Just In
Don't Miss
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲ ಬದಲಾದರೂ ಬಂಧನ ಹಾಗೇ ಇದೆ!
"ಅಣ್ಣಾ ಎಷ್ಟೊತ್ತಿಗೆ ಬರ್ತೀಯಾ ಮನೆಗೆ..?" ಹೀಗೆಂದು ತಂಗಿ ಅಣ್ಣನಿಗೆ ಮೊಬೈಲ್ನಲ್ಲಿ ಮೆಸೇಜ್ ಮಾಡುತ್ತಾಳೆ. "ಬರ್ತೀನಿ, ಇನ್ನೈದೇ ನಿಮಿಷ." ಎನ್ನುತ್ತಲೇ ತಂಗಿಗೆ ಇಷ್ಟವಾದ ಡೈರಿ ಮಿಲ್ಕ್ ಚಾಕೊಲೇಟ್ ಖರೀದಿಗೆ ಅಣ್ಣ ಅಲ್ಲೆಲ್ಲೋ ಅದೇ ನಗರದ ಇನ್ನೊಂದು ಮೂಲೆಯಲ್ಲಿ ತೊಡಗಿರುತ್ತಾನೆ. ಇದು ಆಧುನಿಕ ಕಾಲದ ರಕ್ಷಾ ಬಂಧನದ ಸನ್ನಿವೇಶ.
ಹಿಂದೊಮ್ಮೆ ಇದೇ ರಕ್ಷಾ ಬಂಧನಕ್ಕಿದ್ದ ಪಾವಿತ್ರ್ಯತೆ ಈಗ ವಿಭಿನ್ನ ಮಗ್ಗುಲಿಗೆ ಹೊರಳಿಕೊಂಡಿದೆ. ಹಿಂದೊಮ್ಮೆ ವಿದೇಶಿ ಸಾಮ್ರಾಜ್ಯಶಾಹಿಗಳ ದಾಳಿಯ ಸಂದರ್ಭದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಇದೊಂದು ಮಾನಸಿಕ ಶಸ್ತ್ರವಾಗಿತ್ತು. ಆದರೆ ಈಗ ಇದೊಂದು ಸಾಂಸ್ಕೃತಿಕ ಬಂಧವಾಗಿದೆ. ಈಗ ದೂರದ ಊರಿನಲ್ಲಿದ್ದ ಅಣ್ಣನನ್ನು ಕರೆದು ರಾಖಿ ಕಟ್ಟಿ ಅವನಿಂದ ಡೈರಿ ಮಿಲ್ಕನ್ನೋ ಅಥವಾ ಇನ್ಯಾವುದೋ ಚಾಕಲೇಟನ್ನೋ ತೆಗೆದುಕೊಂಡು ಸೋದರಿಯರು ಖುಷಿ ಪಡುತ್ತಾರೆ.
ಹೆಣ್ಣುಮಕ್ಕಳ ರಕ್ಷಣಾ ತಂತ್ರದ ಜಾಣ್ಮೆ
ಹಿಂದೆ ಊರಿನಲ್ಲಿದ್ದ ನೆರೆಹೊರೆಯವರನ್ನು ಸೋದರನಂತೆ ಭಾವಿಸಿ ಗೌರವಿಸಲು ನೆರವಾದದ್ದು ಇದೇ ಸೂತ್ರ. ಅಷ್ಟೇ ಅಲ್ಲ, ಪಡ್ಡೆ ಹೈಕಳ ಕೈಗೆ ಕಟ್ಟಿದ ರಾಖಿಯೂ ಹೆಣ್ಣುಮಕ್ಕಳ ರಕ್ಷಣಾ ತಂತ್ರದ ಜಾಣ್ಮೆ. ಸೋದರಿಯರ ಮನೋಸ್ಥಿತಿಯನ್ನು ಗಮನಿಸಿದರೆ ಇಂದಿಗೂ ಇದೇ ಭಾವ ಬೆಳೆದು ಬಂದಿದೆ.
ಆಚರಣೆಯಲ್ಲಿ ಮಾತ್ರ ಒಂಚೂರು ವ್ಯತ್ಯಾಸ
ಆದರೆ ಆಚರಣೆಯಲ್ಲಿ ಮಾತ್ರ ಒಂಚೂರು ವ್ಯತ್ಯಾಸ. ಅಂಗಡಿಯಲ್ಲಿನ ರಾಖಿ ಖರೀದಿಸಿ ಅದನ್ನು ದೇವರ ಪೀಠದಲ್ಲಿಟ್ಟು ಪೂಜಿಸಿ, ಅಣ್ಣನನ್ನು ಕರೆದು ಕಟ್ಟುವ ರೀತಿ ಈಗ ಸ್ವಲ್ಪ ಮಾಡರ್ನ್ ಅಷ್ಟೆ. ಇನ್ನೂ ಕೆಲವು ಆಧುನಿಕರು ಫೇಸ್ಬುಕ್ನಲ್ಲಿ ರಾಖಿ ಚಿತ್ರ ಕಳಿಸಿ, ಅಣ್ಣಾ ರಕ್ಷಾ ಬಂಧನದ ಶುಭಾಷಯ ಎನ್ನುವವರೂ ಇದ್ದಾರೆ.
ರಾಖಿಗೊಂದು ಪವಿತ್ರ ಭಾವ ಆಧುನಿಕ ಕಾಲದಲ್ಲೂ ಇದೆ
ಇನ್ನು ಕಾಲೇಜುಗಳಲ್ಲಂತೂ ರಾಖಿ ಹಿಡಿದು ಬರುವ ಹುಡುಗಿಯರು ದಾಳಿಗೆ ಬಂದ ತಾಲಿಬಾನ್ ಉಗ್ರರ ರೀತಿ ಕಂಡರೆ ಅಚ್ಚರಿಯಿಲ್ಲ. ಯಾಕೆಂದರೆ ಕಾಲೇಜು ಕ್ಯಾಂಪಸ್ಗಳಲ್ಲಿ ರಕ್ಷಾ ಬಂಧನ ಅಕ್ಷರಶಃ ಹೆಣ್ಣುಮಕ್ಕಳಿಗೊಂದು ಬಿಡುಗಡೆಯ ಬಾವ. 'ಕಣ್ಣು ಹಾಕುವವ'ರಿಗೆ ರಾಖಿ ಕಟ್ಟಿದರೆ ಹುಡುಗಿಯರಿಗೊಂದು ನೆಮ್ಮದಿ. ಇನ್ನು ಕಾಲೇಜಿನಲ್ಲಿರುವಷ್ಟೂ ದಿನವೂ ಇವನ ಕಾಟವಿಲ್ಲ. ಅಷ್ಟರ ಮಟ್ಟಿಗೆ ರಾಖಿಗೊಂದು ಪವಿತ್ರ ಭಾವ ಆಧುನಿಕ ಕಾಲದಲ್ಲೂ ಇದೆ!
ತೀರಾ ಸಮೀಪದ ಸಂಬಂಧಗಳಲ್ಲಿ ಮಾತ್ರ ರಾಖಿ ಕಟ್ಟುವ ಸಂಪ್ರದಾಯ
ಇಷ್ಟೆಲ್ಲದರ ಆಚೆಯೂ ಸಾಂಪ್ರದಾಯಿಕ ರೂಪದ ರಾಖಿಗಳು ಅಂಗಡಿಗಳಲ್ಲಿ ರಾರಾಜಿಸುತ್ತಿರುತ್ತವೆ. ನೂರು, ಸಾವಿರಗಟ್ಟಲೆ ರೂಪಾಯಿ ಕೊಟ್ಟು ರಂಗುರಂಗಿನ ರಾಖಿ ಕಟ್ಟುವ ಸನ್ನಿವೇಶ ನಗರಗಳಲ್ಲಿ ಈಗ ಕಾಣಸಿಗುವುದು ಅಪರೂಪವೇ. ಆಧುನಿಕ ನಗರಗಳಲ್ಲಿ ಕೆಲಸದ ಗಡಿಬಿಡಿ, ಗಜಿಬಿಜಿಯ ಮಧ್ಯೆಯೇ ಜನರು ಒಂಚೂರು ಪುರಸೊತ್ತು ಮಾಡಿಕೊಂಡು ಸೋದರನಿಗೆ ರಾಖಿ ತೆಗೆದಿಟ್ಟುಕೊಳ್ಳುವುದಿದೆ. ಆದರೆ ತೀರಾ ಸಮೀಪದ ಸಂಬಂಧಗಳಲ್ಲಿ ಮಾತ್ರ ರಾಖಿ ಕಟ್ಟುವ ಸಂಪ್ರದಾಯ ಈಗ ಉಳಿದುಕೊಂಡಿದೆ.
ಪವಿತ್ರ ಬಂಧನ
ಇದೇ ವೇಳೆ ರಕ್ಷಾ ಬಂಧನಕ್ಕೊಂದು ವೈಭವಯುತ ಹಿನ್ನೆಲೆ ಇದೆ. ಈ ದಿನದ ಒಂದು ಪ್ರಮುಖ ಭಾಗ ಹೆಣ್ಣುಮಕ್ಕಳು ಸೋದರರಿಗೆ ರಾಖಿ ಕಟ್ಟುವುದಾದರೆ, ಯಜ್ಞೋಪವೀತ ಧರಿಸುವ ಈ ದಿನವೂ ಕೆಲವು ಸಮುದಾಯಗಳಲ್ಲಿ ಪವಿತ್ರವಾಗಿದೆ.
ರಕ್ಷಾ ಬಂಧನ ಕಟ್ಟುವ ವಿಧಾನ
ಶುದ್ಧ ಹತ್ತಿಯಿಂದ ಕೈಯಲ್ಲೇ ನೀವಿ ತಯಾರಿಸಿದ ದಾರವನ್ನು ಪೂಜಿಸಿ, ಪವಿತ್ರವೆಂದು ಭಾವಿಸಿ, 27 ದೇವತೆಗಳನ್ನು ಆಹ್ವಾನಿಸಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ, ಸೂರ್ಯನ ಅಪ್ಪಣೆ ಪಡೆದು, ಭೂಮಿಗೆ ಅರ್ಪಿಸಿ ಧರಿಸಲಾಗುತ್ತದೆ. ಇದೆಲ್ಲಕ್ಕೂ ಸಾಕ್ಷಿ ಅಗ್ನಿ. ಹೀಗೆ ಧರಿಸಿದ ನಂತರ ಒಂದಷ್ಟು ಸಾಂಪ್ರದಾಯಿಕ ಆಚರಣೆಗಳೂ ಇವೆ.
ಕಾಲ ಬದಲಾದರೂ ರಕ್ಷಾ ಬಂಧನದ ಪಾವಿತ್ರ್ಯತೆ ಮಾತ್ರ ಕಳೆಗುಂದಿಲ್ಲ
ಈ ದಿನ ರಾಖಿ ಕಟ್ಟುವ ಸಂಪ್ರದಾಯ ಆರಂಭವಾಗಿದ್ದಕ್ಕೆ ಸ್ಪಷ್ಟವಾದ ಉಲ್ಲೇಖವಿಲ್ಲ. ಆದರೆ ಭಾರತದ ಮೇಲೆ ಮೊಘಲರ ಆಳ್ವಿಕೆ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿಗಳ ದಾಳಿಯಲ್ಲಿ ಸಾಮಾನ್ಯವಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಲು ಇದೊಂದು ತಂತ್ರವನ್ನಾಗಿ ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಅಂದಿನಿಂದಲೂ ಕಾಲಕ್ಕೆ ತಕ್ಕಂತೆ ಆಚರಣೆಯಲ್ಲಿ ಬದಲಾವಣೆಗಳಾಗುತ್ತಲೇ ಬಂದಿದ್ದರೂ, ರಕ್ಷಾ ಬಂಧನದ ಪಾವಿತ್ರ್ಯತೆ ಮಾತ್ರ ಕಳೆಗುಂದಿಲ್ಲ.