರಿಸ್ಥಿತಿ ಇದ್ದರೂ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಅವರು ತಮ್ಮ ಧ್ವನಿಯ ಏರಿಳಿತ, ಮುಖದ ಅಭಿವ್ಯಕ್ತಿಗಳು ಮತ್ತು ಒಟ್ಟಾರೆ ದೇಹ ಭಾಷೆಯನ್ನು ನಿಯಂತ್ರಿಸುತ್ತಾರೆ, ಇದರಿಂದ ಅವರು ನಿಮ್ಮ ಮೇಲೆ ಎಷ್ಟು ಸಿಟ್ಟು ಹಾಗೂ ಪ್ರೀತಿಯನ್ನು ಹೊಂದಿದ್ದಾರೆ ಎಂಬುದು ಯಾರೂ ಪತ್ತೆ ಹಚ್ಚಲು ಸಾಧ್ಯವಿಲ್ಲ.
ತಪ್ಪುಗಳನ್ನು ಒಪ್ಪಿಕೊಳ್ಳುವುದು
ಅತಿಯಾದ ಅಹಂಕಾರವನ್ನು ಹೊಂದಿರುವ ವ್ಯಕ್ತಿಗಳು ಇದ್ದಾರೆ, ಅವರು ತಪ್ಪು ಎಂದು ತಿಳಿದಿದ್ದರೂ ಅದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಅಂತಹ ಜನರು ಗೌರವವನ್ನು ಬಹಳ ಬೇಗ ಕಳೆದುಕೊಳ್ಳುತ್ತಾರೆ. ನೀವು ನಿಮ್ಮನ್ನು ಸೇರಿ ಇತರರು ಸಹ ನಿಮ್ಮನ್ನು ಗೌರವಿಸಬೇಕು ಎಂದು ಬಯಸಿದರೆ, ನೀವು ತಪ್ಪು ಮಾಡಿದ ಕ್ಷಣವನ್ನು ಮೊದಲು ನೀವೆ ಒಪ್ಪಿಕೊಳ್ಳಬೇಕು ಮತ್ತು ಅದನ್ನು ಸರಿಪಡಿಸಲು ಅದಕ್ಕೆ ಸೂಕ್ತ ಪರಿಹಾರಗಳನ್ನು ಹುಡುಕಲು ನೀವೆ ಮುಂದಾಗಬೇಕು.
ಸಹಾಯಕವಾಗಿರಿ
ಇತರರು ನಿಮ್ಮನ್ನು ಗೌರವಿಸಬೇಕಾದರೆ, ನೀವು ಸಹ ಅವರಿಗೆ ಸಹಾಯವಾಗುವಂತೆ ವರ್ತಿಸಬೇಕು. ಇದಕ್ಕಾಗಿ ನೀವು ನಿಮ್ಮದೇ ಆದದ ದಾರಿಯಿಂದ ಹೊರಬಂದು ಸಹಾಯ ಹಸ್ತ ಚಾಚಬೇಕು. ಇದರಲ್ಲಿ ಯಾವುದೇ ಫಲಾಪೇಕ್ಷೆ ಇರಬಾರದು, ನೀವು ಮಾಡುತ್ತರುವ ಸಹಾಯದ ಬಗ್ಗೆ ಯಾರಿಗೂ ಹೇಳಿಕೊಳ್ಳಬೇಡಿ, ಅದನ್ನು ಘೋಷಿಸಬೇಡಿ. ನಿಮಗೇ ಅರಿವಿಲ್ಲದೆ ನಿಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿರುತ್ತೀರಿ.
ಕಷ್ಟಕರ ಕೆಲಸ ಇಷ್ಟಪಟ್ಟು ಮಾಡಿ
ನಿಮ್ಮ ಕೆಲಸದಲ್ಲಿ ನೀವು ಅತ್ಯುತ್ತಮವಾಗಿದ್ದರೆ, ನೀವು ಯಾವಾಗಲೂ ಗೌರವಿಸಲ್ಪಡುತ್ತೀರಿ. ನೀವು ಕೆಲಸವನ್ನು ಕಷ್ಟ ಎಂದು ಓಡಿಹೋದರೆ, ಜನರು ಯಾವಾಗಲೂ ನಿಮ್ಮನ್ನು ಶಪಿಸುತ್ತಾರೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಮೊದಲು ನಿಮ್ಮನ್ನು ನೀವು ಗೌರವಿಸಬೇಕು.
ಸದಾ ತ್ಮವಿಶ್ವಾಸದಿಂದಿರಿ
ನಿಮ್ಮನ್ನು ಎಂದಿಗೂ ಕೀಳಾಗಿ ಕಾಣಬೇಡಿ. ಗೌರವಾನ್ವಿತ ಜನರು ಯಾವಾಗಲೂ ತಮ್ಮ ಸುತ್ತಲೂ ಆತ್ಮವಿಶ್ವಾಸದ ಸೆಳವನ್ನು ಹೊಂದಿರುತ್ತಾರೆ. ಅವರು ತಪ್ಪು ಮಾಡಿದರೂ, ಅವರು ಅದನ್ನು ಅರಿತು ತಿದ್ದಿಕೊಂಡು ಅದರ ಮೇಲೆ ಕೆಲಸ ಮಾಡುತ್ತಾರೆ. ಅದಕ್ಕಾಗಿ ಅವರು ಕ್ಷಮೆಯಾಚಿಸುವುದಿಲ್ಲ. ತಪ್ಪು ಮಾಡುವುದು ಮನುಷ್ಯರೇ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿ ನೀವು ಸಹ ತಪ್ಪು ಮಾಡಿದಾಕ್ಷಣ ಕೀಳರಿಮ ಬೇಡ, ಅದನ್ನು ತಿದ್ದಿಕೊಂಡು ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ.