Just In
- 2 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 2 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 3 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 4 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಭ್ಯರ ಸಭ್ಯತೆಯ ಲಕ್ಷಣಗಳು ಹೀಗಿವೆ ನೋಡಿ!
ಮಾತನಾಡುವುದು ಒಂದು ಕಲೆ, ನಮ್ಮ ಮಾತು ಒಬ್ಬರನ್ನು ಖುಷಿಪಡಿಸುವಂತಿರಬೇಕು, ಗೌರವ ಸೂಚಕವಾಗಿರಬೇಕು, ವಿನಯಪೂರ್ವಕವಾಗಿರಬೇಕು, ಒಂದೇ ಮಾತಿನಲ್ಲಿ ಹೇಳುವಾದರೆ ನಮ್ಮ ಮಾತೇ ನಮ್ಮ ವ್ಯಕ್ತಿತ್ವದ ಕೈಗನ್ನಡಿ. ಇನ್ನೊಬ್ಬರ ಮಾತಿಗೆ ಸರಿಯಾದ ರೀತಿಯಲ್ಲಿ ಪ್ರಕ್ರಿಯಿಸುವುದು ಕೂಡ ಬಹಳ ಮುಖ್ಯ. ನಾವು ದಿನವೂ ಬಳಸುವ ಹಲವು ಪದಗಳು ನಮ್ಮ ಬಗ್ಗೆ ಇತರರಿಗೆ ತಿಳಿಸುವಂತಿರುತ್ತದೆ.
ಎಲ್ಲರನ್ನು ಆಕರ್ಷಿಸುವಂತಹ, ವಿಚಿತ್ರವಾದ ಸನ್ನಿವೇಶಗಳಿಂದ ನಿಮ್ಮನ್ನು ಹೊರತರುವ, ಉದ್ವೇಗದ ಸ್ಥಿತಿಯಿಂದ ನಿಮ್ಮನ್ನು ಹೊರತರುವ ಕೆಲವು ಸರಳ ನುಡಿಗಟ್ಟುಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ.
“ಹಲೋ”
ವಿಶೇಷವಾಗಿ ನೀವು ಒಂದೇ ಜನರನ್ನು ನಿಯಮಿತವಾಗಿ ನೋಡುವ ವಾತಾವರಣ (ಸ್ಥಳ)ದಲ್ಲಿದ್ದರೆ "ಹಲೋ" ಎಂದು ಹೇಳಿ "ಎಂದು ಶಿಷ್ಟಾಚಾರ ತಜ್ಞ ಮತ್ತು ದಿ ಪ್ರೊಟೊಕಾಲ್ ಸ್ಕೂಲ್ ಆಫ್ ಪಾಮ್ ಬೀಚ್ನ ಸಂಸ್ಥಾಪಕಿ ಜಾಕ್ವೆಲಿನ್ ವಿಟ್ಮೋರ್ ಹೇಳುತ್ತಾರೆ. ಒಬ್ಬ ವ್ಯಕ್ತಿಯನ್ನು ಸ್ವಾಗತಿಸುವುದರಿಂದ ನೀವು ಅವರ ಮುಂದೆ ಎದ್ದು ಕಾಣುವಂತೆ ಮಾಡುತ್ತದೆ ಮತ್ತು ಧನಾತ್ಮಕವಾದ, ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ ಎಂದು ಅವರು ವಿವರಿಸುತ್ತಾರೆ. "ಮತ್ತು ನೀವು ಪರಿಚಯವಿಲ್ಲದ ಮುಖವನ್ನು ನೋಡುತ್ತಿದ್ದರೂ ಸಹ, ಆ ವ್ಯಕ್ತಿಯು ನಿರ್ದೇಶಕರ ಮಂಡಳಿಯ ಸದಸ್ಯರಾಗಿರಬಹುದು, ಪ್ರಮುಖ ದಾನಿಯಾಗಿರಬಹುದು ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮುಖ್ಯವಾಗಬಹುದು, ಆದರೆ ನೀವು ಅವರಲ್ಲಿ ಸದಾ ಉಳಿಯುವಂಥ ಉತ್ತಮ ಪ್ರಭಾವ ಬೀರಬಹುದು".
"ದಯವಿಟ್ಟು"
ದಿ ಎಮಿಲಿ ಪೋಸ್ಟ್ ಇನ್ಸ್ಟಿಟ್ಯೂಟ್ ಪ್ರಕಾರ, "ದಯವಿಟ್ಟು" ಎನ್ನುವುದು ಪ್ರತಿದಿನವೂ ಬಳಸಬೇಕಾದ ಮಾಯಾ ಪದಗಳಲ್ಲಿ ಒಂದಾಗಿದೆ. "ದಯವಿಟ್ಟು" (ಪ್ಲೀಸ್) ಎಂದು ಹೇಳುವುದರಿಂದ ಆಜ್ಞೆಯನ್ನು ವಿನಂತಿಯಾಗಿ ಬದಲಾಯಿಸಬಹುದು ಮತ್ತು ಇದರಿಂದ ನೀವು ಮಾತನಾಡುವ ವ್ಯಕ್ತಿಯ ಬಗ್ಗೆ ಗೌರವ ಮತ್ತು ಆದರವನ್ನು ತೋರಿಸಿದಂತಾಗುತ್ತದೆ. ಈ ಒಂದು ಸರಳ ಪದವನ್ನು ನಿಮ್ಮ ಮಾತಿನಲ್ಲಿ ಸೇರಿಸುವುದರಿಂದ ಸಂಭಾಷಣೆಯ ಸಂಪೂರ್ಣ ಸ್ವರವನ್ನೇ ಬದಲಾಯಿಸಬಹುದು. ಅಲ್ಲದೆ, ನಿಮ್ಮಲ್ಲಿ ತ್ವರಿತವಾಗಿ ಆಸಕ್ತಿದಾಯಕವಾಗಿಸುವ ಸಂಭಾಷಣೆ ಪ್ರಾರಂಭವಾಗುವುದನ್ನು ನೀವೇ ಗಮನಿಸಿ.
"ಧನ್ಯವಾದಗಳು"
"ಯಾರಾದರೂ ಅವರು ಮಾಡಬೇಕಾಗಿಲ್ಲದ ಕೆಲಸವನ್ನು ಮಾಡಲು ಹೊರಟಿದ್ದಾರೆಯೇ, ಅಂದರೆ ನಿಮಗಾಗಿ ಒಂದು ಬಾಗಿಲು ತೆರೆಯುವುದು, ಅಥವಾ... ನಿಮಗೆ ಕಾಫಿಯನ್ನು ತಯಾರಿಸುವಂತಹ ದಿನನಿತ್ಯದ, ನಿರೀಕ್ಷಿತ ಕಾರ್ಯವನ್ನು ನಿರ್ವಹಿಸುವುದು, ಇವುಗಳಿಗೆ 'ಧನ್ಯವಾದಗಳು' ಎಂದು ಹೇಳುವ ಗುಣದಿಂದ ಒಬ್ಬ ವ್ಯಕ್ತಿಯು ಮೆಚ್ಚುಗೆ ಪಡೆಯುತ್ತಾನೆ "ಎಂದು ವಿಟ್ಮೋರ್ ಹೇಳುತ್ತಾರೆ. ಇನ್ನೊಬ್ಬ ವ್ಯಕ್ತಿಯನ್ನು ಅಂಗೀಕರಿಸಲು ಮತ್ತು ಅವರಿಗೆ ನಿಮ್ಮ ಗಮನವನ್ನು ನೀಡಲು ಒಂದು ಕ್ಷಣ ನಿಲ್ಲುವುದು ನಿಮ್ಮ ಬಗ್ಗೆ ಇನ್ನಷ್ಟು ಸಕಾರಾತ್ಮಕ ಗುಣವನ್ನು ಹೇಳುವ ದಯೆಯ ಕ್ರಿಯೆ.
"ಧನ್ಯವಾದಗಳು"
ಧನ್ಯವಾದ ಹೇಳಿದ ನಂತರ, ಸಭ್ಯ ಪ್ರತಿಕ್ರಿಯೆ "ನಿಮಗೆ ಸ್ವಾಗತ" ಅಥವಾ ಬಹುಶಃ "ನನ್ನ ಸಂತೋಷ" ಎನ್ನುವುದು - ಆದರೆ "ತೊಂದರೆ ಇಲ್ಲ"ಎಂದು ಹೇಳುವುದು ತಪ್ಪು ಸಂದೇಶವನ್ನು ಕಳುಹಿಸುತ್ತದೆ. ಕಾರಣ? "ಪರವಾಗಿಲ್ಲ"ಎಂದು ಕೃತಜ್ಞತೆಯ ಅಭಿವ್ಯಕ್ತಿಗೆ ಉತ್ತರಿಸುವುದು ಇತರರ ಮಾತನ್ನು ತಳ್ಳಿಹಾಕುವಂತಿದೆ. ಈ ಅಭಿವ್ಯಕ್ತಿಯನ್ನು ಹೇಳುವುದು ನಿಮಗೆ ಬಹಳ ಸುಲಭ ಎಂದು ನೀವು ಸರಳವಾಗಿ ಹೇಳುತ್ತಿದ್ದೀರಿ ಎಂದು ಶಿಷ್ಟಾಚಾರ ತಜ್ಞ ಕ್ಯಾಂಡೇಸ್ ಸ್ಮಿತ್ ವಿವರಿಸುತ್ತಾರೆ. ನಿಮ್ಮ ಪ್ರತಿಕ್ರಿಯೆಯಲ್ಲಿ ಸ್ವಲ್ಪ ಬದಲಾವಣೆಯು ಹೆಚ್ಚು ಸಕಾರಾತ್ಮಕ ಸಂದೇಶವನ್ನು ನೀಡುತ್ತದೆ.
"ಕ್ಷಮಿಸಿ"
ನೀವು ಬೇರೊಬ್ಬ ವ್ಯಕ್ತಿಯ ವೈಯಕ್ತಿಕ ಮಿತಿಯನ್ನು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಪ್ರವೇಶಿಸುವಾಗ ಅನುಮತಿ ಕೇಳಲು ಅಥವಾ ಕ್ಷಮೆ ಯಾಚಿಸಲು "ನನ್ನನ್ನು ಕ್ಷಮಿಸಿ"(ಎಕ್ಸ್ ಕ್ಯೂಸ್ ಮಿ) ಎಂದು ಹೇಳುವ ಮೂಲಕ ಕ್ಷಮೆಯಾಚಿಸಬೇಕು. ಸಂಭಾಷಣೆಯನ್ನು "ಸಾಮಾಜಿಕ ಸಮತೋಲನ" ಕ್ಕೆ ಮರಳಿ ತರಲು "ನನ್ನನ್ನು ಕ್ಷಮಿಸಿ" ಒಂದು ಸಹಾಯಕವಾದ ಮಾರ್ಗವಾಗಿದೆ ಮತ್ತು ಇನ್ನೊಬ್ಬರ ಗಮನವನ್ನು ಸೆಳೆಯಲು, ನಿಮ್ಮ ನಿರ್ಗಮನವನ್ನು ತಿಳಿಸಲು ಅಥವಾ ಸಭ್ಯವಾಗಿ ವರ್ತಿಸಲು ಇದೊಂದು ಉತ್ತಮ ಮಾರ್ಗವಾಗಿದೆ ಎಂದೂ ಸ್ಮಿತ್ ವಿವರಿಸುತ್ತಾರೆ.
ಇತರ ವ್ಯಕ್ತಿಯ ಹೆಸರು
ನೀವು ಗ್ರಾಹಕ ಸೇವಾ ಪ್ರತಿನಿಧಿಯನ್ನೇ ಆಗಲಿ ಅಥವಾ ಸಿಇಒ ಅವರನ್ನು ಉದ್ದೇಶಿಸಿ ಮಾತನಾಡಬೇಕಾದರೆ ವ್ಯಕ್ತಿಯ ಹೆಸರನ್ನು ಬಳಸುವುದು ಸೌಜನ್ಯ ಮತ್ತು ಗೌರವವನ್ನು ತೋರಿಸುತ್ತದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಯಾರಾದರೂ ನಮ್ಮ ಹೆಸರನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ ಎಂದಾದಾಗ ನಮ್ಮ ಸಂವಹನದ ಬಗ್ಗೆ ನಾವು ಮೆಚ್ಚುಗೆ ಮತ್ತು ಸಕಾರಾತ್ಮಕ ಭಾವನೆ ಹೊಂದಿರುತ್ತೇವೆ. ಒಬ್ಬ ವ್ಯಕ್ತಿಯು ತನ್ನನ್ನು ತಾನು ಪರಿಚಯಿಸಿಕೊಳ್ಳುವಾಗ ಬಳಸಿದ ಹೆಸರನ್ನೇ ಬಳಸುವುದು ಮುಖ್ಯ. ಮೈಕೆಲ್ ಅನ್ನು ಮೈಕ್ ಎಂದು ಆ ವ್ಯಕ್ತಿಯು ಹೇಳುವ ತನಕ ತಮ್ಮಷ್ಟಕ್ಕೆ ತಾವೇ ಬದಲಾಯಿಸಿಕೊಳ್ಳಬೇಡಿ.
“ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು”
ಸನ್ನಿವೇಶ ಮತ್ತು ಸಂದರ್ಭ ಸರಿಯಾಗಿದ್ದರೆ ಇದು ಬಹಳ ಉಪಯುಕ್ತ ಅಭಿವ್ಯಕ್ತಿಯಾಗಿದೆ. ಅಮೇರಿಕಾದ ಇಂಕ್ (Inc) ನಿಯತಕಾಲಿಕದ ಪ್ರಕಾರ ಇದು ಒಬ್ಬರು ಇನ್ನೊಬ್ಬರಿಗೆ ಹೇಳುವಂತಹ ಅತ್ಯಂತ ಆಕರ್ಷಕ ಅಭಿವ್ಯಕ್ತಿಯಾಗಿದೆ. ಮುಂದಿನ ಬಾರಿ ಯಾರಾದರೂ ನಿಮ್ಮನ್ನು ಹೇಗಿದ್ದೀರಿ ಎಂದು ಕೇಳಿದಾಗ ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು ಎಂದು ಹೇಳಿ ನೋಡಿ. ಇನ್ನೊಬ್ಬರ ಉಪಸ್ಥಿತಿ ನಿಮಗೆ ಸಂತೋಷವನ್ನುಂಟುಮಾಡುತ್ತದೆ ಎನ್ನುವ ವಾಕ್ಯ ಯಾವುದೇ ಸಂಭಾಷಣೆಯನ್ನು ಆರಂಭಿಸುವ ದನಾತ್ಮಕ ಮಾತಾಗಿದೆ.
“ಅದು ನಿಮ್ಮ ದೊಡ್ಡ ಗುಣ”
ಶಿಷ್ಟಾಚಾರ ತಜ್ಞ ಮತ್ತು ಆಕ್ಸೆಸ್ ಟು ಕಲ್ಚರ್ ನ ಸ್ಥಾಪಕ ಶೆರೋನ್ ಷ್ವಿಟ್ಜೆ ಪ್ರಕಾರ "ಹೊಗಳಿಕೆಯನ್ನು ಸ್ವೀಕರಿಸುವುದು ಜನರಿಗೆ ಕಷ್ಟವಾಗಬಹುದು" ಹೊಗಳಿಕೆಯನ್ನು ತಳ್ಳಿಹಾಕುವುದು ಅಥವಾ ಮಾತನ್ನು ನಿರ್ಲಕ್ಷಿಸುವುದು ನಿಮಗೆ ಸಲ್ಲಿಸಿದ ಆಭಿನಂದನೆಗೆ ಮೌಲ್ಯ ಕೊಡದ ಹಾಗೆ ಆಗುತ್ತದೆ. ಅದರ ಬದಲಿಗೆ "ಅದು ನಿಮ್ಮ ದೊಡ್ಡ ಗುಣ" ದಂತಹ ಮಾತುಗಳನ್ನು ಹೇಳಿ ವಿನಮ್ರವಾಗಿ ನಡೆದುಕೊಳ್ಳುವುದು ಉತ್ತಮ ಎನ್ನುವುದು ಅವರ ಸಲಹೆ.
ಸಂತಾಪ ಸೂಚಿಸುವುದು
"ಸಂತಾಪ ಸೂಚಿಸುವುದು ಬಹಳ ಮುಖ್ಯವಾದರೂ ಬಹಳಷ್ಟು ಜನರನ್ನು ಆರಾಮದಾಯಕವಲ್ಲದ ಸ್ಥಿತಿಗೆ ಸಿಲುಕಿಸಬಹುದು" . ವಿಟ್ ಮೋರ್ ಪ್ರಕಾರ ಕೆಲವು ಸರಳವಾದ ಮಾತುಗಳಾದ "ನಿಮ್ಮ ನಷ್ಟ ಕೇಳಿ ಬಹಳ ಬೇಸರವಾಯಿತು" ಎನ್ನುವುದನ್ನು ಬಳಸಬಹುದು. ಪ್ರತೀ ಸಲ ನೀವು ಬಾಯಿ ಮಾತಲ್ಲೇ ಸಂತಾಪ ಸೂಚಿಸಬೇಕೆಂದಿಲ್ಲ. ಒಂದು ಪತ್ರ ಬರೆಯುವ ಮೂಲಕ, ಒಂದು ಈ ಮೇಲ್ ಮಾಡುವ ಮೂಲಕ ಒಂದು ಉಡುಗೊರೆ ಅಥವಾ ದೇಣಿಗೆಯನ್ನು ನೀಡುವ ಮೂಲಕ ನಷ್ಟದ ಜೊತೆಗೆ ನಾವಿದ್ದೇವೆ ಎಂದು ಹೇಳಬಹುದಾಗಿದೆ. ವಿಟ್ ಮೋರ್ ಪ್ರಕಾರ ನಷ್ಟದ ಸಂದರ್ಭದಲ್ಲಿ ನಾವಿದ್ದೇವೆ ಎನ್ನುವ ಭಾವ ಮೂಡಿಸುವುದು ಬಹಳ ಅಗತ್ಯ.
“ನಿಮ್ಮ ಅಭಿಪ್ರಾಯವೇನು”
ಒಬ್ಬ ಸಭ್ಯ ವ್ಯಕ್ತಿಯ ಮುಖ್ಯ ಗುಣವೆಂದರೆ ಬೇರೆಯವರ ಅಭಿಪ್ರಾಯಕ್ಕೆ ಬೆಲೆ ಕೊಡುವುದು. ಇನ್ನೊಬ್ಬರ ಅಭಿಪ್ರಾಯ ಕೇಳುತ್ತಿದ್ದೇವೆ ಎಂದರೆ ಅವರ ಅನಿಸಿಕೆಗೂ ನಾವು ಗೌರವ ಕೊಡುತ್ತಿದ್ದೇವೆ ಎಂದರ್ಥ. ಇಂಕ್ (Inc.) ನಿಯತಕಾಲಿಕೆಯ ಪ್ರಕಾರ ಈ ಬಗೆಯ ಆಹ್ವಾನಗಳು ಇನ್ನೊಬ್ಬರ ಸ್ವ ಮೌಲ್ಯವನ್ನು ಹೆಚ್ಚಿಸಲು ಹಾಗೂ ನಿಮ್ಮ ಬಗ್ಗೆ ಧನಾತ್ಮಕ ಆಭಿಪ್ರಾಯ ಮೂಡುವಂತೆ ಮಾಡಲು ಸಹಾಯಕ ಮತ್ತು ಇದು ಇಬ್ಬರಿಗೂ ಒಳ್ಳೆಯದು. ಇದು ನೀವು ಸಂಭಾಷಣೆಯಲ್ಲಿ ತೊಡಗಿದ್ದರೆ ಮತ್ತು ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯನು ಗೌರವಿಸುತ್ತೀರಿ ಎಂದಾದರೆ ಮಾತ್ರ ಉಪಯುಕ್ತ.
