Just In
Don't Miss
- Movies ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಣಸಿನಕಾಯಿ ತಿಂದಾಗ ಏನು ಮಾಡಬೇಕು?
ಇನ್ನೇನು ಮಾಡಲು ಸಾಧ್ಯ; ಒಂದು ಲೋಟ ನೀರು ಕುಡಿದು ಖಾರ ನೀಗಿಸಿಕೊಳ್ಳುತ್ತೇವೆ ಅಂತೀರಾ ಅಲ್ವಾ? ಆದರೆ ನೀರು ಕುಡಿದಷ್ಟು ಮಾತ್ರಕ್ಕೆ ಖಾರ ಕಮ್ಮಿಯಾಗಲ್ಲ. ಕಾರಣ... ಹಸಿಮೆಣಸಿನಕಾಯಿ ಕಚ್ಚಿದ ಕೂಡಲೆ ಅದರಲ್ಲಿನ ಎಣ್ಣೆ ಗುಣಗಳು ಬಾಯಲ್ಲೆಲ್ಲಾ ಪಸರಿಸುತ್ತವೆ.
ಇಂತಹ ಸಂದರ್ಭದಲ್ಲಿ ನೀರು ಕುಡಿಯುವುದರಿಂದ ಪ್ರಯೋಜನವಾಗದು. ನೀರು ಎಣ್ಣೆಯನ್ನು ಗ್ರಹಿಸುವುದಿಲ್ಲ. ಹಾಗಾಗಿ ಬಾಯಿಯ ಖಾರ ಕೂಡಲೆ ನೀಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು ಗೊತ್ತೆ...! ಇಲ್ಲಿದೆ ನೋಡಿ ಮನೆ ಮದ್ದು. ಎರಡು ಹನಿ ಮಜ್ಜಿಗೆ ಅಥವಾ ಒಂದು ಚಮಚ ಮೊಸರನ್ನು ಬಾಯಲ್ಲಿ ಹಾಕಿಕೊಳ್ಳಿ.
ಮಜ್ಜಿಗೆ ಅಥವಾ ಮೊಸರು ಎಣ್ಣೆಯ ಅಂಶವನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಖಾರ ಕೂಡಲೆ ಕಡಿಮೆಯಾಗುತ್ತದೆ. ಅದೇ ರೀತಿ ಮಕ್ಕಳು ಊಟ ಮಾಡುವಾಗ ಹಸಿಮೆಣಸಿನಕಾಯಿ ತಿಂದರೆ ಅರ್ಧ ಲೋಟ ಹಾಲು ಇಲ್ಲವೆ ಬ್ರೆಡ್ಡಿನ ಚೂರನ್ನು ತಿನ್ನಿಸಬೇಕು ಎನ್ನುತ್ತಾರೆ ಆಹಾರ ನಿಪುಣರು. ಬೇಕಿದ್ದರೆ ಇಂದಿನ ಊಟದ ಜೊತೆ ಮೆಣಸಿನಕಾಯೊಂದನ್ನು ತಿಂದು ಪರೀಕ್ಷಿಸಿ ನೋಡಿ! ಆದರೆ, ಪಕ್ಕದಲ್ಲೇ ಮೊಸರು ಅಥವಾ ಮಜ್ಜಿಗೆಯನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ.