Just In
- 4 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 5 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 5 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 6 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ನೇಹಿತರನ್ನು ಕಳೆದುಕೊಂಡಾಗ ಆಗುವ ನೋವು ಹೇಳಲು ಸಾಧ್ಯವೇ?
ಪ್ರಾಣ ಸ್ನೇಹಿತರಂತೆ ಇದ್ದವರು ಈಗ ದೂರವಾಗಿದ್ದಾರೆ ಎನ್ನುವ ಮಾತು ನಮ್ಮ ನಡುವಿನಿಂದಲೇ ಬರುತ್ತದೆ. ಯಾಕೆಂದರೆ ಕೆಲವರ ಸ್ನೇಹ ಆ ರೀತಿಯಾಗಿರುತ್ತದೆ. ಅವರು ದೂರವಾಗಲು ಸಾಧ್ಯವೇ ಇಲ್ಲ ಎಂದು ನಾವು ಭಾವಿಸಿರುತ್ತೇವೆ. ಆದರೆ ಪರಿಸ್ಥಿತಿ ಅವರನ್ನು ದೂರ ಮಾಡಿರುತ್ತದೆ. ಜೀವಕ್ಕೆ ಜೀವ ಕೊಡುವ ಸ್ನೇಹಿತರು ಕೂಡ ದೂರವಾಗುತ್ತಾರೆ. ಕಚೇರಿಯಲ್ಲಿ ಪುರುಷ ಸ್ನೇಹಿತರು: ಒಳಿತು-ಕೆಡುಕು
ಆದರೆ ಸ್ನೇಹಿತರಿಂದ ದೂರವಾಗಲು ನೋವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತದೆ. ಯಾಕೆಂದರೆ ಅವರೊಂದಿಗೆ ಆ ರೀತಿಯ ಭಾಂದವ್ಯ ಬೆಸೆದಿರುತ್ತದೆ. ಪ್ರೀತಿಸಿದವರು ದೂರವಾಗುವಾಗ ಕಾಡುವ ನೋವಿಗಿಂತ ಸ್ನೇಹಿತರು ದೂರವಾದಾಗ ಕಾಡುವ ನೋವು ಹೆಚ್ಚು. ಇದನ್ನು ಕೆಲವೊಂದು ಅಧ್ಯಯನಗಳು ಕೂಡ ದೃಢಪಡಿಸಿಕೊಂಡಿವೆ. ಕೆಟ್ಟ ಗೆಳೆಯರನ್ನು ಗುರುತಿಸುವ ವಿಧಾನಗಳು
ಸಂಗಾತಿಗಳನ್ನು ಕಳಕೊಳ್ಳುವುದಕ್ಕಿಂತ ಸ್ನೇಹಿತರನ್ನು ಕಳಕೊಂಡಾಗ ವ್ಯಕ್ತಿಗೆ ಏನಾಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಸಂಗಾತಿಗಳಿಗಿಂತಲೂ ಹೆಚ್ಚಾಗಿ ವಿಶ್ವಾಸವಿರಿಸಿಕೊಂಡಿರುವ ಸ್ನೇಹಿತರನ್ನು ಕಳಕೊಂಡಾಗ ಅತಿಯಾದ ನೋವಾಗುವುದು. ಇದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ......
ಸ್ನೇಹಿತರೊಂದಿಗೆ ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ
ಸ್ನೇಹಿತರನ್ನು ನಾವು ತುಂಬಾ ವಿಶ್ವಾಸಿಗಳೆಂದು ಭಾವಿಸಿರುತ್ತೇವೆ. ಎಷ್ಟೇ ಗೌಪ್ಯ ಅಥವಾ ವೈಯಕ್ತಿಕ ವಿಚಾರವಾದರೂ ಅವರೊಂದಿಗೆ ಏನನ್ನೂ ಮುಚ್ಚಿಡುವುದಿಲ್ಲ. ಇಂತಹ ವಿಷಯಗಳನ್ನು ನಾವು ಸಂಗಾತಿಗಳೊಂದಿಗೂ ಹಂಚಿಕೊಳ್ಳಲ್ಲ. ಆದರೆ ಸ್ನೇಹಿತ ವಿಶ್ವಾಸಘಾತ ಮಾಡಿದಾಗ ಭೂಮಿಯೇ ಬಿರುಕು ಬಿಟ್ಟಂತಹ ಭಾವನೆಯಾಗುತ್ತದೆ.
ಯಾವಾಗಲೂ ಅವರು ಬೆಂಬಲಿಗರು
ಪರಿಸ್ಥಿತಿ ಏನೇ ಆಗಿರಲಿ ಸ್ನೇಹಿತರು ಮಾತ್ರ ಯಾವಾಗಲೂ ನಮ್ಮ ಪರವಾಗಿ ನಿಲ್ಲುತ್ತಾರೆ. ಪ್ರಿಯತಮೆಯೊಂದಿಗಿನ ಪ್ರಥಮ ಚುಂಬನವಾಗಿರಲಿ ಅಥವಾ ಪ್ರಿಯತಮೆ ಕೈಕೊಟ್ಟ ಸಂದರ್ಭವಿರಲಿ, ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ. ಪ್ರತಿಯೊಂದು ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ಸಂಬಂಧ ದೂರವಾದಾಗ ನಮಗೆ ಏನೋ ಕಳಕೊಂಡ ಭಾವನೆಯಾಗುತ್ತದೆ.
ವಿವರಿಸುವುದು ತುಂಬಾ ಕಠಿಣ
ಸ್ನೇಹಿತರನ್ನು ಕಳಕೊಂಡಾಗ ನಮಗೆ ತುಂಬಾ ಕೆಟ್ಟ ಭಾವನೆಯಾಗುತ್ತದೆ. ಇದರ ಬಗ್ಗೆ ಸುತ್ತಲಿನವರಿಗೆ ವಿವರಿಸುವುದು ತುಂಬಾ ಕಠಿಣ. ಇದು ತುಂಬಾ ಭಯಾನಕ ಮತ್ತು ಗೊಂದಲದಿಂದ ಕೂಡಿರುತ್ತದೆ.
ಕಳಕೊಂಡಿರುವುದನ್ನು ತುಂಬಲು ಅಸಾಧ್ಯ
ಪ್ರೇಮ ಸಂಬಂಧ ದೂರವಾದಾಗ ಬಳಿಗೆ ಬಂದು ನಿಂತು ಸಮಾಧಾನ ಹೇಳುವುದು ಸ್ನೇಹಿತರು. ಅವರು ಪ್ರತಿಯೊಂದು ಹಂತದಲ್ಲೂ ಸಮಾಧಾನ ಮಾಡುತ್ತಾರೆ. ಸ್ನೇಹಿತರನ್ನು ಕಳಕೊಂಡಾಗ ಪ್ರೇಮಿಗಳು ಹಲವಾರು ರೀತಿಯಿಂದ ಸಮಾಧಾನಿಸಲು ಪ್ರಯತ್ನಿಸಿದರೂ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ. ಅವರ ಜಾಗವನ್ನು ಮತ್ತೊಬ್ಬರಿಂದ ತುಂಬಲು ಸಾಧ್ಯವಿಲ್ಲ.