“ನಾನೇನಾದರೂ ಸಹಾಯ ಮಾಡಬಹುದೆ?”
ಒಬ್ಬ ವ್ಯಕ್ತಿ ದೊಡ್ಡ ವಸ್ತುವನ್ನು ಸಾಗಿಸುವಾಗ ಅಥವಾ ಯಾರಾದರೂ ಬಹಳ ಕೆಲಸವನ್ನು ಮಾಡುವಾಗ ನಾವು ಅವರನ್ನು ನಿರ್ಲಕ್ಷಿಸಿದರೆ ನಮ್ಮಲ್ಲಿ ಪರಾನುಭೂತಿ ಇಲ್ಲ ಅಥವಾ ಇನ್ನೊಬ್ಬರ ಕಷ್ಟಕ್ಕೆ ನಮ್ಮ ಮನಸ್ಸು ಮಿಡಿಯುವುದಿಲ್ಲ ಎಂದು ಸೂಚಿಸುತ್ತದೆ. ಅಂತಹ ಸನ್ನಿವೇಶಗಳಲ್ಲಿ ನೀವು ನಿಮ್ಮ ಸಹಾಯಹಸ್ತ ಚಾಚಿದರೆ ಅದು ಸಭ್ಯತೆಯನ್ನು ಮೀರಿ ಕರುಣೆಯ ಎಲ್ಲೆಗೆ ಬರುತ್ತದೆ. ಸೋಷಿಯಲ್ ಸೈಕಾಲಜಿ ಪತ್ರಿಕೆಯ ಒಂದು ಅಧ್ಯಯನದ ಪ್ರಕಾರ ಕರುಣೆಯ ಕೆಲಸಗಳಲ್ಲಿ ತೊಡಗಿದ ಜನರು ಹೆಚ್ಚಿನ ಮಟ್ಟದ ಜೀವನ ತೃಪ್ತಿಯನ್ನು ಹೊಂದಿರುತ್ತಾರೆ. ಹಾಗಾಗಿ ಇನ್ನೊಬ್ಬರ ಕೆಲಸದ ಭಾರ ಹೊರಲು ನೀವು ನೀಡಿದ ಸಹಾಯ ಇಬ್ಬರಿಗೂ ಪ್ರಯೋಜನವಾದಂತೆ.
“ಪ್ರಾಯಶಃ”
"ಒಪ್ಪುವುದಿಲ್ಲ ಎಂದು ಒಪ್ಪೋಣ" ಎನ್ನುವುದನ್ನು ಸೂಚಿಸಲು "ಪ್ರಾಯಶಃ" ಪದವನ್ನು ಬಳಸುವ ಬಗ್ಗೆ ಯೋಚಿಸಿ ನೋಡಿ. ಮಾಕ್.ಮಿಲನ್ ನಿಘಂಟಿನ ಪ್ರಕಾರ ಇನ್ನೊಬ್ಬರು ಹೇಳಿದ ಮಾತಿಗೆ ನಿಮ್ಮ ಸಂಪೂರ್ಣ ಒಪ್ಪಿಗೆ ಇಲ್ಲದೇ ಇದ್ದಾಗ ನೀವು "ಪ್ರಾಯಶಃ" ಪದವನ್ನು ಬಳಸಬಹುದಾಗಿದೆ. ಈ ಮಾತನ್ನು ಬಳಸುವುದರಿಂದಾಗಿ ನೀವು ವಿನಯಪೂರ್ವಕ ಇನ್ನೊಬ್ಬರ ಮಾತನ್ನು ಒಪ್ಪದೇ ಮುಂದೆ ನಡೆಯಬಹುದಾದ ವಾಗ್ವಾದವನ್ನು ತಪ್ಪಿಸುತ್ತದೆ.
“ನಾನು ನಿಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ (ಪಾಲ್ಗೊಳ್ಳುವುದಿಲ್ಲ)”
ದಿ ಎಮಿಲಿ ಪೋಸ್ಟ್ ಇನ್ಸ್ಟಿಟ್ಯೂಟ್ ನ ಅನ್ನಾ ಪೋಸ್ಟ್ ಪ್ರಕಾರ ಯಾವುದೇ ಆಮಂತ್ರಣಕ್ಕೆ ಪ್ರತಿಕ್ರಯಿಸುವುದು ಬಹಳ ಅಗತ್ಯ. ಅವರ ಬ್ಲಾಗ್ "ಫೈಲ್ಯೂರ್ ಟು ಆರ್.ಏಸ್.ವಿ.ಪಿ (RSVP) (ಫ್ರೆಂಚ್ ಪದ ರೆಸ್ಪೊಂಡ್ಝ್ ಸಿಲ್ ವೌಸ್ ಪ್ಲೈಟ್ ಅಥವಾ ದಯವಿಟ್ಟು ಪ್ರತಿಕ್ರಿಯಿಸಿ) ಜನರಲ್ಲಿ ಶಿಷ್ಟಾಚಾರದ ಬಗ್ಗೆ ಇರುವ ಅತ್ಯಂತ ದೊಡ್ಡ ದೂರಾಗಿದ್ದು ಇದು ಜನರಲ್ಲಿ ಹತಾಷೆ ಭಾವವನ್ನು ತರುತ್ತದೆ. ಆಮಂತ್ರಣಕ್ಕೆ ನೀವು ಸರಿಯಾದ ಸಮಯದಲ್ಲಿ ಪ್ರತಿಕ್ರಿಯೆ ನೀಡುವುದು ಅಗತ್ಯ. ಒಂದು ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಾದರೆ ಇದು ಇನ್ನೂ ಅಗತ್ಯ.
“ನೀವು ಆ ಕೆಲಸವನ್ನು ಬಹಳ ಚೆನ್ನಾಗಿ ನಿಭಾಯಿಸಿದಿರಿ”
ಬಹಳಷ್ಟು ಮಂದಿ ತಾವಷ್ಟೇ ಮಾತನಾಡಿ ಸಂಭಾಷಣೆಯನ್ನು ತಾವಷ್ಟೇ ನಿಯಂತ್ರಿಸದೇ ಎದುರಿಗೆ ಇರುವ ವ್ಯಕ್ತಿಯನ್ನು ಸಂಭಾಷಣೆಯಲ್ಲಿ ತೊಡಗಿಸಿಕೊಂಡು ಮುಂದೆ ಹೋಗುತ್ತಾರೆ. ಈ ರೀತಿ ಇನ್ನೊಬ್ಬರನ್ನು ಮಾತಿಗೆ ಎಳೆಯುವ ಒಂದು ಉಪಯುಕ್ತ ದಾರಿಯೆಂದರೆ ಅವರ ಸಾಮರ್ಥ್ಯದ ಬಗ್ಗೆ ಮಾತನಾಡುವುದು . ಅವರ ಸಾಮರ್ಥ್ಯದ ಬಗೆಗಿನ ಮಾತು ಅವರಲ್ಲಿ ಧನಾತ್ಮಕ ಭಾವನೆಯನ್ನು ಜಾಗೃತಿಗೊಳಿಸುತ್ತದೆ ಮತ್ತು ಇಂಕ್ (Inc.) ನಿಯತಕಾಲಿಕೆಯ ಪ್ರಕಾರ ಇದು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ.