Just In
- 4 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 5 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 6 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೀಗ ತಾನೆ ಮದುವೆಯಾದ ಹುಡುಗಿಗೆ
* ಹುರುಳಿಕಾಯಿ, ಗೋರಿಕಾಯಿಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ನಾರು ಬಿಡಿಸಿಟ್ಟರೆ ಕಾಯಿ ಬಲಿಯದು.
* ಹುರುಳಿಕಾಯಿ ಹಾಗೂ ಗೋರಿಕಾಯಿಗಳನ್ನು ಹುರಿಯುವಾಗ ಒಂದು ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುವುದು.
* ತಾಜಾ ಹಸಿ ಮೆಣಸಿನಕಾಯಿಯ ತೊಟ್ಟು ಬಿಡಿಸಿಟ್ಟರೆ ಅದು ಬೇಗ ಹಣ್ಣಾಗುವುದಿಲ್ಲ.
* ಮಸಾಲೆ ತಯಾರಿಸುವಾಗ ರುಬ್ಬುವ ಖಾರಕ್ಕೆ ಒಂದೆರಡು ಹಸಿ ಟೊಮೇಟೊ ಹಾಕಿ. ಇದರಿಂದ ಸಾರು ಒಳ್ಳೆಯ ಬಣ್ಣ ಪಡೆಯುವುದಲ್ಲದೆ ರುಚಿ ಹೆಚ್ಚುವುದು.
* ಹಸಿ ಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜತೆ ಸ್ವಲ್ಪ ನಿಂಬೆರಸವನ್ನೂ ಹಾಕಿ ತಿರುವಿದರೆ ಬಹಳ ದಿನಗಳವರೆಗೂ ತಿನ್ನಲು ಬಳಸಬಹುದು.
* ಹುರುಳಿಕಾಯಿ, ಗೋರಿಕಾಯಿ, ಕ್ಯಾರೆಟ್ಗಳು ಬಾಡಿದ್ದರೆ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ಮತ್ತೆ ಮೊದಲಿನ ತಾಜಾತನ ಮರಳುವುದು.
* ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು ಬೀಟ್ರೂಟ್ ಹೆಚ್ಚಿದರೆ ಕೈ ಕೆಂಪಾಗದು.
* ಪರಂಗಿ ಹಣ್ಣು ಅಥವಾ ಕಾಯಿ ಹೆಚ್ಚುವಾಗ ಮೊದಲು ಸಿಪ್ಪೆ ತೆಗೆದು ಅನಂತರ ತೊಟ್ಟು ಹಾಗೂ ತುದಿ ತೆಗೆಯಿರಿ. ಇದರಿಂದ ಹಾಲು ಜಿನುಗಿ ಜಾರುವುದು ತಪ್ಪುತ್ತದೆ.
* ಪುದೀನಾ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುವುದು.
* ಅಕ್ಕಿರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಒಂದು ಟೇಬಲ್ ಚಮಚ ಚಿರೋಟಿ ರವೆ ಹಾಕಿದರೆ ರೊಟ್ಟಿಯ ಅಂಚು ಸೀಳುವುದಿಲ್ಲ.