Just In
- 30 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 4 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯಕರ ಅಡುಗೆಗಾಗಿ ಈ ನಿಯಮಗಳು ತಿಳಿದಿರಲಿ
ಆರೋಗ್ಯಕ್ಕೆ ತಿನ್ನುವ ಅಡುಗೆ ಎಷ್ಟು ಮುಖ್ಯವೋ ಅದನ್ನು ತಯಾರಿಸುವ ವಿಧಾನ ಕೂಡ ಅಷ್ಟೇ ಮುಖ್ಯ ಎಂದು ಹೇಳಬೇಕಾಗಿಲ್ಲ. ಬರೀ ಅಡುಗೆ ಕಲಿತು ಪ್ರಯೋಜನವಿಲ್ಲ, ಸ್ಪೆಷಲ್ ಸ್ಕಿಲ್ ಅಂತಾರಲ್ಲ ಹಾಗೇ ಅಡುಗೆ ಟಿಪ್ಸ್ ಗೊತ್ತಿದ್ದರೆ ಅಡುಗೆಯನ್ನು ಸರಳವಾಗಿ, ರುಚಿಕರವಾಗಿ, ಆರೋಗ್ಯಕರವಾಗಿ ಮಾಡಬಹುದು.
ಅಡುಗೆ ಮಾಡುವಾಗ ಕೆಲವೊಂದು ನಿಯಮಗಳಿವೆ, ಅವುಗಳನ್ನು ಯಾವುದೇ ಕಾರಣಕ್ಕೆ ಮರೆಯಬಾರದು. ಆ ನಿಯಮಗಳಾವುವು, ಅವುಗಳನ್ನು ಏಕೆ ಪಾಲಿಸಬೇಕು ಅನ್ನುವುದನ್ನು ಸ್ಲೈಡ್ ನಲ್ಲಿ ವಿವರಿಸಿದ್ದೇವೆ ನೋಡಿ:
ಎಣ್ಣೆಯ ಪ್ರಮಾಣ
ಅಡುಗೆಯ ಬಳಸುವ ಎಣ್ಣೆಯ ಪ್ರಮಾಣದ ಪ್ರಭಾವ ನೇರವಾಗಿ ನಮ್ಮ ದೇಹದ ಮೇಲೆ ಬೀರುತ್ತದೆ. ಆದ್ದರಿಂದ ಎಣ್ಣೆಗೆ ಯಾವ ಎಣ್ಣೆ ಬಳಸುತ್ತಿದ್ದೇವೆ, ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇವೆ ಎನ್ನುವುದನ್ನು ಗಮನಿಸುವುದು ಒಳ್ಳೆಯದು. ಅಲ್ಲದೆ ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡದಿರುವುದು ಒಳ್ಳೆಯದು.
ತಾಜಾ ತರಕಾರಿಗಳು
ಅಡುಗೆಗೆ ಫ್ರಿಜ್ ನಲ್ಲಿಟ್ಟು ಶೀತಲೀಕರಣ ಮಾಡಿದ ಆಹಾರಗಳಿಗಿಂತ ತಾಜಾ ತರಕಾರಿಗಳನ್ನು ಬಳಸುವುದು ಒಳ್ಳೆಯದು.
ಪ್ರೆಶರ್ ಕುಕ್ಕರ್
ಅಡುಗೆ ಮಾಡುವಾಗ ಆಹಾರದಲ್ಲಿನ ಪೋಷಕಾಂಶ ಹಾಳಾಗದಂತೆ ಬೇಯಿಸಿ ತಿನ್ನುವುದು ಒಳ್ಳೆಯದು. ಪೋಷಕಾಂಶ ಹಾಳಾಗದಿರಲು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದು ಕೂಡ ಒಂದು ಉತ್ತಮ ವಿಧಾನ.
ಉಳಿದ ಪದಾರ್ಥಗಳು
ಪದಾರ್ಥಗಳು ಉಳಿದರೆ ಅದನ್ನು ಹಾಗೇ ಇಟ್ಟು ಹಾಳು ಮಾಡುವ ಬದಲು ಅದರಿಂದ ಸೂಪ್, ಪಲ್ಯ ಅಂತ ಮಾಡಿ ತಿನ್ನುವುದು ಒಳ್ಳೆಯದು.
ಧಾನ್ಯಗಳನ್ನು ನೆನೆ ಹಾಕಿ
ಧಾನ್ಯಗಳನ್ನು ಅಡುಗೆ ಮಾಡುವ ಮುನ್ನ ಒಂದು ರಾತ್ರಿ ನೆನೆ ಹಾಕಿ. ಹೀಗೆ ಮಾಡಿದರೆ ಅದು ಬೇಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಸಮಯ ಉಳಿಸಿದಂತಾಗುವುದು ಅಲ್ಲದೆ ಧಾನ್ಯದಲ್ಲಿರುವ ಬೇಡದ ರಾಸಾಯನಿಕಗಳು ತುಂಬಾ ಹೊತ್ತು ನೆನೆ ಹಿಟ್ಟು ತೊಳೆದಾಗ ಸಂಪೂರ್ಣವಾಗಿ ಹೋಗುವುದು.
ಸಿಪ್ಪೆ
ನಾವು ತುಂಬಾ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಸೇಬು, ದ್ರಾಕ್ಷಿ, ಸೀಬೆಕಾಯಿ ಈ ರೀತಿಯ ಹಣ್ಣುಗಳಲ್ಲಿ ಹಾಗೂ ಆಲೂಗಡ್ಡೆ, ಸೌತೆಕಾಯಿಯಂತಹ ತರಕಾರಿಗಳ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶ ಇರುತ್ತದೆ. ಆದ್ದರಿಂದ ಸಿಪ್ಪೆ ಬಿಸಾಡುವ ಮುನ್ನ ಯೋಚಿಸಿ.
ಆಹಾರಗಳ ಆಯ್ಕೆ
ಯಾವ ರೀತಿಯ ಆಹಾರ ತಿನ್ನಬೇಕೆಂಬ ನಿಮ್ಮ ಆಯ್ಕೆ ಕೂಡ ಆರೊಗ್ಯದ ಮೇಲೆ ನೇರ ಪರಿಣಾಮ ಬೀಳುತ್ತದೆ. ವಿಟಮಿನ್ , ಪ್ರೊಟೀನ್, ನಾರಿನಂಶ, ಸ್ವಲ್ಪ ಕಾರ್ಬೋಹೈಡ್ರೇಟ್ ಈ ರೀತಿ ಎಲ್ಲಾ ಬಗೆಯ ಪೋಷಕಾಂಶವಿರುವ ಆಹಾರಗಳು ನಿಮ್ಮ ಅಡುಗೆಯಲ್ಲಿರಲಿ.