Just In
- 56 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ನನಗೆ ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಮೂಡಿತು...
ಮೊದಲ ನೋಟದಲ್ಲೇ ಪ್ರೀತಿ ಮೂಡಿತು, ನಾವಿಬ್ಬರು ಪ್ರೀತಿಸಲು ಆರಂಭಿಸಿದೆವು ಎಂದು ಕೆಲವು ಪ್ರೇಮಿಗಳು ಹೇಳುವುದಿದೆ. ಆದರೆ ಇದು ಸಾಧ್ಯವೇ ಇಲ್ಲ, ಮೊದಲ ನೋಟದಲ್ಲೇ ಪ್ರೀತಿ ಮೂಡಲು ಸಾಧ್ಯವಿಲ್ಲ. ಒಬ್ಬರ ಕಡೆಗೆ ಆಕರ್ಷಿತರಾದರೆ ಅದು ಕೇವಲ ಕಾಮವೆನ್ನಬಹುದು. ಆದರೆ ನಿಜವಾಗಿಯೂ ಕೆಲವೊಮ್ಮೆ ಮೊದಲ ನೋಟದಲ್ಲೇ ಒಬ್ಬರ ಮೇಲೆ ಪ್ರೀತಿ ಮೂಡಿರುತ್ತದೆ. ಆಕೆ ಅಥವಾ ಆತನನ್ನೇ ತನ್ನ ಜೀವನದ ಸಂಗಾತಿಯನ್ನಾಗಿ ಮಾಡಬೇಕೆಂದು ಬಯಸುತ್ತಾಳೆ.
ಇಂತಹ ಪ್ರೀತಿ ಮೂಡಿದರೆ ಅವರಿಬ್ಬರು ಜೀವನ ಪರ್ಯಂತ ಜತೆಯಾಗಿ ತುಂಬಾ ಪ್ರೀತಿಯಿಂದ ಇರಲು ಬಯಸುವರು. ಎಲ್ಲಾ ರೀತಿಯ ಪರೀಕ್ಷೆಗಳನ್ನು ಎದುರಿಸಿ ಇಂತಹ ಪ್ರೀತಿಯು ಕೊನೆಯ ತನಕ ಉಳಿಯುತ್ತದೆ. ಅಲೋಕ್ ಮತ್ತು ಪ್ರಿಯಾಳ ಪ್ರೀತಿಯು ಇಂತಹ ಸತ್ಯದ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತದೆ. ಮೊದಲ ನೋಟದಲ್ಲಿ ಕಾಣಿಸಿಕೊಂಡ ಪ್ರೀತಿಯನ್ನು ಹೆಚ್ಚಿನವರು ಕೇವಲ ಆಕರ್ಷಣೆಯೆಂದು ಬಿಟ್ಟುಬಿಡುವುದಿದೆ. ಆದರೆ ಅಲೋಕ್ ಮಾತ್ರ ಇದು ಆಕರ್ಷಣೆಗಿಂತ ತುಂಬಾ ಹೆಚ್ಚು ಎಂದು ಅರಿತುಕೊಂಡಿದ್ದ. ಆತನ ನಂಬಿಕೆ ಮತ್ತು ಪ್ರೀತಿಯಿಂದಾಗಿಯೇ ಪ್ರಿಯಾ ಆತನನ್ನು ಪ್ರೀತಿಸಲು ಆರಂಭಿಸಿದಳು. ಪ್ರೀತಿ ಹೇಗೆ ಮೂಡುವುದು ಎನ್ನುವ ಬಗ್ಗೆ ಈ ಲೇಖನವನ್ನು ಓದುತ್ತಾ ಸಾಗಿದಂತೆ ನಿಮಗೆ ಅರ್ಥವಾಗುವುದು.
ಜವಾಬ್ದಾರಿಯ ಮಗ
ದೇಶದ ಪ್ರಸಿದ್ಧ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಲೋಕ್ ಕೆಲವು ತಿಂಗಳಿಗೊಮ್ಮೆ ಮಾತ್ರ ಮನೆಗೆ ಹೋಗಿಬರುತ್ತಿದ್ದ. ಕೆಲವು ದಿನಗಳ ಕಾಲ ಮನೆಯಲ್ಲಿ ತನ್ನ ವಿಧವೆ ತಾಯಿಯೊಂದಿಗೆ ಕಾಲ ಕಳೆಯುತ್ತಿದ್ದ. ಅಲೋಕ್ನ ಹಿರಿಯ ಸಹೋದರಿ ಮದುವೆಯಾಗಿ ತನ್ನ ಗಂಡನೊಂದಿಗೆ ಅದೇ ಊರಿನಲ್ಲಿ ವಾಸವಾಗಿದ್ದಳು. ಆಕೆ ಆಗಾಗ ಬಂದು ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಆದರೂ ಅಲೋಕ್ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದ.
ಪ್ರೀತಿಯ ಮಾವ
ತನ್ನ ಊರಾದ ಲಕ್ನೋಗೆ ಅಲೋಕ್ ಕೆಲವು ತಿಂಗಳಿಗೊಮ್ಮೆ ಹೋಗಿ ಬರುತ್ತಿದ್ದ ಮತ್ತೊಂದು ಕಾರಣವೆಂದರೆ ಆತನ ಸಹೋದರಿಯ ಮಗ ಆಶೀಶ್. ಏಳರ ಹರೆಯದ ಆಶೀಶ್ ಪ್ರತೀ ಬಾರಿ ತನ್ನ ಮಾವ ಅಲೋಕ್ ಏನಾದರೂ ಉಡುಗೊರೆ ತರಬಹುದು ಎಂದು ಕಾಯುತ್ತಾ ಕೂರುತ್ತಿದ್ದ.
ಪೋಷಕರು ಮತ್ತು ಶಿಕ್ಷಕರ ಸಭೆ
ಆಶೀಶ್ ನ ತಂದೆ ಉದ್ಯಮಿಯಾಗಿದ್ದು, ಯಾವಾಗಲೂ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಿದ್ದರು. ಇದರಿಂದ ಪ್ರತೀ ತಿಂಗಳಿಗೊಮ್ಮೆ ನಡೆಯುವಂತಹ ಆಶೀಶ್ನ ಶಾಲೆಯ ಪೋಷಕರ ಮತ್ತು ಶಿಕ್ಷಕರ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಆಶೀಶ್ ತಂದೆ ಬದಲಿಗೆ ಅಲೋಕ್ ಅಲ್ಲಿಗೆ ಹೋಗುತ್ತಿದ್ದ. ಆಶೀಶ್ ತನ್ನ ಸೋದರಳಿಯನ ಅಕ್ಕರೆಯ ಮನವಿಗೆ ಇಲ್ಲವೆನ್ನುವಂತಿರಲಿಲ್ಲ. ಶನಿವಾರ ಬೆಳಗ್ಗೆ ಆತ ತನ್ನ ಸೋದರಿಯೊಂದಿಗೆ ಸಭೆಗೆ ಹೋಗಲೇ ಬೇಕಾಯಿತು.
ಕಣ್ಣುಕಣ್ಣು ಬೆರೆತಾಗ....
ಶಿಕ್ಷಕರ ಮತ್ತು ಪೋಷಕರ ಸಭೆಯಲ್ಲಿ ಅಲೋಕ್, ಪ್ರಿಯಾಳನ್ನು ಮೊದಲ ಸಲ ನೋಡಿದ. ಪ್ರಿಯಾ ಶರ್ಮಾ ಆ ಶಾಲೆಯಲ್ಲಿ ಆಶೀಶ್ಗೆ ವಿಜ್ಞಾನದ ಶಿಕ್ಷಕಿಯಾಗಿದ್ದರು. ಆಶೀಶ್ನ ಮಾರ್ಕ್ಸ್ ಕಾರ್ಡ್ ನೀಡಿದಾಗ ಅವರಿಬ್ಬರ ಕಣ್ಣುಗಳು ಮೊದಲ ಸಲ ಬೆರೆತವು. ಇದು ಮೊದಲ ನೋಟದಲ್ಲಿ ಉಂಟಾದ ಪ್ರೀತಿ. ಅಲೋಕ್ ತನ್ನ ಮುಂದಿನ ಜೀವನವನ್ನು ಪ್ರಿಯಾಳ ಜತೆ ಕಳೆಯಬೇಕೆಂದು ಆಗಲೇ ನಿರ್ಧರಿಸಿದ.
ಮಾಹಿತಿ ಸಂಗ್ರಹಿಸಿದ
ಈ ಸಭೆಯ ಬಳಿಕ ಅಲೋಕ್ ಗೆ ತನ್ನ ಜೀವನಕ್ಕೆ ಏನು ಬೇಕು ಎಂದು ಸ್ಪಷ್ಟವಾಗಿತ್ತು. ಆದರೆ ಪ್ರಿಯಾಳ ಬಗ್ಗೆ ಆತನಿಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಆತ ಪ್ರತೀ ವಾರ ಲಕ್ನೋಗೆ ಪ್ರಯಾಣಿಸಲು ಆರಂಭಿಸಿದ. ಸ್ಥಳೀಯನಾಗಿದ್ದ ಅಲೋಕ್ಗೆ ಲಕ್ನೋದಲ್ಲೇ ಹಲವಾರು ಮಂದಿ ಸ್ನೇಹಿತರಿದ್ದರು. ಇದರಿಂದ ಮಾಹಿತಿ ಸಂಗ್ರಹಿಸಲು ಹೆಚ್ಚು ಕಷ್ಟಪಡಲಿಲ್ಲ.
ಸಿನಿಮಾ ನಾಯಕರಂತೆ ಹಿಂಬಾಲಿಸಿದ...
ಕೆಲವು ಸಮಯದ ತನಕ ಅಲೋಕ್ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಹಿಂದಿ ಸಿನಿಮಾ ನಾಯಕರಂತೆ ಹಿಂಬಾಲಿಸಿದ. ಅಲೋಕ್ ನ ಶ್ರಮಕ್ಕೆ ಪ್ರತಿಫಲ ಕೂಡ ಸಿಕ್ಕಿತು. ಅಂತಿಮವಾಗಿ ಪ್ರಿಯಾ ಜತೆ ಮಾತನಾಡಲು ಅವಕಾಶ ಸಿಕ್ಕಿತು.
ಪ್ರೀತಿ ಮುಳ್ಳಿನ ಹಾದಿ
ಅಲೋಕ್ ಖುಷಿಯಲ್ಲಿದ್ದರೂ ಎಲ್ಲವೂ ಆತನ ಪರವಾಗಿರಲಿಲ್ಲ. ಯಾಕೆಂದರೆ ಮೊದಲನೇಯದಾಗಿ ಪ್ರಿಯಾ ಆತನನ್ನು ಪ್ರೀತಿಸುತ್ತಿರಲಿಲ್ಲ. ಆಕೆಯ ಪ್ರೀತಿ-ಪ್ರೇಮವೆಂಬುವುದರಲ್ಲಿ ನಂಬಿಕೆಯೇ ಇರಲಿಲ್ಲ. ಆಕೆಯ ಪ್ರಕಾರ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುವುದು ಮತ್ತು ಆಕೆಯ ಪೋಷಕರೇ ಸ್ವರ್ಗದಲ್ಲಿ ಕೂಡ ಆಕೆಯ ವಿವಾಹ ನಿಶ್ಚಯಿಸಿದವರು. ಅವರ ವಿರುದ್ಧವಾಗಿ ಮದುವೆಯಾಗಲು ಆಕೆ ಯಾವತ್ತೂ ತಯಾರಿರಲಿಲ್ಲ.
ಆಕೆಗೆ ಪ್ರೀತಿಯ ನಿವೇದಿಸಿದ
ಪ್ರಿಯಾಳ ಮೊಬೈಲ್ ನಂಬರ್ ಪಡೆಯಲು ಅಲೋಕ್ಗೆ ತುಂಬಾ ಸಮಯ ಬೇಕಾಯಿತು. ಇಬ್ಬರು ಪರಸ್ಪರ ನಂಬರ್ ಹಂಚಿಕೊಂಡ ಬಳಿಕ ತಡರಾತ್ರಿ ಕರೆಗಳು ಬರಲು ಆರಂಭಿಸಿದವು. ಅಲೋಕ್ ಜತೆ ಡೇಟಿಂಗ್ ಮಾಡಲು ಪ್ರಿಯಾಗೆ ಇಷ್ಟವಿರಲಿಲ್ಲ. ಮದುವೆಯಾಗಬೇಕಿದ್ದರೆ ತನ್ನ ತಂದೆತಾಯಿ ಜತೆಗೆ ಮಾತನಾಡಬೇಕೆಂದು ಆಕೆ ಅಲೋಕ್ ಗೆ ಸ್ಪಷ್ಟವಾಗಿ ಹೇಳಿದ್ದಳು.
ದೊಡ್ಡ ನಿರ್ಧಾರ
ಯಾವುದೇ ಬೇರೆ ಮಾರ್ಗಗಳು ಇಲ್ಲದೆ ಇರುವಾಗ ಅಲೋಕ್ ತನ್ನಿಂದ ಏನು ನಿರೀಕ್ಷಿಸಲಾಗುತ್ತಿತ್ತೋ ಅದನ್ನು ಮಾಡಿದ. ಅಲೋಕ್ ವೈಯಕ್ತಿಕವಾಗಿ ಪ್ರೇಮ ವಿವಾಹದಲ್ಲಿ ನಂಬಿಕೆಯನ್ನಿಟ್ಟಿದ್ದ. ಆದರೆ ಪ್ರಿಯಾ ಮಾತ್ರ ಗುರುಹಿರಿಯರು ನಿಶ್ಚಯಿಸಿದ ಮದುವೆಯಲ್ಲಿ ನಂಬಿಕೆಯನ್ನಿಟ್ಟಿದ್ದಳು. ತನ್ನ ಮೊದಲ ನೋಟದ ಪ್ರೀತಿಯನ್ನು ಕಳೆದುಕೊಳ್ಳಲು ಬಯಸದ ಅಲೋಕ್ ನೇರವಾಗಿ ಪ್ರಿಯಾಳ ತಂದೆ ಮುಂದೆ ಮದುವೆ ಪ್ರಸ್ತಾವವನ್ನಿಟ್ಟ.
ವಿಷಯ ಮತ್ತಷ್ಟು ಜಟಿಲವಾಯಿತು...
ಪ್ರೀತಿ ಪ್ರೇಮ, ಮದುವೆ ಎನ್ನುವುದು ಹೂವಿನ ಮೇಲಿನ ನಡಿಗೆ ಅಲ್ಲವೆನ್ನುವುದು ಅಲೋಕ್ ಗೆ ಈಗ ಅರ್ಥವಾಯಿತು. ಅಲೋಕ್ ತುಂಬಾ ಪ್ರಾಮಾಣಿಕವಾಗಿ ಬಂದು ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡರೂ ಸಹಿತ ಪ್ರಿಯಾಳ ತಂದೆಗೆ ಮಾತ್ರ ಈ ಮದುವೆ ಇಷ್ಟವಿರಲಿಲ್ಲ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದ ಪ್ರಿಯಾಳ ತಂದೆ ಲಕ್ನೋದಲ್ಲೇ ನೆಲೆನಿಂತಿರುವ ಯಾರಾದರೂ ತನ್ನ ಮಗಳನ್ನು ಮದುವೆಯಾಗಬೇಕೆಂದು ಬಯಸಿದ್ದರು.
ತನ್ನ ಆಸೆ ಕೈಬಿಟ್ಟ
ತಂದೆ ಮತ್ತು ಮಗಳು ಇಬ್ಬರು ನಿರಾಕರಿಸಿದ ಕಾರಣ ಅಲೋಕ್ ತನ್ನ ಆಸೆ ಕೈಬಿಟ್ಟ. ಇದರಿಂದ ಆತ ಖಿನ್ನತೆಗೆ ಒಳಗಾದ. ಅಲೋಕ್ ತನ್ನೊಂದಿಗೆ ಸಂಬಂಧವನ್ನು ಕಡಿದುಕೊಂಡಾಗ ಪ್ರಿಯಾಳಿಗೂ ಪ್ರೀತಿಯ ಕಿಡಿ ಕಾಣಿಸಿತು. ಅಲೋಕ್ ತನ್ನನ್ನು ಸಂಪೂರ್ಣಗೊಳಿಸಿದ್ದಾನೆ ಮತ್ತು ಆತನ ಹೊರತಾಗಿ ಈ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಆಕೆ ನಿರ್ಧಾರಕ್ಕೆ ಬಂದಳು.
ಪ್ರಿಯಾ ಪ್ರೀತಿ ಹೇಳಿಕೊಂಡಳು
ಪ್ರಿಯಾ ತನ್ನ ಮನಸ್ಸಿನ ಮಾತನ್ನು ಕೇಳಿ ಅಲೋಕ್ ಗೆ ಕರೆ ಮಾಡಿ ತನ್ನ ಪ್ರೀತಿಯನ್ನು ಹೇಳಿಕೊಂಡಳು. ಇದರ ಬಗ್ಗೆ ತಂದೆಯೊಂದಿಗೂ ಮಾತನಾಡುವುದಾಗಿ ಆಕೆ ಹೇಳಿದಳು. ಆಕೆ ತನ್ನ ತಂದೆಯೊಂದಿಗೆ ಮಾತನಾಡಿದ ಬಳಿಕ ಅವರಿಗೆ ನಿರಾಕರಿಸಲು ಆಗದೆ ಒಪ್ಪಿಕೊಂಡರು.
ಪ್ರಯಾಣ ಮುಂದುವರಿಯಿತು
ಅಲೋಕ್ ಮತ್ತು ಪ್ರಿಯಾ ಮದುವೆಯಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಅವರಿಬ್ಬರು ಈಗ ದೆಹಲಿಯಲ್ಲಿ ವಾಸವಾಗಿದ್ದಾರೆ. ಪ್ರಿಯಾ ಅಲ್ಲೇ ಪ್ರಸಿದ್ಧ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾಳೆ. ತಮ್ಮದೇ ಆದ ಪ್ರಪಂಚ ಕಟ್ಟಿಕೊಂಡಿರುವ ಈ ಜೋಡಿ ಹಕ್ಕಿ ಸಂತೋಷದಿಂದ ಜೀವನ ಸಾಗಿಸುತ್ತಿದೆ. ಇವರಿಬ್ಬರ ಪ್ರೇಮ ಕಥೆ ಕೇಳಿದ ಬಳಿಕ ನಿಜವಾಗಿಯೂ ಮೊದಲ ನೋಟದ ಪ್ರೀತಿ ನಿರಾಕರಿಸಲಾಗದು.